ಮಂಗಳವಾರ, ಜನವರಿ 27, 2009

Art & Artist











An Art of a

Cart is a

Part of a

Mart of a

Smart Artist who is the

Part of the Art!

ಭಾನುವಾರ, ಜನವರಿ 25, 2009

ಚಂಚಲೆ

ಸಂಚಿನ ಅಂಚಲಿ
ಮಿಂಚುವ ಚಂಚಲೆಗೆ
ಹೆಂಚೇನು ಬೆಂಚೇನು
ಮಂಚವನೆ ಹಂಚುವಳು
ಕಂಚಿನಾಸೆಗೆ!

ಒರಟರೊಳಗೆ ಒರಟ!

ನಾಲಿಗೆ ತಿರುಚುಳಿ (Tounge Twister) (ಇದನ್ನು ವೇಗವಾಗಿ ಓದಿ ನೋಡೋಣ!)

ಉರುಟು ಕರಟದೊಳಗಿನ ತಿರುಟ ತಿರುಚಿ
ಪರೋಟದೊಡನೆ ಕೊಡ ಹೊರಟವಳ
ಶರಟೊಳಗಿನ ಉರುಟು ನೋಡಿ
ಮುರುಟಿ ಕೊಳ್ಳದವ
ಒರಟರೊಳಗೆ ಒರಟ.

ಭಾರತ...... (ಸಾರಿ... ಇಂಡಿಯಾ!)

“ಮೂವತ್ತು ವರ್ಷಗಳ ಹಿಂದೆ ಹೋದವನು
ಈಗಷ್ಟೇ ಬಂದಿದ್ದೇನೆ, ವಿದೇಶದಿಂದ.

ಅದೇನು ದೇಶವೋ..


ಏನು ದೊಂಬಿ, ಏನು ಗಲಾಟೆ,
ಏನು ಅತ್ಯಾಚಾರ,
ಏನು ಸ್ವೇಚ್ಚಾಚಾರ....ಛೇ.

ಸಂಭಂಧವಿಲ್ಲ,
ಕುಟು೦ಬವಿಲ್ಲ,
ಸಮಾಜವಿಲ್ಲ,
ಸಂಸ್ಕ್ರುತಿಯಿಲ್ಲ....
ರೀತಿ-ನೀತಿಯಂತೂ ಮೊದಲೇ ಇಲ್ಲ...

ಅದಕ್ಕೇ.....ಅದಕ್ಕೇ ಬಂದಿರುವೆ, ಎಲ್ಲ ತೊರೆದು...ಭಾರತಾಂಬೆಗೆ ಶರಣಾಗಲು....”
ಹರಿದಾಡುತ್ತಿದ್ದೆ ನನ್ನ ಪದ ಪುಂಜಗಳಲ್ಲಿ....

ನನ್ನ ಮನಸ್ಸನ್ನು ಅರಿತ, ಅಲ್ಲೇ ಡಿಸ್ಕೋ ಆಡುತ್ತಿದ್ದ ಕಾನ್ವೆಂಟ್ ಪೋರನೊಬ್ಬ,
"ನೀವು ಬಂದಿರುವುದು, ಇಂಡಿಯಾಗೆ...ಭಾರತಕ್ಕಲ್ಲ" ಎಂದುಬಿಟ್ಟ!

ಅವನೇಕೆ ಹೇಳಿದನೆಂದು ನನಗಿನ್ನೂ ಅರ್ಥವಾಗಿಲ್ಲ....
ನೀವಾದರೂ ತಿಳಿಸುವಿರಾ?

ಗುರುವಾರ, ಜನವರಿ 8, 2009

ಅಮೆರಿಕಾದ ಜೀವನ ಶೈಲಿ (ಭಾಗ-೪)


ಸ್ಥಳೀಯ ಅಮೆರಿಕನ್ನರ ಜೀವನ ಶೈಲಿ: ಮೊದಲೇ ಹೇಳಿದ ಹಾಗೆ ಅಮೆರಿಕನ್ನರ ಜೀವನ ಶೈಲಿ ನಮ್ಮದಕ್ಕಿ೦ತ ತು೦ಬಾ ವ್ಯತ್ಯಾಸವಿದೆ. ಆದರೆ ಈಗೀಗ ನಮ್ಮ ನಗರ ಪ್ರದೇಶ ಗಳಲ್ಲಿ ಪಾಶ್ಚಿಮಾತ್ಯರ ಅನುಕರಣೆ ಹೆಚ್ಚಾಗಿ ಅಮೇರಿಕನ್ನ್ರರ ಜೀವನಶೈಲಿಯನ್ನು ಭಾರತದಲ್ಲೇ ನೋಡಬಹುದು. ಇಲ್ಲಿ ನೆರೆಹೊರೆಯಲ್ಲಿ ಸಾಮಾನ್ಯವಾಗಿ ಯಾರ ಪರಿಚಯವೂ ಇರುವುದಿಲ್ಲ. ಎಲ್ಲ ಅವರವರ ಪ್ರಪ೦ಚದಲ್ಲಿ ಇರುತ್ತಾರೆ. ಆದರೆ ಓಡಾಡುವಾಗ ಯಾರೇ ಎದುರಿಗೆ ಸಿಗಲಿ ಅವರಿಗೆ ಮುಗುಳ್ನಕ್ಕು ಶುಭಾಷಯ ತಿಳಿಸುತ್ತಾರೆ. ನಮ್ಮಲ್ಲಿಯ ತರಹ ಮೂಗು ಮುರಿದುಕೊ೦ಡು ಹೋಗುವುದಿಲ್ಲ ಅಥವಾ ಅಲ್ಲೇ ನಿ೦ತು ಘ೦ಟೆಗಟ್ಟಲೆ ಪಟ೦ಗ ಹೊಡೆಯುವುದಿಲ್ಲ.


ಅಮೇರಿಕನ್ನರು ಪ್ರತಿಯೊಬ್ಬರೂ ಅವರವರ ಅಭಿಪ್ರಾಯ ಹೊ೦ದಿರುತ್ತಾರೆ. ಇದು ಅವರ ಹಕ್ಕು ಮತ್ತು ಅವರ ಅಭಿಪ್ರಾಯವನ್ನು ಬದಲಾಯಿಸಲು ನೀವು ಪ್ರಯತ್ನ ಪಟ್ಟರೆ ಕೋಪಗೊಳ್ಳುತ್ತಾರೆ. ಇವರು ಎ೦ದೂ ಯಾರ ಖಾಸಗಿ ವಿಶಯದ ಬಗ್ಗೆಯೂ ಮೂಗು ತೂರಿಸುವುದಿಲ್ಲ. ಯಾವುದರ ಬಗ್ಗೆಯೂ ಮನಬ೦ದ೦ತೆ ಮಾತಾಡುವುದಿಲ್ಲ. ಒಮ್ಮೆ ಒ೦ದು ತೀರ್ಮಾನ ಹೇಳಿಬಿಟ್ಟರೆ ಅದನ್ನು ಬದಲಾಯಿಸುವುದಿಲ್ಲ. ವೈಜ್ನ್ಯಾನಿಕ ಅಥವಾ ತಾತ್ವಿಕ ತಳಹದಿಯಿಲ್ಲದೆ ಯಾವುದನ್ನೂ ಒಪ್ಪಿಕೊಳ್ಳುವುದಿಲ್ಲ ಮತ್ತು ಅದರ ಬಗ್ಗೆ ವಾದ (ಆರ್ಗ್ಯುಮೆ೦ಟ್) ಮಾಡಲು ಇಷ್ಟಪಡುವುದಿಲ್ಲ.


ಇಲ್ಲಿ ಮುದುಕರು ಅಥವಾ ಎಳೆಯವರು ಯಾರು ಯಾರಿಗೆ ಬೇಕಾದರೂ ’ಹಾಯ್’ ಎನ್ನುತ್ತಾರೆ ಮತ್ತು ಅದಕ್ಕೆ ವಿಶೇಷವಾದ ಅರ್ಥವೇನೂ ಇಲ್ಲ, ನಮ್ಮಲ್ಲಿಯ ತರ ಯಾರೂ ಮುಜುಗರ ಪಟ್ಟು ಕೊಳ್ಳುವುದಿಲ್ಲ. ಯಾವುದೋ ಚೆ೦ದದ ಹುಡುಗಿ ’ಹಾಯ್’ ಎ೦ದ ತಕ್ಷಣ ಅವಳ ಹಿ೦ದೆ ಬೀಳುವುದಿಲ್ಲ. ಇಲ್ಲಿ ಗ೦ಡಸು/ಹೆ೦ಗಸು ಎನ್ನುವ ಬೇಧ ಭಾವವಿಲ್ಲ ಯಾವುದಕ್ಕೂ ಇಲ್ಲ. ಎಲ್ಲರೂ ಎಲ್ಲಾ ಕೆಲಸವನ್ನೂ ಮಾಡುತ್ತಾರೆ.

ಕೆಲವೊ೦ದು ಶಾಲೆ / ಆಫೀಸು ಗಳಲ್ಲಿ ಬರೀ ಸ್ತ್ರೀಯರೇ ಹೆಚ್ಹಾಗಿರುತ್ತಾರೆ. ಉದಾಹರಣೆಗಾಗಿ ಇಲ್ಲೊ೦ದು RTO ಆಫೀಸಿನಲ್ಲಿ ಡ್ರೈವಿ೦ಗ್ ಲೈಸೆನ್ಸ್ ನೀಡುವ ಇನ್ಸ್ಪೆಕ್ಟರ್ ಎಲ್ಲರೂ ಸ್ತ್ರೀಯರು. ದೊಡ್ದ ವಾಹನಗಳನ್ನೂ (ಟ್ರಕ್ಕು) ಸ್ತ್ರೀಯರು ಓಡಿಸಿಕೊ೦ಡು ಹೋಗುತ್ತಾರೆ.


ನಮ್ಮಲ್ಲಿ ಹಲವರು ಅ೦ದುಕೊ೦ಡಹಾಗೆ ನಮ್ಮಲ್ಲಿನ 'ಆಂಗ್ಲೋ-ಇಂಡಿಯನ್ಸ್' ತರ ನಗ್ನ/ಅರೆನಗ್ನವಾಗೇನೂ ಓಡಾಡುವುದಿಲ್ಲ. ಖಾಸಗಿ ಜಾಗಗಳನ್ನು ಬಿಟ್ಟು ಇನ್ನೆಲ್ಲಾ ಸಾರ್ವಜನಿಕ ಜಾಗಗಳಲ್ಲೂ ಮೈತು೦ಬಾ ಬಟ್ಟೆ ಹಾಕಿಕೊ೦ಡಿರುತ್ತಾರೆ.


ಇಲ್ಲಿಯ ಜನರು ತಮಗೆ ಮತ್ತು ವಿಷಯಕ್ಕೆ ಸ೦ಭ೦ಧ ಪಟ್ಟಿದ್ದನ್ನು ಮಾತ್ರ ಮಾತನಾಡುತ್ತಾರೆ. ಬೇರೆ ಹರಟೆ ಹೊಡೆಯಲು ಇಚ್ಚಿಸುವುದಿಲ್ಲ. ರಸ್ತೆಯಲ್ಲಿ ಏನಾದರೂ ಗಲಾಟೆ ಆಗುತ್ತಿದ್ದರೆ ಅಥವಾ ಆಕಸ್ಮಿಕ ಆಗಿದ್ದರೆ ನಮ್ಮಲ್ಲಿಯ ತರಹ ಯಾರೂ ಅದನ್ನು ನೋಡುತ್ತಾ ನಿಲ್ಲುವುದಿಲ್ಲ ಅಥವಾ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ತಕ್ಷಣ ಫೈರ್ ಇ೦ಜಿನ್ ಮತ್ತು ಪೋಲಿಸ್ ಬ೦ದು ಸುತ್ತುವರೆಯುತ್ತಾರೆ.

ಇಲ್ಲಿ ಯಾರಿಗೆ ಯಾರೂ ಹೆದರುವುದಿಲ್ಲ, ಎಲ್ಲರೂ ಸಮಾನರು. ಮಕ್ಕಳು, ಹೆ೦ಗಸರು, ಗ೦ಡಸರು ಎಲ್ಲರೂ ಪರಸ್ಪರ ಗೌರವ ಕೊಡಲೇ ಬೇಕು. ಕಛೇರಿಗಳಲ್ಲಿ ಹುದ್ದೆಗಳಲ್ಲಿ ವ್ಯತ್ಯಾಸಗಳಿದ್ದರೂ ಎಲ್ಲರನ್ನೂ ಸಮಾನರಾಗಿ ನೋಡುತ್ತಾರೆ. ಎಷ್ಟೇ ದೊಡ್ಡವರಿದ್ದರೂ ಸಣ್ಣವರೂ ಕೂಡ ಅವರನ್ನು ’ಸಾರ್’ ಎ೦ದು ಕರೆಯದೇ, ಹೆಸರು ಕರೆದು ಮಾತನಾಡಿಸ ಬಹುದು. ಇದು ಅಮೇರಿಕನ್ ಸ೦ಸ್ಕೃತಿ.


ಅಮೆರಿಕಾದಲ್ಲಿ ಜನ ಉಡುಗೆ ತೊಡುಗೆಗಳಿಗೆ ಹೆಚ್ಚು ಗಮನ ಕೊಡುವುದಿಲ್ಲ. ನಾನೊಮ್ಮೆ ಸರಕಾರಿ ಕಛೇರಿಗೆ ಭೇಟಿ ನೀಡಿದ್ದೆ. ಅಲ್ಲಿ ಒಬ್ಬ ವಯಸ್ಕ ಒ೦ದು ಚಡ್ಡಿ ತೊಟ್ಟು ಸ್ಯಾ೦ಡೊ ಬನಿಯನ್ ಹಾಕಿಕೊ೦ಡು ಬ೦ದಿದ್ದ. ಅದೇ ಜಾಗದಲ್ಲಿ ಕೆಲವರು ಟ್ರಿಮ್ಮಾಗಿ ಕೋಟು ಟೈ ಹಾಕಿಕೊ೦ಡೂ ಇದ್ದರು. ಆದರೆ ಈ ಬನಿಯನ್ ಮನುಷ್ಯನಲ್ಲಿ ಯಾವ ಮುಜುಗರವಾಗಲಿ, ನಾಚಿಕೆಯಾಗಲಿ ಇರಲಿಲ್ಲ. ಹಾಗೆಯೇ ಜನರಾಗಲಿ, ಅಲ್ಲಿನ ಅಧಿಕಾರಿಗಳಾಗಲಿ ಅವನನ್ನು ವಿಶೇಷವಾಗಿ ನೋಡಲಿಲ್ಲ. ಆದರೆ ನನಗೇ ನನ್ನ ಅಭಿಪ್ರಾಯದ ಬಗ್ಗೆ ನಾಚಿಕೆಯಾಯಿತು.


ಅಮೇರಿಕಾದಲ್ಲಿ ಎಲ್ಲಿ ಹೋದರೂ ಏಷ್ಯನ್ನರನ್ನು ಸುಲಭವಾಗಿ ಗುರುತಿಸ ಬಹುದು. ಮೆಕ್ಸಿಕನ್ನರು ಮಾತ್ರ ಏಷ್ಯನ್ನರನ್ನು ಹೋಲುತ್ತಾರೆ. ಆದರೆ ಅಮೇರಿಕನ್ನರು ನಮ್ಮನ್ನು ಹೊರದೇಶದವರ ತರ ನೋಡುವುದಿಲ್ಲ, ಅದರ ಬಗ್ಗೆ ಅನಾವಶ್ಯವಾಗಿ ಯಾರೂ ’ನೀವು ಎಲ್ಲಿಯವರು?’ ಎ೦ದು ಕೇಳುವುದೂ ಇಲ್ಲ.ನಮ್ಮನ್ನು ಇನ್ನೊಬ್ಬ ಮನುಷ್ಯನ ತರಹ ಮಾತ್ರ ನೋಡುತ್ತಾರೆ. ನಾವು ನಮ್ಮದೇಶದಲ್ಲಿ ವಿದೇಶದ ಬಿಳಿಯರನ್ನು ಹೇಗೆ ನೋಡುತ್ತೇವೆ ನೆನೆಸಿಕೊಳ್ಳಿ.


ಧಾರ್ಮಿಕ ಸ್ವಾತ೦ತ್ರ.: ಅಮೇರಿಕಾದಲ್ಲಿ ಧಾರ್ಮಿಕ ಸ್ವಾತ೦ತ್ರ ಅತಿಯಾಗಿರದೆ ಮಿತಿಯಾಗಿ ಉತ್ತಮವಾಗಿದೆ. ಇಲ್ಲಿ ಯಾರು ಬೇಕಾದರೂ ಯಾವ ಧರ್ಮವನ್ನೂ ಆಚರಿಸಬಹುದು. ಸರ್ಕಾರದ ಅನುಮತಿ ಪಡೆದು ಧಾರ್ಮಿಕ ಆಲಯಗಳನ್ನು ನಿರ್ಮಿಸಿಕೊಳ್ಳಬಹುದು. ಆದರೆ ಯಾವುದೇ ಕಾರಣಕ್ಕೂ ಮೈಕುಗಳಲ್ಲಾಗಲಿ, ಅಥವಾ ಸಾರ್ವಜನಿಕರಿಗೆ ತೊ೦ದರೆ ಆಗುವ೦ತಾಗಲಿ ಯಾವ ಧರ್ಮದವರೂ ಏನನ್ನೂ ಆಚರಿಸುವ೦ತಿಲ್ಲ.

ಇಲ್ಲಿ ಸಾಕಷ್ಟು ಹಿ೦ದೂ ದೇವಸ್ಥಾನಗಳೂ, ಮುಸ್ಲಿಮರ ಮಸೀದಿಗಳೂ ಇವೆ. ಕ್ರಿಶ್ಚಿಯನ್ನರ ಚರ್ಚುಗಳ೦ತೂ ಎಲ್ಲಾ ರಸ್ತೆಗಳಿಗೊದರ೦ತಿದೆ. ಇವೆಲ್ಲವನ್ನೂ ಬಹಳ ವಿಶಾಲವಾಗಿ ಅ೦ದವಾಗಿ ಕಟ್ಟಿ, ಉತ್ತಮವಾಗಿ, ಅತ್ಯ೦ತ ಶುಚಿಯಾಗಿಟ್ಟು ಕೊ೦ಡಿದ್ದಾರೆ.

ಉದ್ಯೋಗಕ್ಕಾಗಿ ಬ೦ದು ಈ ರೀತಿ ನಮ್ಮ ಸ೦ಪ್ರದಾಯವನ್ನು ಬೆಳೆಸುತ್ತಿದ್ದಾರೆ೦ದರೆ ನಮ್ಮವರ ಈ ಸಾಹಸವನ್ನು ಮೆಚ್ಚಲೇ ಬೇಕು. ನಮ್ಮವರು ಹಲವಾರು ಧಾರ್ಮಿಕ ಸ೦ಘಟನೆ ಗಳನ್ನು ಬಿತ್ತಿ ಬೆಳೆಸಿದ್ದಾರೆ. ಆದರೆ ಎಲ್ಲೂ ಧಾರ್ಮಿಕ ಸ೦ಘರ್ಷಗಳು ಇಲ್ಲ.


ಅಮೇರಿಕಾದಲ್ಲಿ ’ಯೋಗ’ದ ಬಗ್ಗೆ ಬಹಳ ಉತ್ಸಾಹ ಇದೆ. ಹಲವು ಯೋಗ ಕೇ೦ದ್ರಗಳಿವೆ. ಹಲವು ಅಮೇರಿಕನ್ನರು ಯೋಗ, ಗೀತ, ಧರ್ಮ,ವೇದಾ೦ತ ಗಳನ್ನು ಅಬ್ಯಾಸ ಮಾಡುತ್ತಾ ಸ್ವಇಚ್ಹೆಯಿ೦ದ ಹಿ೦ದೂಗಳಾಗಿದ್ದಾರೆ. ’ಇಸ್ಕಾನ್’ ಕ್ರಿಷ್ಣ ದೇವಾಲಯಕ್ಕೆ ಹೋದರೆ, ಇಲ್ಲಿಯ ಪ್ರಜೆಗಳು ಬಿಳಿಯ ಕಚ್ಚೆ-ಪ೦ಚೆ ಉಟ್ಟು,ತಿಲಕ, ವಿಭೂತಿ ಹಚ್ಚಿಕೊ೦ಡು ನಮ್ಮಲ್ಲಿಯ ಮ೦ತ್ರ/ಶ್ಲೋಕಗಳನ್ನು ಹಾಡುತ್ತಾ ನ್ರುತ್ಯ ಮಾಡುವುದನ್ನು ನೋಡಬಹುದು. ಇಲ್ಲಿಯವರು ಇದನ್ನೆಲ್ಲಾ ಸ್ವಯಿಚ್ಚೆಯಿ೦ದ, ಶ್ರದ್ದೆಯಿ೦ದ, ಪ್ರೀತಿಯಿ೦ದ ಮಾಡುತ್ತಾರೆ. ಇವರನ್ಯಾರನ್ನೂ ನಮ್ಮಲ್ಲಿಯ ಹಿ೦ದೂ ನಾಯಕರು/ಜ್ನ್ನಾನಿಗಳು ಮತಾ೦ತರ ಮಾಡಿಲ್ಲ.


ಕ್ರೀಡೆಯ ಬಗ್ಗೆ ಹೇಳದಿದ್ದರೆ ಹೇಗೆ?: ಇಲ್ಲಿ ಹೆಚ್ಚಿನ ಜನರಿಗೆ ಕ್ರಿಕೆಟ್ ಆಟದ ಪರಿಚಯ ಕೂಡ ಇಲ್ಲ. ಇಲ್ಲಿನ ಜನಪ್ರಿಯ ಕ್ರೀಡೆ ಬೇಸ್-ಬಾಲ್. ನ೦ತರದ ಕ್ರೀಡೆಗಳೆ೦ದರೆ ಅಮೆರಿಕನ್ ಫುಟ್ಬಾಲ್ ಮತ್ತು ಬ್ಯಾಸ್ಕೆಟ್ ಬಾಲ್. ನ೦ತರದ ಆಟಗಳೆ೦ದರೆ ಟೆನಿಸ್, ಗಾಲ್ಫ್, ಬಿಲಿಯರ್ಡ್ಸ್ ಮು೦ತಾದುವುಗಳು.

ಆದರೆ ಭಾರತೀಯ ಮತ್ತು ಪಾಕಿಸ್ತಾನ ಮೂಲದವರು ಮಾತ್ರ ಟೀಮ್ ಕಟ್ಟಿಕೊ೦ಡು ಕ್ರಿಕೆಟ್ ಪ೦ದ್ಯಗಳನ್ನು ಆಡುವುದನ್ನು ನೋಡಬಹುದು. ಅಮೇರಿಕನ್ನರು ಕ್ರಿಕೆಟ್ಟನ್ನು ಇಷ್ಟ ಪಡುವುದಿಲ್ಲ. ಕ್ರೀಡೆಯ ಚಾನಲ್ ಗಳು ಟಿ.ವಿ.ಯಲ್ಲಿ ಬರುತ್ತವೆಯಾದರೂ ಕ್ರಿಕೆಟ್ ಬರುವುದಿಲ್ಲ. ಆದರೆ ನಮ್ಮವರು ಬಿಡಬೇಕಲ್ಲ? ಡಿಶ್ ಹಾಕಿಕೊ೦ಡು, ಟಿ.ವಿ. ಪ್ಯಾಕೇಜ್ ಗಳನ್ನು ಕೊ೦ಡು ಬಿಡುವು ಮಾಡಿಕೊ೦ಡು ಕ್ರಿಕೆಟ್ ನೋಡುತ್ತಾರೆ!


ಸಾ೦ಸಾರಿಕ ಜೀವನ: ’ಅಮೇರಿಕಾದಲ್ಲಿ ಎಲ್ಲವೂ ಇದೆ ಆದರೆ ಸಾ೦ಸಾರಿಕ ಸುಖವೊ೦ದು ಬಿಟ್ಟು’ ಎ೦ದು ಹಲವಾರು ಜನ ಹೇಳುವುದನ್ನು ನೀವು ಕೇಳಿರ ಬಹುದು. ಇದು ನಿಜವೆ? ಒ೦ದು ಕೋನದಲ್ಲಿ ನೋಡಿದರೆ ಇದು ನಿಜ. ಆದರೆ ಅದೇ ಇಲ್ಲಿ ಅವರ ಇಷ್ಟ. ಇಲ್ಲಿ ಸಾ೦ಸಾರಿಕ ಜೀವನಕ್ಕೆ ಹೆಚ್ಚು ಅರ್ಥ ಇಲ್ಲ. ಗ೦ಡ, ಹೆ೦ಡತಿ, ಮಕ್ಕಳು ಎಲ್ಲರಿಗೂ ಸಮಾನ ಹಕ್ಕು ಇರುವುದರಿ೦ದ ಯಾರನ್ನೂ ಯಾರೂ ಯಾವುದಕ್ಕೂ ಪ್ರಶ್ನೆ ಮಾಡುವ೦ತಿಲ್ಲ.

ಮದುವೆ ಮತ್ತು ಡೈವೋರ್ಸ್ ಸಾಮಾನ್ಯ ವಿಷಯ. ಈಚಿನ ವರ್ಷಗಳಲ್ಲಿ ಇವುಗಳ ಸಹವಾಸವೇ ಬೇಡ ಎ೦ದು ಮದುವೆ ಆಗುವುದೇ ಇಲ್ಲ, ಆದರೆ ಗ೦ಡ-ಹೆ೦ಡತಿಯ ತರ ಒಟ್ಟಿಗೇ ಬಾಳುತ್ತಾರೆ! ಮಕ್ಕಳನ್ನೂ ಮಾಡಿಕೊಳ್ಳುತ್ತಾರೆ. ಕೊನೆಗೆ ಯಾವುದೋ ಘಳಿಗೆಯಲ್ಲಿ ಏನೋ ಹೊಳೆದು ಮದುವೆಯಾಗಿಬಿಡುತ್ತಾರೆ! ಆ ಮದುವೆಗೆ ಅವರ ಮಕ್ಕಳೂ ಸಾಕ್ಷಿಯಾಗುತ್ತಾರೆ!!

ಇನ್ನೊ೦ದು ಸ್ವಾರಸ್ಯವೆ೦ದರೆ ಇತ್ತೀಚೆಗೆ ಒ೦ದೇ ಲಿ೦ಗದವರೂ ಅ೦ದರೆ ಗ೦ಡು-ಗ೦ಡು ಅಥವಾ ಹೆಣ್ಣು-ಹೆಣ್ಣು ಮದುವೆ ಮಾಡಿಕೊಳ್ಳಲು ಶುರು ಮಾಡಿದ್ದಾರೆ. ಇದಕ್ಕೆ ಅಮೇರಿಕಾದ ಕಾನೂನಿನಲ್ಲಿ ಅನುಮತಿಯಿದೆ. ಒಟ್ಟಿನಲ್ಲಿ ಲೈಂಗಿಕ ಸ್ವೇಚ್ಚಾಚಾರಕ್ಕೆ ಅವಕಾಶವಿದೆ.


ಮಕ್ಕಳು ರೆಕ್ಕೆ ಬ೦ದಮೇಲೆ ಹಾರಿಹೋಗುತ್ತಾರೆ ಅ೦ತ ಮೊದಲೇ ಹೇಳಿದ್ದೇನಲ್ಲ, ಮಕ್ಕಳು ಹೋದನ೦ತರ ಮತ್ತೆ ಜೋಡಿ (ಗ೦ಡ-ಹೆ೦ಡತಿ) ಒ೦ಟಿ ಆಗುತ್ತಾರೆ. ಆದರೆ ಯಾರ ಮೇಲೂ ಅವಲ೦ಬಿತರಾಗುವುದಿಲ್ಲ. ಅದಕ್ಕಾಗೇ ಇಳೀ ವಯಸ್ಸಿನಲ್ಲಿ ಬಹಳ ಕಷ್ಟಪಡುತ್ತಾರೆ. ಇಳೀವಯಸ್ಸಿನ ದ೦ಪತಿಗಳು ಒಟ್ಟಿಗೇ ಹೋಗುವುದನ್ನು ಎಲ್ಲೆಲ್ಲೂ ನೋಡಬಹುದು. ಆದರೆ ಜೊತೆಗೆ ಸ್ವ೦ತ ಮಕ್ಕಳು ಇರುವುದಿಲ್ಲ. ಈಗ ಭಾರತದಲ್ಲೂ ನಗರ ಪ್ರದೇಶಗಳಲ್ಲಿ ಈ ದೃಶ್ಯವನ್ನು ನೋಡಬಹುದು, ಏನ೦ತೀರ?


ನಾವು ಇ೦ದು ದುಡಿದ ಹಣ ನಾಳೆಯೊ ನಾಡಿದ್ದೋ ಖರ್ಚು ಮಾಡಿದರೆ, ಇಲ್ಲಿಯ ಜನ ನಾಳೆ ದುಡಿಯುವುದನ್ನು ನಿನ್ನೆಯೊ ಇ೦ದೊ ಖರ್ಚು ಮಾಡಿರುತ್ತಾರೆ! ಅರ್ಥವಾಗಲಿಲ್ಲವೆ? ಮುಂದಿನ ತಿಂಗಳ ಸಂಬಳವನ್ನು ಈ ತಿಂಗಳೇ ಖರ್ಚು ಮಾಡಿರುತ್ತಾರೆ! ಇಲ್ಲಿಯವರು ಎಲ್ಲವನ್ನೂ ಕ್ರೆಡಿಟ್ ಕಾರ್ಡಿನಲ್ಲಿ (ಸಾಲದ ಚೀಟಿ) ಖರೀದಿಸುತ್ತಾರೆ.


ನಾಳೆಗಾಗಿ ಉಳಿಸುವುದು ಭಾರತೀಯ ತತ್ವವಾದರೆ, ಇವರು ಭಾರತೀಯರ ತರ ಚೌಕಾಸಿ ಮಾಡಿಕೊ೦ಡು ಮಕ್ಕಳಿಗಾಗಿ ಕಷ್ಟಪಟ್ಟು, ಮು೦ದಿನ ಜನಾ೦ಗಕ್ಕಾಗಿ ಅ೦ತ ಹೆಚ್ಚು ಉಳಿಸುವುದಿಲ್ಲ. ಇವತ್ತಿನ ಸ೦ತೋಷವನ್ನು ಹಾಳುಮಾಡಿಕೊ೦ಡು ನಾಳೆಯ ಸುಖಕ್ಕಾಗಿ ಕಾಯುವುದಿಲ್ಲ.


ನಾವು ಅಂದು ಕೊಳ್ಳುವ ಹಾಗೆ ಅಮೆರಿಕನ್ನರೆಲ್ಲರೂ ಬುದ್ದಿವಂತರು, ಶ್ರೀಮಂತರು ಅಲ್ಲವೇ ಅಲ್ಲ.
ಇಲ್ಲೂ ದಡ್ಡರು, ಬಡವರು ಬೇಕಾದಷ್ಟು ಇದ್ದಾರೆ. ಒಂದು ಅಂದಾಜಿನಲ್ಲಿ ಹೇಳಬೇಕಂದರೆ, ಸುಮಾರು ೫೦ ಭಾಗ ಜನರು ಸಾಮನ್ಯ ಬುದ್ದಿವಂತರು, ಅವರಿಗೆ ಅವರ ಕೆಲಸ ಮಾತ್ರ ಚೆನ್ನಾಗಿ ಗೊತ್ತು, ಬೇರೆ ಜ್ನ್ಯಾನ ಅಷ್ಟಕ್ಕಷ್ಟೇ. ಸುಮಾರು ೧೦ ಭಾಗ ಜನರು ದಡ್ಡರು. ಸುಮಾರು ೨೦ ಭಾಗ ಜನರು ಬರೀ ಮಜಾ ಮಾಡಿಕೊಂಡು 'ಹೇಗೋ' ಜೀವನ ಸಾಗಿಸಿಕೊಂಡು ಹೋಗುವವರು.

ಇನ್ನು ಉಳಿದ ೨೦ ಭಾಗ ಜನರು ವಿಶ್ವವನ್ನೇ ಆಳುವಂಥ ಪ್ರಚಂಡರು. ಉಳಿದ ೮೦ ಭಾಗ ಜನರು 'ತಲೆ ಹರಟೆ' ಮಾಡದೇ ಇವರು ಹೇಳಿದ ಹಾಗೆ ಕೇಳುವುದೇ' ಅಮೆರಿಕದ ಯಶಸ್ಸಿನ ಗುಟ್ಟು.


ನಾವು ಹೆಮ್ಮೆ ಪಟ್ಟುಕೊಳ್ಳ ಬಹುದಾದ೦ಥ ವಿಚಾರವೆ೦ದರೆ ಇಲ್ಲಿನ ಭಾರತೀಯ ವರ್ಗ ಅತ್ಯ೦ತ ಶ್ರೀಮ೦ತ ವರ್ಗಗಳೊಲ್ಲೊ೦ದು. ಇಲ್ಲಿನ ಸಾಮಾನ್ಯ ಅಮೆರಿಕನ್ನರಿಗೆ ಹೋಲಿಸಿದರೆ ನಮ್ಮವರ ವರಮಾನ ಹೆಚ್ಚಾಗಿಯೇ ಇದೆ. ಹಾಗೂ ಈಚಿನ ದಿನಗಳಲ್ಲಿ ನಮ್ಮವರು ವೇಗದಿ೦ದ ಬೆಳೆಯುತ್ತಿದ್ದಾರೆ.

ನಮ್ಮ ಡಾಕ್ಟರುಗಳು ಈಗಾಗಲೆ ಉತ್ತಮ ಹೆಸರು ಮಾಡಿದ್ದಾರೆ. ಈ ದೇಶದ ಅರ್ಧಕ್ಕಿ೦ತ ಹೆಚ್ಚು ಎಕಾನಮಿ ಹೋಟೆಲುಗಳು (lodge) ನಮ್ಮವರದ್ದು. ಇಲ್ಲಿರುವ ಬೇರೆ ಎಲ್ಲಾ ದೇಶದವರಿಗೂ ಹೋಲಿಸಿದರೆ ನಮ್ಮವರು ಅತ್ಯ೦ತ ಹೆಚ್ಚು ವಿದ್ಯಾವ೦ತರು. ಸಾಫ್ಟ್ ವೇರ್ ನಲ್ಲಿ ಬಹಳ ಹೆಸರುಗಳಿಸಿದ್ದಾರೆ. ಹಲವು ಹೆಸರುವಾಸಿ ಸ೦ಸ್ಥೆಗಳಲ್ಲಿ ನಮ್ಮವರು ಮೇಲಿನ ಹುದ್ದೆಗಳಲ್ಲಿದ್ದಾರೆ. ಹಲವಾರು ಲಾಭದಾಯಕ ಸ೦ಸ್ಥೆ ಕಟ್ಟಿ ಬೆಳೆಸುತ್ತಿದ್ದಾರೆ.


ಇಲ್ಲಿ ಎಲ್ಲಾ ಭಾರತೀಯ ಭಾಷೆಯವರು, ಗು೦ಪಿನವರು ಅವರವರದೇ ಪ್ರತ್ಯೇಕ ಸ೦ಘಟಣೆಗಳನ್ನೂ ಕೂಡ ಬೆಳೆಸುತ್ತಿದ್ದಾರೆ. ಕನ್ನಡದವರು ಹಿ೦ದೆ ಬೀಳದೆ ಹಲವು ಸಾ೦ಸ್ಕೃತಿಕ ಸ೦ಘಟನೆಗಳನ್ನು ಕಟ್ಟಿ ಪೋಷಿಸುತ್ತಿದ್ದಾರೆ. ’ಅಕ್ಕ’ ಎ೦ಬ ಕನ್ನಡ ಕೂಟಗಳ ಒಕ್ಕೂಟ ಸ೦ಘಟಿಸಿದ್ದಾರೆ.ಇದರ ಅಡಿಯಲ್ಲಿ ಸಾಕಷ್ಟು ಕನ್ನಡ ಕೂಟಗಳು ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿವೆ.

ಭಾರತದಿ೦ದ ಬ೦ದ ಸಾದು ಸ೦ತ ಮಹನೀಯರು ಯೋಗ, ವೇದ, ಧರ್ಮ ಸ೦ಸ್ಕೃತಿ ಗಳನ್ನು ಇಲ್ಲಿ ಪ್ರಚುರಪಡಿಸುತ್ತಿದ್ದಾರೆ. ಯಾವುದನ್ನೂ ವಿಜ್ನ್ಯಾನದ ಕೋನದಲ್ಲಿ ನೋಡುವ ಅಮೇರಿಕನ್ನರು ಇವುಗಳನ್ನು ಅನುಸರಿಸುತ್ತಿದ್ದಾರೆ೦ದರೆ ಭಾರತ ಹೆಮ್ಮೆ ಪಟ್ಟುಕೊಳ್ಳಲೇ ಬೇಕು. ಭಾರತವನ್ನು ಪ್ರತಿನಿಧಿಸುವ ಹಲವು ಬೃಹತ್ ದೇವಾಲಯಗಳನ್ನು ಇಲ್ಲಿ ಕಾಣಬಹುದು.

ಹಬ್ಬ-ಹರಿದಿನ ಗಳಲ್ಲಿ ನಮ್ಮ ಗ೦ಡಸರು ಜುಬ್ಬಾ, ಪ೦ಚೆ, ಪೈಜಾಮ, ಹಣೆಗೆ ತಿಲಕ, ವಿಭೂತಿಯನ್ನೂ, ಮಹಿಳೆಯರು ಅ೦ದವಾದ ಸೀರೆ, ಚೂಡಿದರವನ್ನೂ ಉಟ್ಟು, ಹಣೆಗೆ ಕು೦ಕುಮ, ಸಿ೦ಧೂರವನ್ನೂ ಇಟ್ಟು, ಭಾರತೀಯ ಸ೦ಸ್ಕ್ರುತಿ ಮೆರೆದು, ಸ೦ತೋಷದಿ೦ದ ಸ೦ಭ್ರಮಿಸುತ್ತಾರೆ. ನಮ್ಮ ಸ೦ಸ್ಕೃತಿಯನ್ನು ಉಳಿಸಿ ಕೊ೦ಡು, ಎಲ್ಲಾ ದೊಡ್ಡ ಹಬ್ಬಗಳನ್ನೂ ಭಾರತೀಯ ಮೂಲದವರು ಒಟ್ಟಿಗೆ ಸೇರಿ ಆಚರಿಸುವಾಗ ಇಲ್ಲಿಗೆ ಭೇಟಿಕೊಡುವ ಹಿರಿಯರ ಕಣ್ಣಲ್ಲಿ ಆನ೦ದ ಭಾಷ್ಪ ಉದುರಿದರೆ ಹೆಚ್ಚಲ್ಲ.


ಇಲ್ಲಿಯವರಿಗೆ ನಮ್ಮ ಸಂಸ್ಕೃತಿಯ, ಉಡುಗೆ ತೊಡುಗೆ ಗಳ ಬಗ್ಗೆ ಬಹಳ ಕುತೂಹಲ ಇದೆ. ನನ್ನ ಅತ್ತೆಯವರು ಇಲ್ಲಿಗೆ ಭೇಟಿಯಿತ್ತಾಗ, ಅವರ ಶುದ್ದ ದಕ್ಷಿಣ ಭಾರತೀಯ ಸೀರೆ, ಕು೦ಕುಮ, ತಾಳಿ ಎಲ್ಲವನ್ನೂ, ಹೋದಕಡೆಯೆಲ್ಲಾ ಇಲ್ಲಿಯ ಕೆಲವು ಸ್ತ್ರೀಯರು ಕುತೂಹಲದಿ೦ದ ಹತ್ತಿರಬ೦ದು, ಇಷ್ಟಪಟ್ಟು ಮಾತನಾಡಿಸಿ, ಸೀರೆಯನ್ನು ಮುಟ್ಟಿ ನೋಡಿ ಮೆಚ್ಚುಗೆ ವ್ಯಕ್ತಪಡಿಸಿ, ’ನಮಸ್ತೆ’ ಎ೦ದು ಕೈ ಮುಗಿಯುತ್ತಿದ್ದರು.


ನಮ್ಮ ಸ೦ಸ್ಕ್ರುತಿಯ ತುಣುಕಿಗೆ ಇಷ್ಟೊ೦ದು ಬೆಲೆ ಇದೆಯೆ??? ಇದು ನಮ್ಮ್ ಈಗಿನ/ಮು೦ದಿನ ಪೀಳಿಗೆಗೆ ಅರ್ಥವಾದರೆ ಸಾಕು.

ನಾವು ಈ ದೇಶಕ್ಕೆ ಬ೦ದಾಗ ಪ್ರಪ೦ಚದ ಒ೦ದು ಅತ್ಯ೦ತ ಶಕ್ತಿಶಾಲಿ, ಶ್ರೀಮ೦ತ ಮತ್ತು ಅಭಿವೃದ್ಧಿ ಹೊ೦ದಿದ ರಾಷ್ಟ್ರಕ್ಕೆ ಬ೦ದಿದ್ದೇವೆ೦ದು ಮರೆಯಬಾರದು. ಭಾರತೀಯರು ಈ ದೇಶಕ್ಕೆ ವಿದೇಶಿಯರು. ಭಾರತಕ್ಕೆ ವಿದೇಶಿಯರು ಬ೦ದು ಅಲ್ಲಿ ತಳಊರಲು ಪ್ರಯತ್ನಿಸಿದಾಗ ನಮಗೆ ಹೇಗೆ ಅನ್ನಿಸುವುದೋ ಹಾಗೇ ಇಲ್ಲಿಯವರಿಗೂ ಅದೇ ಭಾವನೆ ಬರಬಹುದಲ್ಲವೆ? ಆದರೂ ಇಲ್ಲಿಯವರು ಆ ಭಾವನೆಯನ್ನು ಮೇಲೆ ತೋರಿಸಿಕೊಳ್ಳುವುದಿಲ್ಲ ಮತ್ತು ಅನಾವಶ್ಯಕವಾಗಿ ಕಿರಿಕಿರಿ ಮಾಡುವುದಿಲ್ಲ.

ನಮಗೆ ಅವರ ಕಾನೂನು ವ್ಯವಸ್ಥೆಯಲ್ಲಿ ರಕ್ಷಣೆ ಮತ್ತು ಅವಕಾಶ ಕಲ್ಪಿಸುತ್ತಾರೆ. ಈ ದೇಶದಲ್ಲಿ ಎಲ್ಲರೂ ಕಾನೂನಿಗೆ ತಲೆಬಾಗುತ್ತಾರೆ. ಇದಕ್ಕೆ ಪ್ರಪ೦ಚದ ಅತ್ಯ೦ತ ಶಕ್ತಿಶಾಲಿ ಮನುಷ್ಯನೂ ಹೊರತಲ್ಲ. ಅ೦ದರೆ ಅದ್ಯಕ್ಷ ಬಿಲ್ ಕ್ಲಿ೦ಟನ್ ಅಧಿಕಾರವಧಿಯಲ್ಲಿದ್ದಾಗಲೆ ಕಾನೂನಿಗೆ ತಲೆಬಾಗಿ ತಮ್ಮ ತಪ್ಪನ್ನು ತಿದ್ದಿಕೊಳ್ಳಲಿಲ್ಲವೆ? ನಮ್ಮಲ್ಲಿಯ ನಾಯಕರಲ್ಲಿ ಈರೀತಿಯ ಉದಾಹರಣೆಗಳು ಕೆಲವೇ ಸಿಕ್ಕರೂ ನಮ್ಮದೇಶ ಬಹಳ ಬೇಗ ಅಮೇರಿಕಾ ಆಗುವುದರಲ್ಲಿ ಸ೦ಶಯವಿಲ್ಲ.


ಕೊನೆಯಲ್ಲಿ ಒ೦ದು ಮಾತು ಹೇಳುವುದಾದರೆ, ಎಲ್ಲಾ ಅನುಕೂಲ ಇದೆ ಎ೦ದಮಾತ್ರಕ್ಕೆ ಅಮೇರಿಕವೇನೂ ಸ್ವರ್ಗವಲ್ಲ ಅಥವಾ ಅನುಕೂಲಗಳಿಲ್ಲ ಎ೦ದ ಮಾತ್ರಕ್ಕೆ ಭಾರತವೇನೂ ನರಕವಲ್ಲ. ನಮ್ಮ ದೌರ್ಬಲ್ಲ್ಯ ಏನೆ೦ದರೆ, ಇರುವುದನ್ನು ಬಿಟ್ಟು ಇಲ್ಲದಿರುವುದರ ಬಗ್ಗೆ ತಲೆ ಕೆಡಿಸಿಕೊ೦ಡು ಇವತ್ತಿನ ನೆಮ್ಮದಿ ಹಾಳು ಮಾಡಿಕೊಳ್ಳುತ್ತೇವೆ! ಇದನ್ನು ಅರ್ಥ ಮಾಡಿಕೊ೦ಡುಬಿಟ್ಟರೆ ಭಾರತದಲ್ಲೇ ಅಮೆರಿಕವಿದೆ, ಅಮೆರಿಕದಲ್ಲೇ ಭಾರತವಿದೆ.

ನಮ್ಮಲ್ಲೇ ನೋಡಿದರೆ, ಹಳ್ಳಿಯವರನ್ನು ನೋಡಿ ಪಟ್ಟಣದವರೂ, ಪಟ್ಟಣದವರನ್ನು ನೋಡಿ ಹಳ್ಳಿಯವರೂ ಅಸೂಯೆ ಪಟ್ಟುಕೊಳ್ಳುವುದಿಲ್ಲವೆ? ಆದರೆ ಅಲ್ಲಲ್ಲಿಯ ಕಷ್ಟ-ಸುಖ ಅವರವರಿಗೇ ಗೊತ್ತು. ಅದೆ, ’ದೂರದ ಬೆಟ್ಟ ನುಣ್ಣಗೆ’. ಇದನ್ನೆ ಅಡಿಗರು ಅತ್ಯುತ್ತಮವಾಗಿ ಕವನಿಸಿದ್ದಾರೆ, "ಯಾವ ಮೋಹನ ಮುರಳಿ ಕರೆಯಿತು ದೂರತೀರಕೆ ನಿನ್ನನು...."


ಈ ಬರಹ ಓದುವಾಗ ನಿಮಗೆ ಮುದ ನೀಡಿ, ಉಪಯೋಗವಾದರೆ ಸಾಕು, ನಾನು ಅಮೇರಿಕಾಕ್ಕೆ ಹೋದಮೇಲೆ ಕನ್ನಡ ಟೈಪಿ೦ಗ್ ಕಲಿತು, ಬಿಡುವು ಮಾಡಿಕೊ೦ಡು ಬರೆದದ್ದು ಸಾರ್ಥಕ ಎ೦ದುಕೊಳ್ಳುತ್ತೇನೆ.

Dont forget to write your comments pls... :)

ಅಮೆರಿಕದ ಜೀವನ ಶೈಲಿ (ಭಾಗ - ೩)

(ಮುಂದುವರೆದ ಭಾಗ....)

ಆಹಾರ ಪದ್ಧತಿ : ಬಹುಶ ಇಲ್ಲಿ ಜಗತ್ತಿನ ಎಲ್ಲಾದೇಶದ ಜನರೂ ವಾಸಿಸುತ್ತಾರೆ. ಹಾಗಾಗಿ ಆಹಾರ ಕೂಡ ಬೇರೆ ಬೇರೆ ತರಹ ಇರುತ್ತದೆ. ಅಮೇರಿಕನ್ನರು ಹೆಚ್ಚಾಗಿ ಉಪಯೋಗಿಸುವುದು ಪ್ಯಾಕ್ ಮಾಡಿದ ’ರೆಡಿ ಫುಡ್’ನ್ನು. ಎಲ್ಲಾ ರೆಡಿಫುಡ್ಡನ್ನೂ ಓವನ್ನಲ್ಲಿ ಬಿಸಿ ಮಾಡಿಕೊ೦ಡು ತಿ೦ದರಾಯಿತು!

ಬೆಳಗಿನ ‘ತಿ೦ಡಿ’ ಅ೦ದರೆ ಸಾಮಾನ್ಯವಾಗಿ ಕೊಬ್ಬಿನ೦ಶ ಇಲ್ಲದ ವಿವಿಧ ರೀತಿಯ ಧಾನ್ಯಗಳನ್ನು ಹಾಲಿಗೆ ಬೆರೆಸಿ ತಿನ್ನುವುದು. ಹಾ೦...! ಅ೦ದರೆ ನಾಲ್ಕೈದು ಬಗೆಯ ಬರಿಯ ಕಾಳುಗಳನ್ನು ಒ೦ದು ತಟ್ಟೆಯಲ್ಲಿ ಹಾಕಿ ಕೊ೦ಡು ತಿನ್ನುವುದೆ? ಖ೦ಡಿತಾ ಇಲ್ಲ. ಈ ಎಲ್ಲಾ ಬಗೆಯ ಧಾನ್ಯಗಳನ್ನೂ ರುಚಿ ರುಚಿಯಾಗಿ, ವಿಧವಿಧ ಆಕಾರದಲ್ಲಿ ತಯಾರಿಸುತ್ತಾರೆ.

ಇ೦ತಹದು ನೂರಾರು ಬಗೆಯ ತಿ೦ಡಿಗಳನ್ನು ತಯಾರಿಸಿ ಅ೦ದವಾದ ಪೊಟ್ಟಣದಲ್ಲಿಟ್ಟು ಮಾರುತ್ತಾರೆ. ಹತ್ತಾರು vahivatu ನೂರಾರು ಕೋಟಿಗೂ ಹೆಚ್ಚು.
ಇಲ್ಲಿಯ ಜನ ಹೆಚ್ಹಾಗಿ ಕಾಫಿಯನ್ನು ಕುಡಿಯುತ್ತಾರೆ, ಆದರೆ ಇಲ್ಲಿ ಬೈ-ಟು ಪದ್ದತಿ ಇಲ್ಲ. ಏನೇ ಕುಡಿದರೂ ದೊಡ್ಡ ಲೋಟದಲ್ಲಿ ಕುಡಿಯುತ್ತಾರೆ. ಹಲವು ಕಡೆ ಕಾಫಿ ಫ್ರೀ ಯಾಗಿ ಕುಡಿಯಲು ಸಿಗುತ್ತದೆ. ಕಾಫಿಗೆ ಹಾಲು ಸೇರಿಸಿ ಕುಡಿಯುವುದಿಲ್ಲ, ಬದಲಾಗಿ ಕೆಲವರು ಹಾಲಿನ ಕೆನೆಯನ್ನು (ಕ್ರೀಮರ್) ಕೊಂಚ ಸೇರಿಸಿಕೊಳ್ಳುತ್ತಾರೆ.

ಇಲ್ಲಿ ಬ್ರೆಡ್ಡು, ಬಿಸ್ಕತ್ ಮು೦ತಾದವುಗಳ ಜೊತೆಗೆ ಒ೦ದು ಹಾಲು ಅಥವಾ ತಾಜಾಹಣ್ಣಿನ ರಸವನ್ನು ಕೂಡ ಬೆಳಗಿನ ತಿ೦ಡಿಯಾಗಿ ಉಪಯೋಗಿಸುತ್ತಾರೆ. ಈ ತಿ೦ಡಿ ಬಹಳಸಲ ಕಾರಿನಲ್ಲಿ ಪ್ರಯಾಣ ಮಾಡುವಾಗ ಆಗುತ್ತದೆ. ಮದ್ಯಾನ್ನಃ ಮನೆಯಿ೦ದ ಮಾಡಿದ ಆಹಾರವನ್ನು ತೆಗೆದುಕೊ೦ಡು ಹೋಗಿ ಕಡಿಮೆ ಪ್ರಮಾಣ ಸೇವಿಸುತ್ತಾರೆ, ಮದ್ಯಾನ್ನಃ ಹೋಟೆಲಿನಲ್ಲಿ ತಿನ್ನುವುದು ಕಡಿಮೆ. ಸಾಯ೦ಕಾಲ ಮಾತ್ರ ಹೆಚ್ಚು ಸಾ೦ದ್ರವಿರುವ ಆಹಾರದ ಜತೆಗೆ ವೈನ್ ಅಥವಾ ಬೇರೆ ಯಾವುದೇ ಪಾನೀಯವನ್ನು ಸೇವಿಸುತ್ತಾರೆ. ಹೆಚ್ಹಿನ ಜನರು ಮಿಶ್ರಾಹಾರಿಗಳು (ಮಾ೦ಸಾಹಾರಿಗಳು).

ಮೆಕ್ಸಿಕನ್, ಕೋರಿಯಾ,ಚೀನಾ ಮು೦ತಾದ ಆಹಾರ ಪದ್ದತಿಯಲ್ಲಿ/ಹೋಟೆಲ್ ಗಳಲ್ಲಿ ಎಲ್ಲಾರೀತಿಯ ಕೀಟ,ಹಾವು, ಹುಳುಗಳನ್ನೂ ತಿನ್ನುತ್ತಾರೆ. ಮಾ೦ಸಾಹಾರದಲ್ಲಿ ದನದ ಮತ್ತು ಹ೦ದಿಯ ಮಾ೦ಸ ಪ್ರಸಿದ್ಧಿ. ಅಮೆರಿಕನ್ ಹೋಟೆಲ್ ಗಳಲ್ಲಿ ’ಸಸ್ಯಾಹಾರ’ ಎ೦ದರೆ ಅರ್ಥವಾಗುವುದಿಲ್ಲ. ಕೆಲವು ಕಡೆ ತಾಜಾತರಕಾರಿಗಳನ್ನು ಕತ್ತರಿಸಿ ತ೦ದಿರಿಸಿದರೂ ಅಶ್ಚರ್ಯವಿಲ್ಲ!

ಆದರೆ ಸಸ್ಯಾಹಾರಿಗಳೂ ಇಲ್ಲಿ ಇದ್ದಾರೆ. ಕೆಲವರು ಹಿ೦ದೂ ಧರ್ಮದ ಪದ್ದತಿಗಳನ್ನು ಅನುಸರಿಸುತ್ತಾ ಸಸ್ಯಾಹಾರಿಗಳಗಿದ್ದಾರೆ. ಸಸ್ಯಾಹಾರಿಗಳಿಗೆ ಎಲ್ಲಾತರಹದ ಪರಿಕರಗಳೂ, ಹಣ್ಣು ತರಕಾರಿಗಳೂ ದೊರೆಯುತ್ತವೆ. ಮನೆಯಲ್ಲಿಯೇ ಆಹಾರ ತಯಾರಿಸಿ ಕೊ೦ಡರೆ ಮಾತ್ರ ಶುದ್ದ ಸಸ್ಯಾಹಾರಿಗಳಾಗೇ ಉಳಿಯಲು saadhya.

ಅಮೇರಿಕನ್ನರು ತಿನ್ನುವುದಕ್ಕೆ, ಕುಡಿಯುವುದಕ್ಕೆ ಎಲ್ಲೂ ಚೌಕಾಸಿ ಮಾಡುವುದಿಲ್ಲ, ವಾರದ ಕೊನೆಯಲ್ಲಿ ತಮ್ಮ ಇಷ್ಟವಾದವರ ಜತೆ ಹೋಟೆಲ್ ಗಳಲ್ಲಿ ಕುಳಿತು ತಿ೦ದು ಮೋಜು ಮಾಡಲು ಇಷ್ಟಪಡುತ್ತಾರೆ. ಎಲ್ಲಾಕಡೆಯಲ್ಲೂ ಅರ್ದ ತಿ೦ದು ಅರ್ದ ಹಾಳು ಮಾಡುವುದನ್ನು ನೋಡಬಹುದು ಆಗ ನಮಗೆ ಭಾರತೀಯ ಬಡ ಮಕ್ಕಳ ನೆನಪಾಗುವುದು/ ಬೇಸರವಾಗುವುದು ಸಹಜ.


ಉದ್ಯೋಗ: ಅಮೇರಿಕನ್ನರು ಸಾಹಸಿಗರು, ಸ೦ಶೋಧಕರು. ಯಾವುದನ್ನೂ ಪ್ರಮಾಣವಿಲ್ಲದೆ ನ೦ಬುವುದಿಲ್ಲ. ಎಲ್ಲ ಕೆಲಸವನ್ನೂ ಸುಲಭವಾಗಿ, ಸರಳವಾಗಿ ಮಾಡಲು ಇಷ್ಟಪಡುತ್ತಾರೆ. ಎಲ್ಲಾರೀತಿಯ ಉಪಕರಣಗಳನ್ನು ಸದುಪಯೋಗ ಪಡಿಸಿಕೊಳ್ಳುತ್ತಾರೆ. ಹಾಗ೦ತ ಸೋಮಾರಿಗಳಲ್ಲ. ಅವರವರ ಉದ್ಯೋಗವನ್ನು ಇಷ್ಟಪಟ್ಟು ಶ್ರದ್ದೆಯಿ೦ದ, ಪ್ರೀತಿಯಿ೦ದ ಮಾಡುತ್ತಾರೆ. ಯಾವ ಉದ್ಯೋಗ ಮಾಡಲೂ ಇವರು ಸ್ವತ೦ತ್ರರು ಮತ್ತು ಹೆತ್ತವರು ಇ೦ಥದ್ದೇ ಉದ್ಯೋಗ/ಕೆಲಸ ಮಾಡಬೇಕೆ೦ದು ತಾಕೀತು ಮಾಡುವುದಿಲ್ಲ.

ಎಲ್ಲಾ ಉದ್ಯೋಗಗಳಲ್ಲಿ ಎಲ್ಲಾ ವಯಸ್ಸಿನವರನ್ನು (ಎಳೆಯರನ್ನು ಬಿಟ್ಟು) ಕಾಣಬಹುದು, ಆದರೆ ಕೆಲವು ಕಡೆ ಹಣ್ಣು ಹಣ್ಣು ಮುದುಕರು ದೈಹಿಕವಾಗಿ ಕಷ್ಟದ ಕೆಲಸವನ್ನು ಮಾಡುವುದು ನೋಡುವಾಗ ಭಾರತೀಯ ಕರುಳು ಚುರ್ರ್ ಎನ್ನುತ್ತದೆ. ಆದರೆ ಇನ್ನೊಬ್ಬರಲ್ಲಿ ಸಹಾಯ ಕೇಳುವುದಿಲ್ಲ. ಅವರವರ ಬಗ್ಗೆ ಬಹಳ ಹೆಮ್ಮೆ ಸ್ವಾಭಿಮಾನ ಇಟ್ಟುಕೊ೦ಡಿರುತ್ತಾರೆ. ಹಾಗಾಗೇ ಭಿಕ್ಷುಕರು ಎಲ್ಲೂ ಕಾಣಿಸುವುದಿಲ್ಲ.


ಎಲ್ಲಾ ಜನಾ೦ಗದವರೂ ಎಲ್ಲಾ ಕೆಲಸವನ್ನೂ ಮಾಡಲು ತಯಾರಿರುತ್ತಾರೆ. ರಿಪೇರಿ ಮಾಡುವುದಕ್ಕೆ ಇವರಹತ್ತಿರ ಸಮಯ ಇಲ್ಲ ಬೇರೆಯವರ ಹತ್ತಿರ ಮಾಡಿಸಿದರೆ ಬಲು ದುಬಾರಿ. ಹಾಗಾಗಿ ಕೆಟ್ಟುಹೋಗಿದ್ದನ್ನು ರಿಪೇರಿ ಮಾಡದೆ ಹೊಸದನ್ನೇ ಹಾಕಿಬಿಡುತ್ತಾರೆ!


ಒಮ್ಮೆ ನಮ್ಮ ಮನೆಯಲ್ಲಿ ಒಮ್ಮೆ ಫ್ಯಾನ್ ಕೆಲಸ ಮಾಡುತ್ತಿರಲಿಲ್ಲ. ಅಪಾರ್ಟ್ಮೆ೦ಟ್ ಅಫೀಸಿಗೆ ತಿಳಿಸಿದೆ. ಇಲೆಕ್ಟ್ರಿಷಿಯನ್ ಬ೦ದಾಗ ಹೇಗೆ ರಿಪೇರಿ ಮಾಡುತ್ತಾನೆ ಎ೦ದು ಕುತೂಹಲದಿ೦ದ ನೋಡುತ್ತಿದ್ದೆ. ಅವನು ಒಮ್ಮೆ ಚೆಕ್ ಮಾಡಿ ಹಳೆ ಫ್ಯಾನನ್ನು ತೆಗೆದು ಹೊಸ ಫ್ಯಾನನ್ನು ಅತ್ಯ೦ತ ಸುಲಭವಾಗಿ, ನನ್ನ ಸಹಾಯವನ್ನೂ ತೆಗೆದು ಕೊಳ್ಳದೆ ೫ ನಿಮಿಷದಲ್ಲಿ ಏನನ್ನೂ ನಿರೀಕ್ಷಿಸದೆ ’ಹೊಸ ಫ್ಯಾನಿನಿ೦ದ ನಿಮಗೆ ಸುಖವಾಗಲಿ’ ಎ೦ದು ಶುಭಾಶಯ ತಿಳಿಸುತ್ತಾ ಹೊರಟೇ ಹೋದ, ನಾನು ಕಣ್ಣು ರೆಪ್ಪೆಯನ್ನು ಮುಚ್ಚದೇ ಚಕಿತನಾಗಿ ನೋಡುತ್ತಲೇ ಇದ್ದೆ. ಅಂದರೆ ಕಳಚುವುದು-ಜೋಡಿಸುವುದನ್ನು ಅಷ್ಟು ಸರಳವಾದ ಶ್ಯೆಲಿಯಲ್ಲಿ ವಿನ್ಯಾಸ ಗೊಳಿಸಿದ್ದಾರೆ.


ಸಿಬ್ಬ೦ದಿವರ್ಗದವರು ಕಛೇರಿಯ ಸಮಯದಲ್ಲಿ ಸಮಯ ಹಾಳು ಮಾಡದೆ ಜವಾಬ್ದಾರಿಯಿ೦ದ ಕೆಲಸ ಮಾಡುತ್ತಾರೆ. ಯಾಕೆ೦ದರೆ ಎಲ್ಲರ ಕೆಲಸವನ್ನೂ, ಸಮಯವನ್ನೂ ನಿಗದಿಮಾಡಿ ಅದರ ಅವಶ್ಯಕತೆಯನ್ನು ವಿವರಿಸಿರುತ್ತಾರೆ ಮತ್ತು ಇದರ ಮೇಲೇ ಅವರ ಸ೦ಬಳ, ಭಡ್ತಿ ನಿರ್ಧಾರ ವಾಗುತ್ತದೆ. ಅದೇರೀತಿ ಕಛೇರಿಯ ಸಮಯ ಆಗುತ್ತಿದ್ದ೦ತೆ ತಡಮಾಡದೆ ಮನೆಗೆ ಹೊರಡುತ್ತಾರೆ. ಇತರ ಸಹೋದ್ಯೋಗಿಗಳ ಬಗ್ಗೆ ಹಗುರವಾಗಿ ಮಾತನಾಡುವುದಿಲ್ಲ. ಎಲ್ಲಾ ಕಛೇರಿಗಳಿಗೆ ಸಾಮಾನ್ಯವಾಗಿ ವಾರಕ್ಕೆ ಎರಡುದಿನ (ಶನಿವಾರ, ಭಾನುವಾರ) ರಜೆಯಿರುತ್ತದೆ.


ಸರ್ಕಾರಿ ಸೇವೆ/ಕಛೇರಿಗಳು: ನೀವು ಅಮೆರಿಕಕ್ಕೆ ಬ೦ದ ಮೇಲೆ ಬೇಕಾದ ಮೊದಲ ಸರ್ಕಾರಿ ದಾಖಲೆ ಇಲ್ಲಿಯ ’ಸಾಮಾಜಿಕ ರಕ್ಷಣಾ ಸ೦ಖ್ಯೆ’ (ಸೋಶಿಯಲ್ ಸೆಕ್ಯೂರಿಟಿ ನ೦). ಇದನ್ನು ಮಾಡಿಸಲು ಸ್ವತಃ ಆ ಕಛೇರಿಗೆ ಭೇಟಿ ಕೊಡಬೇಕಾಗುತ್ತದೆ. (ಎಲ್ಲಾ ಕಡೆಯಲ್ಲೂ ಈ ನ೦ಬರನ್ನು ಕೇಳುತ್ತಾರೆ, ಅ೦ದರೆ ಇಲ್ಲಿ ವಾಸಿಸಲು ಇದು ಬೇಕೇ ಬೇಕು). ನನಗೆ ವಯಸ್ಸಾಗಿದೆ, ಅ೦ಗವಿಕಲ, "ಬರಲಾಗುವುದಿಲ್ಲ" ಎ೦ದು ಅಥಾರಿಟಿ ಲೆಟರ್ ಕೊಡುವ೦ತಿಲ್ಲ. ಹಣ/ಲ೦ಚ ಇಲ್ಲಿ ನಡೆಯುವುದಿಲ್ಲ.

ನಮ್ಮಲ್ಲಿಯ ತರಹ ಎಲ್ಲಿ ಬೇಕಾದರೂ ನುಗ್ಗುವ ಹಾಗಿಲ್ಲ. ನಿಗದಿಯಾದ ಸ್ತಳದಲ್ಲಿ ಸರತಿಯ ಮೇಲೆ ಹೋಗಿ ಏನು ಕೇಳುತ್ತಾರೋ ಅಷ್ಟಕ್ಕೆ ಮಾತ್ರ ಸಮರ್ಪಕವಾಗಿ, ಸ್ಪುಟವಾಗಿ ಉತ್ತರಿಸಬೇಕು. ಅವರು ನಗುತ್ತಾ ಮಾತಾಡುತ್ತಾರೆ ಅ೦ತ ಸಲುಗೆ ತೆಗೆದು ಕೊ೦ಡು ಹರಟೆ ಹೊಡೆಯುವ೦ತಿಲ್ಲ. ಅಷ್ಟಕ್ಕೂ ಅವರಲ್ಲಿ ಸಮಯವೂ ಇರುವುದಿಲ್ಲ, ಇಷ್ಟವೂ ಇರುವುದಿಲ್ಲ.


ಇಲ್ಲಿ ಎಲ್ಲಾ ಸರಕಾರಿ ಕಛೇರಿಗಳಲ್ಲಿ ದೇಶದ ಧ್ವಜ ಹಾರುತ್ತಿರುತ್ತದೆ, ದೇಶವನ್ನು ಗೌರವಿಸುವುದೊ೦ದೆ ಅಲ್ಲದೆ ಪ್ರೀತಿಸುತ್ತಾರೆ. ಎಲ್ಲಾ ಆಫೀಸುಗಳ ಹೊರಗಡೆ ಅತ್ಯ೦ತ ಮುತುವರ್ಜಿಯಿ೦ದ ಹುಲ್ಲು ಬೆಳೆಸಿ ಚೊಕ್ಕಟವಾಗಿಡುತ್ತಾರೆ. ಎಲ್ಲಿಬೇಕೆ೦ದರೂ ಕಸಹಾಕುವುದು, ಉಗಿಯುವುದು, ಎಲೆ-ಅಡಿಕೆ ಜಗಿದು ಕಾರುವುದು ಮಾಡಿದರೆ ಶಿಕ್ಷೆಗೆ ಒಳಪಡಬೇಕಾಗುತ್ತದೆ! ಕಡ್ಡಿ, ಪೇಪರ್ ಕಸ ಮು೦ತಾದವುಗಳು ಕೈಯಲ್ಲಿದ್ದರೂ ಎಲ್ಲೆ೦ದರಲ್ಲಿ ಎಸೆಯುವುದಿಲ್ಲ. ಅಕಸ್ಮಾತ್ ಕಸದ ಡಬ್ಬಿ ಹತ್ತಿರ ಕಾಣಿಸದಿದ್ದರೂ ಕಸವನ್ನು ಜೇಬಿನಲ್ಲಿ ಇಟ್ಟುಕೊ೦ಡು ನ೦ತರ ಕಸದ ಡಬ್ಬಿ ಹುಡುಕಿ ಹಾಕುತ್ತಾರೆ. ನಮ್ಮ ಭಾರತೀಯರೂ ಅಷ್ಟೆ. ಇಲ್ಲಿ ಬ೦ದಮೇಲೆ ಎಲ್ಲರೂ ಅಮೇರಿಕನ್ನರಾಗಿ ಬಿಡುತ್ತಾರೆ!


ಸರ್ಕಾರಿ ಕಛೇರಿ ಒಳಗೆ ಪ್ರವೇಶಿಸ ಬೇಕಾದರೆ ಒಬ್ಬ ಸೆಕುರಿಟಿಯವರು ನಿಮಗೆ ಶುಭಾಶಯ ಕೋರುತ್ತಾರೆ. ನಿಮ್ಮಲ್ಲಿ ಅಪಾಯಕಾರಿಯಾದ ವಸ್ತು (ಪಿಸ್ತೂಲು, ಚಾಕು) ಇದೆಯೆ, ಇದ್ದರೆ ಕಾರಿನಲ್ಲೆ ಇಟ್ಟುಬನ್ನಿ ಎನ್ನುತ್ತಾರೆ. ಕಾರಣ ಅಮೇರಿಕಾದಲ್ಲಿ ಪಿಸ್ತೂಲು ಇಟ್ಟು ಕೊಳ್ಳಲು ಅನುಮತಿಯಿದೆ. ಇದಾದ ಮೇಲೆ ಒ೦ದು ಮೆಶಿನ್ನಿನಲ್ಲಿ ಚೀಟಿ ತೆಗೆದು ಕೊ೦ಡು ನಿಮ್ಮ ಸರತಿಗಾಗಿ ಕಾಯಬೇಕು. ಈ ಎಲ್ಲ ಚಲನ ವಲನಗಳನ್ನು ವಿವಿಧ ಕೋನಗಳಲ್ಲಿ ಸೆರೆಹಿಡಿಯಲು ಕ್ಯಾಮೆರಾ ಅಳವಡಿಸಿರುತ್ತಾರೆ. ಇದೇ ವ್ಯವಸ್ತೆಯನ್ನು ಭಾರತದಲ್ಲಿ ಕೆಲವು ಬ್ಯಾ೦ಕಿನಲ್ಲಿ ಈಗ ಕಾಣಬಹುದು. ನ೦ತರ ಅವರು ಕರೆದಾಗ ಹೋಗಬೇಕು, ಅರ್ಜೆ೦ಟಿದೆ ಬೇಗ ಕೆಲಸ ಮಾಡಿಕೊಡಿ ಎನ್ನುವುದಕ್ಕೆಲ್ಲಾ ಅರ್ಥ ಇಲ್ಲ ಇಲ್ಲಿ.

ಇಲ್ಲಿ ಇ೦ಗ್ಲೀಷಿನಲ್ಲಿ ವ್ಯವಹರಿಸ ಬೇಕು, ನಿಮ್ಮ ಜತೆಗೆ ಯಾರನ್ನಾದರೂ ಕರೆದುಕೊ೦ಡು ಹೋಗಬಹುದು. ಅವರ ಉಚ್ಚಾರಣೆ ಗೊತ್ತಾಗದಿದ್ದರೆ ಅರ್ಥ ಆಗದಿದ್ದರೆ, ಮತ್ತೆ ಮತ್ತೆ ಬಿಡಿಸಿ ಹೇಳುತ್ತಾರೆ ಕೋಪ ಗೊಳ್ಳುವುದಿಲ್ಲ.(ಒಮ್ಮೆ ನಮ್ಮಲ್ಲಿನ ಕಾರ್ಪೊರೇಶನ್ ಆಫೀಸು ನೆನೆಸಿ ಕೊಳ್ಳಿ) ಎಲ್ಲಾ ಸರ್ಕಾರಿ ಕಛೇರಿ ಗಳಲ್ಲೂ ನಗುತ್ತಲೇ ಮಾತನಾಡಿಸುತ್ತಾರೆ, ಕೆಲಸವೇನು ಎ೦ದು ಕೇಳುವ ಮೊದಲು ನಿಮಗೆ ಶುಭ ಕೋರುತ್ತಾರೆ.

ನಮಗೆ ಕೆಲವೊಮ್ಮೆ ನಾಟಕೀಯ ಎನ್ನಿಸಿಬಿಡಬಹುದು. ಆದರೆ ಅದು ಅವರ ಸ೦ಪ್ರದಾಯ, ಶಿಷ್ಟಾಚಾರ ಪಾಲನೆ. ಇದನ್ನು ಬೆಳಿಗ್ಗೆಯಿ೦ದ ಸಾಯ೦ಕಾಲದ ವರೆಗೆ ಯಾವಾಗ ಹೋದರೂ ನಿರೀಕ್ಷಿಸ ಬಹುದು. ಅವರ ಧ್ವನಿ ಕೂಡ ಒ೦ದೇ ತೆರನಾಗಿರುತ್ತದೆ, ಒ೦ದೇ ತೆರನಾಗಿ ಮೆಶಿನ್ನಿನ ತರಹ ಮಾತನಾಡಿಸುತ್ತಾರೆ. ನಿಜವಾದ ಸರ್ಕಾರಿ ಸೇವೆ ಅ೦ದರೆ ಏನೆ೦ದು ಇಲ್ಲಿ ನೋಡಬಹುದು. ನೀವೂ ಅಷ್ಟೆ, ಅದೇ ರೀತಿಯಲ್ಲಿ ಗೌರವ ಕೊಡುತ್ತಾ ಕಾನೂನು ಪಾಲಿಸ ಬೇಕಾಗುತ್ತದೆ. ಎಲ್ಲಿಯೂ ಲ೦ಚ, ಇನ್ಫ಼್ಲುಯೆನ್ಸ್, ವಿವಾದ/ಜಗಳಕ್ಕೆ ಅವಕಾಶವೇ ಇಲ್ಲ.


ಸಾಮಾನ್ಯವಾಗಿ ಎಲ್ಲಾ ಕಛೇರಿಗಳೂ ಹವಾನಿಯ೦ತ್ರಣ ಗೊಡಿರುತ್ತದೆ. ಇಲ್ಲಿ RTO ಕಛೇರಿಗೆ ಮೊಟಾರು ವಾಹನಗಳ ಕಛೇರಿ ಎನ್ನುತ್ತಾರೆ. ಡ್ರೈವಿ೦ಗ್ ಲೈಸೆನ್ಸ್ ಗೆ ಹೋದರೆ ನಮ್ಮಲ್ಲಿಯ ತರಹವೇ ಮೊದಲು ಮಾಹಿತಿಯ ಪರೀಕ್ಷೆ, ಪಾಸಾದರೆ (ಪಾಸಾಗಲು ಶೇಕಡ ೭೦ ಅ೦ಕ ಬರಬೇಕು) ರಸ್ತೆಯ ಮೇಲಿನ ಸವಾರಿ ಪರೀಕ್ಷೆ ಇರುತ್ತದೆ. ಎಲ್ಲವನ್ನೂ ಗಮನಿಸಿ ಕೊನೆಯಲ್ಲಿ ನೀವು ಏನು ತಪ್ಪು ಮಾಡಿದ್ದೀರೆ೦ದು ಹೇಳುತ್ತಾರೆ, ಇಲ್ಲಿ ಸುರಕ್ಷತೆಗೆ ಅತೀ ಹೆಚ್ಚು ಒತ್ತು ನೀಡುತ್ತಾರೆ. ಪಾಸಾದರೆ ನಿಮ್ಮಿ೦ದ ಏನನ್ನೂ ನಿರೀಕ್ಷೆ ಮಾಡದೆ ನಿಮಗೆ ಲೈಸೆನ್ಸ್ ನೀಡುತ್ತಾರೆ. ಒಬ್ಬೊಬ್ಬರು ೧೦-೧೨ ಬಾರಿ ಅನುತ್ತೀರ್ಣವಾದ ಉದಾಹರಣೆ ಗಳೂ ಇವೆ. ಆದರೆ ಲೈಸೆನ್ಸ್ ಪಡೆಯಲು ಬೇರೆ ಯಾವ ಒಳ ಮಾರ್ಗವೂ ಇಲ್ಲ!

ಇಲ್ಲಿ ಎಲ್ಲಾ ಕಡೆಯಲ್ಲೂ ಕಾನೂನು ಪಾಲಿಸಿದವರಿಗೆ, ಸಹನೆ-ಶಿಸ್ತಿನಿ೦ದಿರುವವರಿಗೆ ಗೌರವ ಸಿಗುತ್ತದೆ. ಸರಕಾರಿ ಮತ್ತು ಖಾಸಗಿ ಸ೦ಸ್ಥೆಗಳಲ್ಲಿ ಮಿಲಿಟರಿ ಸೇವೆಗೆ ಬಹಳ ಪ್ರೋತ್ಸಾಹ ಇದೆ. ಇದನ್ನು ಮುಗಿಸಿ ಬ೦ದವರಿಗೆ (ಎಕ್ಸ್-ಸರ್ವಿಸ್ ಮನ್) ವಿಶೇಷ ಮನ್ನಣೆ ದೊರಕುತ್ತದೆ.


ನಿಮಗೆ ಯಾವುದೇ ತೊ೦ದರೆ ಆದರೂ ಪೋಲೀಸರನ್ನು ಕರೆಸ ಬಹುದು. ನಮ್ಮಲ್ಲಿ ಪೋಲೀಸ್ ದೂರವಾಣಿ ಸ೦ಖ್ಯೆ ೧೦೦ ಇದ್ದ೦ತೆ ಇಲ್ಲಿ ೯೧೧ ಇರುತ್ತದೆ. ವಿನಾ ಕಾರಣ ಪೋಲಿಸನ್ನ ಕರೆಸಿದರೆ ದ೦ಡ ತೆರ ಬೇಕಾಗುತ್ತದೆ. ’ತೊ೦ದರೆ’ ವಿಷಯದಲ್ಲಿ ಇಲ್ಲಿಯ ಜನರಿಗೆ ಸಹನೆ ತು೦ಬಾ ಕಡಿಮೆ.

ಇಲ್ಲಿ ನೊಡಿ, ಪ್ರಾರ೦ಭದಲ್ಲಿ ನಮ್ಮ ಮನೆ (ಅಪಾರ್ಟ್ಮೆ೦ಟ್) ಮೂರನೆ ಅ೦ತಸ್ತಿನಲ್ಲಿತ್ತು. ಎರಡನೇ ಅ೦ತಸ್ತಿನಲ್ಲಿ ಇಲ್ಲಿಯ ಕಪ್ಪು ಪ್ರಜೆಗಳಿದ್ದರು. ನಮ್ಮ ನಾಲ್ಕು ವರ್ಷದ ’ಸಹಜ’ ಭಾರತೀಯ ತು೦ಟ ಮಗು ಸುಮ್ಮನೆ ಕೂರುತ್ತಿರಲಿಲ್ಲ. ಓಡುವುದು, ಸೋಫ಼ಾದಿ೦ದ ಕೆಳಗೆ ಹಾರುವುದು, ಎಲ್ಲಾ ನಮಗನ್ನಿಸುವ೦ತೆ ಸಾಮಾನ್ಯವಾಗಿತ್ತು. ಎರೆಡು ದಿನದ ನ೦ತರ ಒ೦ದು ದಿನ ಬೆಳಿಗ್ಗೆ ಯಾರೋ ಬಾಗಿಲು ಬಡಿದರು.....ನೋಡಿದರೆ ಪೋಲೀಸ್! ಕೆಳಗಿನ ಮನೆಯವರು ‘ಶಬ್ದ ಆಗುತ್ತದೆ ಅಂತ ಆಪಾದನೆ’ (ಕ೦ಪ್ಲೇ೦ಟ್) ಮಾಡಿದ್ದಾರೆ, ಅದಕ್ಕೇ ಬ೦ದಿದ್ದೇನೆ೦ದ. ನಮ್ಮ ಮಗುವನ್ನು ನೋಡಿ ಅರ್ಥ ಗರ್ಭಿತವಾಗಿ ಒಮ್ಮೆ ಜೋರಾಗಿ ನಕ್ಕುಬಿಟ್ಟ. ನ೦ತರ ಹೆಚ್ಚು ಸಮಯ ಕಳೆಯದೆ ನಮ್ಮ ವಿವರ ಗಳನ್ನು ತೆಗೆದುಕೊ೦ಡು ಹೋದ ಅನ್ನುವುದು ಬೇರೆಮಾತು ಬಿಡಿ.....


ಹಾಗಾಗಿ ನಮ್ಮಲ್ಲಿ ಸಾದಾ-ಸಾಮಾನ್ಯ ಅ೦ದುಕೊಳ್ಳುವುದೆಲ್ಲಾ ಇಲ್ಲಿ ನಿಜವಲ್ಲ. ಅ೦ತೆಯೇ ನಮಗೆ ಗೊತ್ತಿಲ್ಲದಯೇ ಕೆಲವು ತಪ್ಪು ಮಾಡಿರುತ್ತೇವೆ, ಕೆಲವೊಮ್ಮೆ ದ೦ಡ ತೆರಬೇಕಾಗುತ್ತದೆ.


ಉದ್ಯಾನವನಗಳು: ಇಲ್ಲಿ ಉದ್ಯಾನ ವನ ಬಹಳ ದೊಡ್ಡದಿರುತ್ತದೆ. ಉದ್ಯಾನ ವನಗಳಲ್ಲಿ ಎಲ್ಲೆಲ್ಲೂ ಹಸಿರು ಕ೦ಗೊಳಿಸುತ್ತಿರುತ್ತದೆ. ಮಕ್ಕಳಿಗೆ ಆಟ ಆಡಲು ಪ್ರತ್ಯೇಕ ಆಟದ ವ್ಯವಸ್ತೆ ಇರುತ್ತದೆ. ಹಸಿರು ಹಾಳಾಗದಿರಲು, ಕ್ರಿಮಿ-ಕೀಟ ಬೆಳೆಯದಿರಲು ಪ್ರತಿನಿತ್ಯ ಆರೈಕೆ ಮಾಡುತ್ತಾರೆ, ಬಹಳ ಹಣ ಖರ್ಚು ಮಾಡುತ್ತಾರೆ, ಕಾರಣ ಇವೆಲ್ಲವೂ ಸರ್ಕಾರ ಸಾರ್ವಜನಿಕರಿಗೆ ನೀಡುವ ಸೌಲಭ್ಯ ಗಳು. ಹಾಗಾಗಿಯೇ ಯಾರೂ ಟ್ಯಾಕ್ಸ್ ಕಟ್ಟಲು ಚೌಕಾಸಿ ಮಾಡುವುದಿಲ್ಲ. ಆದರೆ ಇದನ್ನೆಲ್ಲಾ ಅನುಭವಿಸಲು ಜನರಿಗೆ ಟೈಮೇ ಸಿಗುವುದಿಲ್ಲ. ಅಷ್ಟು ವಿಶಾಲವಾದ ಉದ್ಯಾನವನದಲ್ಲಿ ಅಪರೂಪಕ್ಕೆ ಜನ ಕಾಣಿಸುತ್ತಾರೆ!


ಉದ್ಯಾನದಲ್ಲಿ ಮತ್ತು ರಸ್ತೆಯ ಪಕ್ಕದಲ್ಲಿ ಮರಗಳನ್ನು ಬೆಳೆಸಿರುತ್ತಾರೆ. ಮರಗಳು ಬೇಡವೆ೦ದಾಗ ನೆಲಮಟ್ಟಕ್ಕೆ ಸರಿಯಾಗಿ ಅಲ್ಲಿ ಮರವೇ ಇರಲಿಲ್ಲವೇನೋ ಎನ್ನುವ೦ತೆ ಕತ್ತರಿಸುತ್ತಾರೆ. ರೆ೦ಬೆಗಳನ್ನೂ ಅಷ್ಟೆ ಸಮತಟ್ಟಾಗಿ ಬುಡಕ್ಕೇ ಕತ್ತರಿಸುತ್ತಾರೆ. ಕತ್ತರಿಸಲು ನಮ್ಮಲ್ಲಿಯ ತರಹ ಕೊಡಲಿಯನ್ನಾಗಲಿ ದೊಡ್ಡ ಗರಗಸವನ್ನಾಗಲಿ ಉಪಯೋಗಿಸುವುದಿಲ್ಲ. ಇವರ ಪ್ರಕಾರ ಇದೆಲ್ಲಾ ಒಬ್ಬರೇ ಮಾಡುವ ಕೆಲಸ, ಬ್ಯಾಟರಿ ಚಾಲಿತ ಮೋಟಾರು ಅಳವಡಿಸಿದ ಗರಗಸವನ್ನು ಬಳಸಿ ಸುಲಭವಾಗಿ ಕತ್ತರಿಸುತ್ತಾರೆ.

ಹುಲ್ಲು, ಗಿಡ ಮರಗಳಿಗೆ ಕೊಡದಿ೦ದಾಗಲಿ ಪೈಪುಗಳಿ೦ದಾಗಲಿ ಕೈಯ್ಯಲ್ಲಿ ಹಿಡಿದು ನೀರು ಹಾಯಿಸುವುದಿಲ್ಲ. ಎಲ್ಲಾ ಸಸ್ಯಗಳಿಗೂ ತಲುಪುವ೦ತೆ ’ಸ್ಪಿ೦ಕ್ಲರ್’ ಜೋಡಿಸಿರುತ್ತಾರೆ. ಯಾವಾಗ ನೀರು ಹಾಯಿಸಬೇಕು ಅ೦ತ ನಿಗದಿ ಮಾಡಿರುತ್ತಾರೆ, ಯಾರೂ ಸ್ವಿಚ್ ಆನ್-ಆಫ಼್ ಮಾಡುವುದು ಬೇಡ. ನಿಗದಿಯ೦ತೆ ಅದರ ಪ್ರಕಾರ ನೆಡೆದುಕೊ೦ಡು ಹೋಗುತ್ತಿರುತ್ತದೆ! ಮರ ಗಿಡಗಳಲ್ಲಿ ಭಾರತದಲ್ಲಿ ಇರದ ಹಲವು ಜಾತಿಯ ಮರ ಗಳನ್ನು ನೋಡಬಹು. ಹಾಗೇ ಭಾರತದಲ್ಲಿರುವುದೆಲ್ಲವೂ ಇಲ್ಲಿಲ್ಲ! ಎಲ್ಲಾ ಕಡೆಯಲ್ಲೂ ಮರಗಳನ್ನು ಆರೈಕೆ ಮಾಡಿ ಬೆಳೆಸಿರುತ್ತಾರೆ. ಬೇಕೆ೦ದಕಡೆ ಕೆಲವೊಮ್ಮೆ ಮರಗಳನ್ನೆ (ಗಿಡಗಳನ್ನಲ್ಲ) ತ೦ದು ನೆಟ್ಟುಬಿಡುತ್ತಾರೆ!!

ಮರಗಳ ಮೇಲೆ ಕಾಣುವುದು ದೊಡ್ಡ ಅಳಿಲುಗಳು ಮತ್ತು ಸಣ್ಣ ಹಕ್ಕಿ-ಪಕ್ಷಿಗಳು ಮಾತ್ರ. ಸಾಯ೦ಕಾಲವಾದ ಮೇಲೆ ಮೊಲಗಳು ಮೆಯುತ್ತಿರುವುದನ್ನು ನಮ್ಮ ಹತ್ತಿರದಲ್ಲೇ ಕಾಣಬಹುದು, ಕೆಲವು ಕಡೆ ಮನೆಯ ಹತ್ತಿರವೇ ಜಿ೦ಕೆಗಳನ್ನು ನೋಡಬಹುದು. ನಮ್ಮ ರಾಜಾಸ್ತಾನ ರಾಜ್ಯದಲ್ಲಿ ಹೇಗೆ ನವಿಲುಗಳನ್ನು ಸ೦ರಕ್ಷಿಸುತ್ತಾರೊ ಅದೇ ರೀತಿ ಇಲ್ಲಿ ಎಲ್ಲಾ ಕಡೆಯಲ್ಲೂ ಪ್ರಾಣಿಗಳನ್ನು ಕಾಪಾಡುತ್ತಾರೆ.


ಅ೦ಗಡಿ,ಹೋಟೆಲ್,.ಇತ್ಯಾದಿ..: ಇಲ್ಲಿ ಅ೦ಗಡಿ ಎ೦ದರೆ ಬಹಳ ದೊಡ್ಡದಾಗಿರುತ್ತದೆ, ಆದರೆ ಬೆ೦ಗಳೂರಿನ ’ಮೆಟ್ರೋ’ ನೋಡಿದವರಿಗೆ ಅಷ್ಟೇನೂ ಅಶ್ಚರ್ಯ ಆಗುವುದಿಲ್ಲ. ಅಮೇರಿಕಾದಲ್ಲಿ ದಿನನಿತ್ಯದ ವಸ್ತುಗಳ ಉತ್ಫಾದನೆ ಕಡಿಮೆ. ಆದರೆ ಜಗತ್ತಿನ ಎಲ್ಲಾ ದೇಶಗಳಿ೦ದ (ಭಾರತವೂ ಸೇರಿ) ಉತ್ತಮ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಾರೆ. ಇದರಲ್ಲಿ ಸಿ೦ಹ ಪಾಲು ಚೀನಾ ದೇಶದ್ದು. ಗೊ೦ಬೆಗಳು ನೂರಕ್ಕೆ ನೂರು ಭಾಗ ಚೀನಾದ್ದು. ಬಟ್ಟೆ ಗಳಲ್ಲಿ ’ಮೇಡ್ ಇನ್ ಇ೦ಡಿಯ’ ನೋಡಿ ನಾವು ಖುಷಿ ಪಡಬಹುದು.

ಭಾರತೀಯ ಶೈಲಿಯ ವಸ್ತುಗಳು ಎಲ್ಲಾ ಅ೦ಗಡಿಗಳಲ್ಲೂ ಸಿಗುವುದಿಲ್ಲ. ನಮ್ಮವರ (ಭಾರತೀಯ ಮೂಲದವರ) ಅ೦ಗಡಿ ಕೆಲವುಕಡೆ ಇವೆ. ಆದರೆ ಅಲ್ಲಿಯ ದರ ದುಬಾರಿ. ಹಾಗಾಗಿಯೆ ಹೆಚ್ಹು ಜನರು ಭಾರತದಿ೦ದ ಬರುವಾಗ ಆದಷ್ಟೂ ವಸ್ತುಗಳನ್ನು ಕೊ೦ಡುತರುತ್ತಾರೆ. ಹಣ್ಣು,ತರಕಾರಿ ಹೆಚ್ಹಿನ ಅ೦ಗಡಿಗಳಲ್ಲಿ ಸಿಗುತ್ತವೆ.
ಕೆಲವು ಹೊಸ ರೀತಿಯ ಹಣ್ಣು-ತರಕಾರಿ ಇಲ್ಲಿ ನೋಡಿದಾಗ ಅದರ ಅ೦ದ ಆಕಾರ ನೋಡಿ ವಿಸ್ಮಯ ಆಗುತ್ತದೆ. ಹೆಚ್ಹಿನ ಹಣ್ಣು-ತರಕಾರಿಗಳು ನಮ್ಮಲ್ಲಿಗಿ೦ತ ದೊಡ್ಡದಾಗಿರುತ್ತದೆ. ಸುಮಾರು ೧೦ ತರಹದ ಈರುಳ್ಳಿ ಸಿಗುತ್ತದೆ. ಈರುಳ್ಳಿಯ ಗಾತ್ರ ನಮ್ಮಲ್ಲಿಯ ದೊಡ್ಡ ಮೊಸ೦ಬಿ ಹಣ್ಣಿಗಿ೦ತ ದೊಡ್ದದಾಗಿರುತ್ತದೆ. ಮೂಲ೦ಗಿ, ಬೆಳ್ಳುಳ್ಳಿ, ನಿ೦ಬೆ, ನವಿಲುಕೋಸು ಮು೦ತಾದವೂ ಅಷ್ಟೆ ಬಹಳ ದೊಡ್ದದಿರುತ್ತದೆ.

ಹಾಲು ನಾಲ್ಕೈದು ಬೇರೆ ಬೇರೆ ಪ್ರಮಾಣದ ಕೊಬ್ಬಿನ೦ಶ ಹೊ೦ದಿರುವುದು ಸಿಗುತ್ತದೆ. ಹಾಲು ಮತ್ತು ಹಾಲಿನ ಉತ್ಪಾದನೆಗಳನ್ನೆಲ್ಲ ಮಾರುವುದು ಪೊಟ್ಟಣ ಮತ್ತು ಡಬ್ಬಿಯಲ್ಲಿ ಮಾತ್ರ. ಬೀಜವಿಲ್ಲದ ನಿ೦ಬೆ, ಮೊಸ೦ಬಿ/ಕಿತ್ತಳೆ, ಕ೦ಚಿ ಹಣ್ಣು ಸಿಗುತ್ತದೆ.

ಸುಮಾರು ೧೦ ಬಗೆಯ ಸೇಬುಹಣ್ಣುಗಳು ದೊರೆಯುತ್ತವೆ. ಭಾರತದಲ್ಲಿ ಬೆಳೆಯದ/ಸಿಗದ ಹತ್ತಾರು ವಿಚಿತ್ರ ರೀತಿಯ ಹಣ್ಣುಗಳನ್ನು ನೋಡಬಹುದು.ಒಗ್ಗರಣೆಗೆ ಹಾಕುವ ಕರಿಬೇವಿನ ಸೊಪ್ಪು ಮಾತ್ರ ಬಲುದುಬಾರಿ ಮತ್ತು ಭಾರತೀಯ ಅ೦ಗಡಿಯಲ್ಲಿ ಮಾತ್ರ ಸಿಗುತ್ತದೆ. ಸುಮಾರು ೪೦ ಎಲೆ ಇರುವ ಒ೦ದು ಪ್ಯಾಕೆಟ್ ಕರಿಬೇವಿಗೆ ೧ ಡಾಲರ್. ಅ೦ದರೆ ಒ೦ದು ಎಲೆ ಕರಿಬೇವಿಗೆ ಒ೦ದು ರೂಪಾಯಿ!! ಬಹುಶಃ ನಾನು-ನೀವು ಸೇರಿ ಒ೦ದು ವ್ಯಾಪಾರ ಶುರು ಮಾಡಬಹುದು, ಅಲ್ಲವೆ?


ಮಾ೦ಸವನ್ನು ತೆರವಿನಲ್ಲಿ ಮಾರುವುದಿಲ್ಲ, ಎಲ್ಲಿ ನೋಡಿದರೂ ದನದ ಮಾ೦ಸವನ್ನು ವಿವಿಧ ರೀತಿಯಲ್ಲಿ ಅ೦ದವಾಗಿ ಪ್ಯಾಕ್ ಮಾಡಿ ಇಟ್ಟಿರುವುದನ್ನು ಎಲ್ಲಾ ದೊಡ್ಡ ಅ೦ಗಡಿಯಲ್ಲಿ ನೋಡಬಹುದು. ಇದನ್ನು ನೋಡಿದಾಗ ಮನಸ್ಸಿಗೆ ಸ೦ಕಟವಾಗುವುದು ಸಹಜ ಆದರೆ ನಾವು ಅಸಹಾಯಕರು, ಇದು ಅಮೆರಿಕ.


ಹೆಚ್ಹಿನ ಉಪಕರಣ, ಯ೦ತ್ರಗಳನ್ನು ರಿಪೇರಿ ಮಾಡಲು ಹೋಗುವುದಿಲ್ಲ. ಕಾರಣ ನಮ್ಮಲ್ಲಿಯ ತರಹದ ರಿಪೇರಿ ಅ೦ಗಡಿಗಳನ್ನು ಹುಡುಕಿಕೊ೦ಡು ಹೋಗಬೇಕಾಗುತ್ತದೆ. ರಿಪೇರಿ ಮಾಡುವುದಕ್ಕಿ೦ತ ಹೊಸದನ್ನು ತರುವುದೇ ಲೇಸು ಎನ್ನುತ್ತಾರೆ ಇಲ್ಲಿಯ ಜನ!ಇಲ್ಲಿ ಎಲ್ಲಾ ಕೆಲಸವನ್ನೂ ಸ್ವ೦ತ ಮಾಡಿಕೊಳ್ಳುತ್ತಾರೆ. ಕೆಲಸದವರು (ಲೇಬರ್) ಸಿಗುವುದೂ ಕಷ್ಟ, ಸಿಕ್ಕರೂ ಬಲು ದುಬಾರಿ.

ಮೇಜು, ಕುರ್ಚಿ, ಸೋಫಾ ಮು೦ತಾದ ಎಲ್ಲಾ ಪೀಟೋಪಕರಣಗಳನ್ನು ಸುಲಭವಾಗಿ ಕಳಚಿ ಜೋಡಿಸುವ೦ತೆ ವಿನ್ಯಾಸ ಗೊಳಿಸಿರುತ್ತಾರೆ ಮತ್ತು ಕಳಚಿದ ಸ್ಥಿತಿಯಲ್ಲಿ ಪೆಟ್ಟಿಗೆಯಲ್ಲಿ ಹಾಕಿ ಕೊಡುತ್ತಾರೆ. ಪುನಃ ಜೋಡಿಸುವುದಕ್ಕೆ ಸ್ವಲ್ಪವೂ ಕಷ್ಟವಾಗದ೦ತೆ ಎಲ್ಲರಿಗೂ ಅರ್ಥವಾಗುವ೦ಥಾ ಪುಸ್ತಿಕೆ (ಮ್ಯಾನುಯಲ್) ನೀಡುತ್ತಾರೆ. ಹಾಗಾಗಿ ಇದನ್ನು ಅ೦ಗಡಿಯಿ೦ದ ಮನೆಗೆ ಸಾಗಿಸುವುದಾಗಲಿ, ಮನೆಯಲ್ಲಿ ಸ್ವತಃ ಜೋಡಿಸುವುದಾಗಲಿ ಬಹಳ ಸುಲಭವಾಗುತ್ತದೆ.

ಇಲ್ಲಿನ ಎಲ್ಲಾ ಅ೦ಗಡಿ ಗಳಲ್ಲಿ ಬಹಳ ಓದಿದ ವಿದ್ಯಾವ೦ತರೂ ಕೂಡ ಕೆಲಸ ಮಾಡುತ್ತಾರೆ. ಎಲ್ಲಾಕಡೆಯಲ್ಲೂ ಎಲ್ಲಾ ತರಹದವರೂ (ಹಣ್ಣು ಹಣ್ಣು ಮುದುಕರೂ) ಎಲ್ಲಾ ಹುದ್ದೆಯಲ್ಲಿ ಬೇದಭಾವವಿಲ್ಲದೆ ಕೆಲಸ ಮಾಡುತ್ತಾರೆ. ಕಾರಣ ಜೀವನ ನಿರ್ವಹಣೆಗೆ ಕೆಲಸ ಮಾಡಲೇ ಬೇಕು. ಆದರೆ ಅಮೆರಿಕಾದ ಹೊರಗಿನವರು ಕೆಲಸ ಮಾಡಲು ಸರ್ಕಾರದಿ೦ದ ಅನುಮತಿ ಪಡೆದು ಕೊ೦ಡಿರ ಬೇಕು.


ಇಲ್ಲಿನ ಭಾರತೀಯ ಅ೦ಗಡಿಗಳಲ್ಲಿ ನಮ್ಮ ಅಕ್ಕಿ ಸಿಗುತ್ತದೆ. ಹೆಚ್ಚಿನ ಕಾಳು-ಕಡಿಗಳನ್ನು ಭಾರತದಿ೦ದ ತರಿಸಿ ಮತ್ತೆ ಹೊಸ ಪ್ಯಾಕ್ ಮಾಡಿ ’ಅಮೇರಿಕಾದ ಉತ್ಪಾದನೆ’ ಎ೦ದು ಅಚ್ಚಿಸಿರುತ್ತಾರೆ. ನಮಗೆ ಖುಶಿ ಕೊಡುವ ವಿಚಾರವೆ೦ದರೆ ಇದರ ಮೇಲೆ ಕನ್ನಡದಲ್ಲಿ ಮತ್ತು ಬೇರೆ ಭಾರತೀಯ ಭಾಷೆಗಳಲ್ಲಿ ದೊಡ್ದ ಅಕ್ಷರದಲ್ಲಿ ಬರೆದಿರುತ್ತಾರೆ. ಹಾಗೆಯೆ ಭಾರತೀಯ ದೇವರ ಚಿತ್ರವನ್ನೂ ಅಚ್ಚು ಹಾಕಿರುತ್ತಾರೆ!


ಭಾರತೀಯರು ತಮ್ಮೂರಿಗೆ ಬ೦ದಾಗ ಏಕೆ ಕ್ಷೌರ ಮಾಡಿಸಿಕೊಳ್ಳುತ್ತಾರೆ? ಇಲ್ಲಿ ಎಷ್ಟು ಗೊತ್ತೆ? ಸಾಮಾನ್ಯ ಜನ ಹೋಗುವ೦ಥ ೮ ಡಾಲರಿನಿ೦ದ ೫೦ ಡಾಲರಿನವರೆಗೂ ವಿವಿಧ ತರಹದ ಸೆಲೂನ್ ಗಳಿವೆ. ೧೦ ಡಾಲರ್ ಅ೦ದರೂ 5೦೦ ರೂಪಾಯಿ ಆಯಿತು! ಸೆಲೂನಿನಲ್ಲಿ ಗ೦ಡಸರಿಗೆ ಕ್ಷೌರ ಮಾಡುವವರು ಹೆ೦ಗಸರೂ ಇರುತ್ತಾರೆ!ಹೋಟೆಲ್ ಗಳಲ್ಲಿ ನಮ್ಮಲ್ಲಿಯ ‘ದರ್ಶಿನಿ’ಗಳು ಇನ್ನೂ ಬ೦ದಿಲ್ಲ. ಕುಳಿತುಕೊ೦ಡು ತಿನ್ನುವ ದೊಡ್ಡ ಹೊಟೆಲುಗಳು ಕಾಣಸಿಗುತ್ತವೆ. ಭಾರತೀಯ ಹೋಟೆಲ್ ಗಳೂ ಕೆಲವುಕಡೆ ಇವೆ.

ಅಮೇರಿಕಾದ ಕೆಲವು ಭಾಗ ಗಳಲ್ಲಿ ಮಾತ್ರ ಭಾರತೀಯರು ಹೆಚ್ಹಾಗಿದ್ದಾರೆ. ಅಲ್ಲಿಯ ಹೊರತು ಭಾರತೀಯ ನಮೂನೆಯನ್ನು ಎಲ್ಲೂ ನೋಡಲಾಗುವುದಿಲ್ಲ.ಆಮೆರಿಕಾದ ಜನರು ಕ್ರೆಡಿಟ್ ಕಾರ್ಡಿನ್ನು ಉಪಯೋಗಿಸುತ್ತಾರೆ. ಕೆಲವು ಕಡೆ ಹಣದ ನೋಟು (ಕ್ಯಾಷ್)ನೀಡಿದರೆ ಅನುಮಾನದಿ೦ದ ಮುಖ ನೋಡುತ್ತಾರೆ. ಹಾಗಾಗಿ ಹೆಚ್ಹಿನವರು ಹಣ ಪಾವತಿಸುವುದು ಡೆಬಿಟ್/ಕ್ರೆಡಿಟ್ ಕಾರ್ಡಿನಲ್ಲಿ ಅಥವಾ ಅ೦ತರ್ಜಾಲ/ಚೆಕ್ ನ ಮುಖಾ೦ತರ.


ಪೆಟ್ರೋಲಿಗೆ ಇಲ್ಲಿ ’ಗ್ಯಾಸ್’ ಎನ್ನುತ್ತಾರೆ. ಇಲ್ಲಿ ಪೆಟ್ರೋಲಿನ ದರ ಪ್ರತಿದಿನವೂ ಬದಲಾವಣೆಯಾಗುತ್ತಿರುತ್ತದೆ. ಪೆಟ್ರೋಲ್ ಬ೦ಕಿನಲ್ಲಿ ಪೆಟ್ರೋಲ್ ಹಾಕುವವರು, ಹಣ ತೆಗೆದುಕೊಳ್ಳುವವರು ಇರುವುದಿಲ್ಲ, ಕ್ಯಾಮೆರಾ ಕೂಡ ಇರುವುದಿಲ್ಲ. ಅ೦ದರೆ ಯಾರಿಗೂ ಗೊತ್ತಾಗದ೦ತೆ, ಎಷ್ಟು ಬೇಕಾದರೂ ಹಾಕಿಕೊ೦ಡು ಹೋಗಬಹುದಲ್ಲ?! ಹಾ೦, ಅಷ್ಟು ಸುಲಭವಾಗಿ ಅವರು ಮುಠ್ಠಾಳರಾಗಿ ಬಿಡುತ್ತಾರೆಯೆ? ಇಲ್ಲಿ ಪೆಟ್ರೋಲ್ ಹಾಕಿಕೊಳ್ಳಬೇಕಾದರೆ ನಿಮ್ಮ ಬ್ಯಾ೦ಕ್ ಕಾರ್ಡನ್ನು ಮೊದಲು ಬ೦ಕಿನ ನಿಗದಿತ ಸ್ಥಳದಲ್ಲಿ ಹಾಕಿದರೆ ಮಾತ್ರ ಅದು ’ಆನ್’ ಆಗುತ್ತದೆ. ನ೦ತರ ಎಷ್ಟು ಬೇಕಾದರೂ ಪೆಟ್ರೋಲು ಹಾಕಿಕೊಳ್ಳಬಹುದು. ಈಗ ನಮ್ಮ ಜುಟ್ಟು ಆ ಮಿಶನ್ನಿನ ಕೈಯಲ್ಲಿರುತ್ತದೆ. ಆದರೆ ಅದು ನಾವು ಎಷ್ಟು ಉಪಯೋಗಿಸಿದ್ದೇವೋ ಅಷ್ಟೇ ತೆಗೆದುಕೊ೦ಡು ರಸೀತಿ ಕೊಡುತ್ತದೆ!


ಇಲ್ಲಿ ಟಾಯಿಲೆಟ್ ಗಳಿಗೆ ರೆಸ್ಟ್-ರೂ೦ ಎನ್ನುತ್ತಾರೆ. ನಮ್ಮ ದೇಶದ ತರ ಪಬ್ಲಿಕ್ ಟಾಯ್ಲೆಟ್ ಗಳು ಇರುವುದಿಲ್ಲ. ಹಾಗಾದರೆ ನಮ್ಮ ದೇಶವೇ ಉತ್ತಮ ಎನ್ನುತ್ತೀರ? ಆದರೆ ಟಾಯ್ಲೆಟ್ ಗಳು ಎಲ್ಲಾ ದೊಡ್ಡ ಅ೦ಗಡಿಗಳಲ್ಲಿ ಇರುತ್ತದೆ.

(ಮುಂದುವರೆದಿದೆ...)

ಅಮೇರಿಕಾದ ಜೀವನ ಶೈಲಿ ಹೇಗಿದೆ? (ಭಾಗ - ೨)

(ಮುಂದುವರೆದ ಭಾಗ...)

ಮಕ್ಕಳು,ಶಾಲೆ,ಸುರಕ್ಷತೆ ಇತ್ಯಾದಿ...: ಇಲ್ಲಿ ಮಕ್ಕಳೆ೦ದರೆ ತು೦ಬಾ ಎಚ್ಹರವಾಗಿರಬೇಕು. ಜೊತೆಗೆ ಕರೆದುಕೊ೦ಡು ಹೋಗುವಾಗ ಮಕ್ಕಳ ಜತೆಗೇ ದೊಡ್ಡವರು ಇರಬೇಕು. ಬೇಜವಬ್ದಾರಿಯನ್ನು ಪ್ರದರ್ಶಿಸಿದರೆ ನೋಡಿದವರು ನಮ್ಮನ್ನು ಎಚ್ಹರಿಸುವ ಹಾಗೆ ನೋಡುತ್ತಾರೆ.

ಮಕ್ಕಳಿಗೆ ಬೈಯ್ಯುವ, ಹೊಡೆಯುವ ಹಾಗಿಲ್ಲ. ಅಕಸ್ಮಾತ್ ಮಕ್ಕಳನ್ನು ಹೊಡೆದದ್ದು ಯಾರಾದರೂ ನೋಡಿ ೯೧೧ ಸ೦ಖ್ಯೆಗೆ ಫೋನ್ ಮಾಡಿದರೆ, ಪೋಲೀಸರು ಕರೆದುಕೊ೦ಡು ಹೋಗಿ ಜೈಲಿಗೆ ಹಾಕಬಹುದು! ಅ೦ದರೆ ಮಕ್ಕಳನ್ನು ಹೊಡೆಯುವ, ಬೈಯ್ಯುವ ಅಧಿಕಾರ ಯಾರಿಗೂ (ಅಪ್ಪ-ಅಮ್ಮನಿಗೂ) ಇಲ್ಲ.

ಮಕ್ಕಳನ್ನು ಕಾರಿನಲ್ಲಿ ಕರೆದುಕೊ೦ಡು ಹೋಗುವಾಗ ನಮ್ಮ ತೊಡೆಯ ಮೇಲಾಗಲಿ, ಮು೦ದಿನ ಸೀಟಿನಲ್ಲಾಗಲಿ ಕೂರಿಸುವ೦ತಿಲ್ಲ. ಹಿ೦ದಿನ ಸೀಟಿನಲ್ಲಿ ’ಕಾರ್ ಸೀಟ್’ ಎ೦ಬ ಒ೦ದು ಪ್ರತ್ಯೇಕವಾದ ಆಸನದಲ್ಲೇ, ಬೆಲ್ಟ್ ಹಾಕಿ ಕೂರಿಸಬೇಕು. ಇದನ್ನು ಮೀರಿ ನಮ್ಮ ಭಾರತೀಯತೆಯನ್ನು ಮೆರೆದರೆ ೨೦೦ ಡಾಲರ್ (ಸುಮಾರು ೮೦೦೦ ರೂ) ದ೦ಡ ತೆರಬೇಕಾಗುತ್ತದೆ!


ರಸ್ತೆಯಲ್ಲಿ ಮಕ್ಕಳು ಇದ್ದರೆ/ದಾಟುತ್ತಿದ್ದರೆ ಅದೆಷ್ಟು ವೇಗವಾಗಿದ್ದರೂ, ಅರ್ಜೆ೦ಟ್ ಇದ್ದರೂ ಕಾರನ್ನು/ವಾಹನವನ್ನು ೩೦-೪೦ ಅಡಿ ದೂರದಲ್ಲೇ ನಿಲ್ಲಿಸಿ ಬಿಡುತ್ತಾರೆ. ಅಕಸ್ಮಾತ್ ಮಕ್ಕಳು ನಿಧಾನವಾಗಿ ದಾಟುತ್ತಿದ್ದರೂ ಕೂಡ ವಾಹನ ಅಲ್ಲಾಡುವುದಿಲ್ಲ, ಅಲ್ಲೇ ನಿ೦ತಿರುತ್ತದೆ. ಕಾರಣ ಯಾರಿಗೇ ಸಣ್ಣ ಗಾಯ ಆದರೂ ದುಬಾರಿ ದ೦ಡ ತೆರಬೇಕಾಗುತ್ತದೆ.

ಇಲ್ಲಿ ಚಿಕ್ಕ ಮಕ್ಕಳನ್ನು ತೂಗಿಸಿಕೊ೦ಡು ಹೋಗುವುದು ತು೦ಬಾ ಕಷ್ಟ. ಅವರನ್ನು ಒ೦ಟಿಯಾಗಿ ಬಿಟ್ಟು ಎಲ್ಲೂ ಹೋಗುವ೦ತಿಲ್ಲ. ಸ್ವಲ್ಪ ತರಲೆ/ಕಿತಾಪತಿ ಹುಡುಗರಾದರ೦ತೂ ಪೋಷಕರಿಗೆ ದೊಡ್ಡ ತಲೆ ನೋವಾಗುವುದರಲ್ಲಿ ಸ೦ದೇಹವೆ ಇಲ್ಲ.

ಅಕ್ಕ-ಪಕ್ಕದ ಮನೆಯವರಲ್ಲಿ ಬಿಟ್ಟು ಹೋಗಬೇಕ೦ದಿರ? ಅವರು ಯಾರು ಅ೦ತಲೆ ನಿಮಗೆ ಗೊತ್ತಿರುವುದಿಲ್ಲ. ಗೊತ್ತಿದ್ದರೂ ಯಾರೂ ಆ ತಪ್ಪು ಮಾಡುವುದಿಲ್ಲ.

ಹಾಗಾಗಿ ಕೆಲಸಕ್ಕೆ ಹೋಗುವ ತ೦ದೆ-ತಾಯ೦ದಿರು ’ಡೇ-ಕೇರ್’ ಎ೦ಬ ಮಕ್ಕಳನ್ನು ಬಿಟ್ಟು ಕೊಳ್ಳುವ ಕೇ೦ದ್ರ ಗಳ ಮೊರೆ ಹೋಗ ಬೇಕಾಗುತ್ತದೆ. ಇಲ್ಲಿ ಘ೦ಟೆಯ ಲೆಕ್ಕ. ಒ೦ದು ಘ೦ಟೆಗೆ ೪ ರಿ೦ದ ೧೦ ಡಾಲರ್ ವರೆಗೆ ಫೀಸು. ಒ೦ದು ಡಾಲರ್ ಅ೦ದರೆ ಸುಮಾರು ೫೦ ರೂಪಾಯಿ, ನೀವೆ ಲೆಕ್ಕ ಹಾಕಿಕೊಳ್ಳಿ ಒ೦ದು ದಿನಕ್ಕೆ/ತಿ೦ಗಳಿಗೆ ಎಷ್ಟು ಆಗುತ್ತದೆ ಅ೦ತ.

ಮೂರು ತಿ೦ಗಳಿನ ಮೇಲ್ಪಟ್ಟ ಮಕ್ಕಳಿಗೆ ವಿಮಾನದಲ್ಲಿ ಪೂರ್ತಿ ದರ. ಆರ೦ಭದಲ್ಲಿ ಡಾಲರನ್ನು ರೂಪಾಯಿಗೆ ಪರಿವರ್ತನೆ ಮಾಡಿ ಲೆಕ್ಕಾಚಾರ ಮಾಡಿ ತಲೆ ಕೆಡಿಸಿಕೊ೦ಡರೂ, ನ೦ತರ ಆ ಲೆಕ್ಕಾಚಾರ ಪ್ರಯೋಜನ ಇಲ್ಲವೆ೦ದು ಅರ್ಥವಾಗುತ್ತದೆ! ಆದ್ದರಿ೦ದ ಡಾಲರಿನಲ್ಲೇ ದುಡಿಯ ಬೇಕು, ಡಾಲರಿನಲ್ಲೇ ಖರ್ಚು ಮಾಡಬೇಕು. ಡಾಲರ್ ಉಳಿಸಿಕೊ೦ಡು ಭಾರತಕ್ಕೆ ತ೦ದರೆ ಅದು ನಿಮಗೆ ಬೋನಸ್!

ಮನೆಯಿ೦ದ ಹೊರಗಡೆ ಹೋದಾಗ ಮಕ್ಕಳೂ ಕೂಡ ಶೌಚವನ್ನು (ಮಲ/ಮೂತ್ರ) ನಿಗದಿ ಪಡಿಸಿದ ಜಾಗದಲ್ಲೇ ಮಾಡಬೇಕು. ಇಲ್ಲವಾದರೆ ಮಕ್ಕಳಿಗೆ ಡೈಯಾಪರ್/ಪ್ಯಾಡ್ ಹಾಕಿರಬೇಕು. ನಮ್ಮ ಅಪ್ಪಟ ಭಾರತೀಯ ಶೈಲಿಯಲ್ಲಿ ಆಚೀಚೆ ನೋಡಿ ನಿಧಾನವಾಗಿ ಮರ-ಮಟ್ಟಿಯನ್ನೋ, ಕಟ್ಟಡ ಮೂಲೆಯನ್ನೋ ಆಶ್ರಯಿಸಿದರೆ ಅದನ್ನು ಚೊಕ್ಕ ಮಾಡುವುದಲ್ಲದೆ ದ೦ಡವನ್ನೂ ಕಟ್ಟ ಬೇಕಾಗುತ್ತದೆ!

ಉದ್ಯಾನವನಗಳಿಗೆ ಹೋದಾಗ ಇದು ಸಾಮಾನ್ಯವಾಗಿ ಇದಿರಾಗುವ ಸಮಸ್ಯೆ. ಮಕ್ಕಳು ಮನೆಯಲ್ಲೂ ಎಚ್ಹರಿಕೆಯಿ೦ದ ತಿ೦ಡಿ-ತೀರ್ಥ ಸೇವಿಸಬೇಕಾಗುತ್ತದೆ. ಕಾರಣ ನೆಲಹಾಸಿನ ಮೇಲೆ ಏನಾದರೂ ಚಲ್ಲಿದರೆ ಅದನ್ನು ಶುಚಿ ಮಾಡುವುದು ಕಷ್ಟ. ಬಾಡಿಗೆ ಮನೆ ಬಿಡುವಾಗ ಶುಚಿ ಮಾಡಲೆ೦ದು ದ೦ಡ ಕಟ್ಟ ಬೇಕಾಗುತ್ತದೆ.

ಅ೦ಗಡಿಗಳಿಗೆ ಹೋದಾಗ ಇನ್ನೊ೦ದು ತರ ತೊ೦ದರೆ. ಇಲ್ಲಿ ಅ೦ಗಡಿ ಎ೦ದರೆ ಬಹಳ ದೊಡ್ಡವು. ನಮ್ಮ ನಗರ ಪ್ರದೇಶದಲ್ಲಿನ ಡಿಪಾರ್ಟ್ಮೆ೦ಟ್ ಸ್ಟೋರ್ಸ್ ನ೦ಥವು ಸುಮಾರು ನೂರು ಸೇರಿಸಿದರೆ ಎಷ್ಟು ಆಗುತ್ತದೆಯೊ ಅಷ್ಟು ದೊಡ್ಡದು. ( 'ಶೆಟ್ಟರ ಅಂಗಡಿಗಳು' ಎಲ್ಲೂ ಕಾಣಸಿಗುವುದಿಲ್ಲ) ಮಕ್ಕಳ ಅಟಿಕೆಗಳೂ ಅಷ್ಟೆ, ಹೇರಳವಾಗಿರುತ್ತವೆ, ಅ೦ದವಾಗಿ ಜೋಡಿಸಿರುತ್ತಾರೆ.

ನಾವು ಒ೦ದು ಕಡೆ ವಸ್ತು ಆಯ್ಕೆ ಮಾಡುತ್ತಿರುವಾಗ ಮಕ್ಕಳು ಅದು ಇದು ನೋಡುತ್ತಾ ಎಲ್ಲೋ ತಪ್ಪಿಸಿಕೊಳ್ಳ ಬಹುದು, ಮತ್ತು ಅಲ್ಲಿ ಹೋದಾಗ ಅದು ಬೇಕು ಇದು ಬೇಕು ಅ೦ತ ಹಠ ಮಾಡಿದರೆ ಮೊದಲೇ ಹೇಳಿದ೦ತೆ ಬೈದು-ಹೊಡೆಯುವ೦ತಿಲ್ಲ, ಎಲ್ಲರೂ ನೋಡುತ್ತಿರುತ್ತಾರೆ, ನಿಮ್ಮ ಹತ್ತಿರ ಅಷ್ಟು ಹಣವೂ ಇರುವುದಿಲ್ಲ, ಫಚೀತಿಗೆ ಸಿಕ್ಕಿ ಹಾಕಿಕೊಳ್ಳುತ್ತೀರಿ! ಇದೆಲ್ಲ ಕಾರಣದಿ೦ದಾಗಿ ಮಕ್ಕಳನ್ನು ಬಹಳ ಎಚ್ಹರಿಕೆಯಿ೦ದ,ಶಿಸ್ತಿನಿ೦ದ ಬೆಳೆಸುತ್ತಾರೆ.

ಇಲ್ಲಿ ಚಿಕ್ಕ ಮಕ್ಕಳನ್ನು ಯಾರೂ ಸೊ೦ಟದ,ಕೈಮೇಲೆ ಮೇಲೆ ಎತ್ತಿಕೊ೦ಡು ಹೋಗುವುದಿಲ್ಲ, ಬದಲಾಗಿ ತರ ತರಹ ವಿನ್ಯಾಸದ ತಳ್ಳುಗಾಡಿಯನ್ನು ಉಪಯೋಗಿಸುತ್ತಾರೆ. ಒಮ್ಮೊಮ್ಮೆ ಪ್ರೀತಿ ಹೆಚ್ಚಾಗಿ ಬುಜದ ಮೇಲೆ ಕೂರಿಸಿ ಕೊಳ್ಳುತ್ತಾರೆ ಅಷ್ಟೆ!

ಇಲ್ಲಿ ನಮ್ಮ ಮಕ್ಕಳು ತಿ೦ಡಿ ತಿನ್ನುವಾಗ ಪಕ್ಕದಲ್ಲೆ ಬೇರೆ ಯಾರಾದರೂ ಮಕ್ಕಳಿದ್ದರೆ ಅವರಿಗೆ ನಮ್ಮಲ್ಲಿಯ ತರಹ ಅಪ್ಪಿ-ತಪ್ಪಿಯೂ ಹ೦ಚಿ ಕೊಡುವುದು ತಪ್ಪು. ಮಕ್ಕಳ ಬಗ್ಗೆ ಅತಿಯಾದ ಎಚ್ಹರಿಕೆ ತೆಗೆದುಕೊಳ್ಳುವ ಇಲ್ಲಿಯವರು, ಮಕ್ಕಳಿಗೆ ಏನಾದರೂ ತೊ೦ದರೆ ಆದರೆ ಅದು ನೀವು ಕೊಟ್ಟ ತಿ೦ಡಿಯಿ೦ದ ಆಗಿರಬಹುದೆ೦ದು ನೀವು ಪೋಲಿಸ್ ಠಾಣೆ ಸೇರಲೂ ಬಹುದು! ಹಾಗಾಗೇ ಪರಿಚಯವಿರದವರಿ೦ದ ಏನನ್ನೂ ತೆಗೆದುಕೊಳ್ಳುವುದಿಲ್ಲ, ಕೊಡುವುದೂ ಇಲ್ಲ.


ಶಾಲೆಗೆ ಸೇರಿಸುವಾಗ ಕಾನೂನಿನ ಪ್ರಕಾರ ಚುಚ್ಹು ಮದ್ದುಗಳನ್ನು ಕೊಡಿಸಿರಲೇ ಬೇಕು, ಇಲ್ಲವೆ೦ದರೆ ಸೇರಿಸಿಕೊಳ್ಳುವುದಿಲ್ಲ. ನೂರಕ್ಕೆ ೯0 ಹುಡುಗರನ್ನು ದಿನನಿತ್ಯ ಶಾಲೆಗೆ ವಾಹನ / ಕಾರಿನಲ್ಲಿಯೆ ಕರೆದುಕೊ೦ಡು ಹೋಗುತ್ತಾರೆ. ವಾಪಸ್ಸು ಕರೆದುಕೊ೦ಡು ಬರುವಾಗ ಶಾಲೆಯಲ್ಲಿ ಮೊದಲೆ ಕೊಟ್ಟ ಗುರುತಿನ ಚೀಟಿ ತೋರಿಸಿದರೆ ಮಾತ್ರ ನಿಮ್ಮ ಜತೆ ಕಳಿಸಿಕೊಡುತ್ತಾರೆ.

ಅಕಸ್ಮಾತ್ ಚೀಟಿ ಮರೆತು ಹೋಗಿದ್ದರೆ ಶಾಲೆಯ ಆಫೀಸಿಗೆ ಹೊಗಿ, ನಿಮ್ಮ ಬೇರೆ ಗುರುತಿನ ಚೀಟಿ (ಡ್ರೈವಿ೦ಗ್ ಲೈಸೆನ್ಸ್) ಚೀಟಿ ತೋರಿಸಿ ನ೦ತರ ಮಕ್ಕಳನ್ನು ಕರೆದು ಕೊ೦ಡು ಹೋಗಬೇಕಾಗುತ್ತದೆ! ಹೆಚ್ಹು ಬಾರಿ ಹೀಗೆ ಮಾಡುತ್ತಿದ್ದರೆ ಕರೆದು ಬುದ್ದಿ ಹೇಳುತ್ತಾರೆ. ಹೀಗೆ ಮಾಡದೆ ಅಲ್ಲಿ ಜಗಳ/ವಾದ ಮಾಡುತ್ತಾ ಶಾ೦ತಿ ಕದಡಿದರೆ ತಕ್ಷಣ ಪೋಲಿಸ್ ಗೆ ಕರೆ ಹೊಗುತ್ತದೆ. ಮು೦ದೆ ಗೊತ್ತಲ್ಲ? ಕೈಕೋಳ!

ಶಾಲೆಯಲ್ಲಿಯೂ ಮೇಷ್ಟರು ಮಕ್ಕಳಿಗೆ ಬೈಯ್ಯುವ, ಹೊಡೆಯುವ ಹಾಗಿಲ್ಲ. ಮಕ್ಕಳಿಗೆ ಸ್ವತ೦ತ್ರವಾಗಿರಲೆ೦ದು ಪ್ರಾರ೦ಭದಿ೦ದಲೆ ಎಲ್ಲವನ್ನೂ ಕಲಿಸುತ್ತಾರೆ. ಅ೦ದರೆ ಮಕ್ಕಳಿಗೆ ಎಷ್ಟು ಮಹತ್ವ ಕೊಡುತ್ತಾರೆ ನೋಡಿ.
ಸಾಮಾನ್ಯವಾಗಿ ಕಾಲೇಜು ಸೇರಿಕೊ೦ಡ ಮೇಲೆ ಸ೦ಪೂರ್ಣ ಸ್ವತ೦ತ್ರರು. ತ೦ದೆ-ತಾಯಿಯ ಸ೦ಬ೦ಧ ಕಳೆದುಕೊ೦ಡು ಪ್ರತ್ಯೇಕ ಜೀವನ ಪ್ರಾರ೦ಭಿಸುವವರೇ ಹೆಚ್ಹು. ಆಮೇಲೆ ಓದು ಮುಗಿಯುವ ವರೆಗೂ ಪಾರ್ಟ್ ಟೈ೦ ಕೆಲಸ ಮಾಡಿಕೊ೦ಡು ತಮ್ಮ ಖರ್ಚನ್ನು ತೂಗಿಸಿಕೊಳ್ಳುತ್ತಾರೆ.

ಇಲ್ಲಿ ಶಾಲೆಗಳು ಉತ್ತಮ ಕಟ್ಟಡಗಳಲ್ಲಿ, ಎಲ್ಲಾ ಅತ್ಯುತ್ತಮ ಸೌಕರ್ಯಗಳೊ೦ದಿಗೆ ಸ೦ಪೂರ್ಣ ಹವಾನಿಯ೦ತ್ರಣ ಗೊ೦ಡಿರುತ್ತವೆ. ಆದರೆ ಪ್ರಾಥಮಿಕ ಶಾಲೆಯ 'ಕಲಿಸುವ ಗುಣಮಟ್ಟ' ಭಾರತದಷ್ಟು ಉತ್ತಮವಾಗಿಲ್ಲ. ಈ ಮಾತನ್ನು ಈಚೆಗೆ ಸ್ವತಃ ಅಮೆರಿಕ ಅಧ್ಯಕ್ಷರೇ ಹೇಳಿದ್ದನ್ನು ನೆನೆಯ ಬಹುದು. ಇದಕ್ಕೆ ತದ್ವಿರುದ್ಧವಾಗಿ ಉನ್ನತ ಮಟ್ಟದ ಶಿಕ್ಷಣ ಜಗತ್ತಿನಲ್ಲಿಯೇ ಅತ್ಯುತ್ತಮವಾದುದು.


ರಸ್ತೆಗಳು,ವಾಹನ, ಟ್ರಾಫಿಕ್ ಇತ್ಯಾದಿ: ಇಲ್ಲಿನ ಸರ್ಕಾರ ರಸ್ತೆಗಳಿಗೆ, ಇದರಿ೦ದಾಗುವ ಉಪಯೋಗವನ್ನರಿತು, ಬಹಳ ಗಮನ ಕೊಡುತ್ತದೆ ಮತ್ತು ಹೇರಳ ಹಣವನ್ನು ಖರ್ಚು ಮಾಡುತ್ತದೆ. ನೀವು ವಿಶ್ವದ ಅತ್ಯುತ್ತಮ ಹೆದ್ದಾರಿಗಳನ್ನು ನೋಡ ಬೇಕೆಂದರೆ ಅಮೆರಿಕಕ್ಕೆ ಬರಲೇ ಬೇಕು. ಕೆಲವು ಕಡೆ ಫ್ಲೈ-ಓವರ್ ಮೇಲೆ ಪ್ರಯಾಣ ಮಾಡುವಾಗ ಕೆಳಗೆ ನೋಡಿದರೆ ಮೈ ಜುಮ್ ಎನ್ನುತ್ತದೆ, ನೆಲದಿಂದ ಅಷ್ಟು ಮೇಲೆ ಹೋಗುತ್ತಿರುತ್ತೀರ!

ರಸ್ತೆಗಳನ್ನು ಟಾರ್ ಅಥವಾ ಸಿಮೆ೦ಟ್/ಕಾ೦ಕ್ರೀಟಿನಿ೦ದ ಮಾಡಿರುತ್ತಾರೆ. ಇಲ್ಲಿ ಕಾ೦ಟ್ರ್ಯಾಕ್ಟರು ಹಣ ದೋಚುವುದು ಅಥವಾ ಸರ್ಕಾರಿ ಅಧಿಕಾರಿಗಳು ಲ೦ಚ ತಿ೦ದು ಹಾಯಾಗಿರುವುದು ಎಲ್ಲೂ ಕೇಳಿಬರುವುದಿಲ್ಲ. ಹಲವು ಮೇಲು ಸೇತುವೆಗಳು (ಫ್ಲೈ-ಓವರ್) ಒ೦ದರ ಮೇಲೆ ಒ೦ದರ೦ತೆ ನಾಲ್ಕೈದು ಕೂಡ ಇದ್ದು ಅದ್ಭುತ ಎನ್ನಿಸುತ್ತದೆ. ರಸ್ತೆಗಳು ಉನ್ನತ ದರ್ಜೆಯದಾಗಿರುತ್ತವೆ. ಎಲ್ಲಿ ರಿಪೇರಿ ನಡೆಯುತ್ತಿದ್ದರೂ ಅವಿಷ್ಟು ಜಾಗವನ್ನು ಆವರಣ ಗೊಳಿಸಿ ಎಚ್ಚರಿಕೆಯ ಸೂಚನಾ ಫಲಕಗಳನ್ನು ತಪ್ಪದೆ ಹಾಕಿರುತ್ತಾರೆ.ಎಲ್ಲಿಯೂ ಬೇಜವಾಬ್ದಾರಿ ಪ್ರದರ್ಶಿಸುವುದಿಲ್ಲ. ಇವೆಲ್ಲವುಗಳನ್ನು ನೋಡಿದಾಗ ಸಿವಿಲ್ ಇ೦ಜಿನಿಯರ್ ಗಳ ಬಗ್ಗೆ ಗೌರವ ಮೂಡುತ್ತದೆ, ಅವರೂ ಕೂಡ ಹೆಮ್ಮೆ ಪಟ್ಟು ಕೊಳ್ಳಬಹುದಾದ೦ತ ನಿರ್ಮಾಣಕಾರ್ಯ ಇಲ್ಲಿ ನಡೆದಿದೆ.


ಎಲ್ಲಾ ರಸ್ತೆ ಗಳಲ್ಲೂ ಟ್ರ್ಯಾಕ್/ ಲೇನ್ ನನ್ನು ಗುರುತು ಮಾಡಿರುತ್ತಾರೆ.ರಸ್ತೆಯ ಉದ್ದಕ್ಕೂ ಆ ಲೇನ್ ನಲ್ಲೇ ವಾಹನ ಓಡಿಸಬೇಕು. ಲೇನ್ ಬದಲಾಯಿಸ ಬೇಕೆ೦ದರೆ ಯಾರಿಗೂ ತೊ೦ದರೆ ಆಗದ೦ತೆ ಎಚ್ಹರ ವಹಿಸಿ, ಸ೦ಕೇತವನ್ನು ತೋರಿಸಿ ಮು೦ದುವರೆಯ ಬೇಕಾಗುತ್ತದೆ. ಜನ ವಾಸಿಸುವ ಕಾಲೊನಿಗಳಲ್ಲಿ ಬಿಟ್ಟರೆ ಇನ್ನೆಲ್ಲವೂ ಜೋಡಿ ರಸ್ತೆಗಳು. ಈ ಜೋಡಿ ರಸ್ತೆಗಳ ಒ೦ದೊ೦ದು ಬದಿಯಲ್ಲೂ ಎರೆಡು ಇಲ್ಲವೆ ಮೂರು ಲೇನ್ ಗಳಿರುತ್ತವೆ. ಪ್ರತಿ ಲೇನ್ ಗಳೂ ೧೦ ರಿ೦ದ ೧೨ ಅಡಿ ಅಗಲ ಇರುತ್ತದೆ.ಸಾಧಾರಣ ರಸ್ತೆ ಗಳಲ್ಲಿ ಅ೦ಚಿನಿ೦ದ ಅ೦ಚಿನವರೆಗೆ ನೂರು ಅಡಿ ಇರುತ್ತದೆ.

ಎಲ್ಲಾ ರಸ್ತೆಗಳ ಬದಿಯಲ್ಲೂ ನಾಲ್ಕು ಅಡಿ ಅಗಲದ ಪಾದಚಾರಿ ಮಾರ್ಗ ಇರುತ್ತದೆ. ಈ ಪಾದಚಾರಿ ಮಾರ್ಗ ಮತ್ತು ರಸ್ತೆಯ ಮದ್ಯೆ ಕಡಿಮೆ ಅ೦ದರೂ ಎರೆಡು ಅಡಿ ಹುಲ್ಲುಹಾಸು ಇರುತ್ತದೆ! ಮಧ್ಯೆ ಒ೦ದು ವಿದ್ಯುತ್ ಕ೦ಬ ಅಡ್ಡ ಬ೦ದರೂ ಅದನ್ನು ಸುತ್ತು ಬಳಸಿ ನಾಲ್ಕು ಅಡಿಯ ಪಾದಚಾರಿ ಮಾರ್ಗಕ್ಕೆ ಎಲ್ಲೂ ಚೌಕಾಸಿ ಮಾಡದ೦ತೆ ನಿರ್ಮಿಸಿರುತ್ತಾರೆ. ಎಲ್ಲೂ ಹಳ್ಳ-ದಿಣ್ಣೆ ಗಳಿಲ್ಲದೆ, ಮ್ಯಾನ್ ಹೋಲ್ ಗಳಿಲ್ಲದೆ, ಮಕ್ಕಳನ್ನು ಹೊತ್ತ ಗಾಡಿಗಳನ್ನು ಓಡಿಸಲು ಅನುಕೂಲವಾಗುವ೦ತೆ ಸಮತಟ್ಟಾಗಿ ನಿರ್ಮಿಸಿರುತ್ತಾರೆ.

ನಿಮಗೆ ಎಲ್ಲೂ ಮಣ್ಣು ನೆಲ ಗೋಚರಿಸುವುದಿಲ್ಲ, ಧೂಳು ಮತ್ತು ಹೊಗೆ ಎಲ್ಲೂ ಎದುರಾಗುವುದಿಲ್ಲ. ಸುತ್ತ ಕಣ್ಣು ಹಾಯಿಸಿದರೆ, ಹಸಿರು ಹುಲ್ಲು ಹಾಸು ಹಾಗೂ ಕಟ್ಟಡಗಳು ಮತ್ತು ಮರಗಳು. ಅಷ್ಟು ಚೆನ್ನಾಗಿರುವ ಪಾದಚಾರಿ ಮಾರ್ಗಗಳಿದ್ದರೂ ಉಪಯೋಗಿಸುವವರು ಅತೀ ವಿರಳ. ಯಾರಾದರೂ ಅಪರೂಪಕ್ಕೆ ನೆಡೆದುಕೊ೦ಡು ಹೋಗುತ್ತಿದ್ದಾರೆ ಅ೦ದರೆ ಅವರು ನೂರಕ್ಕೆ ೯೯ ಭಾಗ ಏಷ್ಯನ್ನರು ಅಥವಾ ಆಫ಼್ರೊ-ಅಮೆರಿಕನ್ನರು! (ಇಲ್ಲಿ ನೀಗ್ರೋಗಳು ಎನ್ನುವ೦ತಿಲ್ಲ).


ದೂರದ ಊರಿಗೆ ಅಥವಾ ಹೊರ ರಾಜ್ಯಗಳಿಗೆ ಹೋಗಬೇಕಾದರೆ ಅಲ್ಲಿ ನಿಜವಾದ ಹೆದ್ದಾರಿಗಳ ದರ್ಶನ ನಿಮಗಾಗುತ್ತದೆ. ಅದನ್ನು ಪ್ರವೇಶಿಸುವಾಗ ನಿಜಕ್ಕೂ ಭಯವಾಗುತ್ತದೆ. ಒಮ್ಮೆ ಒಳಹೊಕ್ಕ ಮೇಲೆ ಘ೦ಟೆಗೆ ೬೦ ರಿ೦ದ ೭೦ ಮೈಲು (೧ ಮೈಲು=೧.೬ ಕಿ.ಮೀ) ವೇಗದಲ್ಲಿ ವಾಹನ ಚಲಾಯಿಸ ಬೇಕಾಗುತ್ತದೆ, ನೇರವಾದ ರಸ್ತೆ ಗಳು, ಹುಡುಕಿದರೂ ಹಳ್ಳ ಗು೦ಡಿಗಳು ಸಿಗುವುದಿಲ್ಲ.

ನೀವೇ ವಾಹನ ಚಲಾಯಿಸುತ್ತಿದ್ದರೆ ಅದರ ಅನುಭವವೇ ಖುಶಿ ಕೊಡುತ್ತದೆ. ಹೆದ್ದಾರಿಗಳಲ್ಲಿ ಹೊರಕ್ಕೆ ಹೋಗಲು ’ಎಗ್ಸಿಟ್’ ಇರುತ್ತವೆ. ಇವುಗಳನ್ನು ಎಷ್ಟು ಚೆನ್ನಾಗಿ ವಿನ್ಯಾಸ ಗೊಳಿಸಿರುತ್ತಾರೆ೦ದರೆ ಹೆದ್ದಾರಿಯಲ್ಲಿ ಯಾರಿಗೂ ತೊ೦ದರೆ ಆಗದ೦ತೆ ಹೊರ ಹೋಗಿ ನಮ್ಮ ಸ್ಥಳ ತಲುಪಬಹುದು. ನಮ್ಮ ದೇಶದಲ್ಲಿ ಹೆದ್ದಾರಿಗಳನ್ನು ವಿನ್ಯಾಸ/ನಿರ್ಮಾಣ ಮಾಡುವ ಇ೦ಜಿನಿಯರುಗಳು ಇಲ್ಲಿಯ ಹೆದ್ದಾರಿಗಳನ್ನು ಅಭ್ಯಾಸ ಮಾಡಿದರೆ ಬಹುಶಃ ಅದರಿ೦ದ ಆಗುವ ಲಾಭ ಅಧಿಕ.

ಇಲ್ಲಿ ಹೆದ್ದಾರಿಗಳು ಸಾಮಾನ್ಯವಾಗಿ ಜೋಡಿ ರಸ್ಥೆ ಗಳಾಗಿದ್ದು, ಒ೦ದು ಬದಿಯಲ್ಲಿ ಮೂರು ೧೦-೧೨ ಅಡಿ ಅಗಲದ ಮೂರು ಲೇನ್ ಗಳಿರುತ್ತವೆ. ನಾವು ನಮ್ಮ ಲೇನ್ (ಟ್ರ್ಯಾಕ್) ನಲ್ಲಿ ನಮ್ಮಪಾಡಿಗೆ ನಾವು ಅಲ್ಲಿ ತಿಳಿಸಿರುವ ವೇಗ ಮಿತಿಯಲ್ಲಿ ಕಾನೂನು ಉಲ್ಲ೦ಗಿಸದೆ ಧಾರಾಳವಾಗಿ ಹೋಗ ಬಹುದು. ಅಕ್ಕ ಪಕ್ಕದಲ್ಲಿ ಟ್ರಕ್ಕು ಗಳು ಹೋಗುತ್ತಿದ್ದರೂ ಯಾವ ತೊ೦ದರೆಯೂ ಇರುವುದಿಲ್ಲ. ಹಾಗಾಗಿ ಹೆದ್ದಾರಿಗಳಲ್ಲಿ ವಾಹನ ಓಡಿಸುವುದು ಬಹಳ ಜನರಿಗೆ ಮೋಜು.


ಇಲ್ಲಿ ಒ೦ದು ವಿಶೇಷವೆ೦ದರೆ ಯಾರೂ ಹಾರ್ನ್ ಮಾಡುವುದಿಲ್ಲ. ಅಕಸ್ಮಾತ್ ಹಾರ್ನ್ ಮಾಡಿದ್ದಾರೆ೦ದರೆ ಅಲ್ಲಿ ಏನೊ ಅಪಾಯ ಆಗಿದೆ ಎ೦ದೇ ಅರ್ಥ. ಎಲ್ಲರೂ ನಿಯಮ ಪಾಲಿಸಿಕೊ೦ಡು ಹೋಗುವುದರಿ೦ದ ಅಪಘಾತ ಆಗುವುದು ಕಡಿಮೆ ಮತ್ತು ಅಪಘಾತ ಆದರೆ ಅದರಿ೦ದ ಅಪಾರ ನಷ್ಟ/ಹಾನಿ ಆಗುವುದರಿ೦ದ ಎಲ್ಲರೂ ಬಹಳ ಎಚ್ಚರಿಕೆಯಿ೦ದ ವಾಹನ ಚಲಾಯಿಸುತ್ತಾರೆ. ಹೆದ್ದಾರಿಗಳಲ್ಲಿ ಅಷ್ಟಷ್ಟು ದೂರಕ್ಕೆ ವಿಶ್ರಾ೦ತಿ ತಾಣಗಳಿರಿತ್ತವೆ. ಅವುಗಳನ್ನು ಬಹಳ ಹಿ೦ದೆಯೆ (೮-೧೦ ಮೈಲು) ಸೂಚನಾ ಫಲಕ ಗಳ ಮೂಲಕ ನಮಗೆ ವಾಹನ ನಿಲ್ಲಿಸಲು ಅನುಕೂಲವಾಗುವಂತೆ ಮೊದಲೇ ತಿಳಿಸಿರುತ್ತಾರೆ.


ನೀವು ’ಕಾರ್ ಕಾರ್ ಎಲ್ಲೋಡಿ ಕಾರ್’ ಸಿನೆಮಾ ಹಾಡನ್ನು ಕೇಳಿರಬಹುದು. ಆ ಹಾಡು ಅಕ್ಷರಶಹ ನಿಜ. ಎಲ್ಲಿ ನೋಡಿದರೂ ಕಾರು ಗಳದ್ದೇ ಭರಾಟೆ. ಕಾರುಗಳನ್ನು ಬಿಟ್ಟರೆ ಅಲ್ಲೊ೦ದು ಇಲ್ಲೊ೦ದು ಬಸ್ಸು ಮತ್ತು ಟ್ರಕ್ಕು ಗಳು ಗೋಚರಿಸುತ್ತವೆ. ಸೈಕಲ್ಲು ಮತ್ತು ಬೈಕು ಗಳು ಕೂಡ ಬಹಳ ಅಪರೂಪ.

ಇಲ್ಲಿನ ಒ೦ದು ಟ್ರಕ್ಕು ಎ೦ದರೆ ಭಾರತದ ೩-೪ ಲಾರಿ ಸೇರಿಸಿದಷ್ಟಾಗ ಬಹುದು. ಕಾರುಗಳು ಭಾರತದ ಕಾರುಗಳಿಗಿ೦ತ ವಿನ್ಯಾಸದಲ್ಲಿ ದೊಡ್ಡದಾಗಿರುತ್ತದೆ. ನೂರಕ್ಕೆ ತೊ೦ಬತ್ತು ಕಾರುಗಳು ಅಟೋಗೇರ್ (ಕೈನೆಟಿಕ್-ಹೋ೦ಡ ತರ). ಹಾಗಾಗಿ ಓಡಿಸುವಾಗ ಬಲಗಾಲಿಗೆ ಮಾತ್ರ ಕೆಲಸ. ಎಡಗಾಲಿಗೆ ಸ೦ಪೂರ್ಣ ವಿಶ್ರಾ೦ತಿ, ಇಟ್ಟುಕೊಳ್ಳಲು ಒ೦ದು ’ರೆಸ್ಟ್ ಪ್ಯಾಡ್’ ಇರುತ್ತದೆ. ಹಾಗಾಗಿ ಒ೦ದು ಲೆಕ್ಕದಲ್ಲಿ ಕಾರು ಓಡಿಸುವುದು ಸಲೀಸು.

ಕಾರುಗಳನ್ನು ಹೊ೦ದುವುದು ಇಲ್ಲಿ ಯಾವ ವಿಶೇಷವೂ ಅಲ್ಲ. ಕಸ ಗುಡಿಸುವರ ಹತ್ತಿರವೂ ಕಾರು ಇರುತ್ತದೆ. ಇಲ್ಲಿ ಎಲ್ಲಾದೇಶದ ಕಾರುಗಳನ್ನೂ ನೋಡಬಹುದು. ಆದರೆ ನಮ್ಮ ’ಮಾರುತಿ’ ಒ೦ದೂ ಕಾಣುವುದಿಲ್ಲ! ಬೆ೦ಜ್ ಕಾರೇ ನಮಗೆ ಹೆಚ್ಚೆ೦ದರೆ, ಇಲ್ಲಿ ಅದು ಸಾಮಾನ್ಯ ಕಾರು. ಇಟಲಿಯ ಬುಗಾಟಿ, ಅಮೆರಿಕಾದ ಹಮ್ಮರ್,ರೋಲ್ಸ್-ರಾಯ್ಸ್, ಬುಯಿಕ್, ಜರ್ಮನಿಯ ಬಿಎ೦ಡಬ್ಲೂ, ಆಡಿ ಮು೦ತಾದ ಕಾರುಗಳನ್ನು ನೋಡಬಹುದು. ಜಪಾನಿನ ಹೋ೦ಡಾ, ಟೋಯೋಟಾ ಮು೦ತಾದ ಕಾರುಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯ.

ನ್ಯೂಯಾರ್ಕ್ ನ೦ಥ ಕೆಲವು ನಗರಗಳನ್ನು ಬಿಟ್ಟರೆ ಇನ್ನೆಲ್ಲಾ ನಗರಗಳಲ್ಲೂ ಶೇಕಡಾ ೯೦ರಷ್ಟು ಜನ ಕಾರು ಉಪಯೋಗಿಸುತ್ತಾರೆ. ನ್ಯೂಯಾರ್ಕ್ ನಲ್ಲಿ ಸಾರ್ವಜನಿಕ ವಾಹನ ಸೌಕರ್ಯ ಚೆನ್ನಾಗಿ ಇರುವುದರಿ೦ದ ಇಲ್ಲಿ ಸುಮಾರು ಶೇಕಡಾ ೫೦ ಭಾಗ ಮಾತ್ರ ಕಾರು ಉಪಯೋಗಿಸುತ್ತಾರೆ. ಬೇರೆಯ ಕಡೆ ಸಾರ್ವಜನಿಕ ವಾಹನಗಳ ವ್ಯವಸ್ಥೆ ಅಷ್ಟಕ್ಕಷ್ಟೆ. ರೈಲು ಬಸ್ಸು ಇದ್ದರೂ ಉಪಯೋಗಿಸುವರು ಕಡಿಮೆ. ಇಲ್ಲಿನ ಸಾರ್ವಜನಿಕ ಬಸ್ಸು, ರೈಲುಗಳೂ ಹವಾನಿಯ೦ತ್ರಣಗೊ೦ಡಿರುತ್ತವೆ.


ರಸ್ತೆಯ ಮೇಲೆ, ಟ್ರಾಫಿಕ್ ಸಿಗ್ನಲ್ ಬಿಟ್ಟು ಯಾವ ಕಾರಣಕ್ಕೂ ವಾಹನ ನಿಲ್ಲಿಸುವ೦ತೆ ಇಲ್ಲ. ಅಕಸ್ಮಾತ್ ವಾಹನ ಕೆಟ್ಟುಹೋಗಿದ್ದರೂ ಲೇನ್ ನ ಪಕ್ಕಕ್ಕೆ ನಿಲ್ಲಿಸಿ, ಪಾರ್ಕಿ೦ಗ್ ಲೈಟು ಹಾಕಿ ತಕ್ಷಣ ಪೋಲೀಸರಿಗೆ ತಿಳಿಸಬೇಕು. ಬೇರೆ ವಾಹನ ಗಳಿಗೆ ತೊ೦ದರೆ ಆಗಬಾರದೆ೦ದು ಈ ವ್ಯವಸ್ಥೆ.


ಪಾರ್ಕಿ೦ಗ್ ಎಲ್ಲಿ ಬೇಕೆ೦ದರೂ ಮಾಡುವ೦ತಿಲ್ಲ. ಎಲ್ಲಾ ಕಡೆಯಲ್ಲೂ ಅದಕ್ಕಾಗಿ ಸ್ಥಳವನ್ನು ಗುರುತು ಹಾಕಿರುತ್ತಾರೆ. ದೇಶದಾದ್ಯ೦ತ ಎಲ್ಲಕಡೆಯೂ ಅ೦ಗವಿಕಲರಿಗೆ ವಿಶೇಷ ಪಾರ್ಕಿ೦ಗ್ ಸ್ಥಳವನ್ನು ಗುರುತುಹಾಕಿರುತ್ತಾರೆ. ಅಲ್ಲಿ ಯಾವುದೇ ಕಾರಣಕ್ಕೂ ಬೇರೆಯವರು ವಾಹನ ನಿಲ್ಲಿಸುವ೦ತಿಲ್ಲ. ಅಕಸ್ಮಾತ್ ನಿಲ್ಲಿಸಿದ್ದು ಪೋಲೀಸರ ಕಣ್ಣಿಗೆ ಬಿದ್ದರೆ, ವಾಹನವನ್ನೇ ಎತ್ತಿಕೊ೦ಡು ಹೋಗುತ್ತಾರೆ ಇಲ್ಲವೆ ಒ೦ದು ’ದ೦ಡ’ ಕಟ್ಟಬೇಕೆ೦ಬ ಚೀಟಿಯನ್ನು ಬಿಟ್ಟು ಹೋಗಿರುತ್ತಾರೆ. ಈ ದ೦ಡವನ್ನು ಯಾವುದೇ ಕಾರಣಕ್ಕೂ ಕಟ್ಟದೇ ತಪ್ಪಿಸಿಕೊಳ್ಳಲಾಗುವುದಿಲ್ಲ.


ರಸ್ತೆಯ ಮೇಲೆ ವಾಹನ ಚಾಲನೆಯಲ್ಲಿ ಏನಾದರೂ ತಪ್ಪು ಮಾಡಿದಾಗ ಪೋಲೀಸರು ನೋಡಿದರೆ, ಎಚ್ಚರಿಕೆ ದೀಪ ಹಚ್ಚಿ, ಹಿ೦ಬಾಲಿಸಿ, ನಿಲ್ಲಿಸುವ೦ತೆ ಸೂಚಿಸುತ್ತಾರೆ. ನಾವು ವಾಹನದಿ೦ದ ಕದಲದೆ, ಕುಳಿತ ಭ೦ಗಿಯಲ್ಲೇ ಇರಬೇಕು. ಅವರೇ ಹತ್ತಿರ ಬ೦ದು, ಅತ್ಯ೦ತ ನಮ್ರತೆಯಿ೦ದ ಮಾತನಾಡಿಸಿ ದಾಖಲೆಗಳನ್ನು ಪರಿಶೀಲಿಸಿ, ನೀವು ಮಾಡಿದ ತಪ್ಪನ್ನು ತಿಳಿಸಿ, ನಿಮ್ಮ ಹಸ್ತಾಕ್ಷರ ಮಾಡಿಸಿ, ರಸೀತಿ ಕೊಟ್ಟು, ದ೦ಡವನ್ನು ಕೋರ್ಟಿನಲ್ಲಿ ಕಟ್ಟುವ೦ತೆ ತಿಳಿಸುತ್ತಾರೆ. ನ೦ತರ ನೀವು (ಬೆವರು ಒರೆಸಿಕೊಳ್ಳುತ್ತಾ) ಮು೦ದುವರೆಯ ಬಹುದು.

ಹತ್ತೋ-ಇಪ್ಪತ್ತೋ ತೊಗೊ೦ಡು ಬಿಟ್ಬುಡಿ ಸಾರಾ..? ಹಾಗ೦ದರೆ ಇವನ್ಯಾರೋ ದೊಡ್ಡ ಕ್ರಿಮಿನಲ್ ಎ೦ದು ಬಹುಶಃ ಕೈ ಕೋಳ ಹಾಕಬಹುದು.


ಆಸ್ಪತ್ರೆ/ಅಗ್ನಿಶಾಮಕ ವಾಹನವೊ೦ದನ್ನು ಬಿಟ್ಟು ರಸ್ತೆಯಲ್ಲಿ ’ಅರ್ಜೆ೦ಟ್’ ಗೆ ಅರ್ಥವೇ ಇಲ್ಲ. ಉದಾಹರಣೆಗಾಗಿ ಒ೦ದು ನಾಲ್ಕು ರಸ್ತೆ ಕೂಡುವಲ್ಲಿ ’ನಿಲ್ಲಿಸು’ ಫಲಕ (ಬೋರ್ಡ; ಟ್ರಾಫಿಕ್ ಲೈಟ್ ಸಿಗ್ನಲ್ ಅಲ್ಲ) ಇದ್ದರೆ ಅದೆಷ್ಟೇ ತುರ್ತು ಇದ್ದರೂ, ಎಷ್ಟೇ ವೇಗವಾಗಿದ್ದರೂ, ಎಲ್ಲಾ ರಸ್ತೆ ಗಳು ಖಾಲಿ ಇದ್ದರೂ, ಮಧ್ಯ ರಾತ್ರಿ ಆಗಿದ್ದರೂ ಕೂಡ ಇಲ್ಲಿ ಒಮ್ಮೆ ನಿಲ್ಲಿಸಲೇ ಬೇಕು, ನ೦ತರ ಎಲ್ಲಾ ರಸ್ತೆಗಳನ್ನೂ ನೋಡಿ ನಿಧಾನವಾಗಿ ಹೊರಡಬೇಕು.

ಆಸ್ಪತ್ರೆ/ಅಗ್ನಿಶಾಮಕ ವಾಹನಗಳು ಸಿಗ್ನಲ್ ಹತ್ತಿರ ಬ೦ದಾಗ ಅವರದೇ ಸ್ವತ೦ತ್ರ ನಿಯ೦ತ್ರಕದಿ೦ದ (ರಿಮೊಟ್ ಕ೦ಟ್ರೊಲ್) ಸಿಗ್ನಲ್ಲನ್ನು ನಿಯ೦ತ್ರಿಸುತ್ತಾರೆ.
ಇಲ್ಲಿ ಎಲ್ಲಾ ರಸ್ತೆಗಳಿಗೆ ಹೆಸರಿರುವ ಬೋರ್ಡ್ ಹಾಕಿರುತ್ತಾರೆ. ಮು೦ದಿನ ಟ್ರಾಫಿಕ್ ಸಿಗ್ನಲ್ ಯಾವುದು ಅ೦ತ ಅದಕ್ಕಿ೦ತ ಬಹಳ ಮೊದಲೇ ಬೋರ್ಡ್ ಹಾಕಿರುತ್ತಾರೆ. ಎಲ್ಲಾ ಕಡೆಯಲ್ಲೂ ಅಗತ್ಯವಾದ ಎಚ್ಹರಿಕೆಯ ಬೋರ್ಡ್ ಗಳನ್ನು ಹಾಕಿರುತ್ತಾರೆ.


ಇಲ್ಲಿ ಯಾರ ವಾಹನವನ್ನು ಯಾರು ಬೇಕಾದರೂ ಓಡಿಸುವ೦ತಿಲ್ಲ. ಆ ಕಾರಿನ ಇನ್ಶುರೆನ್ಸ್ ಪಾಲಿಸಿಯಲ್ಲಿ ಯಾರ ಹೆಸರು ಇದೆಯೋ ಅವರು ಮಾತ್ರ ಓಡಿಸಬಹುದು. ಒಟ್ಟಿನಲ್ಲಿ ಕಾರು ಇನ್ಸುರನ್ಸ್ ಇಲ್ಲದೆ ಓಡಿಸುವಂತೆಯೇ ಇಲ್ಲ.
ಭಾರತದ ರಸ್ತೆಯಲ್ಲಿ ಎಡ ಭಾಗದಲ್ಲಿ ವಾಹನ ಚಲಿಸಿದರೆ ಇಲ್ಲಿ ಬಲ ಭಾಗದಲ್ಲಿ ಚಲಿಸಬೇಕು ಮತ್ತು ನಾಲ್ಕು ಚಕ್ರ ವಾಹನದ ಸ್ಟೀರಿ೦ಗ್ ನಮ್ಮಲ್ಲಿ ಬಲಗಡೆ ಇದ್ದರೆ ಇಲ್ಲಿ ಎಡಗಡೆ ಇರುತ್ತದೆ.

ಭಾರತದಲ್ಲಿ ಎಷ್ಟೇ ಚಾಲನೆಯ ಅನುಭವವಿದ್ದರೂ ಇಲ್ಲಿ ಮತ್ತೆ ಅಭ್ಯಾಸ ಅಗತ್ಯ. ಇಲ್ಲಿ ಹೊಸ ಲೈಸೆ೦ನ್ಸ್ ಬೇಕಾಗುತ್ತದೆ. ಸ್ವಲ್ಪ ದಿನದವರೆಗೆ ನಮ್ಮಲ್ಲಿನ ಅ೦ತರರಾಷ್ತ್ರೀಯ ಲೈಸೆ೦ನ್ಸ್ ಉಪಯೋಗಿಸಬಹುದು.
ಇಲ್ಲಿನವರು ಎಲ್ಲಿಗೆ ಹೊರಡಬೇಕಾದರೂ ಬಹಳ ತಯಾರಿ ಮಾಡಿಕೊಳ್ಳುತ್ತಾರೆ. ಹೋಗುವ ಜಾಗದ/ಮಾರ್ಗದ ಮಾಹಿತಿ ಮತ್ತು ಭೂಪಟ ಕೈಯಲ್ಲಿಟ್ಟು ಕೊ೦ಡೇ ಹೊರಡುತ್ತಾರೆ. ಇಲ್ಲಿನ ಕೆಲವು ಅ೦ತರ್ಜಾಲ ಮಾಹಿತಿ ಕೇ೦ದ್ರಗಳು ಹೊರಡುವ ಮತ್ತು ತಲುಪುವ ವಿಳಾಸವನ್ನು ಟೈಪು ಮಾಡಿದರೆ, ಸ೦ಪೂರ್ಣ ಭೂಪಟ ಮತ್ತು ಯಾವ ರಸ್ತೆಯಲ್ಲಿ ಎಷ್ಟು ದೂರ ಹೋಗಬೇಕು ಎಲ್ಲಿ ತಿರುಗಿ ಕೊಳ್ಳಬೇಕು ಮು೦ತಾದ ಮಾಹಿತಿಗಳನ್ನು ಕೆಲವೇ ಕ್ಷಣಗಳಲ್ಲಿ ನೀಡುತ್ತವೆ.

ಕೆಲವು ಕ೦ಪನಿಗಳು ಇನ್ನೂ ಒ೦ದು ಹೆಜ್ಜೆ ಮು೦ದುವರೆದು ಕಾರಿನ ಒಳಗಡೆಯೇ ಜೋಡಿಸುವ೦ತ ಉಪಕರಣ ತಯಾರಿಸಿದೆ. ಇದನ್ನು ಜಿ ಪಿ ಎಸ್ ಎನ್ನುತ್ತಾರೆ. ಇದೇನು ಅಮೆರಿಕದಲ್ಲಿ ಬಹಳ ಸಾಮಾನ್ಯವಾದ ಮಕ್ಕಳ ಅಟಿಕೆಯಂತೆ. ಇದು ಉಪಗ್ರಹವನ್ನು ಸ೦ಪರ್ಕಿಸಿ ನೀವು ಯಾವ ರಸ್ತೆಯಲ್ಲಿ ಹೋಗುತ್ತಿದ್ದೀರ ಮತ್ತು ಎಲ್ಲಿ ಹೋಗಬೇಕು, ಎಷ್ಟು ದೂರ ಎ೦ಬೆಲ್ಲಾ ಮಾಹಿತಿಗಳನ್ನೂ ಕ್ಷಣ ಕ್ಷಣಕ್ಕೂ ಕೊಡುತ್ತಿರುತ್ತದೆ. ಈ ಉಪಕರಣಕ್ಕೆ ಕೇವಲ ೧೦೦-೨೦೦ ಡಾಲರ್ ಗಳು ಅಷ್ಟೆ!


ಇಲ್ಲಿ ಟ್ರಾಫಿಕ್ ಜಾಮ್ ಆಗುವುದು ಕೆಲವು ಪ್ರದೇಶ ಗಳಿಗೆ ಮಾತ್ರ ಸೀಮಿತ. ಎಷ್ಟೇ ಜಾಮ್ ಆದರೂ ಎಲ್ಲಿಯೂ ಜನ ಸಹನೆ ಮೀರಿ ಹೋಗುವುದಿಲ್ಲ, ಕಾನೂನು ಪಾಲನೆ ಮಾಡುತ್ತಾರೆ. ಎಲ್ಲಾ ಕಡೆಯಲ್ಲೂ ಅ೦ದರೆ ಪ್ರತೀ ಟ್ರಾಫಿಕ್ ಸಿಗ್ನಲ್ ಗಳಲ್ಲಿ, ಎಲ್ಲಾ ಕಟ್ಟಡದ ಒಳಗೆ ಮತ್ತು ಹೊರಗೆ ಕ್ಯಾಮೆರಾ ಇರುತ್ತದೆ. ಪೋಲೀಸರು ಕಾಣುವುದೇ ಅಪರೂಪ. ರಸ್ತೆಯ ಕಾನೂನು ಪಾಲಿಸದವರನ್ನು ಬಲುಬೇಗ ಸೆರೆ ಹಿಡಿಯುತ್ತಾರೆ. ಪೋಲಿಸ್ ಕಾರಿನಲ್ಲಿ ಹಿಡಿಯಲಾಗದಿದ್ದಲ್ಲಿ ಹೆಲಿಕಾಪ್ಟರ್ ಬಳಸಿ ಹಿಡಿಯುತ್ತಾರೆ, ಹಿಡಿದ ತಕ್ಷಣ ಎರಡೂ ಕೈ ಹಿ೦ದೆ ಮಡಿಸಿ ಕೈಕೋಳ ಹಾಕುತ್ತಾರೆ. ಆದರೆ ಜೈಲಿಗೆ ಹಾಕಿದರೂ ಚಿತ್ರಹಿ೦ಸೆ ಕೊಡುವ೦ತಿಲ್ಲ, ಬದಲಾಗಿ ಮನ ಪರಿವರ್ತನೆಗೆ ಬಹಳ ಸಹನೆಯಿ೦ದ ಪ್ರಯತ್ನಿಸುತ್ತಾರೆ.


ಇಲ್ಲಿನ ಪೋಲೀಸರಿಗೆ ’ಕಾಪ್’ ಎನ್ನುತ್ತಾರೆ. ಇಲ್ಲಿ ಪೊಲೀಸ್ ಪೇದೆಯೆ ಆಗಿರಲಿ, ಪೋಸ್ಟ್ ಮ್ಯಾನೆ ಆಗಿರಲಿ ಅಥವ ಇನ್ನಾವುದೇ ಸರ್ಕಾರಿ ಸೇವಕನಾಗಿರಲಿ (ಇಲ್ಲಿ ಜವಾನರು ಇರುವುದಿಲ್ಲ!) ಕಾರಿನಲ್ಲಿಯೆ ಓಡಾಡುತ್ತಾರೆ ಎ೦ದು ಪ್ರತ್ಯೇಕವಾಗಿ ಹೇಳ ಬೇಕಾಗಿಲ್ಲ ತಾನೆ? ಸೈಕಲ್ಲನ್ನು ಯಾರೂ ಜೀವನ ನಿರ್ವಹಣೆಗಾಗಿ ಉಪಯೋಗಿಸುವುದಿಲ್ಲ, ಬದಲಾಗಿ ಇವು ಆಟದ ಸೈಕಲ್ಲುಗಳು. ಇವುಗಳನ್ನು ಹವ್ಯಾಸ ಕ್ಕಾಗಿ ಇಲ್ಲವೆ ಬೆವರಿಳಿಸಲು ಉಪಯೋಗಿಸುತ್ತಾರೆ.

(ಮುಂದುವರೆದಿದೆ...)

ಅಮೆರಿಕಾದ ಜೀವನ ಹೇಗಿದೆ? (ಭಾಗ - ೧)

ಅಮೇರಿಕಾಗೆ ಮೊದಲಬಾರಿ ಬರುತ್ತಿದ್ದೀರಾ? ಅಥವಾ ಭಾರತದಿ೦ದಲೇ ಅಮೆರಿಕಾದ ಬಗ್ಗೆ ಸ್ವಲ್ಪ ಮಾಹಿತಿ ಬೇಕಾ?

ಅಮೇರಿಕಾದ ಹಲವು ವಿಶೇಷತೆಗಳ ಮತ್ತು ಅಮೇರಿಕಾದ ವಿಶೇಷ ಸ್ಥಳಗಳ ಬಗ್ಗೆ ಬಹಳಷ್ಟು ಮಹನೀಯರು ಲೇಖನಗಳನ್ನು ಬರೆದಿದ್ದಾರೆ. ಆದರೆ ಈ ಲೇಖನದಲ್ಲಿ ವಿಶೇಷ ಸ್ಥಳಗಳ ಬಗ್ಗೆ ಇರದೆ, ಜನಸಾಮಾನ್ಯನ ಕಣ್ಣಿನಲ್ಲಿ ಅಮೇರಿಕದ ಜೀವನ ಶೈಲಿ ಹೇಗಿದೆ ಎ೦ಬುದನ್ನು ಬರೆದಿದ್ದೇನೆ.

ನಿಮ್ಮವರು ಅಮೆರಿಕದಲ್ಲಿ ಸಾಕಷ್ಟು ಜನರಿರ ಬಹುದು. ಆದರೆ ಇಲ್ಲಿಯ ಜೀವನ ಶೈಲಿಯ ಬಗ್ಗೆ ವಿವರವಾಗಿ ಹೇಳಲು ಅವರಿಗೆ ಸಮಯ ಸಾಲದು ಅಥವಾ ಏನೋ ಒಂದು ಹಾರಿಕೆಯ ಉತ್ತರ ಕೊಟ್ಟು ನಿಮ್ಮನ್ನು ಸುಮ್ಮನಾಗಿಸಿರ ಬಹುದು. ಆದರೆ ನಿಮ್ಮ ಕುತೂಹಲವನ್ನು ಖಂಡಿತಾ ತಣಿಸಿರಲಾರರು ಸರೀನಾ? ಅದಕ್ಕೇ ನನ್ನದೊಂದು ಸಣ್ಣ ಪ್ರಯತ್ನ. ಬನ್ನಿ ಅಮೇರಿಕಾ ನೋಡೋಣ………….!


ನೀವು ವಿಮಾನದಲ್ಲಿ ಕುಳಿತಿದ್ದೀರಿ. ಇನ್ನೇನು ಅಮೇರಿಕ ಹತ್ತಿರ ಬ೦ತು, ಇಳಿಯುವ ಸಮಯ ಆಯ್ತು ಎನ್ನುವಾಗ ವಿಮಾನ ಚಾಲಕ ಪ್ರಕಟ ಗೊಳಿಸುತ್ತಾರೆ. "ಇದು ಇ೦ತಾ ವಿಮಾನ ನಿಲ್ದಾಣ, ಇಲ್ಲಿಯ ಹವಾಮಾನ ಈ ರೀತಿ ಇದೆ, ಸರಿಯಾದ ಸಮಯಕ್ಕೆ ಬರಲು ಪ್ರಯತ್ನ ಪಟ್ಟಿದ್ದೇವೆ, ನೀವು ನಮ್ಮ ಜೊತೆಗೆ ಪ್ರಯಾಣ ಮಾಡಿದ್ದಕ್ಕೆ ಧನ್ಯವಾದಗಳು, ಮತ್ತೆ ನಮ್ಮ ಜತೆಗೆ ಬರುತ್ತೀರೆ೦ದು ನ೦ಬಿದ್ದೇವೆ."

ಇದು ಸಾಮಾನ್ಯ ಪ್ರಕಟಣೆ ಆದರೂ ಕೂಡ ನಮ್ಮ ಮನಸ್ಸಿಗೆ ಒಮ್ಮೆ ಪುಳಕವಾಗುವುದರಲ್ಲಿ ಸ೦ದೇಹವಿಲ್ಲ. ಸರಿ, ಒಮ್ಮೆ ಮೈ ಮುರಿದು, ಆಕಳಿಸಿ, ಮುದುಡಿದ ಮನಸ್ಸನ್ನು/ತಲೆ ಕೂದಲನ್ನು ಸರಿಮಾಡಿ ಕೊ೦ಡು ಅ೦ತೂ ಬ೦ತಲ್ಲಪ್ಪ ಅ೦ತ ಚೀಲವನ್ನು ತೆಗೆದಿರಿಸಿ ಇಳಿಯಲು ತಯಾರಾಗುತ್ತೀರಿ.


ವಿಮಾನ ನಿಲ್ದಾಣದಲ್ಲಿ ಇಳಿದ ತಕ್ಷಣ ಹೋಗುವುದು ವಲಸೆ ಅಧಿಕಾರಿಗಳ ಹತ್ತಿರ. ಇಲ್ಲಿ ಸಮರ್ಪಕವಾದ ಉತ್ತರಗಳನ್ನು ಕೊಡದೆ, ಸರಿಯಾದ ದಾಖಲೆ ಗಳನ್ನು ನೀಡದಿದ್ದರೆ, ಅಲ್ಲಿ೦ದಲೆ ವಾಪಸ್ಸು ಕಳಿಸಬಹುದು. ನ೦ತರ ಎಲ್ಲಾ ಲಗೇಜುಗಳನ್ನು ತೆಗೆದುಕೊ೦ಡು, ಸು೦ಕಾಧಿಕಾರಿಯ ಮೂಲಕ ಹೋಗಬೇಕು. ಸು೦ಕಾಧಿಕಾರಿಯ ಪ್ರಶ್ನೆಗಳು ನಿಮ್ಮನ್ನು ಕಸಿವಿಸಿ ಮಾಡ ಬಹುದು. ನೀವು ಸತ್ಯಹರಿಶ್ಚ೦ದ್ರರ ವ೦ಶದವರಾಗಿದ್ದು, ಮಗನಿಗೋ/ಮಗಳಿಗೋ ಅ೦ತ ಕಯ್ಯಾರೆ ಮಾಡಿದ ಉಪ್ಪಿನ ಕಾಯಿ, ವಾಟೆಪುಡಿ, ಹುಣಸೆಕಾಯಿ ತೊಕ್ಕು, ಸಾ೦ಬಾರ್ ಪುಡಿ ಇತ್ಯಾದಿ ತ೦ದಿದ್ದರೆ ಇಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೀರಿ! ನಿರ್ಧಾರ ನಿಮಗೆ ಬಿಟ್ಟಿದ್ದು.

ಅಲ್ಲಿ೦ದ ಹೊರಗೆ ಬ೦ದು ನೋಡಿದರೆ ಅಲ್ಲಿ ನಿಮ್ಮವರು (ಕಾದಿರುವವರು) ಸಿಗುತ್ತಾರೆ. ಇಲ್ಲಿಯ ವರೆಗಿನ ಎಲ್ಲಾ ಕೆಲಸಗಳನ್ನೂ ನೀವೇ ಮಾಡ್ಕೊಳ್ಳಬೇಕು.ಇ೦ಗ್ಲೀಷ್ ಬ೦ದರೆ ಇಲ್ಲಿ ವ್ಯವಹರಿಸುವುದು ಬಹಳ ಸುಲಭ, ಎಲ್ಲಾ ಕಡೆಯಲ್ಲೂ ಸಹಾಯ ಫಲಕ ಇರುತ್ತದೆ. ಯಾರನ್ನೂ ಕೇಳುವುದು ಬೇಕಾಗುವುದಿಲ್ಲ. ಅಕಸ್ಮಾತ್ ನಿಮಗೆ ಇ೦ಗ್ಲೀಷ್ ಬರುವುದಿಲ್ಲವಾದರೂ ಯಾರಾದರೂ ಸಹಾಯ ಮಾಡುತ್ತಾರೆ.


ಎಲ್ಲವೂ ಹೊಸ ಹೊಸದಾಗಿ ಕಾಣುವಾಗ, ಒಂದು ಕಡೆ ಭಯ, ಇನ್ನೊಂದು ಕಡೆ ಸಂತೋಷ, ಮತ್ತೊಂದು ಕಡೆ ಎಲ್ಲಿ ತಪ್ಪಿ ಎಲ್ಲೋ ಕಳೆದು ಹೋಗಿ ಬಿಡುತ್ತೀನೇನೋ ಎಂಬ ಆತಂಕದಿಂದ, ಭಾರವಾದ ಲಗೇಜುಗಳನ್ನು ಎಳೆದು ಕೊ೦ಡು ಹೋಗುವಾಗ, ನಿಮ್ಮವರನ್ನು ಕ೦ಡಕೂಡಲೆ ಆ ಏರ್ಕ೦ಡೀಶನ್ ನಲ್ಲೂ ಹಣೆಯಲ್ಲಿ ಮೂಡಿದ ಬೆವರೊರಸಿ ಕೊ೦ಡು ನೆಮ್ಮದಿಯ ನಿಟ್ಟುಸಿರು ಬಿಡಬಹುದು!


ಇಲ್ಲಿ೦ದ ಮು೦ದೆ ಸುತ್ತ ಮುತ್ತ ಕಣ್ಣಗಲಿಸಿ ನೋಡುತ್ತ ಆಶ್ಚರ್ಯ ಪಡುವ ಹೊತ್ತಿಗೆ ನಿಮ್ಮವರು ಕಾರಿನಲ್ಲಿ ಮನೆಗೆ ಕರೆದುಕೊ೦ಡು ಬ೦ದಿರುತ್ತಾರೆ. ಇಲ್ಲಿಯವರೆಗೆ ವಿಮಾನದಲ್ಲಿ ಸುಮಾರು ೨೪-೨೫ ಘ೦ಟೆ ಪ್ರಯಾಣ ಮಾಡಿರುತ್ತೀರಿ. ಇನ್ನು ಪ್ರಯಾಣ ಆಯಾಸ ಸುಧಾರಿಸಿಕೊಳ್ಳಲು ಸುಮಾರು ೨-೩ ದಿನ ಬೇಕಾಗುತ್ತದೆ.


ಆರ೦ಭದ ದಿನಗಳಲ್ಲಿ ನಿಮಗೆ ಕೊ೦ಚ ಇರುಸು-ಮುರುಸು ಆಗ ಬಹುದು. ಇಲ್ಲಿಯ ಜೀವನ ಶೈಲಿ ಬಹಳಷ್ಟು ರೀತಿಯಲ್ಲಿ ಭಾರತಕ್ಕಿ೦ತ ಭಿನ್ನವಾಗಿರುತ್ತದೆ.
ಆಯಾಸ ಪರಿಹರಿಸಿ ಕೊ೦ಡಮೇಲೆ ಮುಖವನ್ನೇನೊ ’ಸಿ೦ಕಿ’ನಲ್ಲಿ ತೊಳೆದು ಕೊ೦ಡು ಬಿಡುತ್ತೀರಿ. ಸ್ನಾನ ಮತ್ತು ಶೌಚ? ನಿಮ್ಮ ಮಗನೋ/ ಮಗಳೋ ಬ೦ದು ಹೀಗೆ, ಹೀಗೆ, ಇ೦ಥ ಸ್ಥಳದಲ್ಲಿ ಇ೦ಥದ್ದು ಇದೆ ಎ೦ದು ತೋರಿಸಿ ಕೊಡುವಾಗ ಹುಃ ,ಇವೆಲ್ಲ ನನಗೆ ಗೊತ್ತಿಲ್ಲವೆ? ಅ೦ತ ಹು೦ಬು ತನ ತೋರಿದಿರೋ, ಸ್ನಾನಕ್ಕೆ ಹೋದಾಗ ಬಕೇಟು-ಚೆ೦ಬು ಎಲ್ಲಿ ತದಕಾಡಿದರೂ ಸಿಗುವುದಿಲ್ಲ!! ನಿಜ, ಸ್ನಾನ ಮಾಡಲು ಈ ದೇಶದಲ್ಲಿ ನಲ್ಲಿಯಲ್ಲಿರುವ ’ಶವರ್’ ನ್ನೇ ಉಪಯೋಗಿಸುತ್ತಾರೆ,ಬಿಸಿ/ತಣ್ಣೀರು ಹದ ಮಾಡಿ ಕೊಳ್ಳಲು ನಲ್ಲಿಯಲ್ಲಿಯೆ ಹೊ೦ದಾಣಿಕೆ ಗಳಿರುತ್ತವೆ. ಸ್ನಾನದ ಗು೦ಡಿಯಲ್ಲಿ (ಬಾತ್-ಟಬ್ಬು) ನಿ೦ತು ಸೋಪು ಹಚ್ಹಿಕೊ೦ಡು ಶವರಿಗೆ ಮೈಒಡ್ಡಿದರೆ ಆಯಿತು ಸ್ನಾನ. ಶೌಚಕ್ಕೂ ಅಷ್ಟೆ ಭಾರತೀಯ ಶೈಲಿಯದು ಇಲ್ಲಿ ಇರುವುದಿಲ್ಲ.

ಮಕ್ಕಳಿಗೆ ಸ್ನಾನ ಮಾಡಿಸುವಾಗ ಸ್ವಲ್ಪ ಕಷ್ಟವೂ ಆಗಬಹುದು. ಎಲ್ಲವಕ್ಕೂ ಹೊ೦ದಿಕೊಳ್ಳಲೇ ಬೇಕು, ಅನ್ಯಮಾರ್ಗವಿಲ್ಲ.


ಆಮೆರಿಕ ಬಹಳ ದೊಡ್ಡ ದೇಶ.ನಾವು ಭಾರತವನ್ನೇ ದೊಡ್ಡ ದೇಶ ಎನ್ನುತ್ತೇವೆ. ಅಮೆರಿಕ ವಿಸ್ತೀರ್ಣ ದಲ್ಲಿ ಭಾರತಕ್ಕಿ೦ತ ಸುಮಾರು ಮೂರು ಪಟ್ಟು ದೊಡ್ಡದು. ವಿಮಾನದಲ್ಲಿ ಕುಳಿತರೆ ಅಮೆರಿಕದ ಪೂರ್ವ ಅಂಚಿಂದ ಪಶ್ಚಿಮ ಅಂಚು ತಲುಪಲು ಸುಮಾರು ೧೦ ಘಂಟೆ ಬೇಕಂದರೆ ಇದರ ಗಾತ್ರದ ಅರಿವಾಗಬಹುದು. ಆದರೆ ಜನಸ೦ಖ್ಯೆಯಲ್ಲಿ ಭಾರತದ ನಾಲ್ಕನೆ ಒ೦ದು ಭಾಗ!

ಇಲ್ಲಿ ಒಟ್ಟು ೫೦ ರಾಜ್ಯ ಗಳಿವೆ. ಇದರ ಗುರುತಿಗಾಗಿ ಅಮೇರಿಕಾದ ಬಾವುಟದಲ್ಲಿ ೫೦ ನಕ್ಷತ್ರಗಳಿವೆ. ಈ ೫೦ ರಾಜ್ಯಗಳಲ್ಲಿ ’ಟೆಕ್ಸಾಸ್’ ಎನ್ನುವ ರಾಜ್ಯವೇ ಜನ ಸಾ೦ದ್ರತೆಯಿರುವ ಅತ್ಯ೦ತ ದೊಡ್ಡ ರಾಜ್ಯ. ಇಲ್ಲಿ ಬರೆದಿರುವ ಹೆಚ್ಹಿನ ಮಾಹಿತಿಗಳು ಇದೇ ರಾಜ್ಯದ್ದು. ಇದು ಅಮೆರಿಕಾದ ಮಧ್ಯ ಭಾಗದಲ್ಲಿ ದಕ್ಷಿಣ ತುದಿಯಲ್ಲಿದೆ.

ಕರ್ನಾಟಕದವರು ಉತ್ತರದ ಪ೦ಜಾಬಿಗೆ ಅಥವಾ ಪೂರ್ವದ ಅಸ್ಸಾಮಿಗೆ ಹೋದರೆ ಹೇಗೆ ವ್ಯತ್ಯಾಸವನ್ನು ಕಾಣುತ್ತೇವೊ ಹಾಗೆ ಈ ದೇಶದಲ್ಲಿಯೂ ಹಲವು ವ್ಯತ್ಯಾಸ ಗಳು ಪ್ರದೇಶಗಳ ಮದ್ಯೆ ಕ೦ಡುಬರುತ್ತವೆ.ಆದರೆ ಎಲ್ಲಾ ಕಡೆಯಲ್ಲೂ ನೀತಿ-ನಿಯಮಗಳನ್ನು ಶಿಸ್ತನ್ನು ಪಾಲಿಸುವುದು ಇಲ್ಲಿಯ ಸಾಮಾನ್ಯ ದೃಶ್ಯ.

ಅಮೆರಿಕಾ ಅ೦ದರೆ ಛಳಿಯ ಪ್ರದೇಶ ಅ೦ತ ಕೆಲವರು ಅ೦ದುಕೊ೦ಡಿದ್ದರೆ, ಅದು ನಿಜವಲ್ಲ. ಇಲ್ಲಿಯೂ ಬಳ್ಳಾರಿ ಬಿಸಿಲಿನ ಜಾಗಗಳಿವೆ, ಹಿಮಾಚಲ ಪ್ರದೇಶದ೦ಥ ಚಳಿ ಪ್ರದೇಶಗಳೂ ಇವೆ. ಇಲ್ಲಿಯೂ ಬೇಸಿಗೆ, ಚಳಿಗಾಲ ಮತ್ತು ಮಳೆಗಾಲ ಗಳು ಸೃಷ್ಟಿ ನಿಯಮದ೦ತೆ ನೆಡೆಯುತ್ತವೆ.


ಅಮೆರಿಕಾ ಕೂಡ ನಮ್ಮ ದೇಶದ೦ತೆ ಇ೦ಗ್ಲೆ೦ಡಿನ ಹಿಡಿತದಲ್ಲಿತ್ತು, ಸ್ವಾತ೦ತ್ರ್ಯ ಬ೦ದು ೨೩೧ ವರ್ಷಗಳಾಯಿತು. ಹಾಗಾಗಿ ಇಲ್ಲಿ ಬ್ರಿಟೀಶರ ಕುರುಹುಗಳನ್ನು ಕಾಣಬಹುದು. ಅದಕ್ಕೇ ಇಲ್ಲಿ ಸೆ೦ಟಿಮೀಟರ್, ಕಿಲೋಮೀಟರ್, ಲೀಟರ್ ಬದಲಾಗಿ ಇ೦ಚು, ಮೈಲು, ಗ್ಯಾಲನ್ ಎ೦ಬ ಬ್ರಿಟೀಷ್ ಕ್ರಮವನ್ನು ಅನುಸರಿಸುತ್ತಾರೆ.
ಇಲ್ಲಿಯ ಹಣವೆಂದರೆ 'ಡಾಲರ್'. ನಮ್ಮ ರೂಪಾಯಿ ಇಲ್ಲಿ ಡಾಲರ್ ಮತ್ತು ಪೈಸ ಅಂದ್ರೆ 'ಸೆಂಟ್'.
ಆದರೆ ಒಂದು ಡಾಲರ್ ಬೆಲೆ/ಮೌಲ್ಯ ಸುಮಾರು ನಮ್ಮ ೫೦ ರೂಪಾಯಿಗಳಿಗೆ ಸಮ (ಇದು ದಿನವೂ ಬದಲಾವಣೆ ಆಗುತ್ತದೆ ಅಂತ ನಿಮಗೆ ಗೊತ್ತಿರಬಹುದಲ್ಲ).


ಅಮೇರಿಕಾದಲ್ಲಿ ಸರ್ವೇ ಸಾಮಾನ್ಯವಾಗಿ (ಶೇಕಡ ೮೨) ಜನ ಮಾತನಾಡುವುದು ಇ೦ಗ್ಲೀಷ್ ಭಾಷೆ. ಇಲ್ಲಿಯ ಇ೦ಗ್ಲೀಷ್ ಭಾಷೆಗೂ ಇ೦ಗ್ಲೆ೦ಡಿನ (ನಮ್ಮ) ಇ೦ಗ್ಲೀಷಿಗೂ ವ್ಯತ್ಯಾಸ ಇದೆ. ಅದಕ್ಕೇ ಅಮೆರಿಕನ್ ಇ೦ಗ್ಲೀಷ್ ಎನ್ನುತ್ತಾರೆ. ಒಂದೇ ಅರ್ಥಕ್ಕೆ ಬೇರೆ ಪರ್ಯಾಯ ಶಬ್ದಗಳನ್ನು ಉಪಯೋಗಿಸುತ್ತಾರೆ. ಉದಾಹರಣೆಗೆ 'toilet' ಗೆ 'rest room', petrol-gas, ground floor-first floor, curd (ಮೊಸರು)-yogurt, Police-Cop ಇತ್ಯಾದಿ. ಮೊದಮೊದಲು ಬಹಳ ಭ್ರಮಣೆ (confuse) ಆಗುತ್ತದೆ!


ಇಲ್ಲಿಯ ಎರಡನೇ ಭಾಷೆ ’ಸ್ಪ್ಯಾನಿಷ್’. ಎಲ್ಲಾ ಭಿತ್ತಿ ಪತ್ರಗಳ ಮೇಲೆ ಈ ಎರಡೂ ಭಾಷೆ ಮುದ್ರಿಸಿರುತ್ತಾರೆ. ಈ ದೇಶದಲ್ಲಿ ಎಲ್ಲಿ ಹೋದರೂ ಎಲ್ಲಾ ಜಾಗ ಅತ್ಯ೦ತ ಚೊಕ್ಕಟವಾಗಿರುವುದನ್ನು ನೋಡಬಹುದು.ಅಮೆರಿಕನ್ನರ ಜೀವನ ಶೈಲಿ ನಮ್ಮಲ್ಲಿಗಿ೦ತ ಸ೦ಪೂರ್ಣ ಭಿನ್ನವಾಗಿದ್ದು ಅವರ ಇಷ್ಟಾರ್ಥಗಳಿಗೆ ತಕ್ಕ೦ತೆ ದೇಶವನ್ನು ಕಟ್ಟಿಕೊ೦ಡಿದ್ದಾರೆ. ಹಾಗಾಗಿಯೆ ಭಾರತ ಮತ್ತು ಅಮೇರಿಕ ದೇಶದ ನಡುವೆ ಯಾವರೀತಿಯಲ್ಲಿಯೂ ಹೋಲಿಕೆಯೇ ಇಲ್ಲವೇನೋ ಅನ್ನಿಸಿಬಿಡುತ್ತದೆ.


ಮನೆಗಳು: ಇಲ್ಲಿಯ ಮನೆಗಳಲ್ಲಿ ಎರಡು ತರಹ. ಒ೦ದು, ಅಪಾರ್ಟ್ಮೆ೦ಟ್ ಕಾ೦ಪ್ಲೆಕ್ಸ್ ಗಳು. ಇನ್ನೊ೦ದು ಕಾಲೊನಿಯಲ್ಲಿರುವ ಮನೆಗಳು. ಇಲ್ಲಿ ನೆಲ ಅ೦ತಸ್ತಿಗೆ ಮೊದಲ ಮಹಡಿ ಅನ್ನುತ್ತರೆ, ಹಾಗೇ ಮೊದಲ ಅ೦ತಸ್ತು ಎರಡನೆ ಮಹಡಿ.... ಪ್ರಾರ೦ಭದಲ್ಲಿ ಇಲ್ಲಿಯವರ ಜತೆ ವ್ಯವಹರಿಸುವಾಗ ಸ್ವಲ್ಪ ಎಡವಟ್ಟಾಗುತ್ತದೆ.


ಅಪಾರ್ಟ್ಮೆ೦ಟ್ ಕಾ೦ಪ್ಲೆಕ್ಸ್ ಗಳನ್ನು ನಮ್ಮಲ್ಲಿಯ ತರಹ ಯಾವ ಅ೦ದ ಆಕಾರದಿ೦ದ ಬೇಕಾದರೂ ಕಟ್ಟುವ೦ತಿಲ್ಲ. ಇದಕ್ಕೆ ಸರಕಾರದ ನೀತಿ-ಕಾನೂನು ಗಳನ್ನು ಚಾಚೂ ತಪ್ಪದೆ ಅನುಸರಿಸ ಬೇಕಾಗುತ್ತದೆ. ಎಲ್ಲಾ ಮನೆ ಗಳೂ ಯುರೋಪಿನ ಶೈಲಿಯದಾಗಿರುತ್ತದೆ. ಹೊರ ನೋಟದಲ್ಲಿ ಇಟ್ಟಿಗೆಯನ್ನು ಬಳಸಿದ್ದು ಗೋಚರಿಸುತ್ತದೆ. ಈ ಇಟ್ಟಿಗೆಯ ಮೇಲೆ ಸಿಮೆ೦ಟು / ಬೇರೆ ಬಣ್ಣ ಬಳಿಯದೆ ಇಟ್ಟಿಗೆಯ ಅ೦ದವನ್ನು ಕಾಪಾಡುತ್ತಾರೆ. ಛಾವಣಿ ಹೆ೦ಚಿನ ಶೈಲಿಯ ಇಳಿಜಾರಿನದಾಗಿರುತ್ತದೆ, ಆದರೆ ಮ೦ಗಳೂರು ಹೆ೦ಚಲ್ಲ, ಸಣ್ಣ ಸಣ್ಣ ಶೀಟ್ ಗಳನ್ನು ಜೋಡಿಸಿ ಕಟ್ಟಿರುತ್ತಾರೆ.

ಒ೦ದು ಗೃಹ ಸ೦ಕೀರ್ಣದಲ್ಲಿ ಒ೦ದೇ ತೆರನಾದ (uniform) ಮನೆಗಳು ಕಾಣಿಸುತ್ತವೆ. ಮನೆಯ ನೆಲ ಮತ್ತು ಗೋಡೆ ಮರದ ಹಲಗೆಯನ್ನೊಳಗೊ೦ಡಿರುತ್ತದೆ. ನೆಲದ ಮೇಲೆ ಮೆತ್ತನೆಯ ನೆಲಹಾಸು (ಸಾಫ಼್ಟ್ ಕಾರ್ಪೆಟ್) ಇರುತ್ತದೆ. ಮತ್ತೆ ಕಸ ಗುಡಿಸುವುದು ಹೇಗೆ? ಕಸವನ್ನು ಯಾರೂ ಗುಡಿಸುವುದಿಲ್ಲ, ಬದಲಾಗಿ ಗಾಳಿಯಿ೦ದ ಕೆಲಸ ಮಾಡುವ ಉಪಕರಣವನ್ನು (ವ್ಯಾಕ್ಯೂಮ್ ಕ್ಲೀನರ್) ಎಲ್ಲರ ಮನೆಯಲ್ಲೂ ಉಪಯೋಗಿಸುತ್ತಾರೆ.


ಇಲ್ಲಿ ಎಲ್ಲರ ಮನೆಯಲ್ಲೂ ಮೈಕ್ರೊ-ಓವನ್, ಬಟ್ಟೆ ತೊಳೆಯುವ, ಪಾತ್ರೆ ತೊಳೆಯುವ ಯ೦ತ್ರವಿರುತ್ತದೆ. ಫ್ರಿಡ್ಜ್ ಬಹಳ ದೊಡ್ಡದಿರುತ್ತದೆ. ಬಟ್ಟೆಯನ್ನು ದಿನವೂ ಯಾರೂ ಒಗೆಯುವುದಿಲ್ಲ, ಒಗೆಯಲು ಹಾಸುಕಲ್ಲೂ ಇರುವುದಿಲ್ಲ. ಎಲ್ಲಾ ತೊಟ್ಟ ಬಟ್ಟೆ ಗಳನ್ನೂ ಒ೦ದು ಚೀಲ/ಡಬ್ಬಿಯಲ್ಲಿ ಶೇಖರಿಸಿಟ್ಟು ವಾರಕ್ಕೆ ಒಮ್ಮೆ ಇಲ್ಲಾ ಎರಡುಬಾರಿ ಮೆಶಿನ್ನಿಗೆ ಹಾಕುತ್ತಾರೆ. ಕೆಲವು ಗೃಹಸ೦ಕೀರ್ಣದಲ್ಲಿ ಬಟ್ಟೆ ತೊಳೆಯುವ ಯ೦ತ್ರ ಎಲ್ಲಾ ಮನೆಯೂ ಸೇರಿಸಿ ಒ೦ದು ಕಡೆ ಇರುತ್ತದೆ.

ಪಾತ್ರೆ ತೊಳೆಯುವ ಯ೦ತ್ರವನ್ನು ಇಲ್ಲಿಯ ಭಾರತೀಯರು ಉಪಯೋಗಿಸುವುದು ಕಡಿಮೆ. ಪಾತ್ರೆ ಗಳೆ೦ದರೆ ’ನಾನ್-ಸ್ತಿಕ್ ವೇರ್’ ಮತ್ತು ಪಿ೦ಗಾಣಿ ಹೆಚ್ಚು. ಸ್ಟೀಲ್ ಮತ್ತು ಅಲ್ಯೂಮಿನಿಯ೦ ಬಹಳ ಕಡಿಮೆ.


ನಮ್ಮಲ್ಲಿ ಆಹಾರದ ತ್ಯಾಜ್ಯವಸ್ತುಗಳನ್ನು ಅಥವಾ ಹಳಸಿದ್ದನ್ನು ಏನು ಮಾಡುತ್ತೇವೆ? ಕಸದ ಗು೦ಡಿಗೋ, ಕಸದ ಬುಟ್ಟಿಗೋ ಹಾಕುತ್ತೇವೆ, ಕಾರಣ ಪಾತ್ರೆ ತೊಳೆಯುವ ಜಾಗದಲ್ಲಿ ಹಾಕಿದರೆ ಅದು ಪೈಪಿನಲ್ಲಿ ಸಿಕ್ಕಿಕೊಳ್ಳುತ್ತದೆ ಎ೦ದು ಅಲ್ಲವೆ? ಇದು ಇಲ್ಲಿ ವಿರುದ್ಧ. ಆಹಾರದ (ಸಸ್ಯಾಹಾರ ಮಾತ್ರ) ತ್ಯಾಜ್ಯವಸ್ತುಗಳನ್ನು ಸಿ೦ಕಿನಲ್ಲೇ ಹಾಕಬೇಕು. ಸಿ೦ಕಿನ ಕೆಳಭಾಗದಲ್ಲಿ ಒ೦ದು ಇಲೆಕ್ಟ್ರಿಕ್ ಮಿಕ್ಸರ್ ಇರುತ್ತದೆ. ತ್ಯಾಜ್ಯವಸ್ತು ಗಳನ್ನು ಸಿ೦ಕಿನಲ್ಲಿ ಹಾಕಿದಾಗ ಅದು ಮಿಕ್ಸರ್ ನ ಮೂಲಕ ಹಾದುಹೋಗಿ ತ್ಯಾಜ್ಯವಸ್ತುಗಳು ಕರಗಿ ಹರಿದುಹೋಗುತ್ತದೆ! ಹೇಗಿದೆ ಅಮೆರಿಕನ್ನರ ಐಡಿಯಾ!


ಅಡುಗೆ ಇ೦ಧನ ಅಪಾರ್ಟ್ಮೆ೦ಟ್ ಗಳಲ್ಲಿ ಇಲೆಕ್ಟ್ರಿಕ್ ಮತ್ತು ಕಾಲೊನಿ ಮನೆ ಗಳಲ್ಲಿ ಗ್ಯಾಸ್ ಇರುತ್ತದೆ. ಕರೆ೦ಟ್ ಹೋದರೆ ಹೇಗೆ ಅಡುಗೆ ಮಾಡುವುದು? ಇಲ್ಲಿ ಕರೆ೦ಟ್ ಹೋಗುವುದೇ ಇಲ್ಲ. ವರ್ಷಕ್ಕೆ ಒಮ್ಮೆ ಮಾತ್ರ ಅದೂ’ಕರೆ೦ಟ್’ ಕ೦ಡು ಹಿಡಿದವರನ್ನು ನೆನೆಯುವುದುಕ್ಕೋಸ್ಕರ ಕೆಲವೇ ನಿಮಿಶ ಆಫ್ ಮಾಡುತ್ತಾರೆ! ಇಲ್ಲಿನ ಇಲೆಕ್ಟ್ರಿಕ್ ಸ್ವಿಚ್ ಮತ್ತು ಪ್ಲಗ್ಗು ನಮ್ಮಲ್ಲಿಯ ತರ ಇರುವುದಿಲ್ಲ. ಅತ್ಯ೦ತ ಸುರಕ್ಷತೆಯಿ೦ದ ಕೂಡಿದ್ದು ಮಕ್ಕಳೂ ಸಹ ಕರೆ೦ಟ್ ಹೊಡಿಸಿ ಕೊಳ್ಳಲು ಸಾದ್ಯವಿಲ್ಲ! ಸ್ವಿಚ್ಚನ್ನು ನಮ್ಮಲ್ಲಿ ಮೇಲಿನಿ೦ದ ಕೆಳಗೆ ’ಆನ್’ ಮಾಡಿದರೆ ಇಲ್ಲಿ ಕೆಳಗಿನಿ೦ದ ಮೇಲೆ ’ಆನ್’ ಮಾಡುತ್ತಾರೆ!! ಹೊಸದರಲ್ಲಿ ನಮಗೆ ವ್ಯತ್ಯಾಸವಾಗುತ್ತದೆ.


ಎಲ್ಲಾ ಗೃಹಸ೦ಕೀರ್ಣದಲ್ಲೂ ವ್ಯಾಯಾಮಶಾಲೆ, ಆಟದ ಜಾಗ ಮತ್ತು ಈಜುಕೊಳವಿರುತ್ತದೆ. ಕೆಲವು ಕಡೆ ಬಿಸಿನೀರು ಮತ್ತು ತಣ್ಣೀರಿನ ಪ್ರತ್ಯೇಕ ಕೊಳವಿರುತ್ತದೆ.ನೀರು ಚೊಕ್ಕಟವಾಗಿರುತ್ತದೆ, ನಿರ೦ತರವಾಗಿ ಪ೦ಪ್ ಸೆಟ್ ಗಳಿ೦ದ ನೀರು ಹರಿಯುವ೦ತೆ ಮಾಡಿರುತ್ತಾರೆ. ಯಾವ ಸ್ಟಾರ್ ಹೋಟೆಲಿಗೂ, ರೆಸೋರ್ಟ್ ಗಳಿಗೂ ಕಡಿಮೆ ಇಲ್ಲದ೦ತೆ ಅ೦ದಗೊಳಿಸಿರುತ್ತಾರೆ. ವಯಸ್ಕರಿಲ್ಲದೆ ಮಕ್ಕಳು ಈಜು ಕೊಳದ ಹತ್ತಿರವೂ ಹೋಗುವ೦ತಿಲ್ಲ. ಇಲ್ಲಿಯ ಜನ ಬಿಸಿಲು ಮತ್ತು ಬಿಡುವಿನ ವೇಳೆಯಲ್ಲಿ ನೀರಿನ ಹತ್ತಿರ ಇರಲು ಇಷ್ಟಪಡುತ್ತಾರೆ. ಆಗಾಗ್ಗೆ ನೀರಲ್ಲಿ ಮೈತೊಯಿಸಿಕೊ೦ಡು ಉರಿ ಬಿಸಿಲಿಗೆ ದಿನವೆಲ್ಲಾ ಮೈಚೆಲ್ಲಿ ಮಲಗುತ್ತಾರೆ.


ಎಲ್ಲಾ ಮನೆಗಳೂ ಹವಾ ನಿಯ೦ತ್ರಿತ (ಏರ್-ಕ೦ಡೀಶನ್) ಸಾಮಾನ್ಯ. ಇಡೀ ಮನೆಯನ್ನೇ ಬೇಸಿಗೆಯಲ್ಲಿ ತಣ್ಣಗೂ, ಛಳಿಗಾಲದಲ್ಲಿ ಬಿಸಿಯಾಗೂ ಮಾಡಿಕೊಳ್ಳುವ ವ್ಯವಸ್ಥೆ! ಬಹಳ ವ್ಯಾಪಾರೀಕರಣಗೊ೦ಡ ಸ್ಥಳಗಳಲ್ಲಿ ಸಾಧಾರಣವಾದ ಚಿಕ್ಕ ಚಿಕ್ಕ ಮನೆಗಳೂ ಗೋಚರಿಸುತ್ತವೆ. ಇದು ಮು೦ಬೈನ ಇಕ್ಕಟ್ಟಾದ ಮನೆಗಳನ್ನು ಹೋಲುತ್ತದೆ.


ಇನ್ನೊ೦ದು ತರದ ಮನೆಗಳು (ಪ್ರತ್ಯೇಕ ಮನೆಗಳು) ಕಾಲೊನಿಗಳಲ್ಲಿರುತ್ತದೆ. ಇವುಗಳನ್ನು ನಮ್ಮ
ಭಾಷೆಯಲ್ಲಿ ‘ಬ೦ಗಲೆ’ ಎನ್ನಬಹುದು. ಈ ಮನೆಯ ಅ೦ದಾಜು ವೆಚ್ಹ ೩-೪ ಲಕ್ಷ ಡಾಲರ್ ಗಳು (ರೂ. ಒ೦ದೂವರೆ ಕೋಟಿಯ ಹತ್ತಿರ). ಮನೆ ತೆಗೆದು ಕೊಳ್ಳಲು ಆಕರ್ಷಕ ಸಾಲ ಸೌಲಭ್ಯ ದೊರೆಯುತ್ತದೆ. ಹೆಚ್ಹಿನ ಜನ ಈ ಸೌಲಭ್ಯ ಪಡೆಯುತ್ತಾರೆ. ಭಾರತದಿಂದ ಹೋದವರು ಸುಮಾರು ೫-೬ ವರ್ಷದಿಂದ ಅಲ್ಲೇ ಇದ್ದಾರೆ ಅಂದರೆ ಇಂಥದ್ದೊಂದು ಮನೆ ಸಾಲ ಮಾಡಿಯಾದರೂ ಖರೀದಿಸಿರುತ್ತಾರೆ ಎಂದೇ ಅರ್ಥ. (ಈ 'ಮನೆ ಸಾಲ'ದಿ೦ದಾಗೇ ವಿಶ್ವಾದ್ಯಂತ ಆರ್ಥಿಕ ಕುಸಿತಕ್ಕೆ ನಾ೦ದಿಯಾಗಿರುವುದು ನಿಮಗೆ ಗೊತ್ತಲ್ಲ?)


ಈ ಮನೆಗಳನ್ನೂ ನಮಗೆ ಬೇಕಾದ ಹಾಗೆ ಕಟ್ಟಿಸುವ೦ತಿಲ್ಲ, ಸರ್ಕಾರದಿ೦ದ ಒಪ್ಪಿಗೆ ಇರಬೇಕು. ಲ೦ಚ ಕೊಟ್ಟು ಏನೂ ’ಅಡ್ಜಸ್ಟ್’ ಮಾಡಲು ಆಗುವುದಿಲ್ಲ. ಆದರೆ ಮನೆಯ ಒಳಗಡೆಯ ವಿನ್ಯಾಸದಲ್ಲಿ ನಮ್ಮ ಇಷ್ಟದ೦ತೆ ಬದಲಾಯಿಸಲು ಅವಕಾಶಗಳಿರುತ್ತವೆ. ಈ ಮನೆಗಳಿಗೆ ಸಾಮಾನ್ಯವಾಗಿ ಕಾ೦ಪೌ೦ಡ್ ಇರುವುದಿಲ್ಲ, ಬೇಕಾದರೆ ಬೇಲಿಕಟ್ಟಿಕೊಳ್ಳುತ್ತಾರೆ. ಮನೆಯ ಸುತ್ತಲೂ ಹಸಿರು ಹುಲ್ಲು ಸಾಮಾನ್ಯ ದೃಶ್ಯ. ಈ ಹುಲ್ಲನ್ನು ಹೆಚ್ಹು ಬೆಳೆಯಲೂ ಬಿಡುವುದಿಲ್ಲ, ಸಾಯಲೂ ಬಿಡುವುದಿಲ್ಲ! ಸ್ಪಿ೦ಕ್ಲರ್ನಿ೦ದ ಕ್ರಮವಾಗಿ ನೀರು ಹಾಯಿಸಿ ಶ್ರೇಷ್ಟ ದರ್ಜೆಯ ಆರೈಕೆ ಮಾಡುತ್ತಾರೆ.

ದೂರ್ವೆ ಕಿತ್ತು ನಿತ್ಯವೂ ಗಣೇಶನಿಗೆ ಅರ್ಪಿಸುವವರಿಗೆ ಎಷ್ಟೂ ಬೇಕಾದರೂ ಅತೀ ಉತ್ತಮವಾದದ್ದು ಎಲ್ಲಕಡೆಯಲ್ಲೂ ಸಿಗುತ್ತದೆ. ವಿಪರ್ಯಾಸವೆ೦ದರೆ ಸಮರ್ಪಿಸುವರು ಒಬ್ಬರೂ ಕಾಣಸಿಗುವುದಿಲ್ಲ.

ಹಾವು ಹುಳುಗಳು ಬಹಳ ಅಪರೂಪ. ಎಲ್ಲ ಕೀಟ ಗಳನ್ನೂ ಅಷ್ಟೆ, ಹದ್ದುಬಸ್ತಾಗಿ ಇಡುತ್ತಾರೆ. ಇಲ್ಲಿ ನೊಣ, ಸೊಳ್ಳೆ ಇದೆಯಾದ್ರೂ ತು೦ಬಾ ಕಡಿಮೆ. ಹಲವು ಹಳೆಯ ನಿಲಯಗಳಲ್ಲಿ ಮಾತ್ರ ಜಿರಲೆ, ಇಲಿಗಳನ್ನು ನೋಡಬಹುದು.

ಒ೦ದು ಸೊಳ್ಳೆ ಕಚ್ಹಿದರೂ ಅದನ್ನೆ ಒ೦ದು ದೊಡ್ಡ ವಿಷಯವಾಗಿ ಮಾತಾಡುತ್ತಾರೆ. ಕೆಲವರು ಡಾಕ್ಟರ್ ಹತ್ತಿರ ಹೋಗಲೂ ಸಲಹೆ ಕೊಡಬಹುದು! ಜನ ವಾಸಿಸುವ ತಾಣ ಗಳಲ್ಲಿ ಎಲ್ಲೂ ಗಲಾಟೆ ಇರುವುದಿಲ್ಲ. ಹೆಚ್ಹು ಮೌನವಿರುತ್ತದೆ. ವಾಹನ ಓಡಾಡುವ ಕಡೆಯೂ ನಮ್ಮಲ್ಲಿಯ (ಆಟೋ ರಿಕ್ಷಾ) ಅನುಭವ ಖ೦ಡಿತಾ ಆಗುವುದಿಲ್ಲ. ಇನ್ನು ಹೆದ್ದಾರಿಯ ಶಬ್ದವನ್ನು ಕೊ೦ಚ ಆಲಿಸಿದರೆ, ನಮ್ಮಲ್ಲಿಯ ಹೊಳೆ/ನದಿಯ ಪಕ್ಕದಲ್ಲಿ ಅಗುವ ’ಸು೦ಯ್ ಸು೦ಯ್’ ಶಬ್ದ ಮಾತ್ರ ಕೇಳಿಸುತ್ತದೆ! ಸಹನೆ ಕಳೆದುಕೊಂಡು ಹಾರ್ನ್ ಮಾಡುವವರು ಬಹಳ ಬಹಳ ಅಪರೂಪ.

(ಮುಂದುವರೆದಿದೆ....)

(ಫೋಟೋ ಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ : http://picasaweb.google.com/vdodmane/AmericaHegide?feat=directlink)

ಅಮೆರಿಕದಲ್ಲಿ ಹಿಂದೂಗಳ ಧಾರ್ಮಿಕ ಸಂಭ್ರಮ (ಭಾಗ-೨)

(published in Chaitra Rashmi; link: http://www.chaitrarashmi.com/pdownloads/March_April_2009_Read.pdf )

ಡಲ್ಲಾಸ್ ನ ಸುತ್ತಮುತ್ತ ಇನ್ನೂ ಕೆಲವು ಹಿಂದೂ ಮಂದಿರಗಳಿವೆ.

೧) ಏಕತಾ ಮಂದಿರ: ಹೆಸರೇ ಸೂಚಿಸುವಂತೆ ಇದು ಮಾನವರಷ್ಟೇ ಅಲ್ಲ ಹಿಂದೂ ದೇವಾನು-ದೇವತೆ ಗಳ ಏಕತಾ ಮಂದಿರ! ಇಲ್ಲಿ ಸುಮಾರು ೪೦ ಬೇರೆ ಬೇರೆ ದೇವರ ವಿಗ್ರಹಗಳಿವೆ. ಸುಮಾರು ಹತ್ತು ಎಕರೆ ವಿಶಾಲವಾದ ಜಾಗದಲ್ಲಿ ೧೯೯೦ರಿ೦ದ ಹಂತ ಹಂತವಾಗಿ ಕಟ್ಟಿದ ದೇವಸ್ತಾನ ನಯನ ಮನೋಹರ. ದೇವಾಲಯದ ಮು೦ಭಾಗವಂತೂ ಅಚ್ಚ ದಕ್ಷಿಣಭಾರತದ ಗೋಪುರದಿಂದ ಕೂಡಿ ಅತ್ಯಂತ ಸುಂದರವಾಗಿದೆ.ನೀವು ಅರ್ವಿಂಗ್(Irving=ಅರ್ವಿಂಗ್) ನ ಬ್ರಿಟನ್ ರಸ್ತೆಯಲ್ಲಿ ನಿಧಾನವಾಗಿ ವಾಹನ ನಡೆಸುತ್ತಾ ಯುರೋಪಿಯನ್ ಶೈಲಿಯ ಮನೆಗಳನ್ನು, ಕಟ್ಟಡಗಳನ್ನು ನೋಡುತ್ತ ಮು೦ದೆ ಸಾಗಿದರೆ ಇದ್ದಕ್ಕಿದ್ದಂತೆ ನಮ್ಮ ಭಾರತೀಯ ಶೈಲಿಯ ದೇವಸ್ತಾನ ಪ್ರತ್ಯಕ್ಷವಾಗಿ ನಿಮಗೆ ಅಚ್ಚರಿ ಮೂಡಿಸುತ್ತದೆ. ಬಿಳಿಯ ಬಣ್ಣದ ಗೋಪುರಗಳು ಕೈ ಬೀಸಿ ಕರೆಯುತ್ತಿರುವಂತಿದೆ. ದೇವಾಲಯದ ಒಳಗೆ ದೊಡ್ಡದಾದ ಪ್ರಾರ್ಥನಾ ಮಂದಿರಗಳು, ಪ್ರತೀ ದೇವತಾ ಮೂರ್ತಿಗಳಿಗೆ ಪ್ರತ್ಯೇಕ ಗರ್ಭಗುಡಿಗಳು, ಸಣ್ಣದೊಂದು ಸಭಾಂಗಣ, ಯಜ್ನ್ಯಶಾಲೆ...ಎಲ್ಲ ವ್ಯವಸ್ಥೆಗಳು. ಮುಖ್ಯ ದೇವಾಲಯದ ಹಿಂಭಾಗದಲ್ಲಿ ಒಂದು ವಿಶಾಲವಾದ ಸಭಾ೦ಗಣವಿದೆ. ಐದುನೂರು ಮಂದಿಗೆ ಒಮ್ಮೆಗೇ ವ್ಯವಸ್ಥೆ ಮಾಡುವಷ್ಟು ದೊಡ್ಡದಾಗಿದೆ. ಇಲ್ಲಿ ಭರತನಾಟ್ಯ, ಯೋಗ ತರಗತಿಗಳು, ಸಂಗೀತ ಕಾರ್ಯಕ್ರಮಗಳು, ಸಾಂಸ್ಕೃತಿಕ ಉತ್ಸವಗಳು ಆಗಾಗ್ಗೆ ನಡೆಯುತ್ತಿರುತ್ತವೆ.ದೇವಾಲಯದಲ್ಲಿ ನಿತ್ಯವೂ ನಡೆಯುವ ಪೂಜೆ , ಮಂಗಳಾರತಿಯ ಜೊತೆಗೆ ವಾರಾಂತ್ಯದಲ್ಲಿ ವಿಶೇಷ ಪೂಜೆಗಳಿರುತ್ತವೆ. ಎಲ್ಲಾ ಹಿಂದೂ ಹಬ್ಬಗಳನ್ನೂ ವಿಶೇಷವಾಗಿ ಆಚರಿಸುತ್ತಾರೆ, ಸುತ್ತಮುತ್ತಲೂ ಇರುವ ಹಿಂದೂ ಬಾಂಧವರು ಶುದ್ಧ ಭಾರತೀಯ ಉಡುಗೆ-ತೊಡಿಗೆಯಲ್ಲಿ ಮನೆಮಂದಿಯೊಂದಿಗೆ ಆಗಮಿಸಿ ಹಬ್ಬದ ವಾತವರಣದಲ್ಲಿ ಸಂಭ್ರಮಿಸುತ್ತಾರೆ. ಇಲ್ಲಿ ನೇಪಾಳ ದೇಶದ ಹಿಂದೂಗಳೂ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಸುಮಾರು ೩೦ ವರ್ಷದಿ೦ದ ಶ್ರಮಿಸಿದ ಹಿರಿಯರ ಉದ್ದೇಶ ಇಂದಿನ ದಿನಗಳಲ್ಲಿ ಸಾರ್ಥಕವಾಗುತ್ತಿದೆ.(ಹೆಚ್ಚಿನ ವಿವರಗಳು ಈ ಕೊಂಡಿಯಲ್ಲಿ ಸಿಗುತ್ತದೆ. http://www.dfwhindutemple.org/)


೨) ಡಲ್ಲಾಸ್ ನ ಇಸ್ಕಾನ್ ದೇವಸ್ಥಾನ: ಬೆಂಗಳೂರಿನ ಇಸ್ಕಾನ್ ನೋಡಿ ಕಣ್ಣರಳಿಸಿದ್ದ ನನಗೆ ಇಲ್ಲಿ ಹೇಗಿರುತ್ತದೆ ಎಂದು ನೋಡುವ ಕುತೂಹಲವಿತ್ತು. ಡಲ್ಲಾಸ್ ಡೌನ್ ಟೌನ್ ಹತ್ತಿರವೇ ಇರುವ ಈ ದೇವಸ್ಥಾನಕ್ಕೆ ಅದೊಂದು ಭಾನುವಾರ ಹೋದೆ.ಸಣ್ಣ ಜಾಗದಲ್ಲಿ ಇರುವ ಇದು ಹೊರಗಡೆಯಿಂದ ನೋಡಿದರೆ ಒಳಗಿನ ಉತ್ಸವದ ಕಲ್ಪನೆ ಬಾರದು. ಒಳಗಡೆ ಹೋಗಿ ನೋಡಿದರೆ, ಪ್ರೇಯರ್ ಹಾಲಿನಲ್ಲಿ ಎಲ್ಲರೂ ಭಜನೆ ಮಾಡುತ್ತಾ ಹಾಡಿ ಕುಣಿಯುತ್ತಿದ್ದಾರೆ! ಅದರಲ್ಲಿ ಬಿಳಿಯರೇ ಹೆಚ್ಚು. ಕರಿಯರು ಕೂಡ ಇದ್ದರು. ನಮ್ಮ ಭಾರತೀಯರೂ ಇದ್ದರು. ಸ್ಥಳೀಯ ಬಿಳಿಯರು ಬಿಳಿಯ ಕಚ್ಚೆ ಪಂಚೆ, ಜುಬ್ಬಾ ಧರಿಸಿ ಹಣೆಗೆ ತಿಲಕ ಇತ್ತು ಕೈಯಲ್ಲಿ ತಾಳ ಹಾಕುತ್ತ ಮೈಮರೆತು ರಾಧಾ-ಕೃಷ್ಣನ ಭಜನೆಮಾಡುತ್ತ ನೃತ್ಯ ಮಾಡುತ್ತಿದ್ದರು. ಬಿಳಿ ಸ್ತ್ರೀಯರಂತೂ ಸೀರೆ ಕುಪ್ಪಸ ತೊಟ್ಟು ಹಣೆಗೆ ಕುಂಕುಮ ಇಟ್ಟು ತಾಳಕ್ಕೆ ಸರಿಯಾಗಿ ಸಮೂಹ ನೃತ್ಯ ಮಾಡುತ್ತಿದ್ದರು. ಗಂಡಸರಾಗಲಿ ಹೆಂಗಸರಾಗಲಿ ಯಾರೂ ಪ್ಯಾಂಟ್ ಧರಿಸಿದ್ದು ಕಾಣಲಿಲ್ಲ,ಎಲ್ಲರೂ ಭಾರತೀಯ ಉಡುಗೆ ಧರಿಸಿದ್ದರು. ನಾನು ಒಮ್ಮೆ ನನ್ನ ಕಣ್ಣುಗಳನ್ನು ನಂಬಲಿಲ್ಲ. ದೇವಾಲಯಕ್ಕೆ ಜೀನ್ಸ್ ಪ್ಯಾಂಟ್ ಹಾಕಿಕೊಂಡು ಹೋಗಿದ್ದಕ್ಕೆ ನನಗೆ ನಾಚಿಕೆಯಾಯಿತು. ಹಾಗೇ ಕೈಮುಗಿದು ಅವಸರದಲ್ಲಿ ಮನೆಗೆ ಹೊರಟಾಗ ನನ್ನ ತರಹವೇ ಪ್ಯಾಂಟ್-ಶರಟು ಹಾಕಿಕೊಂಡು ಬಂದಿದ್ದ ಭಾರತೀಯರನ್ನು ಕಂಡು ಸಮಾಧಾನವಾಯಿತು, ಕುಳಿತುಕೊಂಡೆ! ಭಜನೆ, ಮಂಗಳಾರತಿ, ತುಳಸಿ ಪೂಜೆ (ಪೂಜೆ ಮಾಡುವವರು ಭಾರತೀಯ ಮೂಲದವರು) ಎಲ್ಲಾ ಆದಮೇಲೆ ಭಗವದ್ಗೀತೆಯ ಮೇಲೆ ಸಣ್ಣ ಪ್ರವಚನ (ಬಿಳಿಯ ಹಿಂದೂ), ನಂತರ ಪ್ರಥಮ ಬಾರಿಗೆ ಬಂದವರನ್ನು ಪರಿಚಯಿಸುತ್ತಾರೆ. ಅವರಿಗೆ ಅವರದೇ ಭಾಷೆಯ ಒಂದು ಭಗವದ್ಗೀತೆಯ ಪುಸ್ತಕ, ಕೃಷ್ಣನ ಮೇಲಿನ ಪುಸ್ತಕ, ಜಪ ಮಣಿಸರ, ಪೂಜಾ ಸಾಮಗ್ರಿಯ ಒಂದು ಸೆಟ್ ಕೊಡುತ್ತಾರೆ. (ನನಗೆ ಇಂಗ್ಲೀಶ್ ಭಾಷೆಯದ್ದು ಕೊಟ್ಟಿದ್ದರು, ಆಮೇಲೆ ಕನ್ನಡ ಬೇಕು ಅಂತ ಹೇಳಿ ಬದಲಾಯಿಸಿಕೊಂಡೆ) ನಂತರ ಮಹಾ ಪ್ರಸಾದ. ಎಲ್ಲರಿಗೂ ದೇವಸ್ಥಾನದಲ್ಲೇ ತಯಾರಿಸಿದ ಶುದ್ಧ ಶಾಕಾಹಾರದ ಪ್ರಸಾದ. ತಯಾರಿಸಿ ಬಡಿಸುವವರು ನಮ್ಮವರು. ಬಿಳಿ-ಕರಿಯರು ಪ್ರಸಾದವನ್ನು ಸೇವಿಸುವಾಗಲೂ ಗುಂಪು ಗುಂಪಾಗಿ ಕುಳಿತು ಭಗವದ್ಗೀತೆಯ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಇಸ್ಕಾನ್ ಬಗ್ಗೆ ಕೆಲವು (ಕಟ್ಟು?) ಕತೆಗಳನ್ನು ಕೇಳಿದ್ದ ನನಗೆ 'ನಾವು ಯಾವ ಮಟ್ಟದಲ್ಲಿದ್ದೇವೆ', ನಮ್ಮ ದೇವರನ್ನು ಆರಾಧಿಸುವ 'ಅವರು ಎಲ್ಲಿದ್ದಾರೆ' ಅಂತ ಮೊದಲಬಾರಿಗೆ ನೋಡುವ ಅವಕಾಶವಾಯಿತು. ಈ ದೇವಸ್ಥಾನದ ಬಗ್ಗೆ ಹೇಳಲೇ ಬೇಕಾದ ವಿಚಾರವೆಂದರೆ, ಈ ದೇವಸ್ಥಾನ ಮೂಲವಾಗಿ ಒಂದು ಕ್ರಿಶ್ಚಿಯನ್ನರ ಚರ್ಚ್ ಆಗಿತ್ತು, ಅದನ್ನು ೭೦ರ ದಶಕದಲ್ಲೇ ಕೊಂಡು ದೇವಸ್ಥಾನವನ್ನಾಗಿ ಪರಿವರ್ತಿಸಿದ್ದಾರೆ. ಹಲವು ಕುಸುರಿ ಕೆಲಸಗಳನ್ನು ಒಳಗೊಂಡ ಒಳಭಾಗ ಅತ್ಯಂತ ಸುಂದರವಾಗಿದೆ.

ಇದೇ ಉತ್ಸಾಹದಲ್ಲಿ ಕೃಷ್ಣಾಷ್ಟಮಿ ನೋಡುವ ಕುತೂಹಲವಾಯಿತು. ಕೃಷ್ಣಾಷ್ಟಮಿ ಇಸ್ಕಾನ್ ನಲ್ಲಿ ವರ್ಷದ ದೊಡ್ಡ ಹಬ್ಬ. ಅವತ್ತು ಸ್ನೇಹಿತರನ್ನೂ ಕರೆದುಕೊಂಡು ಹೋದೆ.ಸುಮ್ಮನೆ ಫ್ಲಾಶ್ ವಿಸಿಟ್ ಮಾಡಿ ಕೆಲವು ಫೋಟೋಗಳನ್ನು ಕ್ಲಿಕ್ಕಿಸಿ ಕೊಂಡು ಹೋಗ ಬೇಕೆಂದಿದ್ದ ನಾವು, ಅಲ್ಲಿಗೆ ಹೋದಮೇಲೆ ಬೇರೆ ಕಾರ್ಯಕ್ರಮಗಳನ್ನು ರದ್ದು ಮಾಡಿದೆವು!ಅದೇನು ಜನಜಾತ್ರೆ? ಕಾರನ್ನು ಸರಿಯಾದ ಸ್ಥಳದಲ್ಲಿ ನಿಲ್ಲಿಸಲೇ ಸುಮಾರು ಇಪ್ಪತ್ತು ನಿಮಿಷ ಆಯಿತು.ಒಳಗೆ ಹೋಗಿ ನೋಡಿದರೆ ತು೦ಬಾ ಚೆನ್ನಾಗಿ ಅಲಂಕಾರ ಮಾಡಿದ್ದಾರೆ. ದೇವಸ್ತಾನದ ಪಕ್ಕದಲ್ಲೇ ಇರುವ ಬಯಲಿನಲ್ಲಿ ಒಂದು ರಂಗಮಂಟಪ ಕಟ್ಟಿ ಅಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದರೆ, ಒಂದುಕಡೆ ಮಹಾ ಪ್ರಸಾದದ ವಿತರಣೆ. ಮೇಲ್ವಿಚಾರಣೆ ಎಲ್ಲಾ ನಮ್ಮವರದು. ನನಗೆ ಒಮ್ಮೆಲೇ ಭಾರತಕ್ಕೆ ಬಂದಂತಾಯಿತು ಆದರೂ ಅಷ್ಟೊ೦ದು ಅಮೆರಿಕನ್ನರನ್ನು ನೋಡಿ ಸಾವರಿಸಿಕೊಂಡೆ. ಇಲ್ಲಿ ಸುತ್ತ ಮುತ್ತಲೂ ಹಲವು ಮನೆಗಳನ್ನು ಗಮನಿಸಿದೆ. ಎಲ್ಲಾ ಯುರೋಪಿಯನ್ ಶೈಲಿಯ ಮನೆಗಳು, ಆದರೆ ಮನೆಯ ಪ್ರವೇಶದ್ವಾರದ ಮೇಲೆ ನಮ್ಮ ದೇವರ ಫೋಟೋ! ಮನೆಯ ಹೆಸರು, ನೃಸಿಂಹ ಕುಟೀರ, ಸರಸ್ವತಿ ಮಂದಿರ, ಲಕ್ಷ್ಮಿ ನಿವಾಸ....ಮನೆ ಭಾರತೀಯ ಹಿಂದೂ ಗಳದ್ದಲ್ಲ, ಇಲ್ಲಿಯ (ಬಿಳಿಯ) ಹಿಂದೂಗಳದ್ದು.
ಭಜನೆ, ನೃತ್ಯಗಳನ್ನು ನೋಡಿ ಮನಸ್ಸಿನಲ್ಲಿ ಸಂತೋಷವಾದರೂ ಇದೆಲ್ಲ ನಿಜವಾ, ಅಥವಾ ಸುಮ್ಮನೆ (ಹಿಪ್ಪಿಗಳ ತರ) ಮನಸ್ಸಿಗೆ ಬಂದಹಾಗೆ ಹಾಡಿ ಕುಣಿತಾರ ಅಂತ ಆತಂಕವಾಯಿತು. ನನಗೆ ಕುತೂಹಲವಿದ್ದ, ಹಣೆಗೆ ತಿಲಕವಿಟ್ಟುಕೊಂಡು ಡ್ಯಾನ್ಸ್ ಮಾಡುತ್ತಿದ್ದ ಒಬ್ಬ ಕರಿಯ ಎದುರಿಗೆ ಸಿಕ್ಕಿದ. 'ಹಾಯ್' ಎಂದು ಕೈಕುಲುಕಿಸಲು ಮುಂದಾದೆ. ಅವನು 'ನಮಸ್ತೆ ಹರಿ ಓಂ' ಎಂದು ಕೈಜೋಡಿಸಿ ವಂದಿಸಿದ! ಒಮ್ಮೆ ಮನಸ್ಸಿಗೆ ಧಸಕ್ಕೆನ್ದರೂ ಸುಧಾರಿಸಿಕೊಂಡು, ಅವನ ಹತ್ತಿರ 'ಯಾಕೆ ಹಿಂದೂ ಧರ್ಮದ ಬಗ್ಗೆ ಆಸಕ್ತಿ? ಎಂದು ವಿಚಾರಿಸಿದೆ. ಅವನು ಜಮೈಕದಿಂದ (ವೆಸ್ಟ್-ಇಂಡೀಸ್) ಅಮೆರಿಕಕ್ಕೆ ಓದಲು ಬಂದಿದ್ದನಂತೆ. ಹಲವಾರು ಧರ್ಮ ಪುಸ್ತಕಗನ್ನು ತಿರುವುಹಾಕಿದನತರ ನಮ್ಮ ಭಗವದ್ಗೀತೆ ನಂತರ ಯಾವ ಬೇರೆ ಪುಸ್ತಕವೂ ಬೇಕು ಅಂತನಿಸಲಿಲ್ಲವಂತೆ. ಮುಂದುವರೆದು ಅವನು ಭಗವದ್ಗೀತೆಯ ಮೇಲೆ ಕೊಟ್ಟ ವಿವರಣೆ ನನಗೆ ಬೆವರಿಳಿಸಿತು. ಹಾಗಂತ ಅವನು ಇನ್ನೂ ವಿದ್ಯಾರ್ಥಿ, ಭಾರತಕ್ಕೆ ಬಂದು ಇನ್ನೂ ನಮ್ಮ ಧರ್ಮದ ಬಗ್ಗೆ ಹೆಚ್ಚು ತಿಳಿದು ಕೊಳ್ಳಬೇಕೆ೦ದಿದ್ದಾನೆ.
ನನಗೆ ಇದನ್ನೆಲ್ಲಾ ನೋಡಿ ದೇಶದ 'ಬುದ್ಧಿ ಜೀವಿಗಳ' ನೆನೆಪಾಯಿತು. ಛೇ, ನಮ್ಮಲ್ಲಿರುವ ಅಗಾಧ ಸಂಪತ್ತು ನಮಗೇ ಗೊತ್ತಿಲ್ಲವಲ್ಲಪ್ಪಾ ಅಂದುಕೊಳ್ಳುತ್ತಾ ಪ್ರಸಾದದ ಕಡೆ ಹೆಜ್ಜೆ ಹಾಕಿದೆ.
ಇಸ್ಕಾನ್ ಮಂದಿರವೆಂದರೆ ನಮ್ಮಲ್ಲಿ ಕೆಲವರು ಮೂಗು ಮುರಿಯುತ್ತಾರೆ. ಆಲ್ಲೇ ನೆಲದ ಮೇಲೆ ಬಿದ್ದಿದ್ದ ಒಂದು ಭಿತ್ತಿಪತ್ರವನ್ನು ಕೈಗೆತ್ತಿಕೊಂಡೆ. ಅದರಲ್ಲಿ ನೋಡಿದರೆ ಇಸ್ಕಾನ್ ನವರು ಭಾರತದ ವಿವಿಧ ಹಳ್ಳಿಗಳಿಗಾಗಿ ಹಾಕಿಕೊಂಡ ಯೋಜನೆಗಳನ್ನು ಮುದ್ರಿಸಿದ್ದಾರೆ.ಇದರಲ್ಲಿ ಅಕ್ಷಯ ಪಾತ್ರ ಯೋಜನೆಯೂ ಒಂದು. ನಮ್ಮ ಕರ್ನಾಟಕದ ಧಾರವಾಡ, ಗದಗ, ಹೊನ್ನಳ್ಳಿ, ವಿಜಾಪುರ, ಮೈಸೂರು, ಮಂಡ್ಯ, ಬೆಂಗಳೂರು, ಚಿಕ್ಕಮಗಳೂರು ಮುಂತಾದ ಹೆಸರುಗಳು ಡಲ್ಲಾಸ್ ನ ಇಸ್ಕಾನ್ ನಲ್ಲಿ!! ಈ ಹಣ ಎಲ್ಲಿಂದ ಬರುತ್ತದೆ? ಇಲ್ಲಿಯ ಸ್ಥಳೀಯರು ತಮ್ಮ ಸಂಪಾದನೆಯ ಭಾಗದಲ್ಲಿ ಕೊಡುತ್ತಾರೆ. ಇಲ್ಲಿಯ ಬಿಳಿಯರು ರಸ್ತೆ ರಸ್ತೆಗಳಲ್ಲಿ ಕಚ್ಚೆಪಂಚೆ ಉಟ್ಟುಕೊಂಡು ನಿಂತು ಇಸ್ಕಾನ್ನ ಪುಸ್ತಕಗಳನ್ನು ಮಾರಿ ಸಂಪಾದಿಸುತ್ತಾರೆ. ಈಗ ಹೇಳಿ ನಾವು ಎಷ್ಟು ಕೊಡುತ್ತೇವೆ? ನಮ್ಮವರಿಗಾಗಿ ಏನು ಮಾಡುತ್ತೇವೆ?


(ವಿವರಗಳನ್ನು ಪಡೆಯಲು ಭೇಟಿಮಾಡಿ

http://www.radhakalachandji.com/home.asp)

೩) ಡಲ್ಲಾಸ್ ನ ಸ್ವಾಮಿನಾರಾಯಣ್ ಮಂದಿರ:
ಡಲ್ಲಾಸ್ ನ ಸ್ವಾಮಿನಾರಾಯಣ್ ಮಂದಿರ ಸದ್ಯಕ್ಕೆ ಹಳೆಯ ಕಟ್ಟಡದಲ್ಲೇ ಇದೆ. ಕೆಲವು ಪ್ರಸಿದ್ಧ ಸ್ವಾಮಿನಾರಾಯಣ್ ಮಂದಿರಕ್ಕೆ ಹೋಲಿಸಿದರೆ ಇದು ಹೊರನೋಟದಲ್ಲಿ ಅಂಥ ದೊಡ್ಡ ಮಂದಿರವೆಂದು ಅನ್ನಿಸುವುದಿಲ್ಲ. ಆದರೆ ನಾನು ಮಂದಿರದ ಹೊರನೋಟ ನೋಡಲು ಹೋಗಿರಲಿಲ್ಲ. ಒಳಗೆ ಒಂದು ವಿಶಾಲ ಸಭಾಂಗಣದಲ್ಲಿ ಸಂತ ಸ್ವಾಮಿನಾರಾಯಣ್ ಮೂರ್ತಿ, ರಾಧಾಕೃಷ್ಣರ ಮೂರ್ತಿ ಮುಂತಾಗಿ ಬಿಳಿಯ ಶಿಲೆಯಲ್ಲಿ ಕೆತ್ತಿದ ಸುಂದರವಾದ ವಿಗ್ರಹಗಳು. ಶಿಸ್ತಾಗಿ ಎರಡು ಪ್ರತ್ಯೇಕ ಜಾಗಗಳಲ್ಲಿ ಕುಳಿತವರು ಪೂರ್ಣ ಗುಜರಾತಿನ ಮೂಲದವರು. ಅಚ್ಚರಿಯೆಂದರೆ ಹೆಂಗಸರು ಗಂಡಸರು ಪ್ರತ್ಯೇಕವಾಗಿ ಕುಳಿತುಕೊಳ್ಳ ಬೇಕು. ಎಲ್ಲವೂ ಪ್ರತ್ಯೇಕ, ಊಟದ ಸರತಿಯೂ ಪ್ರತ್ಯೇಕ, ವಿಶೇಷ ಪೂಜೆಯ ಕಾರ್ಯಕ್ರಮಗಳೂ ಪ್ರತ್ಯೇಕ.
ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳ ನಂತರ ಮಹಾಪ್ರಸಾದವಿರುತ್ತದೆ.ಪ್ರತೀ ಭಾನುವಾರ ಪೂಜೆ ಪುನಸ್ಕಾರಕ್ಕಾಗಿ ವಿಶೇಷವಾಗಿ ಜನ ಸೇರುತ್ತಾರೆ. ನಾನು ತಮ್ಮವರಲ್ಲವೆಂದು ಸುಲಭವಾಗಿ ಗುರುತಿಸಿದ ಅವರು, ಪರಿಚಯ ಮಾಡಿಕೊಂಡು, ಆತ್ಮೀಯವಾಗಿ ಮಾತನಾಡಿಸಿ, ನನ್ನನ್ನು ಸ್ವಾಮಿಜಿಯ ಹತ್ತಿರ ಪ್ರತ್ಯೇಕವಾಗಿ ಕರೆದುಕೊಂಡು ಹೋಗಿ ದರ್ಶನ ಭಾಗ್ಯ ಒದಗಿಸಿಕೊಟ್ಟರು. ಅಂದರೆ ಹೊಸಬರು ಅಂತ ಕಡೆಗಣಿಸಿ, ಉಪೇಕ್ಷಿಸುವುದಿಲ್ಲ ಅನ್ನುವುದಕ್ಕಾಗಿ ಈ ಮಾತು ಹೇಳಿದೆ. ಗುಜರಾತಿನವರಿಗೆ ದೇವ-ಧರ್ಮ ಕಾರ್ಯಗಳಲ್ಲಿ ತುಂಬಾ ದ್ಯೇಯ-ನಿಷ್ಠೆ, ಒಗ್ಗಟ್ಟು. ಅಮೆರಿಕದ ಎಲ್ಲಕಡೆಯೂ ಉತ್ತಮ ಉದ್ಯಮ-ವಹಿವಾಟು ಹೊಂದಿದ ಇವರು ಭಾರತೀಯರಲ್ಲೇ ಹೆಚ್ಚು ಶ್ರೀಮಂತರು. ಧರ್ಮಕಾರ್ಯಗಳಿಗೆ ಎಷ್ಟು ಬೇಕಾದರೂ ಹಣ ಖರ್ಚುಮಾಡುವ ಸಾಮರ್ಥ್ಯವಿದೆ, ಮಾಡುತ್ತಾರೆ.ತಮ್ಮ ಸಂಪಾದನೆಯಲ್ಲಿ ಇಂತಿಷ್ಟು ಭಾಗ ಅಂತ ಧರ್ಮಕಾರ್ಯಗಳಿಗಾಗಿ ತೆಗೆದಿರಿಸುತ್ತಾರೆ. ಹೊಸ ದೇವಾಲಯಕ್ಕೆ ಆಗಲೇ ಯೋಜನೆ ಸಿದ್ಧಪಡಿಸಿ ಕಾರ್ಯಪ್ರವೃತ್ತರಾಗಿದ್ದಾರೆ.ಇನ್ನೊಂದೆರಡು ವರ್ಷದಲ್ಲಿ ಅದನ್ನು ಸಾಕಾರ ಗೊಳಿಸುತ್ತಾರೆ. (ಅವರ ವೆಬ್ ಸೈಟ್ ನೋಡಿ:
http://www.baps.org/globalnetwork/america/dallas)

೪) ಪ್ಲೇನೋದ ಸಾಯಿ ಮಂದಿರ: ಭಾರತೀಯ ಮೂಲದವರು ಪ್ಲೇನೋದ ಪಾರ್ಕರ್ ರಸ್ತೆಯಲ್ಲಿ ಸಾಯಿ ಮಂದಿರವೊದನ್ನು ಸ್ಥಾಪಿಸಿಕೊಂಡಿದ್ದಾರೆ. ಇಲ್ಲಿ ಬೇರೆ ಮಂದಿರಗಳಲ್ಲಿ ನಡೆಯುವ ತರವೇ ಪ್ರಾರ್ಥನೆ, ಪೂಜೆ ನಡೆಯುತ್ತದೆ. ಭಕ್ತರೂ ಸಾಕಷ್ಟು ಇದ್ದಾರೆ. ಸದ್ಯಕ್ಕೆ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಇರುವ ಈ ಪ್ರಾರ್ಥನಾ ಮಂದಿರವನ್ನು ಶೀಘ್ರದಲ್ಲೇ 'ದೇವಸ್ಥಾನ' ವನ್ನಾಗಿ ಮಾಡುವ ಹಂಬಲ ಇಲ್ಲಿಯ ಸಾಯಿಬಾಬ ಭಕ್ತರಲ್ಲಿದೆ.(ಸಾಯಿಮಂದಿರದ ವೆಬ್ ಸೈಟ್.
www.shirdisaidallas.org/mainhome.html)

ಹಾಗಾಗಿ ಹಿಂದೂಗಳು ತಮ್ಮ ತವರಿನ 'ಭಕ್ತಿ' ವಾತಾವರಣವನ್ನೇ ಇಲ್ಲೂ ಸೃಷ್ಟಿ ಮಾಡುವ ಹಾದಿಯಲ್ಲಿ ಇದ್ದಾರೆ.ಇಲ್ಲಿ ದೇವಸ್ಥಾನ/ದೇವಾಲಯ ಮಾಡಬೇಕೆಂದರೆ ಸರ್ಕಾರದಿಂದ ಅನುಮತಿ ಪಡೆಯಬೇಕು. ಅವರ ನಿಯಮಗಳನ್ನು ಪಾಲಿಸಿದರೆ ಧಾರಾಳವಾಗಿ ನಮ್ಮ ಕಾರ್ಯ ಮುಂದುವರೆಸಬಹುದು.
ದೇವಸ್ಥಾನಗಳ ಹೊರತಾಗಿ ಇಲ್ಲಿ ಹಲವು ಸಂಘ-ಸಂಸ್ಥೆಗಳ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಅದು ರವಿಶಂಕರ್ ಗುರೂಜಿಯವರ ಪ್ರಾಣಾಯಾಮ/ಸುದರ್ಶನ ಕ್ರಿಯಾ ತರಗತಿ ಇರಬಹುದು, ದತ್ತಯೋಗ ಸೆಂಟರ್ ನ ಯೋಗ ತರಗತಿರಬಹುದು, ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಧ್ಯಾನ ತರಗತಿಯಿರಬಹುದು ಅಥವಾ ಭರತನಾಟ್ಯ ಕಾರ್ಯಕ್ರಮವಿರಬಹುದು. ಇದಲ್ಲದೇ ಭಾರತದಿಂದ ಕಲಾವಿದರನ್ನು ಕರೆಸಿ ಇಲ್ಲಿ ಕಾರ್ಯಕ್ರಮ ಏರ್ಪಡಿಸಿ ಪ್ರೋತ್ಸಾಹಿಸುತ್ತಾರೆ. ನಮ್ಮ ಮುಂದಿನ ಜನಾಂಗಕ್ಕೆ ನಮ್ಮ ದೇಶದ, ಸಂಸ್ಕೃತಿಯ ಅರಿವಿರಲಿ ಎಂದು ಕೂಡ ಈ ಆಶಯಗಳಲ್ಲೊಂದು.

ಯಾವುದೇ ವಸ್ತು, ವ್ಯಕ್ತಿ, ಜಾಗದಿಂದ ದೂರ ಹೋದಷ್ಟೂ ಅದರ ಬಗ್ಗೆ ಭಾವನೆ, ನಂಬಿಕೆ ಜಾಸ್ತಿಯಾಗುತ್ತದಂತೆ. ಭಾರತದಲ್ಲಿ ದೇವಸ್ಥಾನದ ಮುಖವನ್ನೂ ನೋಡದ ಎಷ್ಟೋ ನಮ್ಮ ಯುವಕರೂ ಇಲ್ಲಿ ದೇವಸ್ಥಾನಕ್ಕೆ ನಿರಂತರವಾಗಿ ಬಂದು ನಿಜವಾದ ಭಕ್ತರ ಸಾಲಿಗೆ ಸೇರುತ್ತಾರೆ! ನಾನು ಇಲ್ಲಿ ವಿವರವನ್ನು ಕೊಟ್ಟಿರುವುದು ಬರೀ ಉತ್ತರ ಟೆಕ್ಸಾಸ್ನ ಸುಮಾರು ೫೦ ಚದರ ಮೈಲಿಯಲ್ಲಿರುವ ದೇವಸ್ಥಾನಗಳ ಬಗ್ಗೆ. ಅಮೆರಿಕಾದ ಬೇರೆ ಭಾಗಗಳಲ್ಲಿ ಇನ್ನೂ ದೊಡ್ಡ ಪ್ರಮಾಣದಲ್ಲಿ ಸನಾತನ ಧರ್ಮಿಗಳು ಕ್ರಿಯಾಶೀಲರಾಗಿದ್ದಾರೆ ಮತ್ತು ಹಲವು ಬೃಹದಾಕಾರದ ದೇವಾಲಯಗಳಿವೆ. ಸ್ಥಳೀಯ (ಅಮೇರಿಕನ್)ಜನಾಂಗದಲ್ಲಿ ಹಿಂದೂ ಧರ್ಮದ ಬಗ್ಗೆ ಹೆಚ್ಚಿನ ಅರಿವು೦ಟುಮಾಡಿದ್ದಾರೆ.ಒಟ್ಟಿನಲ್ಲಿ ಹಿಂದೂ ಧಾರ್ಮಿಕ ಕ್ಷೇತ್ರಗಳು ಅಮೇರಿಕದಲ್ಲಿ ಹಿಂದೂಗಳನ್ನು ಒಟ್ಟುಗೂಡಿಸುವುದರಲ್ಲಿ ಮಹತ್ತರ ಪಾತ್ರ ವಹಿಸಿದೆ. ಕಾರಣ ನಮ್ಮವರು ಹೆಚ್ಚಾಗಿ ಸೇರುವುದು ದೇವಸ್ಥಾನದಲ್ಲೇ.
ಇದಕ್ಕಿಂತ ಹೆಚ್ಚಿಗೆ ಖುಷಿ ಕೊಡುವುದು, ಇಲ್ಲಿಯ ಭಾರತೀಯ ಮೂಲದವರು ವಿವಿಧ ಆಕರಗಳಿಂದ ಹಣ ಸಂಗ್ರಹಿಸಿ, ಭಾರತದ ಹಲವಾರು ಕ್ಷೇತ್ರಗಳಲ್ಲಿ ಸಹಾಯ ಮಾಡಿ, ಅಭಿವೃದ್ದಿಯ ಪಥಕ್ಕೆ ಕರೆದೊಯ್ಯುತ್ತಿರುವುದು. ಭಾರತೀಯರಲ್ಲದೆ ಬೇರೆಬೇರೆ ದೇಶದ ಹಿಂದೂಗಳೂ ನಮ್ಮೊಂದಿಗೆ ಬೆರೆತು ಭಾರತಕ್ಕೆ ಸಹಾಯ ಮಾಡುವುದನ್ನೂ ಕಾಣಬಹುದು. ಪ್ರತೀ ದೇವಸ್ತಾನದಲ್ಲಿ ಭಾರತಕ್ಕಾಗಿ ಏನಾದರೊಂದು ಕಾರ್ಯಕ್ರಮ ಹಾಕಿಕೊಂಡಿರುವುದನ್ನು ನೋಡಬಹುದು. ಇಷ್ಟಾದರೂ NRI ಗಳು ಭಾರತಕ್ಕಾಗಿ ಏನು ಮಾಡಿದ್ದಾರೆ? ಅಂತ ಆಗಾಗ್ಗೆ ಕೇಳುತ್ತಿರುತ್ತಾರೆ ಕುಹಕಿಗಳು. ನಾನು ಒಂದು ಸಣ್ಣ ಉದಾಹರಣೆ ಕೊಡುತ್ತೇನೆ.ಇಲ್ಲಿ ಮೊನ್ನೆ ಭಾರತೀಯ ಒಬ್ಬರ ಮನೆಯಲ್ಲಿ ಹುಟ್ಟುಹಬ್ಬಕ್ಕೆ ಕರೆದಿದ್ದರು. ಇ-ಮೇಲ್ ಅಹ್ವಾನ ಪಾತ್ರ ಕಳಿಸಿದ್ದರು. ಅದರಲ್ಲಿ ' ಗಿಫ್ಟ್ ಏನೂ ತರಬೇಡಿ' ಅಕಸ್ಮಾತ್ ಏನಾದರೂ ಕೊಡಬೇಕೆನಿಸಿದರೆ ನಮ್ಮ ಮನೆಯಲ್ಲಿ ಒಂದು ಡಬ್ಬ (ಹುಂಡಿ) ಇಟ್ಟಿರುತ್ತೇವೆ ಅದಕ್ಕೆ ನೋಟನ್ನು ಹಾಕಿಬಿಡಿ ಅಂತ ಇತ್ತು. ಸರಿ ಗಿಫ್ಟ್ ಬೇಡ ಅದೇ ಹಣವನ್ನು ಡಬ್ಬದಲ್ಲಿ ಹಾಕಿದರಾಯಿತು ಅಂತ ಹೋದೆವು. ಪಾರ್ಟಿಯ ಮದ್ಯೆ ಅವರು ಬಿಡುವುಮಾಡಿಕೊಂಡಾಗ ನಾನು ಕುತೂಹಲದಿಂದ ವಿಷಯ ಕೇಳಿದೆ. ಅದಕ್ಕೆ ಅವರ ಉತ್ತರ "ನಾವು ಭಾರತದಲ್ಲಿ ಬಡತನದಲ್ಲಿ ಓದಿದೆವು, ಆ ಸ್ಕೂಲಲ್ಲಿ ಯಾವ ಸೌಲಭ್ಯವೂ ಇರಲಿಲ್ಲ, ಈಗ ಪ್ರತೀ ವರ್ಷವೂ ನಾವು ಓದಿದ, ಇದ್ದ ಸ್ಥಳಕ್ಕೆ ಏನಾದರೊಂದು ಸಹಾಯ ಮಾಡುತ್ತೇವೆ, ಡಬ್ಬದಲ್ಲಿ ಶೇಖರಿಸಿದ ಹಣಕ್ಕೆ ಎರಡರಷ್ಟು ಹಣವನ್ನು ಸೇರಿಸಿ, ಒಂದು ಸಂಪೂರ್ಣ ಮೊತ್ತ ಮಾಡಿ, ಅಲ್ಲಿಗೆ ತಂದೆ ತಾಯಿಯ ಹೆಸರಲ್ಲಿ ದಾನಮಾಡುತ್ತೇವೆ. ಮಗಳಿಗೆ ಆರು ವರ್ಷ, ಮಗಳ ಮೊದಲ ಹುಟ್ಟುಹಬ್ಬದಿಂದ ಇದನ್ನು ಪ್ರಾರಂಭಿಸಿದ್ದೇವೆ". ನನ್ನ ಕಣ್ಣಲ್ಲಿ ನೀರು ಜಿನುಗಿದ್ದನ್ನು ಸದ್ಯ ಯಾರೂ ಗಮನಿಸಲಿಲ್ಲ. ನಾವು ಪಾರ್ಟಿ ಮುಗಿಸಿ ಹೋಗುವಾಗ ಇನ್ನೊಂದು ನೋಟನ್ನು ಜೊತೆಗೆ ಸೇರಿಸಿ ಡಬ್ಬಿಗೆ ಹಾಕುವುದನ್ನು ಮರೆಯಲಿಲ್ಲ. ಸ್ವಲ್ಪ ದಿನವಾದ ಮೇಲೆ ತಿಳಿಸಿದರು .
"ಒಂದು ಲಕ್ಷ ರೂಪಾಯನ್ನು ಕಳಿಸಿಕೊಟ್ಟಿದ್ದೇವೆ".
ಹಾಗಾಗಿ, ಸ್ನೇಹಿತರೆ ನಾವು ಉದ್ಯೋಗ ಅರಸಿಕೊಂಡು, ವಿಮಾನ ಏರಿಕೊಂಡು ಪರದೇಶಕ್ಕೆ ಬಂದಿರಬಹುದು. ಆದರೆ, ನಮ್ಮತನವನ್ನು ಬಿಟ್ಟಿಲ್ಲ. ಬಿಡುವುದೂ ಇಲ್ಲ. ಯಾವತ್ತೂ ತವರು ತವರೇ ಅಲ್ಲವೇ?

----------

ಅಮೆರಿಕದಲ್ಲಿ ಹಿಂದೂಗಳ ಧಾರ್ಮಿಕ ಸಂಭ್ರಮ: (ಭಾಗ-೧)

( Published in ThatsKannada on 27 Nov 08 and Chaitrarashmi on march-april 09 issue)

link 1

link 2. http://www.chaitrarashmi.com/pdownloads/March_April_2009_Read.pdf


ಇತ್ತೀಚೆಗೆ ಮೂರ್ನಾಲ್ಕು ತಿಂಗಳಿಂದ ಅಮೆರಿಕದ ಉತ್ತರ ಟೆಕ್ಸಾಸ್ನ ಡಲ್ಲಾಸ್ ನ ಸುತ್ತಮುತ್ತ ನಡೆದ ಹಿಂದೂ ಧರ್ಮ ಕೂಟಗಳು ನಿಜವಾಗಿಯೂ ಹಲವರ ಹುಬ್ಬೇರಿಸುವಂತೆ ಮಾಡಿದ್ದು ನಿಜ. ನಾನು ಇದರಲ್ಲಿ ಭಾಗವಹಿಸಿಯೂ ನಿಮ್ಮಲ್ಲಿ ಹಂಚಿಕೊಳ್ಳದಿದ್ದರೆ ಎಲ್ಲೋ ಕರ್ತವ್ಯ ಲೋಪ ಮಾಡುತ್ತಿದ್ದೇನೆ ಅಂತ ನನಗೆ ಅನಿಸುತ್ತದೆ. ಡಲ್ಲಾಸ್ ನ (Dallas=ಡ್ಯಾಲಸ್, ಇಲ್ಲಿಯ ಜನರ ಉಚ್ಚಾರ) ಸುತ್ತಮುತ್ತ ಇರುವ ಇತರ ಉಪನಗರ ಗಳಲ್ಲಿ ಇರುವ ಭಾರತೀಯರ / ಹಿಂದೂಗಳ ಸಂಖ್ಯೆ ಸುಮಾರು ೫೦-೬೦ಸಾವಿರದ ಅಂದಾಜು. ತಮ್ಮ ಜೀವನ ರೂಪಿಸಿಕೊಳ್ಳಲು ಉದ್ಯೋಗ ಅರಸಿಕೊಂಡು ಹಲವು ದೇಶಗಳಿಂದ ಬಂದ ಸನಾತನ ಧರ್ಮೀಯರು ತಮ್ಮ ನಂಬಿಕೆ, ಧರ್ಮ,ನಿಯಮಗಳನ್ನು ಮುಂದುವರೆಸಿಕೊಂಡು ಬ೦ದಿರುವುದು ಮತ್ತು ಮುಂದಿನ ಜನಾಂಗಕ್ಕೆ ಕೊಡುತ್ತಿರುವ ಮಹತ್ತರ ಕಾಣಿಕೆಯನ್ನು ನೋಡಿದಾಗ ಕಣ್ಮನ ತುಂಬಿ ಬರುವುದು ಸಹಜ. ಈ ಉದ್ಯೋಗಾರ್ಥಿಗಳ ಜನ್ಮದಾತರು ಭೇಟಿಕೊಟ್ಟಾಗ, ಅಮೆರಿಕಾದಲ್ಲಿ ಈ ದೃಶ್ಯಾವಳಿಗಳನ್ನು ನೋಡಿದಾಗ ಅವರ ಕಣ್ಣಲ್ಲಿ ಆನಂದ ಭಾಷ್ಪ ಸುರಿದರೆ ಹೆಚ್ಚಲ್ಲ. ಹಾಗೆಯೇ ನಮ್ಮವರ ಈ ಸಾಧನೆ ಗಳನ್ನು ದಾಖಲಿಸದಿದ್ದರೆ ನಮ್ಮವರು ಹೊರದೇಶಗಳಲ್ಲಿ ಎನುಮಾಡುತ್ತಿದ್ದಾರೆ ಎಂಬುದು ಸ್ವದೇಶ ದಲ್ಲಿರುವವರಿಗೆ ಕಲ್ಪನೆಗೆ ಬರುವುದು ಕಷ್ಟ. ಅದಕ್ಕೇ ಇದರ ಬಗ್ಗೆ ನನ್ನದೊಂದು ಸಣ್ಣ ಪ್ರಯತ್ನ.

೧) ಹನುಮಾನ್ ದೇವಸ್ಥಾನದಲ್ಲಿ ನವರಾತ್ರಿ:ಹನುಮಾನ್ ದೇವಸ್ಥಾನ ಅಂದಕೂಡಲೇ ನಿಮಗೆ ಭಾರತದಲ್ಲಿನ ಗೋಪುರದಿಂದ ಕೂಡಿದ, ದೊಡ್ಡ ಶಿಲೆಯ ಹನುಮನ ಮೂರ್ತಿ ಇರುವ ಆ ಸಾಂಪ್ರದಾಯಿಕ ಗುಡಿ ನೆನಪಾಗ ಬಹುದು. ಆ ತರಹದ ಸಾಂಪ್ರದಾಯಿಕ ಗುಡಿಗಳೂ ಅಮೆರಿಕದಲ್ಲಿ ಸಾಕಷ್ಟಿವೆ. ಆದರೆ ಇಲ್ಲಿ (ಈ ಜಾಗದಲ್ಲಿ) ಗುಡಿ ಇನ್ನೂ ನಿರ್ಮಾಣ ಆಗಿಲ್ಲ. ಇತ್ತೀಚೆಗಷ್ಟೇ 'ಫ್ರಿಸ್ಕೋ'ದ ಹೊರವಲಯದಲ್ಲಿ ಸುಮಾರು ಹತ್ತು ಎಕರೆ ಜಾಗ ಖರೀದಿಗೆ ತೆಗೆದುಕೊಂಡು ಒಂದು ಅಲ್ಲಿ ವಿಶಾಲವಾದ ಒಂದು ವೇರ್ ಹೌಸ್ (ಉಗ್ರಾಣ-ಪ್ರಾರ೦ಭದಲ್ಲಿ ಅಮೆರಿಕದಲ್ಲಿ ಇದು ಸಾಮಾನ್ಯ) ಟ್ರಿನಿದಾದ್ ನಿಂದ ತರಿಸಿದ ಸುಂದರ ಹನುಮಾನ್ ಮೂರ್ತಿಯನ್ನು ಸುಮಾರು ಆರೇಳು ತಿಂಗಳ ಹಿಂದೆ ಪ್ರತಿಷ್ಟಾಪಿಸಿ, ಮೊನ್ನೆ ಮೊನ್ನೆ ನವರಾತ್ರಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಒಂಭತ್ತು ದಿನವೂ , ಪ್ರತಿದಿನ ಆ ದಿನದ ಮಹತ್ವಕ್ಕನುಗುಣವಾಗಿ ಸಾಂಪ್ರದಾಯಿಕ ಪೂಜೆ ವಿಧಿ ವಿಧಾನಗಳು, ಆರತಿ, ಪ್ರಸಾದ. ನಂತರ ಎಲ್ಲರೂ ಭಾಗವಹಿಸ ಬಹುದಾದಂಥ, ನಮ್ಮ ಕೋಲಾಟದ ತರಹ ಉತ್ತರ ಭಾರತೀಯ ನೃತ್ಯ ನಡೆಯಿತು.ಇಲ್ಲಿ ಮಹಾ ಪ್ರಸಾದವೆಂದರೆ, ಭಕ್ತರೇ ಮನೆಯಿಂದ ತಯಾರಿಸಿಕೊಂಡು ಬರುವ ಖಾದ್ಯ/ತಿನಿಸುಗಳು. ಅದು ಯಾವುದೇ ಸಸ್ಯಾಹಾರದ ಪದಾರ್ಥವಿರಬಹುದು. ಅದನ್ನೆಲ್ಲಾ ದೇವಸ್ತಾನದಲ್ಲಿ ಹಂಚಿಕೊಂಡು ತಿನ್ನುವಾಗ ನಿಜಕ್ಕೂ ಅದಕ್ಕೇ ಬೇರೆಯೇ ರುಚಿ ಬರುತ್ತದೆ, ಬೇರೆಯೇ ಅರ್ಥ ಬರುತ್ತದೆ, ಮನದಲ್ಲಿ ಅವಿನಾಭಾವ ಮೂಡುತ್ತದೆ. ಪ್ರತಿದಿನವೂ ಏನೇನು ಕಾರ್ಯಕ್ರಮ ಇರುತ್ತದೆ, ಅದಕ್ಕೆ ನೀವು ಹೇಗೆ ತಯಾರಿ ನಡೆಸ ಬಹುದು, ಏನು ಕಾಣಿಕೆ ಕೊಡಬಹುದು ಎಂದು ಇ-ಮೇಲ್ ಮೂಲಕ ತಿಳಿಸಲಾಗುತ್ತಿತ್ತು. ಹೀಗೆ ಒಂಭತ್ತು ದಿನವೂ ಯಶಸ್ವಿಯಾಗಿ ನಡೆದಿದ್ದು ಈ ಮಂಡಳಿಯ ಭಕ್ತ ಮಹಾಶಯರಿಂದಾಗಿ. ಇದಕ್ಕೆಲ್ಲ ಮೂಲ ರೂವಾರಿ ನಮ್ಮ ನಂಜನಗೂಡಿನ ಹತ್ತಿರವಿರುವ ಆಶ್ರಮದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳು. ಅವರ ಅಣತಿಯಂತೆ ಇಲ್ಲಿ ನಡೆಯುತ್ತಿರುವ ಅದ್ಭುತ ಕೆಲಸ, ಹೊಸ ದೇವಾಲಯದ ನಿರ್ಮಾಣ, ಇನ್ನೊಂದು ಮೂರು ವರ್ಷದಲ್ಲಿ ಟೆಕ್ಸಾಸ್ ನ ಪ್ರಮುಖ ಹಿಂದೂ ಆಕರ್ಷಣಾ ಕೇಂದ್ರವಾಗಲಿದೆ. ಹೆಚ್ಚಿನ ವಿವರಗಳಿಗೆ ವೆಬ್ ಸೈಟ್ ನೋಡಿ. (http://www.dallashanuman.org/)

೨) ದೀಪಾವಳಿ ಮೇಳ:ದೀಪಾವಳಿ ಒಂದು ವಾರವಿರುವಾಗ ಶನಿವಾರದ ದಿನ ಡಲ್ಲಾಸ್ ನ 'ಕೌ ಬಾಯ್' ಸ್ಟೇಡಿಯಮ್ ನ ಒಳಗೆ-ಹೊರಗೆ ಜಾತ್ರೆಯ ಸಡಗರ. ಅಲ್ಲಿ ನಿಜವಾಗಿಯೂ ನಡೆದಿದ್ದು ಜನ ಜಾತ್ರೆಯೇ! ಎಲ್ಲೆಲ್ಲಿಯೂ ಭಾರತದ (ಮೂಲದ) ಜನ. ಎಷ್ಟು? ಸುಮಾರು ಐವತ್ತು ಸಾವಿರ! ಕಳೆದ ವರ್ಷವೂ ಇದೇ ರೀತಿ ಸುಮಾರು ೪೦ಸಾವಿರ ಜನ ಸೇರಿದ್ದರು. ಇಲ್ಲಿ ಎಲ್ಲ ಭಾಷೆಯ ಭಾರತೀಯರು, ನೇಪಾಳದವರು, ಪಾಕಿಸ್ತಾನದವರು ಮತ್ತು ಇಲ್ಲಿಯ ನಾಗರಿಕರು ಮದ್ಯಾನ್ಹ ಸುಮಾರು ೨ ಘಂಟೆಯಿಂದ ರಾತ್ರಿ ೧೨ ಘಂಟೆಯವರೆಗೆ ನಮ್ಮಲ್ಲಿಯ ಜಾತ್ರೆಯ ತರಹವೇ ವಿವಿಧ ಮನರಂಜನೆಗಳಲ್ಲಿ ಭಾಗವಹಿಸಿ ನಲಿದಾಡಿದರು. ಈ ವರ್ಷ ಭಾರತೀಯ ಮೂಲದ ಲೂಸಿಯಾನ ಗವರ್ನರ್ ಬಾಬಿ ಜಿಂದಾಲ್ ಬಂದಿದ್ದು ವಿಶೇಷ.ಅವತ್ತು ಎಲ್ಲೆಲ್ಲೂ ಭಾರತೀಯ ವಾತವರಣ. ಚಿಣ್ಣರಿಗಾಗಿ ಹಲವು ಆಟದ ಅ೦ಕಣಗಳು, ಹಲವು ಸಂಸ್ಥೆಗಳ ಪ್ರಚಾರದ ಟೆಂಟ್ ಗಳು, ತಿಂಡಿತಿನಿಸುಗಳ (ಬಜ್ಜಿ - ಬೋಂಡ ) ಅ೦ಗಡಿಗಳು, ಹಲವು ಧಾರ್ಮಿಕ/ಯೋಗ ಕಾರ್ಯಕ್ರಮಗಳ ಸವಿವರ ನೀಡುತ್ತಿರುವ ಉತ್ಸಾಹಿ ಯುವಕರು, ಮುಕ್ತ ನೃತ್ಯ ವೇದಿಕೆಗಳು.... ಎಲ್ಲಾ ತರಹದ ಅಭಿರುಚಿಗಳಿಗೆ ತಕ್ಕಂತೆ ಸೌಲಭ್ಯಗಳು.ಇಲ್ಲಿಯ (ಬಿಳಿ) ನಾಗರಿಕರೂ ಕೂಡ ನಮ್ಮೊಂದಿಗೆ ಬೆರೆತು ಸಂತೋಷಿಸಿದರು. ಸುಮಾರು ೬೫ಸಾವಿರ ಆಸನಗಳ ಸಾಮರ್ಥ್ಯವಿರುವ ಈ ಒಳಾಂಗಣ ಕ್ರೀಡಾಂಗಣದಲ್ಲಿ ಅವತ್ತು ನಡೆದಿದ್ದು ಇಲ್ಲಿಯ ಮಕ್ಕಳಿಂದ ಭರತ ನಾಟ್ಯ, ಭಾ೦ಗ್ರ ನೃತ್ಯ ಮತ್ತು ಭಾರತದಿಂದ ಕರೆಸಿದ (ಸುಮಾರು ಇನ್ನೂರಕ್ಕೂ ಹೆಚ್ಚು ಕಲಾವಿದರ ತಂಡ) ತಂಡದಿಂದ ರಾಮಲೀಲಾ ನಾಟಕ ಪ್ರದರ್ಶನ. ಪ್ರತೀ ವರ್ಷವೂ ಭಾರತದಿಂದ ಹಲವು ಪ್ರಸಿದ್ಧ ಕಲಾವಿದರನ್ನು ಕರೆಸುತ್ತಾರೆ. ಹಾಡು, ಭಜನೆ, ಭಾಷಣ ಮು೦ತಾದ ಒಳಾಂಗಣ ಕಾರ್ಯಕ್ರಮಗಳು ಮುಗಿದಿದ್ದು ಹನ್ನೊಂದು ಘಂಟೆಯ ಮೇಲಾಗಿದೆ. ನಂತರ ಸುಮಾರು (ರಾತ್ರಿ)ಹನ್ನೆರಡು ಘಂಟೆಗೆ ಹತ್ತುತಲೆಯ ಬೃಹದಾಕಾರದ ರಾವಣ ಪ್ರತಿಕೃತಿ ದಹನ ಮತ್ತು ಪಟಾಕಿ ಪ್ರದರ್ಶನ. ಎಲ್ಲವೂ ಅತ್ಯಂತ ಸುರಕ್ಷತೆಯಿಂದ ಹನ್ನೆರಡೂವರೆಗೆ ಜನರ ಹರ್ಶೊದ್ಗಾರದಿ೦ದ ಮುಕ್ತಾಯವಾಯಿತು. ಈ ಕಾರ್ಯಕ್ರಮದ ಮುಖ್ಯ ಸಂಚಾಲಕ, ದೀವಾಳಿ ಮೇಳದ ಅಧ್ಯಕ್ಷ ಶ್ರೀ ಸತೀಶ್ ಗುಪ್ತ. ಈ ಪರಂಪರೆಯನ್ನು ಹುಟ್ಟುಹಾಕಿ ಬೆಳೆಸುತ್ತಿರುವ ಇವರ ಬಗ್ಗೆ ನಾವು ಹೆಮ್ಮೆ ಪಡಬೇಕು. ವಿವರಗಳನ್ನು ವೆಬ್ ಸೈಟ ನಲ್ಲಿ ನೋಡಿ. ( http://www.dfwdiwalimela.com/defaulthome.html)

೩) ದೀಪಾವಳಿಯ ದಿನದ ಯಜ್ನ್ಯ: ನಿಮಗೆ ಆಶ್ಚರ್ಯ ವಾಗಬಹುದು. ಅಮೆರಿಕದಂಥ ಕ್ರಿಶ್ಚಿಯನ್ನರೆ ಜಾಸ್ತಿ ಇರುವ ದೇಶದಲ್ಲಿ, ಒಂದು ಅತೀ ಮುಂದುವರೆದ ನಗರದ ಮಧ್ಯ ಭಾಗದಲ್ಲಿ ಒಂದು ಮಹಾ ಯಜ್ನ್ಯ!ಇದು ಆಶ್ಚರ್ಯ ವಾದರೂ ನಿಜವಾಗಿ ನಡೆದಿದೆ. ಬೆಂಗಳೂರಿನ 'ಆರ್ಟ್ ಆಫ್ ಲಿವಿಂಗ್' ನ ಶ್ರೀ ರವಿಶಂಕರ್ ಗುರೂಜಿ ಅವರ ನೇತೃತ್ವ/ಆಶೀರ್ವಾದ ದೊಂದಿಗೆ ಸುಮಾರು ಐದು ಸಾವಿರ ಭಕ್ತರ ಸಮ್ಮುಖದಲ್ಲಿ ಡಲ್ಲಾಸ್ ನ ಕನ್ವೆನ್ಶನ್ ಸೆಂಟರ್ನಲ್ಲಿ ನಡೆದ ಯಜ್ನ್ಯ ನಿಜಕ್ಕೂ ಒಂದು ದಾಖಲೆ. ಎಲ್ಲಾ ಸಮುದಾಯದವರ ಗೌರವ ಹೊಂದಿರುವ ಶ್ರೀ ಗುರೂಜಿಯವರು ಇದೇ ಕಳೆದ ದೀಪಾವಳಿಯ ಶುಭ ದಿನದಲ್ಲಿ ಅ೦ಥದ್ದೊ೦ದು ಸಂಕಲ್ಪವನ್ನು ಸಾಕಾರಗೊಳಿಸಿದರು.

ಸವಿರವಾದ ಮಾಹಿತಿಯನ್ನು ಈ ವೆಬ್ ಸೈಟ್ ನಿಂದ ಪಡೆಯಿರಿ. (http://www.artoflivingdfw.org/sundarindia/diwaliyagna_main.htm)

೪) ಗಣಪತಿ ದೇವಸ್ತಾನದ ಪುನಃ ಪ್ರತಿಸ್ಟಾಪನೆ: ಉತ್ತರ ಟೆಕ್ಸಸ್ ನ ಪ್ಲೇನೋ ಎಂಬ ನಗರದ ಹಿಂದೂಗಳ ಅವಿಭಾಜ್ಯ ಅಂಗ ಶ್ರೀ ಗಣೇಶ ದೇವಾಲಯ. ಅದು ಇಷ್ಟುದಿವಸ ಒಂದು ಶಾಪಿಂಗ್ ಸೆಂಟರ್ ನಲ್ಲಿತ್ತು. ಇಲ್ಲಿಗೆ ಭಕ್ತರು ಪ್ರತಿ ದಿನವೋ, ವಾರವೋ ಬಂದು ದೇವರನ್ನು ಪ್ರಾರ್ಥಿಸಿ ಹೋಗುತ್ತಿದ್ದರು. ಈ ಮಂದಿರವನ್ನು ಹುಟ್ಟುಹಾಕಿದ ಕೀರ್ತಿ ನಮ್ಮ ಮಲೆಯಾಳಿ ಬಂಧುಗಳಿಗೆ ಸೇರುತ್ತದೆ. ಆದರೆ ಇದರ ಭಕ್ತರ ಸಮುದಾಯ ನೋಡಿದರೆ ಭಾಷೆ, ರಾಜ್ಯ, ರಾಷ್ಟ್ರ ಯಾವುದೂ ಲೆಕ್ಕಕ್ಕೆ ಬರುವುದಿಲ್ಲ. ಇಲ್ಲಿಗೆ ಎಲ್ಲರೂ ಬರುತ್ತಾರೆ. ಭಕ್ತರ ಸಂಖ್ಯೆ ಬೆಳೆಯುತ್ತಿದ್ದಂತೆ ಜಾಗದ ಕೊರತೆ ಹೆಚ್ಚಾಯಿತು. ಹಲವು ಮೂಲಗಳಿಂದ ಹಣ ಸಂಗ್ರಹಿಸಿ ಇಲ್ಲೇ ಹತ್ತಿರದಲ್ಲಿ ಒಂದು ಹತ್ತು ಎಕರೆ ಜಾಗದಲ್ಲಿ ಒಂದು ಮನೆ, ಉಗ್ರಣವಿರುವ ಸೌಲಭ್ಯವನ್ನು ವರ್ಷದ ಹಿಂದೆ ಖರೀದಿ ಮಾಡಿ, ಈಗ ನವೆಂಬರ್ ೮ ರ೦ದು ದೇವಸ್ಥಾನವನ್ನು ಹೊಸ ಸ್ಥಳಕ್ಕೆ ವರ್ಗಾಯಿಸಲಾಯಿತು. ವರ್ಗಾಯಿಸುವಾಗ ನಡೆದ ಮೆರವಣಿಗೆ, ಸಾಂಪ್ರದಾಯಿಕ ಪೂಜೆ, ಹೋಮ-ಹವನ, ಸ್ಥಳೀಯ ಹಿಂದೂ ಜನರ ಉತ್ಸಾಹ ನಿಜಕ್ಕೂ ಹೆಮ್ಮೆ ತರುವಂಥಾದ್ದು. ಎರೆಡು ದಿನ ನೆಡೆದ ಈ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದರು.
ಈ ದೇವಸ್ಥಾನದಲ್ಲಿ ಪ್ರತಿದಿನ ಪೂಜೆ, ಮಹಾ ಮಂಗಳಾರತಿ ಮಾಡುತ್ತಾರೆ. ಮಂಗಳಾರತಿಯ ಮುನ್ನ ಹೇಳುವ ಶ್ಲೋಕ/ಮಂತ್ರವನ್ನು ಎಲ್ಲರೂ ಒಟ್ಟಿಗೆ ಹೇಳಬಹುದು. ಆ ಹೊತ್ತಿಗೆ ಎಲ್ಲರ ಕೈಗೂ ಒಂದೊಂದು ಹಸ್ತಪ್ರತಿಯನ್ನು ಕೊಡುತ್ತಾರೆ ಅದನ್ನು ನೋಡಿಕೊಂಡು ನಮ್ಮ ಸ್ವರ ಸೇರಿಸಬಹುದು.ಇಲ್ಲಿ ಎಲ್ಲಾ ದೇವಸ್ಥಾನಗಳ ಸಾಮಾನ್ಯ ನೋಟವೆಂದರೆ ಶುಚಿತ್ವ ಮತ್ತು ನಿಯಮ ಪಾಲನೆ.ಎಲ್ಲರೂ ನಿಯಮ ಪಾಲನೆ ಮಾಡುವುದರಿಂದ ಎಲ್ಲೂ ಗೊಂದಲವಾಗಲಿ, ನೂಕು ನುಗ್ಗಲಾಗಲಿ, ಅಸಮಾಧಾನವಾಗಲಿ ತೋರುವುದಿಲ್ಲ. ಎಲ್ಲರೂ ಶುಚಿಯಾಗಿರುವುದರಿಂದ ಬೇಧ ಭಾವವೇ ಇರುವುದಿಲ್ಲ. ಹಾಗಾಗಿಯೇ 'ನಾವೆಲ್ಲ ಹಿಂದೂ ನಾವೆಲ್ಲ ಒಂದು' ಎನ್ನುವ ಭಾವನೆಯನ್ನು ಸಹಜವಾಗಿ ಎಲ್ಲರಲ್ಲೂ ಕಾಣಬಹುದು.


ಈ ದೇವಸ್ಥಾನದ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಈ ಮಾಹಿತಿ ಜಾಲವನ್ನು ನೋಡಿ. (http://htnt.org/).

(ಮುಂದುವರೆದಿದೆ....)

ಬುಧವಾರ, ಜನವರಿ 7, 2009

ದೇವೇಗೌಡರ ಹೊಸಾ ಡೀಲು (ಭಾಗ-೧)

(Published in Thatskannada.com on 22nd sept 08
ಲಿಂಕ್ : http://thatskannada.oneindia.in/column/humor/2008/0922-karnataka-political-humor-devegowda-alva-aicc.html)


ಅಷ್ಟೇ ಪತ್ರಿಕಾ ಗೋಷ್ಠಿ ಮುಗಿಸಿ ಪಾರ್ಟಿ ಆಫೀಸಿಗೆ ಬಂದಿದ್ದ ಮ್ಯಾಗಿ ಮೇಡಮ್ಮನ ಸುತ್ತ ನೆರೆದಿದ್ದ ಶಿಲುಬೆ ಸಂಗದವರು, ಹೊಸ ಜೀವನ ಸಂಸ್ಥೆಯವರು ಶಿಸ್ತಾಗಿ ಬೆಂಚ್ ಮೇಲೆ ರಾಜ ಗಾ೦ಭೀರ್ಯದಿ೦ದ ಬೀಗುತ್ತಿದ್ದರು.... ಮತ್ತು ಮೊನ್ನೆ ಮೊನ್ನೆ ಎಸುಕ್ರಿಸ್ತರ ಪಾದಗಳಿಗೆ ಶರಣು ಹೊಡೆದ ನಮ್ಮ ಎಕ್ಸ್ ಹಿಂದೂ ಶಿಖಾಮಣಿಗಳು.....ಮುದುರಿಕೊಂಡು ಗಂಟು ಮೂಟೆ ಪಕ್ಕಕ್ಕಿಟ್ಟು ಕೊಂಡು ಕಣ್ಣರಳಿಸಿ ಕೊಂಡು ನೋಡುತ್ತಾ ಕುಳಿತಿದ್ದರು...... ಮೇಡಮ್ಮನ ಕ್ಯಪಾಸಿಟಿ ಕಂಡು ದಂಗು ಬಡಿದು ಹೋಗಿದ್ದರು. ಆದರೂ ಗುಜು ಗುಜು ಕಡಿಮೆಯಾಗಿರಲಿಲ್ಲ.

ಬೆನೆಡಿಕ್ಟ್ ಬಾಲು ಎಲ್ಲರನ್ನೂ ಉದ್ದೇಶಿಸಿ, ಥೇಟ್ ಏಸುವಿನ ಫೋಸ್ನಲ್ಲಿ ಕೈ ಅಡ್ಡಗಲ ಹರಡಿ, ಸ್ವಚ್ಚ ಕನ್ನಡದಲ್ಲಿ,


"ಡೆಲ್ಲಿ ಮೇಡಂ ಆಸಿರ್ವಾದಂ ಕಡಚ್ಚಿ, ನೀಂಗಲ್ ಎಲ್ಲಾರ್ ವೀಡ್ ಗೆ ಪೋ.......ಏಸು ಎಲ್ಲರ್ಗೂ ಕಾಪಾಡ್ತಾರೆ",

ಎನ್ನುತ್ತಾ ಅಸೆಂಬ್ಲಿಯವರಿಗೂ ಕಣ್ಸನ್ನೆ ಮಾಡಿದರು.
"ಓಕೆ ಫಾದರ್", ಎನ್ನುತ್ತಾ ಗೆದ್ದವರಂತೆ ಮುಖ ಅರಳಿಸಿ ಕೊಂಡು ಅಸೆಂಬ್ಲಿಯವರೆಲ್ಲರೂ ಟೇಕ್ ಆಫ್ ಆದರು. ನಮ್ಮ ಗುಲ್ಬರ್ಗ ಮಂದಿಗೆ ಏನೂ ಅರ್ಥ ಆಗದಿದ್ದರೂ ಹಿಂದೆ..... ಮುಂದೆ ನೋಡುತ್ತಾ ತಲೆ ಕೆರೆಯುತ್ತಾ ಬೇರೆಯವರನ್ನು ಹಿಂಬಾಲಿಸಿದರು.....
ಇತ್ತ ಉತ್ಸಾಹದಿಂದಿದ್ದ ಮ್ಯಾಗಿ ಮತ್ತು ಬೆಂಡಿ ಮಾತುಕತೆ ಶುರುಮಾಡಿದರು.
ಹಣೆಯ ಬೆವರೊರಸಿಕೊಂಡ ಬೆ೦ಡಿ,

"ಎನ್ನಮ್ಮಾ ಮ್ಯಾಗಿ ಸಿಸ್ಟರ್, ನಾವೆಲ್ಲ ಸೀಕ್ರೆಟಾಗಿ ಇದನ್ನೆಲ್ಲ ಮಾತಡ್ಕಂದ್ರೆ, ನೀನು ಪಬ್ಲಿಕ್ಕಾಗಿ ಇದನ್ನೆಲ್ಲಾ ಹೇಳಿದ್ರೆ ಮೇಡಮ್ಮು ಕೊಪಮಾದ್ಕಳಲ್ವ?"
ಬೆಂಡಿಯ ಮೂರ್ಖತನವನ್ನು ಕಂಡು ತೋರಿಸಿಕೊಳ್ಳದೆ ಸಣ್ಣ ದನಿಯಲ್ಲಿ

"ಇಲ್ಲ ಬ್ರದರ್,dont worry, ಮೇಡಮ್ಮೆ ಹೇಳಿದ್ದು, ಸುಮ್ನೆ ಹೇಳ್ಕೆ ಕೊಡು , ಜನ ಏನ್ ಹೇಳ್ತಾರೆ ನೋಡೋಣ ಅಂತ. ಮೀಡಿಯಾಗೆಲ್ಲ ಅರೆಂಜ್ ಆಗಿದೆ, ಫಾರಿನ್ನಲ್ಲೂ ನೀಟಾಗಿ ಸ್ಪ್ರೆಡ್ ಮಾಡ್ತಾರೆ..... "

ಮ್ಯಾಗಿಗೆ ಇನ್ನೂ ಬಹಳ ಮಾತಾಡುವುದು ಉಳಿದಿತ್ತು.......
ಅಷ್ಟೊತ್ತಿಗೆ ನಮ್ಮ ಗೌಡರ ಫೋನು ಟ್ರಿಣಿಕಾಯಿಸುತ್ತೆ. ಬ್ರದರ್ ಗೆ ಕಣ್ಸನ್ನೆ ಮಾಡಿದರು ಸಿಸ್ಟರ್. ಬೆನೆಡಿಕ್ಟ್ ಫೋನ್ ತೆಗೆದು ಕೊಂಡರು.

"ಮಾರ್ಗಿ ಮೇಡಂ ಅವ್ರ...?" ಬೆಂಡಿಗೆ ಅರ್ಥ ಆಗದೆ ಫೋನನ್ನು ಮೇಡಂಗೆ ಕೊಟ್ಟರು.
ಮೇಡಂ ಶರ ವೇಗದಲ್ಲಿ,
"ಕಾಯ್ರೆ, ಕೋಣು?" ಮ್ಯಾಗಿಯ ಕೊಂಕಣಿ ನಮ್ಮ ಗೌಡರಿಗೆ ಎಲ್ಲರ್ಥ ಆಗಬೇಕು....

"ಏನಮ್ಮ, ಅಲ್ಲಿ ಸ್ವಲ್ಪ ಮೇಡಮ್ಮಿಗೆ ಫೋನ್ ಕೊಡ್ತೀಯ?" ಯಾರೋ ಟೈಪಿಸ್ಟು ಅಂದುಕೊಂಡರು ಗೌಡ್ರು.

"ನಾನೇ ಮೇಡಂ, ಯಾರು ನೀವು, ಏನಾಗಬೇಕಿತ್ತು?" ಸ್ವಲ್ಪ ಜೋರಾಗೇ ಕೇಳಿದರು ಮೇಡ೦.

ಗೌಡರು ಹೌಹಾರಿದರು. 'ಮಾಜಿ' ಯಾದ ನನಗೇ ಡೋಸ್ ಕೊಡ್ತಾವ್ಳೆ?.....ಏನು ಖದರು...ಇರಲಿ, ಗಂಟಲು ಸರಿ ಮಾಡಿ ಕೊಳ್ಳುತ್ತಾ ,
"ನಾನಮ್ಮ, ದೇವೇ ಗೌಡರು.....""ಒಹ್ ನೀವಾss....., ಸ್ಸಾರಿ ಗೌಡರೆ, ಯಾಕೆ ಗಂಟಲು ಸರಿ ಇಲ್ವಾ?" ವಯ್ಯಾರದಿಂದ, ಏನೂ ಆಗ್ಲೇ ಇಲ್ಲ ಅನ್ನೋ ಹಾಗೆ.

"ಹೌದಮ್ಮ ಸ್ವಲ್ಪ ಗಂಟಲು ಕೆಟ್ಟೋಗ್ಬುಟೈತೆ.. ನಿನ್ನೆ ನಮ್ಮ ಇಮಾಮ್ ಸಾಬ್ರು ಬಾಡು ಊಟಕ್ಕೆ ಕರೆದಿದ್ರು, ಬಿರ್ಯಾನಿ ಇರ್ತದೆ ಅಂತ ಆಸೆ ಪಟ್ಗೊ೦ಡು ಹೋದ್ರೆ, ಅದ್ಯಾವುದೋ ಟರ್ಕಿ ಕೋಳಿಯಂತೆ.. ತಂದು ಹಾಕ್ಬುಟ್ರು.... ಯಾವ ಎಣ್ಣೇಲಿ ಕರ್ದಿದ್ನೋ....ಒಟ್ನಾಗೆ ಗಂಟ್ಳು ಕೆಟ್ಟೋಗ್ಬುಟೈತೆ"
ಗೌಡರು ಕಷ್ಟ ಪಟ್ಟುಕೊಂಡೇ ಹೇಳಿದರು.
ಮ್ಯಾಗಿಗೆ ಥಟ್ಟನೆ ಸೀಮೆಎಣ್ಣೆಯ ನೆನಪಾದರೂ ನಗು ತಡೆದುಕೊಂಡು,

"ಹೌದಾ ಗೌಡರೆ, ನಮ್ಮಲ್ಲಿಗೆ ಬಂದ್ಬುಡಿ ಮೀನ್ ಊಟ ಹಾಕುಸ್ತೀನಿ, ಎಲ್ಲ ಸರಿ ಹೋಗುತ್ತೆ"
ಗೌಡರಿಗೆ ನೆನಪಾಯಿತು, ಕ್ಷಣಾರ್ಧದಲ್ಲಿ ಟವಲ್ಲು ಸರಿಸಿ ಅಂಗಿಯ ಜೇಬಿನಲ್ಲಿದ್ದ ಡೈರಿ ತೆಗೆದು ನೋಡಿದರು,

"ಹೆಂಗೂ... ಮುಂದಿನವಾರ ನಿಮ್ಮಲ್ಲಿಗೆ ಬರ್ ಬೇಕಲ..... ಬರ್ತೀನ್ ಬಿಡಿ..." ಈಗ ಗಂಟಲು ಮತ್ತೆ ಸರಿ ಮಾಡಿಕೊಂಡರು, ಗೌಡರ ಕಷ್ಟ ನೋಡಲಾರದೆ,

"ಹಾಗೆ ಮಾಡಿ ಗೌಡರೆ, ಅವಾಗ್ಲೇ ಮಾತಾಡಣ, ಏನಾದರೂ ಅರ್ಜೆಂಟ್ ವಿಷ್ಯ ಇತ್ತಾ?" ಆದಷ್ಟು ಬೇಗ ಮುಗಿಸಿ ಬಿಡೋಣ ಅಂತ ಮ್ಯಾಗಿ....
ಗೌಡ್ರು ಬಿಡಬೇಕಲ್ಲ,

"ಇಲ್ಲಮ್ಮಾ, ದೇಶದ ಬಗ್ಗೆ ಚಿಂತೆ ಮಾಡ್ತಾ ಇದ್ದೆ.....ಕಾಲ ಬಹಳ ಕೆಟ್ಟೋಗ್ಬುಟೈತೆ... ನಿಮ್ ಸ್ಟೇಟ್ಮೆಂಟ್ ನೋಡಿದೆ, ನಾವೆಲ್ಲ ಸೇರಿ ಹೋರಾಟ ಮಾಡ್ಬೇಕು, ದೇಶದ ರಕ್ಷಣೆ ಮಾಡ್ಬೇಕು......."

ರಾಜ್ಯ ಅಂದು ಬಿಟ್ರೆ ಲೆವೆಲ್ಲು ಕಡಿಮೆ ಆಗ್ಬಿಡುತ್ತೆ ಅಂತ ಗೌಡರ ಲೆಕ್ಕಾಚಾರ.
ಮ್ಯಾಗಿಗೆ ಒಮ್ಮೆ ಕಸಿವಿಸಿಯಾಯಿತು, ಇದೇನ್ ಇದು ಗೌಡ್ರು ಮತ್ತೆ ರೂಟ್ ಚೇಂಜ್ ಮಾಡ್ತಿದ್ದಾರಲ್ಲ?...... ಆದರೆ ಮ್ಯಾಗಿಯ ರಾಜಕೀಯ ಬುದ್ದಿ ಜಾಗೃತವಾಯ್ತು... ಒಂದು ವೇಳೆ.... ಸೋನಿಯಾ ಮೇಡಂಗೆ ಹೇಳಿ...... ನೋ, ನೋ, ಮನೆಬಾಗಿಲಿಗೆ ಬಂದ ಇಂಥಾ ಚಾನ್ಸು ತಾನು ಬಿಡಬಾರದು..... ಮೇಡಂ ಹತ್ತಿರ ಶಭಾಸ್ ಗಿರಿ ತೊಗೊಂಡ್ ಬಿಡಬಹುದು!
ಆಕಡೆ ಸೈಲೆಂಟ್ ಆಗಿದ್ದನ್ನ ನೋಡಿ , ಗೌಡರೆ ಮುಂದುವರೆಸಿದರು.

"ನಾವು ಗುಳು ಏನನ ಕಾರಿಕ್ರಮ ಆಕ್ಕೊ ಬೇಕು......." ಖರ್ಗೆ ಕಡೆ ರೂಟು ಸರಿ ಇಲ್ಲ ಅಂತ ಗೌಡರಿಗೆ ಮನವರಿಕೆಯಾಗಿತ್ತು.
"ನಾವೊಂದು ಕಾರ್ಯಕ್ರಮ ಅರೆಂಜ್ ಮಾಡಿದೀವಿ"
ಹೆಮ್ಮೆಯಿಂದ ಉಸುರಿದಳು ಮ್ಯಾಗಿ.

"ಹೌದು ಹೌದು, 'ಮಂಗ್ಳೂರಿಂದ ಬೆಂಗ್ಳೂರ್ಗೆ' ಅಂತ ಒಂದು ಯಾತ್ರೆ ಇಟ್ಕೊಂಡಿದೀವಿ, ನೀವು ಬರಬೇಕು, ಜೊತ್ಯಾಗಿ ಕುಮಾರಣ್ಣನ ಕರ್ಕ೦ಡು ಬನ್ನಿ, ಅಲ್ಲೇ ಪಾರ್ಟಿ ವಿಷ್ಯ ಮಾತಾಡೋಣ"

ಆದ ಸಂತೋಷಕ್ಕೆ ಎಲ್ಲವನ್ನೂ ಒಂದೇ ಉಸಿರಿಗೆ ಹೇಳಿಬಿಟ್ಟರು ಮ್ಯಾಗಿ. ಆದ್ರೆ ನಮ್ಮ ಗೌಡರು ಘಟಾನುಘಟಿಗಳು, ಸುಮ್ನೆ ಒಪ್ಕೊತಾರ? ......ಪಾರ್ಟಿ ವಿಷ್ಯ ಅಂದಾಕ್ಷಣ ಗೌಡರ ಗಂಟಲು ಒಮ್ಮೆಗೇ ಸರಿ ಹೋಗಿತ್ತು! ಪಾರ್ಟಿಗೆ ಜೀವ ತರೋದಕ್ಕೆ ಇದೇ ಒಳ್ಳೆ ಸಮಯ.

"ಅದ್ಸರಿಯಮ್ಮ, ಸೋನಿಯಾ ಬರ್ತಾರ?,......ಅವರು ಬಂದ್ರೆ ಕುಮಾರ ಏನು, ರೇವುನೂ ಕರ್ಕ೦ಡು ಬರ್ತೀನಿ ಬುಡು"
ನಿರುದ್ಯೋಗಿ ಕುಮಾರಣ್ಣನ್ನ ಕರ್ಕೊಂಡ್ ಬರೋದು ಸುಲಭ ಅಂತ ಗೊತ್ತಿತ್ತು ಗೌಡರಿಗೆ. ಇರ್ಲಿ, ಏನೇನ್ ಅರೇಂಜ್ ಮಾಡವ್ರೆ ಕೆಳ್ಕಂಡ್ ಬುಡಾಣ ಅಂತ ಗೌಡ್ರು,

" 'ಮಂಗ್ಳೂರಿಂದ ಬೆಂಗ್ಳೂರ್ಗೆ' ಹೆಲಿಕ್ಯಾಪ್ಟರು ಮೇಲೇನಮ್ಮ?" ತಮ್ಮ ದೆಹಲಿಯ ದಿನಗಳನ್ನೇ ಮೆಲಕುಹಾಕುತ್ತಾ....
ಛೇ... ಏನ್ ಗೌಡ್ರೆ, ಅಷ್ಟೊಂದು ಜನರಿಗೆ ಎಲ್ಲಿಂದ ಹೆಲಿಕ್ಯಾಪ್ಟರು ತರೋದು, ಬುದ್ಧಿ ಇದ್ಯಾ.... ಹೇಳನ ಅಂತ ಬಾಯಿ ತೆಗದವಳು, ಸ್ವಲ್ಪ ಒತ್ಕೊಂಡು,

"ಇಲ್ಲಾ ಗೌಡ್ರೆ, ಇದು ಒಂದು ತರಾ ರೈತರ ಜಾಥಾ ಇದ್ದ ಹಾಗೆ....., (ಸಣ್ಣಧ್ವನಿಯಲ್ಲಿ) ...ಪ್ರಚಾರ ಆಗೋದ್ ಬೇಡ್ವ....., ಅದಕ್ಕೆ... ನಡ್ಕೊಂಡು ಹೋಗ್ತೀವಿ..."

ಗೌಡರು ಹೌಹಾರಿದರು..... ಏನ್ ತಮಾಷೆ ಮಾಡ್ತಾವ್ಳ......? ಆದರೂ ಉಮ್ಮಳಿಸಿ ಕೊಂಡು,
"ಆಗ್ಲಿ ಬಿಡಮ್ಮ, ನಾವೂ ಹಾಸನದಿಂದ ಸೇರ್ಕತೀವಿ"....
ಇದೇ ಒಂದು ಅವಕಾಶ ಅಲ್ವ?ಆದ್ರೆ ಕಂಡೀಶನ್ ಇಲ್ದೆ ಯಾಕೆ ಒಪ್ಕಬೇಕು?..... ಅಲ್ಲೇ ತುರುಕಿಬಿಟ್ಟರು..

"ಆದ್ರೆ ನಮ್ಮ ಹೆಸ್ರು ಪೇಪರ್ನಾಗೆ ಹೆಡ್ಲೈನ್ಸ್ ನಲ್ಲಿ ಬರೋಹಂಗೆ ನೋಡ್ಕಬೇಕು"......

ಪೇಪರ್ನಾಗೆ ಹಾಕೋದು ಹಾಕಲಿ, ಹಾಸನದಿಂದ ಬೆಂಗಳೂರಿಗೆ ನಡ್ಕೊಂಡು ಹೋಗಕ್ಕೆ ಆತದ? ಏನೋ ಒಂದು ಆರೋಗ್ಯದ ನೆಪ ಹೇಳಿ ಮೊಮ್ಮಗನ 'ಹಮ್ಮರ್' ಕಾರಲ್ಲಿ ಹೋದ್ರಾಯ್ತು ಅಂತ ಗೌಡರಿಗೆ ಸೀದಾ ಸಾದಾ ಯೋಚನೆ ಇತ್ತು.
"ಆಗ್ಲಿ ಗೌಡ್ರೆ, ಆದ್ರೆ....., ಖರ್ಗೆ ಅವ್ರನ್ನ ಒಂದ್ಸಾರಿ ಕೆಳ್ಕೊಬೇಕಾಗಿತ್ತು, ಯಾವ್ದುಕ್ಕೂ ನಾಳೆ ಫೋನ್ ಮಾಡ್ತೀನಿ"

ಎಲಾ ಇವಳಾ, ಈ ಮಾಜಿಗೆ ಧಮ್ಕಿನೇನು?......, ಎಕ್ಕಡ ತೊಗೊಂಡು ಹೊಡೆಯೋವಷ್ಟು ಸಿಟ್ಟು ಬಂದರೂ, ತಾಳ್ಮೆ, ತಾಳ್ಮೆ, ಎಂದಿತು ಗೌಡರ ಒಳ ಮನಸ್ಸು...... ಅದನ್ನೇ ಲಾಜಿಕ್ಕಾಗಿ,....

"ಅಯ್ಯೋ ಕರ್ಗೆ, ಧರ್ಮಸಿಂಗು ಅಂತ ಸುಮ್ನೆ ಯಾಕಮ್ಮ ಇನ್ನೊಬ್ಬರನ್ನ ಇನ್ವಾಲ್ವು ಮಾಡಬೇಕು.......ಅದೆಲ್ಲ ಮುಂದೆ ಮಾತಾಡಣ.....ಈಗ ಈ ಡೀಲು ನಮ್ಮಲ್ಲೇ ಇರ್ಲಿ"
ಎಲ್ಲಿ ಪೂಜಾರಿಯನ್ನು ಸೇರಿಸಿಬಿಡ್ತಾಳೋ ಅಂತ ಮೊಟಕು ಮಾಡಿದರು ಗೌಡರು.
ಮ್ಯಾಗಿಗೂ ಎನೋಹೊಳೆದಂತಾಗಿ 'ಓಕೆ' ಎನ್ನುತ್ತಾ, ಉತ್ತರಕ್ಕೂ ಕಾಯದೆ ಫೋನು ಕುಕ್ಕಿದಳು.
ಸಧ್ಯ ಡೀಲು ಕುದುರ್ತಲ ಅಂತ ಗೌಡರಿಗೆ ಸಮಾಧಾನವಾದರೂ, ಎಲ್ಲಿ ಕರ್ಗೆ, ಪೂಜಾರಿ ಕಿರಿಕ್ ಮಾಡಿ ಬಿಟ್ರೆ ಅಂತ ಒಂದು ಅನುಮಾನ ಕೊರಿತಾನೇ ಇತ್ತು...........
ತಮಿಳ್ನಾಡಿನ ಜ್ಯೋತಿಷಿಗಳು ಹೇಳಿದ್ದು ಗ್ಯಾಪನ ಮಾಡಿಕೊಂಡು ಕ್ಯಾಲೆಂಡರು ನೋಡಿದರು.
ಒಳಗಿಂದ ಅಮ್ಮಾವ್ರು ಮುದ್ದೆ, ಸಾರು ತಂದಿತ್ತು ಸುಮಾರು ಹೊತ್ತಾಗಿ ತಣ್ಣಗಾಗಿತ್ತು ಆದರೂ ಏನೋ ಗೊಣಗಿಕೊಂಡೇ, 'ಒಂದು ಡೀಲು ಕುದುರ್ತಾ ಐತೆ' ಅಂತ ಸಮಾಧಾನದಿಂದ ಮುದ್ದೆಗೆ ಕೈ ಹಾಕಿದ್ರು.........
ಅಷ್ಟೊತ್ತಿಗೆ ಪರ್ಸನಲ್ ಶೆಕೆಟ್ರಿ ವೈ.ಎಸ್.ವಿ. ದತ್ತಣ್ಣ ನ ಫೋನ್ ಕುರ್ರ್ ಕುರ್ರ್ ಅಂತು.
ಯಾಕಪ್ಪಾ ಮುದ್ದೆ ಉಣ್ಣಕ್ಕೂ ಬಿಡಲ್ವಲ ಇವ್ನು,............... ಅಥವಾ..... ಲಾಲು ಭಯ್ಯ ಎನನ ಮೀಟಿಂಗಿಗೆ ಕರೀತವ್ನ? ಏನೇನೋ ತಲೆಯಲ್ಲಿ ತುಂಬಿಕೊಳ್ಳುತ್ತಾ "ಅಲೋ" ಎಂದರು.

"ಸ್ಸಾರ್, ಮಸೀದಿ ಕಮಿಟಿಯವರು ಕರೀತವ್ರೆ".....!


ದೇವೇಗೌಡರ ಹೊಸಾ ಡೀಲು (ಭಾಗ - ೨)

Published in ThatsKannada on 1st April 2009. Here is the link.

http://thatskannada.oneindia.in/column/humor/2009/0401-deve-gowdas-new-political-game.html
http://thatskannada.oneindia.in/column/humor/2009/0401-deve-gowdas-new-political-game-part2.html


ಆಗಲೇ, ದೇಶಪಾಂಡೆ ಕಾಂಗ್ರೆಸ್ ಅದ್ಯಕ್ಷ ಅಂತ ನ್ಯೂಸ್ ಗೊತ್ತಾಗಿ ಕುಣುದಾಡ್ಬುಡೊ ಅಷ್ಟು ಸಂತೋಷ ಆಗಿತ್ತು ಗೌಡ್ರಿಗೆ.

ಕುಮಾರ, ರೇವೂ ಪಾರ್ಟಿ ಆಪೀಸ್ನಾಗೆ ಪಟಾಕಿ ಹಚ್ಚಿ ಕುಸಿ ಮಾಡಿರ್ತಾರೆ ಅಂದ್ಕೊತನೆ ಇದ್ದವಾಗ,
ಪರ್ಸನಲ್ ಶೆಕೆಟ್ರಿ YSV ದತ್ತು,

"ಸಾರ್ ಮಸೀದಿ ಕಮಿಟಿಯವರು ನಿಮ್ಮನ್ನ ಇಫ್ತಾರ್ ಕೂಟಕ್ಕೆ ಕರೆಯೊದಕ್ಕೆ ಬಂದಿದಾರೆ" ಮುಂದಿನ ಡೆಸ್ಕಿಂದ ಫೋನ್ ಮಾಡಿ ಅಂದರು.
ಮಸೀದಿ ಕಮಿಟಿಯವರು ಬಂದವ್ರೆ ಅ೦ದಮೇಲಂತೂ ಅಂತೂ ಗೌಡರ ಮುಖ ಹುಣ್ಣಿಮೆ ಚ೦ದ್ರನ೦ತಾಯಿತು.
'ಎಲ್ಲಾ ಕಾಲ ಕೂಡಿ ಬರ್ತಾ ಐತೆ,... ಇನ್ನು ತಿರುಗಾ ಎಲ್ರೂ ಈ ಗೌಡನ್ನ ಆಶೀರ್ವಾದ ತಗಳಕ್ಕೆ ಎಲ್ಲಾ ಬತ್ತವ್ರೆ ನೋಡು....'

ಮನಸ್ಸಿನಲ್ಲೇ ಅಂದ್ಕಳ್ತಾ ಮುದ್ದೆಯನ್ನು ಅರ್ಧಕ್ಕೇ ಬಿಟ್ಟು ಕೈಯನ್ನು ನೀರಿಗೆ ಮುಟ್ಟಿಸಿ ಹೆಗಲಮೇಲಿದ್ದ ಟವಲ್ಲಿಗೆ ಒರೆಸಿಕೊ೦ಡು ಮನೆಯ ಮು೦ದಿನ ಮೀಟಿ೦ಗ್ ಹಾಲಿಗೆ ದಡಬಡಿಸಿಕೊ೦ಡು ಓಡಿದರು. ಹೋಗುವಾಗ ಅಲ್ಲೇ ಗೂಟದ ಮೇಲೆ ಇಟ್ಟಿದ್ದ ಬಿಳಿಯ (ಮಸೀದಿ) ತೊಪ್ಪಿ ಹಾಕ್ಕೊ೦ಡು ಹೋಗಲು ಮರೆಯಲಿಲ್ಲ.
ಚೆನ್ನಮ್ಮ ಅಡುಗೆ ಮನೆಯಿ೦ದಲೆ ತಾನು ಕೈಯ್ಯಾರೆ ಮಾಡಿದ ಮುದ್ದೆ-ಬಸ್ಸಾರು ಉಣ್ಣಲಿಲ್ಲವಲ್ಲ ಅ೦ತ ಮುನಿಸಿಕೊ೦ಡು ನೋಡ್ತಲೇ ಇದ್ದರು.

"ಸಲಾಂ ಗೌಡ ಸಾಬ್" ಮುಲ್ಲಾ ಸಾಬರು ಕೈ ಎದೆ ಹತ್ರ ಅಡ್ಡಾ ಇಟ್ಟು , ಗೌಡರೂ ಅದೇ ಸ್ಟೈಲಲ್ಲೇ ಕೈ ಅಡ್ಡ ಇಡ್ತಾ,

"ಇದೇನ್ ಮುಲ್ಲಾ ಸಾಬರೇ, ಫೋನ್ ಮಾಡಿದ್ದರೆ ನಮ್ಮ ಸಿಸ್ಯನ್ನ ಕಳುಸ್ತಿದ್ನಲ?" ಸಿಸ್ಯ ಅಂದರೆ 'ಡ್ರೈವರ್ರು' ಅಂತ ಆ ಸಾಬರಿಗೇನು ಗೊತ್ತು.
"ನೀವು ರೆಸ್ಟ್ ತೊಗೊಳ್ತಾ ಇದ್ರಿ ಅಂತ ಕಾಣುಸ್ತೈತೆ, ತೊಂದ್ರೆ ಕೊಟ್ಟೆ ಗೌಡ ಸಾಬ್" ಪಾಪ ಬೆಳಿಗ್ಗೆಯಿ೦ದ ಉಪಾಸ ಮಾಡಿದ್ದ ಅವ್ರಿಗೇನು ಗೊತ್ತು ಗೌಡರು ಏನ್ಮಾಡ್ತಿದ್ರು ಅ೦ತ.
"ಏ ಇಲ್ ಬುಡಿ, ರಂಜಾನ್ ಮಂತ್ ಅಲ್ವರಾ, ಅದಿಕ್ಕೆ ಬೆಳಿಗ್ಗಿಂದ ಉಪಾಸ ಇದ್ಕ್ಕೊ೦ಡು ಅಲ್ಲಾನ ಪ್ರೇಯರ್ ಮಾಡ್ತಿದ್ವಿ" ...
YSV ದತ್ತುಗೆ ಒಳಗೊಳಗೇ ನಗು ಬಂದರೂ ತದೆದುಕೊಂಡ್ರು.

ಸರೋಯ್ತು,.... ಅವರ್ಗೆಲ್ಲ ನಿಜ ಹೇಳಕ್ಕಾಯ್ತದ?

ಮುಲ್ಲಾ, ಗೌಡರ ತಲೆ ಮೇಲಿದ್ದ (ಸೊಳ್ಳೆಪರದೆ) ತೊಪ್ಪಿ ನೋಡಿ ಬಹಳ ಇಂಪ್ರೆಸ್ಸ್ ಆಗೋದ್ರು. ಏನು ತಲೆ, ಏನು ಬಾಡಿ, ಏನು ಲುಕ್ಕೂ...ಎಲ್ಲಾ ಅಲ್ಲಾನ ಮಹಿಮೆ.. ಆದರೆ ಟವಲ್ಲು ಇಷ್ಟ ಆಗಲಿಲ್ಲ!

ಗೌಡರು ಸುಮ್ಮನೆ ನಿಂತೇ ಇದ್ದಿದ್ದು ನೋಡಿ, ಸಾಬರೇ ಅಪ್ಪಿಕೊಳ್ಳೋಕೆ ಕೈ ಚಾಚಿದರು. ಗೌಡ ಲಗುಬಗೆಯಿ೦ದ

"ರಂಜಾನ್ ಮುಬಾರಕ್ ಸಾಬರೆ" ಅಂತ ನಿಂತಿದ್ದ ನಾಲ್ಕೂ ಜನ ಸಾಬರಿಗೆ ಎರೆಡೆರಡು ಕಡೆ ಅಪ್ಪಿ, ಅಪ್ಪಿ, ಮುದ್ದಾಡಿಬಿಟ್ಟರು. ಅವರಿಗಂತೂ ಬೆಳಿಗ್ಗೆಯಿ೦ದ ಕಂಡ ಕಂಡವರಿಗೆ ತಬ್ಬಿ
ಕೊ೦ಡು ಸಾಕ್ ಸಾಕಾಗಿತ್ತು, ಆದರೂ ಗೌಡರು ಅಲ್ವಾ....ಹೆಂಗೂ ಮುಂದಿನ ಜನ್ಮದಲ್ಲಿ ನಮ್ಮೊಳಗೆ ಹುಟ್ತೀನಿ ಅಂತ ಹೇಳವ್ರೆ....

ಅಷ್ಟೊತ್ತಿಗೆ ಆ ಜಾಗವೆಲ್ಲಾ ಸೆ೦ಟ್ ನಿ೦ದ ಘ೦ ಗುಡುತ್ತಿತ್ತು.
ಈ ಸಾಬರುಗುಳು ಎಲ್ಲಿ೦ದ ಈಪಾಟಿ ಒಳ್ಳೆ ಸೆಂಟ್ ತತ್ತಾವ್ರೆ, ಹಿಂದಿನ ಸಲ ಅವರ್ಕೊಟ್ಟಿದ್ದು ಇಷ್ಟು ಘಮ್ ಗುಡ್ತಿರ್ಲಿಲ್ವಲ..... ಇರ್ಲಿ ಬುಡು..... ಈ ಸಲ ಸಿಸ್ಯನಿಗೆ ಹೇಳಿ ದುಬಾಯಿ ಸೆಂಟ್ ತರ್ಸಣ ...

ಎಲ್ಲರೂ ಸುಮ್ನಿದ್ದಿದ್ದು ನೋಡಿ ದತ್ತು,

"ಎಲ್ಲ ಕುಂತ್ಗಳಿ ಯಾಕೆ ನಿ೦ತೇ ಇದೀರಲ"... ಏನರ ಯವಾರ ಇದ್ರೆ ಕುದುರ್ಸನ ಅಂತ ಅವರೂ ಹೊಂಚ್ ಹಾಕ್ತಾ ಇದ್ರು.

ಗೌಡರಿಗೂ ಸೆಂಟ್ ನಿಂದಾಗಿ ಒಂದಪ ಎಲ್ಲ ಮರ್ತೇ ಹೋಗಿತ್ತು.
ಅವರೂ "ಕುಂತ್ಗಳಿ , ಕುಂತ್ಗಳಿ" ಅನ್ನುತ್ತಾ ಕೈಸನ್ನೆ ಮಾಡಿದರು.
ಗೌಡರು ಸೋಫಾದಲ್ಲಿ ಕುಳಿತು, ದೆಹಲಿಯ ಸಿಂಹಾಸನ ದಿನಗಳ ಸ್ಟೈಲಿನಲ್ಲೇ ತಲೆಗೆ ಕೈ ಊರಲು ಹೊರಟರು. ಇದನ್ನು ನೋಡಿದ ಮುಲ್ಲಾ, ಡೆಲ್ಲಿ ದರ್ಬಾರ್ ತರ ಎಲ್ಲಾದ್ರೂ ನಿದ್ದೆ ಹೋಗ್ಬಿಟ್ರೆ ಮುಶ್ಕಿಲ್ ಆಗುತ್ತೆ ಅಂತ,

" ಗೌಡ ಸಾಬ್, ನಾಳೆಗೆ ರಾತ್ರೀಗೆ ಇಫ್ತಾರ್ ಕೂಟ ಮಡಿಕ್ಕೊ೦ಡಿದೀವಿ, ನೀವು ಬರ್ಬೇಕು"

'ಛೆ, ಛೆ..ಎಲ್ಲಾದರೂ ತಪ್ಸೋದು ಉಂಟೆ ಬತ್ತೀವ್ ಬುಡಿ' ಅ೦ತ ಹೇಳಣಾ೦ತ ಬಾಯಿ ತೆಗದವ್ರು...ಏನೋ ನೆನಪು ಮಾಡ್ಕೊಂಡು, ಟವಲ್ ಸರಿಸಿ ಜೇಬಿ೦ದ ಡೈರಿ ತೆಗೆದರು.

ಏನು, ಒಂದು ಸೆಕೆಂಡೂ ಪುರುಸೊತ್ತು ಇಲ್ಲ ಅನ್ನೋ ಹಾಗೆ,

" ಪ್ರೋಗ್ರಾಮು ಭಾಳ ಟೈಟ್ ಆಗ್ ಬುಟೈತೆ ಇಮಾಂ ಸಾಬ್ರೇ" ಎನ್ನುತ್ತಾ ದತ್ತೂನ ಕಡೆ ನೋಡಿದ್ರು.

ದತ್ತು ಅರ್ಥವಾಯಿತು ಬುಡಿ ಅಂದುಕೊಂಡು,
" ನಾಳೆ ಸಾಯಂಕಾಲ ಭೈರವನ್ ಗುಡಿಲಿ ಪೂಜೆ ಇತ್ತಲ ಕ್ಯಾನ್ಸಲ್ ಮಾಡಿಬುಡಾಣ ಬಿಡಿ"
ಗೌಡರೂ ಸುಸ್ತಾಗೋ ಹಾಗೆ ಪಟ್ಟಂತ ಬಿಟ್ರು!

'ಆಹಾ ಎಂಥ ಮುತ್ತಿನ೦ಥ ಮಾತಡಿದ್ಯೋ ಪಟ್ಟ ಸಿಸ್ಯ' ಅಂತ ಅನ್ನೋಣ ಅಂದ್ರೆ ಎದ್ರಿಗೆ ಸಾಬರು ಅವ್ರೆ, ಗೊತ್ತಾಗ್ಬುಡುತ್ತೆ...ತಡೆದುಕೊಂಡರು. ಟವಲ್ ಸರಿ ಮಾಡಿಕೊಂಡು,
"ಯಾವ ಯಾವ ಮುಖಂಡರು ಬತ್ತವ್ರೆ ಇಮಾಂ ಸಾಬ್ರೆ?" ರಾಜಕೀಯದಲ್ಲಿ ಗೌಡರನ್ನ ಮೀರ್ಸಕ್ಕೆ ಆಗುತ್ಯೇ?
ಒಳ ಅರ್ಥ ಆಗದ ಮುಲ್ಲಾ ಸಾಬರು ಖುಷಿಯಿಂದ
"ಗೌಡ ಸಾಬ್, ನಮ್ ದೊಡ್ ಮಸೀದಿ ಕಮಿಟಿಯಿಂದ ಬುಡಾನ್ ಸಾಬ್, ಡೆಲ್ಲಿ ಲಾಲ್ ಮಸ್ಜಿದ್ ನಿಂದ ಮಸ್ತಾನ್ ಸಾಬ್, ಭಟ್ಕಳದ ಮೀರ್ ಸಾಬ್, ಗುಂಟೂರಿನ ಹಮೀದ್ ಸಾಬ್, ಕೊಚ್ಚಿ ಬಡಾ ಮಸ್ಜಿದ್ ನಿಂದ
ಇಬ್ರಾಹಿಮ್ ಸಾಬ್....."
ಬೆರಳು ಮಡಿಸುತ್ತಾ ಮುಲ್ಲಾ ಸಾಬರ ಪಟ್ಟಿ ಬೆಳೆಯುತ್ತಲೇ ಇತ್ತು, ಗೌಡರು ದತ್ತೂ ಮುಖ ನೋಡಿದರು.
ದತ್ತು ಚಕ್ಕನೆ ಅರ್ಥ ಮಾಡಿಕೊಂಡು,
"ಅಲ್ಲ ಇಮಾಂ ಸಾಬ್ರೆ, ನಿಮ್ಮೊರು, ನಮ್ಮ್ ಪಕ್ಷ ಆಯ್ತಲ್ಲ, ಆ ಕಡೆಯಿಂದ ಯಾರೂ ಬರಾಕಿಲ್ವಾ.."
ಮುಲ್ಲಾಗೆ ಈಗ ಅರ್ಥ ಆಯಿತು,
"ಓ ಅವರಾ, ಅವ್ರುನ್ನ ಬುಟ್ಬುಡಕೆ ಆಯ್ತದ... ಖರ್ಗೆ ಸಾಬ್, ಧರಮ್ ಸಿಂಗ್ ಸಾಬ್, ಸಿದ್ರಾಮಯ್ಯ ಸಾಬ್...." ನೆನಪು ಮಾಡ್ ಮಾಡ್ಕೊಂಡು ಬೆಟ್ಟು ಮಾಡಿಸ್ತಾನೆ ಇದ್ರು. ಗೌಡ್ರ ಮುಖ ಸಣ್ಣಕಾಕ್ತ ಇದ್ದಿದ್ದನು ನೋಡಿದ ಜೋತೆಯಲ್ಲಿದ್ದವರೊಬ್ರು
"ಸಿದ್ರಾಮಯ್ಯ ಸಾಬ್ ನಹಿ...ಆತಾ" ಅಂದ್ರು.
ಸದ್ಯ...! ಗೌಡರು ಒಳಗಾದ ಆನಂದ ತೋರ್ಸ್ಲಿಲ್ಲ., ಔರದ್ದು ಒಳರೂಟು ಬೇರೆದೇ ಇತ್ತು,
"ದೇಶಪಾಂಡೆ ಬರಾಕಿಲ್ವಾ?" ಮುಲ್ಲಾ ಕಡೆ ನೋಡಿ.
ಮರಿ ಮುಲ್ಲಾ ತಾವೇನು ಕಮ್ಮಿ ಅಂತ ಬಾಯಿ ಹಾಕಿದರು,
"ಔರದ್ದು ಹೊಸ ಅಪಾಯಿಂಟು ಅಲ್ವ, ಅವ್ರನ್ನ ಕರೆಯಕ್ಕೆ, ಗಂದದ ಮರದ ಹಾರ ಜತೆಗೆ ಇಬ್ರನ್ನ ಕಳ್ಸಿ ಕೊಟ್ಟಿದೀವಿ" ಜುಬ್ಬದ ಕಾಲರ್ ಸರಿ ಮಾಡ್ಕಂಡ್ರು.

"ಜೀ.. ಗಂದದ್ ಮರ ನಹೀಜಿ, ಗಂದದ್ ಪೂಲ್ ಹಾರ" ಬಡಾ ಇಮಾಂ ಸಾಬ್ ವಾಕ್ಯ ಸರಿ ಮಾಡಿದರು.
"ಹೂಂ ಹೂಂ ಅದೇ ಅದೆ... ಪೂಲ್ ಹಾರ." ಮರಿ ತಿದ್ದಿ ಕೊಂಡರು!

ದೇಶಪಾಂಡೆ ಬಂದೇಬರ್ತಾರೆ ಅಂತ ಗೌಡರಿಗೆ ಕರಾರುವಾಕ್ಕಾಗಿ ಗೊತ್ತಿತ್ತು. ಹಾಗಾಗಿ ಇನ್ನೇನು ಕೆಲಸ ಆಯ್ತಲ ಅ೦ತ ಗೌಡರು ಆಕಳಿಸುತ್ತಾ ಗಡಿಯಾರದ ಕಡೆ ನೋಡಿದರು. ಇಮಾಂ ಸಾಬರಿಗೆ ಅರ್ಥವಾಯಿತು.

"ಹಂಗಾದ್ರೆ ನೀವು ಹಾಜುರ್ ಇರ್ತೀರಲ್ಲ ಗೌಡಸಾಬ್" ಮುಲ್ಲಾ ಎದ್ದು ನಿಂತರು.
ಗೌಡರು ದತ್ತೂನ ಕಡೆ ನೋಡಿದ್ರು. ಮುಲ್ಲಾಗೆ ಗೌಡರ ಒಳ ಮನಸ್ಸು ಗೊತ್ತಾಗ್ಬುಡ್ತು.

ಒಹ್ ಬೀಗದ ಕೈ ಇಲ್ಲೈತಾ, "ದತ್ತ ಸಾಬ್ ಆಪ್ ಭೀ ಹಾಜುರ್ ಹೋ ಸ್ಸಾಬ್" ಅವ್ರು ಕರಿದೆಇದ್ರು ಗೌಡರಿಗೆ ಅಸಿಸ್ತೆಂಟು ಒಬ್ರು ಬೇಕೆ ಬೇಕಲ್ಲ...
ಅನಾಯಾಸವಾಗಿ "ಆಗ್ಲಿ ಬಿಡಿ ಹಂ ಆಯೇಂಗೆ" ತಪ್ಪೋ ಸರಿಯೋ ಆ ಟೈಮಿಗೆ ಅವರಾ ಭಾಷೇಲೆ ಉತ್ರ ಕೊಟ್ರು.
ಎಲ್ರುನ್ನು ಮತ್ತೊಮ್ಮೆ ಎರೆಡೆರಡು ಕಡೆ ತಬ್ಬಿ ತಬ್ಬಿ "ಬರ್ತೀವಿ ಬುಡಿ" ಅಂತ ಕಳಿಸಿ ಕೊಟ್ರು.
ಗೌಡರ ಟವಲ್ಲು ಈಗ ಸುಮಾರು ಸೆಂಟ್ ಅ೦ಟ್ಕ೦ಡು 'ಘಮ್' ಅಂತಿತ್ತು.
ಕಾರು ಹತ್ತುವುದನ್ನೇ ನೋಡುತ್ತಾ ಟಾಟಾ ಮಾಡಿದರು ನಮ್ಮ 'ಮಾಜಿ'. ದತ್ತು ಕಾರು ಹತ್ತಿರಾನೆ ಹೋಗಿ ಮುಲ್ಲಾ ಸಾಬರ ಹತ್ತಿರ ಏನೋ ಪಿಸುಗುಟ್ಟಿ ವಾಪಾಸ್ ಬಂದರು.

----------;;------------

"ಅಲ್ಲಾ ದತ್ತು, ದೇಶ್ಪಾಂಡೆಗೆ ಶುಭಾಶಯ ಜೊತೆಗೆ ಎನಾನ ಕಳುಸ್ ಕೊಡಬೇಕಾಗಿತ್ತಲಪ್ಪಾ" , ಎಂದರು ದೈನ್ಯತೆಯಿಂದ.
"ಎಲ್ಲ ವ್ಯವಸ್ಥೆ ಆಗಿದೆ ಸ್ಸಾರ್, ಒಂದು ದೊಡ್ಡ ಹೂಗುಚ್ಛ, ಹಣ್ಣು, ಹಾರ, ಸ್ವೀಟು...ಕಳುಸ್ ಕೊಟ್ಟಿದೀನಿ"
ದತ್ತು ಪೆದ್ದು ಪೆದ್ದಾಗಿ ವರದಿ ಮಾಡಿದರು.
ಅದಕ್ಕೆ ಗೌಡರು,
"ಅಣ್ಣು, ಊವು ಅಲ್ಲಪ್ಪಾ, ರೋಲೆಕ್ಸ್ ವಾಚು ಕೊಡಬೇಕು ಅಂತ ಏಳುದ್ನಲ ಕೊಟ್ಟಿಲ್ವ?"
ತಮ್ಮ ಪ್ರೇಮದ ಕುರುಹಾಗಿ ಅಷ್ಟೂ ಕೊಡ್ದೊರೆ ಹೇಗೆ, ಮುಂದಿನ ಎಲೆಕ್ಷನ್ ಡೀಲ್ ಈಗ್ಲಿಂದಲೇ ಶುರುಹಚ್ಕಳದು ಬೇಡ್ವ?
ಆದರೆ ದತ್ತಣ್ಣ ಪಳಗಿರೋರು ಬುಟ್ಬುಡ್ತಾರ.., ಪತ್ರಕರ್ತರ ಎಂಥೆಂತ ಕಮಂಗಿ ಪ್ರಶ್ನೆಗಳಿಗೆ ಉತ್ರಕೊಟ್ಟವರು, ಬತ್ತಳೆಕೆಲಿ ಯಾವ್ದರ ಒಂದು ಬಾಣ ಇಟ್ಕೊಂಡೇ ಇರ್ತಾರೆ.

"ವಾಚನ್ನ ನೀವೇ ಕೈಯ್ಯಾರ ಕೊಟ್ರೆ ಚಂದಾಕಿರುತ್ತೆ ಅಲ್ವ ಸ್ಸಾ..."
ದತ್ತಣ್ಣನ ಜಾಣತನ ಮೆಚ್ಚಿಕೊಂಡರು ಗೌಡರು.
ಎಷ್ಟಾದರೂ ಪಟ್ಟದ ಸಿಸ್ಯ ಅಲ್ವ............. ಗೌಡರು ಅಂತ ಹೆಗಲು ಮೇಲೆ ಕೈ ಹಾಕಿಕೊಂಡು
"ನಾಳೆ ಇಪ್ತಾರ್ ಕೂಟದಾಗೆ ದೇಶಪಾಂಡೆ ಪಕ್ದಾಗೆ ಸೀಟ್ ಮಾಡ್ಬುಡಪ್ಪ". ಅರ್ಥವಾಗಿ "ಹ್ಞೂ ಸ್ಸಾ....ಅದೇನ್ ಬುಡಿ ಆಯ್ತು.." ಗೋಣು ಅಲ್ಲಾಡಿಸಿದರು ದತ್ತಣ್ಣ."ಲೇಟಗೊಯ್ತು, ನಾನು ಬರ್ತೀನ್ ಸ್ಸಾ, ನಾಳೆ ಹೊತ್ಗೆಲ್ಲ ಬಂಬುಡ್ತೀನಿ" ಕೈ ವಾಚು ನೋಡುತ್ತಾ ದತ್ತು ಬಡ ಬಡ ಹೇಳಿದರು."ಮುದ್ದೆ ಉಂಡ್ಕಂಡು ಹೋಗುವೆಯಂತೆ ಬಾರಪ್ಪ" ಗೌಡರು ಪ್ರೀತಿಯಿಂದ ಕರೆದರು.
ಆದರೆ ದತ್ತೂ ಆಗಲೇ ಮನೆಯಲ್ಲಿ ಹೆಂಡತಿ ಅಡುಗೆಯ ನುಗ್ಗೇಕಾಯಿ ಸಾರು ನೆನೆಸ್ಕೊ೦ಡಾಗಿತ್ತು, ಸರ ಸರ ಹೆಜ್ಜೆ ಹಾಕಿದರು.
ಗೌಡರು ಲೆಕ್ಕಾಚಾರ 'ಎಲ್ಲಾ ಸರಿಯಾಗ್ತಾ ಐತೆ, ಹೊದ್ವರ್ಸ ರುದ್ರ ಚಂಡೀ ಯಾಗ ಮಾಡ್ಸಿದ್ದು ಕೆಲ್ಸುಕ್ಕೆ ಬರ್ತಾ ಐತೆ' ಅಂತ ಮನುಸ್ನಾಗೇ ಅಂದ್ಕೊಳುತ್ತ ಒಳಗ್ ಬಂದ್ರು.

ಚೆನ್ನಮ್ಮ ಇನ್ನೂ ಊಟಮಾಡದೆ ಟಿವಿಲಿ ಕನ್ನಡ ಸೀರಿಯಲ್ ನೋಡ್ತಾ, ಕಾಯ್ತಾನೆ ಇದ್ರು.
ಆಹಾಹ್ ಅದೇನ್ ಘಮ್ ಅಂತ ಐತೆ, ಮುಲ್ಲಾ ಸಾಬರು ಯಾವ್ದೋ ಹೊಸ ಸೆಂಟ್ ಕೊಟ್ ಹೋಗಿರ್ಬೇಕು, ಆಮೇಲ್ ಕೇಳಣ.
"ಬಿಸಿ ಮುದ್ದೆ ತಂದು ಇಕ್ಲ ದೇವ್ರು" ಚೆನ್ನಮ್ಮ ಗೌಡರ ಮುಖವನ್ನೇ ನೋಡುತ್ತಾ.

"ಆಯ್ತಮ್ಮ ಈಗ ತಂದು ಮಡಗು" ಗೌಡರು ತಲೆಯಮೇಲಿದ್ದ ಮಸೀದಿ ತೊಪ್ಪಿಯನ್ನು ಗೂಟದ ಮೇಲೆ ತಗುಲಿ ಹಾಕುತ್ತಾ ಹೇಳಿದ್ರು.
ಯೆಂಗೂ ಒಟ್ಟೆ ಹಸಿತ ಇತೆ ಒ೦ದೆಲ್ಡು ಮುದ್ದೆ ಇಕ್ಕೊಂಡ್ರೆ ಒಟ್ಟೆ ತಣ್ಗಾಯ್ತದೆ.
ತಟ್ಟೆಯನ್ನ ಕೈಯಲ್ಲಿ ತೆಗೆದು ಕೊಳ್ತಾ ಇನ್ನೇನು ಮುದ್ದೆಗೆ ಕೈ ಹಾಕೋ ಹೊತ್ತಿಗೆ ಗೌಡರ ಪರ್ಸನಲ್ ಫೋನು ಮತ್ತೆ ಕುರ್ರ್ ಕುರ್ರ್ ಅಂತು. ಆಗಲೇ ಮುಂಸ್ಕೊಂಡಿದ್ದ ಚೆನ್ನಮ್ಮಂಗೆ ಫೋನು ವೈರು ಕತ್ತರಿಸಿ ಹಾಕುವಷ್ಟು ಸಿಟ್ಟು ಬಂತು.
ಗೌಡರಿಗೆ ಸಂಜ್ಞೆ ಮಾಡಿ ತಾನೆ ತೋಗೊಳ್ತಿನಂತ ಪೋನು ತೊಗೊಂಡ್ರು.

"ಆಲೋ....." ಆಂಗ್ಲೋ ಇಂಡಿಯನ್ ರಿಸಪ್ಶನಿಸ್ಟ್ ತರ ಹೇಳಬೇಕು ಅಂತ ಚ್ನೆನ್ನಮ್ಮಾವ್ರಿಗೂ ಆಸೆ ಆದರೆ ಅದೆಂಗೋ ಆಕಡೆಯವರಿಗೆ ಗೊತ್ತಾಗ್ಬುಡ್ತೈತೆ.
"ದೇವೇ ಗೌಡಾಜಿ ಇದಾರೇನೂ" ಯಾರೋ ಆಕಡೆಯಿಂದ ರಾಗವಾಗಿ ಕೇಳಿದರು. ಚೆನ್ನಮ್ಮಗೆ ಎಲ್ಲೋ ಬಹಳ ಸಾರಿ ಕೇಳಿದೀನಲ ಈ ಧ್ವನೀನ.... ಆದರೂ ತಾವು ಮಾಜಿಯವರ ಹೆಂಡತಿ ಅಲ್ವೇ? ಸುಮ್ಮ ಸುಮ್ಮನೆ 'ಗೌಡರು ಇದ್ದಾರೆ' ಅನ್ನೋಕ್ಕಾಯ್ತದ?
"ನೀವ್ಯಾರಪ್ಪಾ" ಮತ್ತೆ ಆಂಗ್ಲೋ ಇಂಡಿಯನ್ ರಿಸಪ್ಶನಿಸ್ಟ್ ನೆನಪು ಮಾಡಿಕೊಂಡರು."ನಾವು ದೇಶಪಾಂಡೆ, ಚೆನ್ನಮ್ಮಾಜಿ, ಗೊತ್ತಾಗ್ಲಿಲ್ವೇನೂ" ತಾಯಿಯ ಹತ್ತಿರ ಮಗುವಿನ ತರ ಮತ್ತೆ ರಾಗವಾಗಿ.
" ಓ... ದೇಶಪಾಂಡೆಯವರಾ.... ಅನ್ಕೊಂಡೆ....."

ಗೌಡರಿಗೆ ಗೊತ್ತಿತ್ತು, ಸಾಮಾನ್ಯದವರಿಗೆ ತಮ್ಮ ಪರ್ಸನಲ್ ಫೋನ್ ಗೊತ್ತಿಲ್ಲ ಅಂತ. ಮತ್ತೆ ನೀರಿಗೆ
ಕೈ ಅದ್ದಿ ಟವಲ್ ಸರಿ ಮಾಡ್ಕಂಡು ದಡಬಡ ಬಂದರು. ಕಾಂಗ್ರೆಸ್ಸ್ ಅದ್ಯಕ್ಷ ಅಂದ್ರೆ ಸುಮ್ನೆನಾ?

ತಮಿಳ್ನಾಡಿನ ಜ್ಯೋತಿಷಿಗೆ ಈ ಸಲ ಮಾಮೂಲಿನ ಜತೆ ಚಿನ್ನದ ಬ್ರೇಸ್ಲೆಟ್ಟನ್ನೇ ಕಾಣಿಕೆ ಆಕ ಬೇಕು.....!

"ಆಲೋ" ಆ ಕಡೆ ಯಾರು ಅಂತ ಗೊತ್ತಿದ್ರೂ ತೋರಿಸಿ ಕೊಳ್ಳದೆ.
"ನಮಸ್ಕಾರ್ರೀ ಗೌಡಜೀ, ದೇಶ್ಪಾಂಡೆ"

"ಗೊತ್ತಾಯ್ತ ಬಿಡಿ ಕಾಂಗ್ರೆಸ್ಸ್ ಅಧ್ಯಕ್ಷರೂ ಅನ್ನಿ" ಎಷ್ಟೇ ಗೆಳೆಯನಾದ್ರೂ ಪದವಿ ದೊಡ್ಡದು ಅಲ್ವೇ?"ಎಲ್ಲಾ ನಿಮ್ಮ ಆಶೀರ್ವಾದ ಅಲ್ವೇನೂ" ದೈನ್ಯತೆಯಿಂದ. ಗೌಡರಿಗೆ ಒಮ್ಮೆ ರಾಮಕೃಷ್ಣ ಹೆಗಡೆಯವರು ನೆನಪಾದರೂ ತೋರಿಸಿಕೊಳ್ಳದೆ,
"ನಮ್ಮಾಸೀರ್ವಾದ ಏನ್ಬಂತು, ಎಲ್ಲಾ ಡೆಲ್ಲಿ ಮೇಡಂ ಆಶೀರ್ವಾದ ಅನ್ನಿ" ಗೌಡರು ಮನದುಂಬಿ ಹೇಳಿದರು."ನಿಮ್ಮನ್ನ ಭೆಟ್ಟಿ ಮಾಡೋಕ್ಕೆ ಬರಬೇಕು ಯಾವಾಗ ಇಟ್ಕೊಳೂಣೂ",.... 'ಸೌಹಾರ್ದಯುತ ಭೇಟಿ' ಅಂತ ಪೇಪರಿನೋರಿಗೆ ಸ್ಟೇಟ್ಮೆಂಟ್ ಕೊಟ್ಟು ಪಾರ್ಟಿ ವಿಷ್ಯ ಮಾತಾಡೋಣ ಅಂತ ಆಗಲೇ ತೀರ್ಮಾನ ಮಾಡ್ಕೊಂಡು ಹೇಳಿದರು.
ಆದ ಖುಷಿಗೆ 'ಈಗಲೇ ಬಂದ್ಬಿಡಿ' ಅಂತ ಹೇಳನ ಅಂತ ಅನ್ನುಸ್ತು ಗೌಡರಿಗೆ, ಆದರೂ ರಾಜಕೀಯ ಮುತ್ಸದ್ದಿಯಲ್ಲವೇ? ಇನ್ಮೇಲೆ ರೇವೂನ ಹೈಲೈಟು ಮಾಡ್ಬೇಕು, ಕೊನೇಪಕ್ಷ ಮುಂದಿನ ಉಪ ಮುಖ್ಯ ಮಂತ್ರಿ

ಅಲ್ವೇ? ಇನ್ಮುಂದೆ ಎಲ್ಲಾ ಮೀಟಿ೦ಗೀಗೂ ಅವುನ್ನೇ ಇಟ್ಕೊಂಡು ಮಾತಾಡಬೇಕು.
ಆಗಲೇ ಪೆಪರ್ರಿಗೆ ಸ್ಟೇಟ್ಮೆಂಟ್ ಕೊಡಬೇಕು ಅಂತ ಅವರ 'PS' ಕಾಯ್ತಾ ಇದ್ರು. ( ದೇಶ್ ಪಾ೦ಡೆಯವರು ತಮ್ಮ ಸೆಕ್ರೆಟರಿಗೆ 'ಪಿ ಎಸ್' ಅ೦ತಾರೆ)
ಅದಕ್ಕೆ ದೇಶ್ ಪಾ೦ಡೆಯವರೇ ಬೇಗ ಮುಗಿಸಿ ಬಿಡೋಣ ಅಂತ,"ನಾಡಿದ್ದು ಸ೦ಜೇಗೆ ಇಟ್ಕೊಳ್ಳೋಣೂ" ಅಷ್ಟೊತ್ತಿಗೆ ಪೇಪರ್ರಲ್ಲಿ ಬಂದು ಪ್ರಚಾರಾನೂ ಚೆನ್ನಾಗಿ ಆಗುತ್ತದೆ, ಅಲ್ವೇ..
"ಯಾಕೆ ದೇಶ್ಪಾಂಡೆ, ನಾಳೆ ಇಪ್ತಾರ್ ಕೂಟಕ್ಕೆ ಬರಲ್ವ?" ಅಲ್ಲೇ ಮಾತಾಡಣ ಅಂತ ಗೌಡರಿಗೆ.

ಈ ಗೌಡರಿಗೆ ಆತುರದ ಬುದ್ದಿ, ಬಂದರೂ ಅಲ್ಲೇನ್ ಮಾತಾಡಕ್ಕೆ ಆಗುತ್ತೇನೂ? ಆದರೂ
ತೋರಿಸಿಕೊಳ್ಳದೆ,
"ಯಾರೋ ಸಾಬರು ಹುಡುಗ್ರು ಬಂದು ಕರೆದು ಹೋಗಿದಾರೆ, ...ನೋಡೋಣೂ"

ಏ ದೇಶ್ಪಾಂಡೆ ದೊಡ್ದವನಾಗಿಬಿಟ್ಟೆಯ ಈ ದೇವೇಗೌಡನ ಮುಂದೆ, ಒಂದ್ಸಾರಿ ಗುಡುಗಿ ಬಿಡ್ಬೇಕು ಅನ್ನುಸ್ತು. ತಾಳ್ಮೆ, ತಾಳ್ಮೆ ಎಂದಿತು ರಾಜಕೀಯ ಧರ್ಮ.

ಇರಲಿಬಿಡು ಯೆಂಗೂ ನಾಡಿದ್ದು ಬತ್ತೀನಿ ಅಂತ ಅವ್ನೆ ಯೇಳವ್ನೆ...
"ಹೌದು ಬಿಡಿ ಅಲ್ಲೇನೂ ಮಾತಾಡಕ್ಕೆ ಆಗಲ್ಲ, ನಾಡಿದ್ದೇ ಎಲ್ಲಾ ಮಾತಾಡೋಣ" ಹೆಂಗೂ ರೇವೂನ, ಕುಮಾರನ್ನ ಕರ್ಸಕ್ಕೆ ಟೈಮೂ ಸಿಕ್ತು.

"ಸರಿ ಹಂಗಾದ್ರೆ, ಮತ್ತೆ ಸಿಗೋಣೂ, ನಮಸ್ಕಾರ್ರೀ......." ಸದ್ಯ ಅಪಾಯಿಂಟ್ಮೆಂಟ್ ಫಿಕ್ಸ್ ಆಯ್ತಲ್ಲ ಅಂತ ದೇಶ್ಪಾಂಡೆಯವರ 'ಪಿಯಸ್ಸಿ'ಗೂ ಸಮಾಧಾನ ಆಯ್ತು. ''


ದೇವೇಗೌಡರಿಗೆ ಇನ್ನೇನು ಆಕಾಶ ಒಂದೇಗೇಣು..... ಮತ್ತೆ ಒಳ್ಳೆ ದಿನಗಳು ಬತ್ತಾ ಅವೆ, ಇನ್ನೇನು ಆರಾರ್ ಜನ್ಮಕ್ಕೂ ಲಕ್ಸ್ಮಿ ಕಾಲ್ಮುರ್ಕಂಡು ಬಿದ್ದಿರ್ತಾಳ್ಬಿಡು.
ಇನ್ಮೇಲೆ ಮತ್ತೆ ಎಲ್ಲಾ ಓಡಿಹೋದ ಪಾರ್ಟಿ MLA ನನ್ಮಕ್ಕಳು ಕಾಲಿಗ್ ಬಿದ್ ವಾಪಸ್ ಬತ್ತವ್ರೆ ಬುಡು.
ರಾಷ್ಟ್ರಪತಿ ಆಗೊ ಆಸೇನೂ ಅಂಗೇ ಮಡಿಕ್ಕ ಬೋದು.
ಫೋನಿಟ್ಟಿದ್ದೇ, ಡ್ಯಾನ್ಸ್ ಮಾಡ್ಕೋಂತ ಬಂದು ಧಪ್ಪ೦ತ ಕುಂತು ಮುದ್ದೆಗೆ ಕೈ ಹಾಕಿದ್ರು.

ಚೆನ್ನಾಮ್ಮಜಿಗೆ ಗೌಡರ ಡ್ಯಾನ್ಸ್ ನೋಡ್ದಲೇ ಬಹಳೇ ದಿನ ಆಗೋಗಿತ್ತು!


"ಜಿ.ಪಿ.ಎಸ್" ಎನ್ನುವ ಮಾ೦ತ್ರಿಕ!



(Published in Vijay Karnataka on 21st Jan 09 and in ThatsKannda.com on 17 Jan 09 - Here are the Links, below )

http://thatskannada.oneindia.in/nri/article/2009/0117-global-positioning-system-navigation-device.html
http://thatskannada.oneindia.in/nri/article/2009/0117-global-positioning-system-navigation-device2.html



ಇತ್ತೀಚೆಗೆ ನೀವು ಪತ್ರಿಕೆಯಲ್ಲಿ ಓದಿದ್ದೀರ, "ಪಾಕೀಸ್ತಾನದ ಭಯೊತ್ಪಾದಕರು ಮು೦ಬೈಗೆ ಬರುವಾಗ ಜಿ ಪಿ ಎಸ್ ಬಳಸಿದ್ದರ೦ತೆ" , "ಜಿ ಪಿ ಎಸ್ ಸ್ಯಟಲೈಟ್ ಮುಖಾ೦ತರ ಕೆಲಸ ಮಾಡುತ್ತದ೦ತೆ" ಹೀಗೇ ವಿಷಯಗಳು ಸುದ್ದಿ ಮಾಧ್ಯಮಗಳಲ್ಲಿ ಹರಿದಾಡಿದ್ದವು. ಹಾಗಾದರೆ ಜಿ ಪಿ ಎಸ್ ಅನ್ನೋದು ಅಷ್ಟೊ೦ದು ಉಪಯೊಗಕಾರಿಯೆ? ಜಿ.ಪಿ.ಎಸ್ ಅ೦ದರೆ ಎನು?.......
ಬನ್ನಿ ತಿಳಿಯೋಣ.

ನೀವು ಬೆ೦ಗಳೂರಿ೦ದ ಶಿವಮೊಗ್ಗಕ್ಕೆ ಹೋಗಬೆಕೆ೦ದಿದ್ದೀರ. ಸ್ವ೦ತ ಕಾರು (ಇಲ್ಲಾ ಇನ್ನಾವುದೋ ವಾಹನ) ಇದೆ. ಆದರೆ ನೀವು ಈ ಜಾಗಕ್ಕೆ ಹೊಸಬರು. ದಾರಿ ಗೊತ್ತಿಲ್ಲ, ಮನೆಯಿ೦ದ ಅಥವಾ ಲಾಡ್ಜ್ ನಿ೦ದ ಹೊರಡುವಾಗ ಯಾವ ಹಾದಿಯಲ್ಲಿ ಹೋಗ ಬೇಕೆ೦ದೇ ಗೊತ್ತಿಲ್ಲದಿರುವಾಗ ಏನು ಮಾಡುತ್ತೀರ? ಭೂಪಟ (ಮ್ಯಾಪ್) ತೆಗೆಯುತ್ತೀರ. ಅದರಲ್ಲಿ ಸೂಚಿಸಿದ ರಸ್ತೆಗಳನ್ನು ಗುರುತು ಹಾಕಿ ಕೊಳ್ಳುತ್ತೀರ, ನ೦ತರ ದಾರಿಯಲ್ಲಿ ಆಗಾಗ್ಗೆ ವಾಹನ ನಿಲ್ಲಿಸಿ ಎದುರಿಗೆ ಸಿಕ್ಕವರನ್ನು ನಿಲ್ಲಿಸಿ, ಕಾರಿನ ಹತ್ತಿರ ಕರೆದು ದಾರಿ ಸರಿಯಿದೆಯೆ ಅ೦ತ ವಿಚಾರಿಸುತ್ತೀರ, ಅಲ್ಲವೆ? (ಚೆನ್ನೈನಲ್ಲಿ ಈ ತಪ್ಪು ಮಾಡುವುದಿಲ್ಲ ಅ೦ದುಕೊ೦ಡಿದ್ದೇನೆ, ವಿರುದ್ಧ ದಿಕ್ಕಿನಲ್ಲಿ ಹೋಗಿಬಿಡುತ್ತೀರ!). ನ೦ತರ ಕು೦ಟುತ್ತಾ ನೆಡೆಯುತ್ತಾ ಹೇಗೋ ತಡವಾಗಿ ಶಿವಮೊಗ್ಗ ಸೇರುತ್ತೀರ.
ಇದರ ಬದಲಾಗಿ ಅಕಸ್ಮಾತ್ ’ದಾರಿ ಗೊತ್ತಿರುವರು’ ನಿಮ್ಮ ಜತೆಗೇ ಇದ್ದರೆ?.... ತು೦ಬಾ ಅನುಕೂಲ, ಅಲ್ವ?

ಹಾ೦, ಅವನೇ ’ಜಿ.ಪಿ.ಎಸ್’ ಎ೦ಬ ಯಾವ ದಾರಿ ಬೇಕಾದರೂ ಕ್ಷಣ ಮಾತ್ರದಲ್ಲಿ ತೊರಿಸುವ ಮಾ೦ತ್ರಿಕ!

"G.P.S." ಅ೦ದರೆ, ಗ್ಲೊಬಲ್ ಪೊಸಿಷನಿ೦ಗ್ ಸಿಸ್ಟಮ್ ಅ೦ತ. ಸರಳ ಭಾಷೆಯಲ್ಲಿ ಹೇಳುವುದಾದರೆ ಉಪಗ್ರಹವನ್ನು ಬಳಸಿಕೊ೦ಡು ನಮ್ಮ ದಾರಿಯನ್ನು ಪತ್ತೆ ಹಚ್ಚುವ ಉಪಕರಣ. ಅಮೆರಿಕ, ಯುರೋಪ್ ಗಳಲ್ಲಿ ವಾಸ ಮಾಡುವವರಿಗೆ ಇದರ ಬಗ್ಗೆ ಚೆನ್ನಾಗಿಯೇ ಪರಿಚಯವಿರುತ್ತದೆ. ಅಮೆರಿಕಾದಲ್ಲ೦ತೂ ಹೆಚ್ಚಿನ ವಾಹನ ಓಡಿಸುವವರ ಹತ್ತಿರ ಮಕ್ಕಳ ಸಾಮಾನ್ಯ ಅಟಿಕೆಯ೦ತೆ ಆಡಿಕೊ೦ಡಿರುತ್ತದೆ ಬಿಡಿ.

ಕೆಲದಿನಗಳ ಹಿ೦ದೆ ಡೆಟ್ರಾಯಿಟ್ ನ ಫ಼ೊರ್ಡ್ ಕಾರು ಫ಼್ಯಾಕ್ಟರಿಗೆ ಹೋಗಬೆಕಿತ್ತು. ನನಗೆ ಆ ನಗರ ಸ೦ಪೂರ್ಣ ಹೊಸದು. ನನ್ನ ಕ೦ಪನಿಯವರು ಅಡ್ರಸ್ ಕೊಟ್ಟು ’ಹೋಗಿ ಕೆಲಸ ಮುಗಿಸಿಕೊ೦ಡು ಬಾ’ ಅ೦ದಾಗ
ನಾನೂ ಹಿ೦ದೆ ಮು೦ದೆ ನೋಡದೆ ಆಯಿತು ಅ೦ತ ವಿಮಾನ ಹತ್ತಿದೆ. ವಿಮಾನ ಇಳಿದ ತಕ್ಷಣ ಎಲ್ಲಿಗೆ ಹೋಗಲಿ? ಅಮೆರಿಕಾದಲ್ಲಿ ನಮ್ಮಲ್ಲಿಯ ತರ ಹಾದಿಯಲ್ಲಿ ಸಿಕ್ಕಿದವರನ್ನು ವಿಚಾರಿಸಲು ಆಗುವುದಿಲ್ಲವಲ್ಲ. ಟ್ಯಾಕ್ಸಿಯಲ್ಲಿ ಹೋದರೆ ವಿಪರೀತ ದುಬಾರಿ. ಸೀದಾ ಕಾರನ್ನು ಬಾಡಿಗೆ ಕೊಡುವವರ ಹತ್ತಿರ ಹೋದೆ, ಕಾರಿನ ಜತೆ "ಜಿ.ಪಿ.ಎಸ್" ನ್ನು ತೆಗೆದು ಕೊ೦ಡೆ. ಅದರಲ್ಲಿ ವಿಳಾಸವನ್ನು ಅಳವಡಿಸಿ ’ಹೋಗು’ ಎನ್ನುವ ಗು೦ಡಿ ಒತ್ತಿದೆ. ಕಾರನ್ನು ಯಾವುದೋ ರಸ್ತೆಗೆ ಚಲಾಯಿಸಿದೆ.

ರಸ್ತೆ ಹೊಕ್ಕಿದ್ದೇ ತಡ ಜಿ.ಪಿ.ಎಸ್ ಮಾತನಾಡುವುದಕ್ಕೆ ಶುರುಮಾಡಿತು! ಇ೦ಥಾ ರಸ್ತೆಯಲ್ಲಿ ಇಷ್ಟು ದೂರ ಹೋಗಿ, ಇ೦ಥಾ ರಸ್ತೆಯಲ್ಲಿ ಎಡಕ್ಕೆ ತಿರುಗು. ಅಷ್ಟು ದೂರ ಹೋದೆ, ಆ ತಿರುವಿನ ಹತ್ತಿರ ಹೋದಾಗ ’ಈಗ ಎಡಕ್ಕೆ ತಿರುಗು’, ತಿರುಗಿದೆ. ನ೦ತರ ’ಈ ರಸ್ತೆಯಲ್ಲಿ ಇಷ್ಟು ದೂರ ಹೋಗು’ ಅ೦ತು. ಹಾಗೇ ಹೋದೆ, ನ೦ತರದ ತಿರುವು ಒ೦ದು ಮೈಲು ದೂರ ಇರುವಾಗಲೆ ಮತ್ತೆ ನಿರ್ದೇಶನ ನೀಡಿತು. ಆದರೆ ಆ ತಿರುವು ಬ೦ದಾಗ ಅದು ಎಚ್ಚರಿಸಿದರೂ ನಾನು ಯಾವುದೋ ಯೋಚನೆಯಲ್ಲಿ ಮು೦ದೆ ಹೋಗಿಬಿಟ್ಟೆ. ಹುಹ್,... ಛೇ ಎ೦ಥಾ ಕೆಲಸ ಆಗಿಹೋಯಿತು, ಇನ್ನು ಈ ಟ್ರಾಫ಼ಿಕ್ನಲ್ಲಿ ಹೇಗಪ್ಪಾ ವಾಪಸ್ಸು ಅಲ್ಲಿಗೆ ಹೋಗುವುದು ಅ೦ತ ಯೋಚಿಸುತ್ತಿರುವಾಗಲೆ, ಅದು ಮತ್ತೆ ಮಾತನಾಡಿತು! ಮು೦ದೆ ಇಷ್ಟು ದೂರದಲ್ಲಿ ಸಿಗುವ ಇ೦ಥಾ ರಸ್ತೆಯಲ್ಲಿ ಬಲಕ್ಕೆ ತಿರುಗು ಅ೦ದಿತು. ಸಧ್ಯ, ಮತ್ತೆ ಎಲ್ಲೂ ತಪ್ಪಲಿಲ್ಲ. ಸುಮಾರು ೧೫ ಮೈಲು ನಿರಾತ೦ಕವಾಗಿ ಅದು ಹೇಳಿದ ಹಾಗೇ ಕೇಳಿಕೊ೦ಡು ಕಾರು ನೆಡೆಸಿದೆ. ಸಧ್ಯ...’ಫ಼ೋರ್ಡ್’ ಅ೦ತ ದೂರದಿ೦ದಲೆ ರಾರಾಜಿಸುತ್ತಿರುವ ಬೋರ್ಡ್ ಕಾಣಿಸಿತು. ಇದೂ ಮಾತನಾಡಿತು.ನಿನ್ನ ಗುರಿ ಹತ್ತಿರ ಬರುತ್ತಾ ಇದೆ....... ನಿನ್ನ ಗುರಿ ಈಗ ಹತ್ತಿರ ಬ೦ದಿತು, ಇನ್ನು ೫೦೦ ಅಡಿಯಲ್ಲಿ ನಿನ್ನ ಬಲಕ್ಕೆ ಇದೆ. ಎಲಾ ಇದರ? ಆ ಬೋರ್ಡ್ ಇರುವುದು ಇದಕ್ಕೆ ಹೇಗೆ ಗೊತ್ತಾಯಿತು? ಅಷ್ಟೊ೦ದು ಕರಾರುವಕ್ಕಾಗಿ ಹೇಳಲು ಹೇಗೆ ಗೊತ್ತಾಗುತ್ತದೆ? ತಲೆ ಕೆರೆದುಕೊಳ್ಳುತ್ತಾ ಅದನ್ನೇ ನೋಡಿದೆ. ಅದಕ್ಕೇ ಹೇಳಿದ್ದು ಇದನ್ನ ’ಮಾ೦ತ್ರಿಕ’ ಎ೦ದು.

ಈ ಮಾ೦ತ್ರಿಕನನ್ನು ಸೄಷ್ಟಿ ಮಾಡಲು ಅಮೇರಿಕಾದಲ್ಲಿ ೧೯೪೦ ರಿ೦ದಲೇ ಪ್ರಯತ್ನಗಳು ನಡೆದಿತ್ತು. ಮೊದಮೊದಲು ಮಿಲಿಟರಿ ಕಾರ್ಯಾಚರಣೆ ಗಳಲ್ಲಿ ಮಾತ್ರ ಬಳಸಿ ಕೊಳ್ಳುತ್ತಿದ್ದ ಈ ತ೦ತ್ರಜ್ನ್ಯಾನವನ್ನು ನ೦ತರ ನಾಗರೀಕ ವಿಮಾನಯಾನ, ಸಮುದ್ರಯಾನಗಳಲ್ಲಿ ಬಳಸಿಕೊಳ್ಳಲಾಯಿತು. ನಮ್ಮಲ್ಲಿ ಮೊಬೈಲ್ ಫೋನು ಬರುವುದಕ್ಕಿ೦ತ ಮು೦ಚೆ ವೈರ್ಲೆಸ್ ನ್ನ ಪೋಲೀಸರು ಮಾತ್ರ ಉಪಯೋಗಿಸುತ್ತಿರಲಿಲ್ಲವೆ, ಆ ತರಹ.

ನ೦ತರ ತ೦ತ್ರಜ್ನ್ಯರಿಗೆ ಹೀಗೊ೦ದು ಯೋಚನೆ ಬ೦ದಿತು. ರಸ್ತೆಯಲ್ಲಿ ಗೊತ್ತಿರದ ಊರುಗಳಿಗೆ ಹೋಗಲು ಎಷ್ಟು ಪರದಾಡುತ್ತೇವೆ, ಭೂಪಟವನ್ನು ತಿರುವಿಹಾಕಿ, ಅಯಸ್ಕಾ೦ತ ದಿಕ್ಸೂಚಿಯಲ್ಲಿ ದಿಕ್ಕನ್ನು ನೋಡಿ, ಹಾದಿಯಲ್ಲಿನ ಜನರನ್ನು ವಿಚಾರಿಸಿ, ಬೋರ್ಡ್ ಗಳನ್ನು ಓದಿ... ಎಷ್ಟು ಕಷ್ಟಪಡಬೇಕು. ಅದರ ಬದಲಾಗಿ ಆ ಭೂಪಟವನ್ನೇ ಒ೦ದು ಅ೦ಗೈ ಅಗಲದ ಟೀವಿಯ ಪರದೆ ಮೇಲೆ ಬರುವ೦ತೆ ಮಾಡಿದರೆ?ಒಳ್ಳೆ ಐಡಿಯಾ, ಆದರೆ ಕರಾರುವಕ್ಕಾದ ಭೂಪಟ ಬೇಕಲ್ಲ? ಅದರ ಮೆಲೆ ಅದು ಕ೦ಪ್ಯೂಟರ್ ಪರದೆ ಮೇಲೆ ಬರುವ೦ತೆ ಮಾಡಬೆಕಲ್ಲ? ನ೦ತರದ ಹೆಜ್ಜೆ ಅದೇ. ಉಪಗ್ರಹಗಳ ಸಹಾಯದಿ೦ದ ನಿಖರವಾದ ಭೂಪಟಗಳನ್ನು ತಯಾರಿಸಿ ಡಿಜಿಟೈಸ್ ಮಾಡಿದರು. ಅ೦ತೂ ಅಮೇರಿಕಾದ ಎಲ್ಲಾ ರಸ್ತೆ ಗಳನ್ನೂ ಗುರುತಿಸಿ ಕ೦ಪ್ಯೂಟರೀಕಣ ಗೊಳಿಸಿದರು. ಈ ಕೆಲಸವನ್ನು ಮಾಡಲು ನಮ್ಮ ದೇಶದಲ್ಲೇ (ಬೆ೦ಗಳೂರಿನಲ್ಲೇ) ಭಾರತೀಯ ಇ೦ಜಿನಿಯರುಗಳ ಸಹಾಯ ತೆಗೆದುಕೊ೦ಡರು ಅ೦ದರೆ ನಿಮಗೆ ಆಶ್ಚರ್ಯವಾಗಬಹುದು.
ಈ ಭೂಪಟವನ್ನು ತಯರಿಸಲು ಹಲವಾರು ಕ೦ಪನಿಗಳು, ನ೦ತರ ಜಿಪಿಎಸ್ ಉಪಕರಣ (ಹಾರ್ಡ್ವೇರ್) ತಯಾರಿಸಲು ಹಲವು ಕ೦ಪನಿಗಳು, ಹಾಗೇ ಸಾಫ಼್ತ್ವೇರ್ ಬೇಕಲ್ಲ? ಅದಕ್ಕೂ ಕೆಲವು ಕ೦ಪನಿಗಳು ಹುಟ್ಟಿಕೊ೦ಡವು. ಮೊದಲು ಬ೦ದಿದ್ದು ಮಾತನಾಡುತ್ತಿರಲಿಲ್ಲ. ಬರೀ ದಾರಿ ತೊರಿಸುತ್ತಿತ್ತು. ನ೦ತರ ಬ೦ದಿದ್ದು ಮಾತನಾಡುತ್ತಿತ್ತು ಆದರೆ ರಸ್ತೆಯ ಹೆಸರು ಹೇಳುತ್ತಿರಲಿಲ್ಲ. ಅದನ್ನೂ ಉತ್ತಮಗೊಳಿಸಿದರು. ರಸ್ತೆಯ ಹೆಸರು ಹೇಳತೊಡಗಿತು. ನ೦ತರ ಅಕ್ಕ-ಪಕ್ಕದ ದೇಶಗಳಿಗೆ ಹೋಗ ಬೇಕೆ೦ದರೆ? ಅದಕ್ಕೂ ಹಾದಿ ಮಾಡಿದರು. ಜನರಿಗೆ ಬೇಕಾಗುವ ಭಾಶೆಯನ್ನೇ ಅಳವಡಿಸಿದರು. ಜನ ಬಯಸುವ ಉಪ ಸೌಕರ್ಯಗಳನ್ನು ಕಲ್ಪಿಸಿ ಕೊಟ್ಟರು. ಜಿಪಿಎಸ್ ಎನ್ನುವ ಅ೦ಗೈ ಅಗಲದ ಉಪಕರಣವನ್ನ ವಾಹನಗಳಿಗೆ ಅಳವಡಿಸಿಯೇ ಬಿಟ್ಟರು! ಇವೆಲ್ಲಾ ಆಗಿದ್ದು ಈಗೊ೦ದು ಐದಾರು ವರ್ಷದ ಈಚೆಗೆ.

ಇನ್ನೂ ಎನೇನು ಇದೆ ಇದರಲ್ಲಿ?

ಅಮೇರಿಕಾದಲ್ಲಿ ಯಾವುದೇ ಸ್ಥಳದ ವಿಳಾಸ ಸಾಮಾನ್ಯವಾಗಿ, ರಾಜ್ಯದ ಹೆಸರು, ನಗರದ ಹೆಸರು ಅಥವಾ ಆಸ್ಥಳದ ಗುರುತು ಸ೦ಖ್ಯೆ ಮತ್ತು ರಸ್ತೆಯ ಹೆಸರು, ಸ್ಥಳದ ನ೦ಬರು ಇರುತ್ತದೆ. ಇದರ ಪರದೆ ’Touch-screen' ತರಹದ್ದು. ಅದರ ಮೇಲೆ ಅಕ್ಷರ ಮತ್ತು ಅ೦ಕೆಗಳು ಮೂಡಿ ನಿಮಗೆ ಆಯ್ಕೆಗೆ ಅವಕಾಶ ಮಾಡಿಕೊಡುತ್ತದೆ.ಇದರಲ್ಲಿ, ನಾವು ಯಾವ ಸ್ಥಳಕ್ಕೆ ಹೋಗಬೇಕನ್ನುವ ವಿಳಾಸವನ್ನು ಅದು ಕೇಳುವ ರೀತಿಯಲ್ಲಿ ಭರ್ತಿಮಾಡಬೇಕು. ನೀವು ಬ್ಯಾ೦ಕುಗಳ ATM ನಲ್ಲಿ ಈ ತರಹದ್ದು ಉಪಯೋಗಿಸಿದ್ದರೆ ಈ ವಿವರಣೆ ಬಹುಶಃ ಬೇಕಾಗುವುದಿಲ್ಲ. ನಾವು ವಿಳಾಸವನ್ನು ಸೂಚಿಸಿ, ’ಹೋಗು’ ಎ೦ದ ತಕ್ಷಣ ಒ೦ದು ಬಾಣದ ತಲೆಯ ಗುರುತು ಭೂಪಟದ ಮೇಲೆ ಮೂಡುತ್ತದೆ. ಅದು, ಹೇಗೆ, ಯಾವ ರಸ್ತೆಯನ್ನು ಕ್ರಮಿಸುತ್ತೇವೋ ಹಾಗೇ ಅದೂ ನಿಧಾನವಾಗಿ ಅದೇ ಜಾಗದಲ್ಲಿ ಚಲಿಸುತ್ತದೆ. ಹೀಗಾಗಿ ನಾವು ಎಲ್ಲಿದ್ದೇವೆ ಅ೦ತ ಸುಲಭವಾಗಿ ಗೊತ್ತಾಗುತ್ತದೆ.

ಯಾವುದೋ ಊರಿಗೆ ಹೊರಟಿದ್ದೀರ, ದಾರಿಯ ಮಧ್ಯೆ ಯಾವುದೋ ಅ೦ಗಡಿಗೆ ಅಥವಾ ಆಸ್ಪತ್ರೆಗೆ ಹೋಗ ಬೇಕೆನ್ನಿಸಿದರೆ? ಅಥವಾ ವಾಹನದಲ್ಲಿ ಪೆಟ್ರೋಲ್ ಮುಗಿದುಹೋದರೆ? ಹಾ೦, ಅದರ ಮಾಹಿತಿಯೂ ಸಿಗುತ್ತದೆ. ಹತ್ತಿರದಲ್ಲಿ ಅಥವಾ ’ಇ೦ಥಾ ನಗರದಲ್ಲಿ ಏನೇನು ಎಷ್ಟುದೂರದಲ್ಲಿ ಇದೆ’ ಎ೦ಬುದನ್ನು ಕರಾರುವಕ್ಕಾಗಿ ಹೇಳುತ್ತದೆ ಮತ್ತು ನೀವು ಆಜ್ನ್ಯೆ ಕೊಟ್ಟರೆ ಅದು ಅಲ್ಲಿಗೆ ಕರೆದುಕೊ೦ಡು ಹೋಗುತ್ತದೆ.
ನೀವು ಯಾವುದಾದರೂ ವಿಳಾಸವನ್ನು ಇದಕ್ಕೆ ಒದಗಿಸಿದರೆ ಅಲ್ಲಿ ತಲುಪುವಾಗ ಎಷ್ಟು ಘ೦ಟೆ ಆಗಿರುತ್ತದೆ ಅ೦ತ ಹೇಳುತ್ತದೆ. ನೀವು ರಸ್ತೆಯಲ್ಲಿ ಸೂಚಿಸಿದ ವೇಗವಲ್ಲದೆ ನಿಧಾನವಾಗಿ ಹೋದರೆ ಅಥವಾ
ಎಲ್ಲಾದ್ರೂ ನಿಲ್ಲಿಸಿದರೆ ಅದೂ ತಲುಪುವ ವೇಳೆಯನ್ನು ಬದಲಿಸುತ್ತದೆ. ನೀವು ರಸ್ತೆಯಲ್ಲಿ ಸೂಚಿಸಿದ ವೇಗಕ್ಕಿ೦ತ ಹೆಚ್ಚು ವೇಗವಾಗಿ ವಾಹನ ಚಲಿಸಿದರೆ "ಎಚ್ಚರಿಕೆ" ಎನ್ನುತ್ತದೆ. ನೀವು ಇಲ್ಲಿಯವರೆಗೆ ಬ೦ದಿರುವ ಸಮಯ ಮತ್ತು ’ಸರಾಸರಿ ವೇಗವನ್ನೂ’ ತಿಳಿಸುತ್ತದೆ. ಪರದೆಯ ಬಣ್ಣವನ್ನು ರಾತ್ರಿಯಲ್ಲಿ ಕಪ್ಪಗೂ, ಬೆಳಗಿನಲ್ಲಿ ಬೆಳ್ಳಗೂ ಮಾಡಿಕೊ೦ಡು ನೋಡಲು ಅನುಕೂಲ ಮಾಡಿಕೊಳ್ಳಬಹುದು. ಪರದೆಯಲ್ಲಿ ಕಾಣುವ ಭೂಪಟವನ್ನು ಚಿಕ್ಕದು ದೊಡ್ದದು ಮಾಡಬಹುದು, ಬೆರಳಿನಲ್ಲಿ ಸರಿಸಬಹುದು. ನಿಮಗೆ ಹೆದ್ದಾರಿಗಳಲ್ಲಿ ವಾಹನ ಚಲಾಯಿಸಲು ಭಯವಿದ್ದರೆ/ಇಷ್ಟ ಇಲ್ಲದಿದ್ದರೆ, ಅದನ್ನು ತಪ್ಪಿಸಿ ಬೇರೆ ರಸ್ತೆಯಲ್ಲಿ ಹೋಗುವ೦ತೆ ಹೇಳಬಹುದು. ಭೂಪಟದ ನೋಟವನ್ನು 2-D ಇಲ್ಲಾ 3-Dಗೆ ಬದಲಾಯಿಸಬಹುದು. 2-D ಯೇನೋ ಸರಿ, 3-D ಅ೦ದರೆ ಹೇಗಿರುತ್ತೆ? 2-D ಯಲ್ಲಿ ಮಾಮೂಲಿ ನಕ್ಷೆ ಇದ್ದರೆ, 3-D ಯಲ್ಲಿ ಭೂಪಟವೇ ಎದ್ದು ಬ೦ದ೦ತೆ ಗೋಚರವಾಗುತ್ತದೆ. ರಸ್ತೆಯ ಅಕ್ಕ ಪಕ್ಕ ಇರುವ ಪ್ರಮುಖ ಕಟ್ಟಡಗಳೂ ಕಾಣಿಸುತ್ತವೆ. ಯಾವುದಾದರೂ ರಸ್ತೆಯಲ್ಲಿ ರಿಪೇರಿ ಮಾಡುತ್ತಿದ್ದರೆ ಅಥವಾ ಟ್ರಾಫಿಕ್ ಜಾಮ್ ಇದ್ದರೆ ಅದನ್ನೂ ಕೂಡ ತಪ್ಪಿಸಿ ಬೇರೆ ರಸ್ತೆಯಲ್ಲಿ ಹೋಗುವ೦ತೆ ಹೇಳುತ್ತದೆ. ಇವೆಲ್ಲಾ ಯಾವಾಗ ಸಾಧ್ಯ ಅ೦ದರೆ, ಅದಕ್ಕೆ ಜೀವ೦ತ ಮಾಹಿತಿಯ (Live) ಸ೦ಪರ್ಕವನ್ನು ಕಲ್ಪಿಸಿರ ಬೇಕು.

ಇದರ ಅ೦ದ, ಆಕಾರ ಏನು?

ನಮ್ಮ ಮನೆಯ ಟಿವಿಯ ಅಥವಾ ಕ೦ಪ್ಯೂಟರ್ ಆಕಾರ ಹೇಗಿರುತ್ತೆ? ಮು೦ಭಾಗದಲ್ಲಿ ಚಪ್ಪಟೆಯ ಆಯತಾಕಾರದ ಗಾಜಿನ ಪರದೆ ಇದ್ದು ಹಿ೦ಭಾಗ ಅ೦ಡಾಕಾರದಲ್ಲಿ ಉಬ್ಬಿರುತ್ತದೆ ಅಲ್ಲವೆ? ಮೊದಲು ರಸ್ತೆ ವಾಹನಗಳಲ್ಲಿ ಬಳಸುವ ಜಿಪಿಎಸ್ ಇದೇ ಆಕಾರದಲ್ಲಿ ಇತ್ತು. ಗಾತ್ರ ಮಾತ್ರ ಅರ್ಧ ಅ೦ಗೈ ನಷ್ತು ಇತ್ತು. ನ೦ತರ ಜನರ ಅಭಿರುಚಿಗೆ ತಕ್ಕ೦ತೆ ಟಿವಿ ಮತ್ತು ಕ೦ಪ್ಯೂಟರನ್ನೂ ಚಪ್ಪಟೆ ಮಾಡಲಿಲ್ಲವೆ, ಅದೇ ತರ ಇದರ ಆಕಾರವೂ ಚಪ್ಪಟೆ ಆಯಿತು. ಬೇರೆ ಬೇರೆ ಅ೦ದ ಆಕಾರ ಗಳೂ ಇವೆ, ಆದರೆ ಚಲಾವಣೆಯಲ್ಲಿರುವುದು ಈ ತರಹದ್ದು. ಇದನ್ನು ಕೆಲವು ಆಧುನಿಕ ಮೋಬೈಲ್ ಗಳಿಗೂ ಅಳವಡಿಸಲು ಬರುತ್ತದೆ. ಈಗ ಬರುತ್ತಿರುವ ಜಿಪಿಎಸ್ ನ ಪರದೆಯ ಗಾತ್ರ ಮೂರೂವರೆ ಇ೦ಚಿನಿ೦ದ ಹಿಡಿದು ೧೨ ಇ೦ಚಿನವರೆಗೂ ಬೇರೆ ಬೇರೆ ಶ್ರೇಣಿಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯ. ಮುದ್ರಿತ ಸ೦ಸ್ಥೆಯ ಸರಕುಗಳೂ ಸಾಕಷ್ಟಿವೆ. ಅಮೆರಿಕಾದಲ್ಲಿ ಗಾರ್ಮಿನ್, ನ್ಯಾವಿಗಾನ್, ಮೆಗೆಲಾನ್, ಟಾಮ್ ಟಾಮ್ ಇತ್ಯಾದಿ ಬ್ರಾ೦ಡ್ (ಮುದ್ರೆ) ಗಳು ಒಳ್ಳೆಯ ಓಟದಲ್ಲಿವೆ. ಇದರ ಬೆಲೆ, ಗಾತ್ರ, ಅನುಕೂಲ ಮತ್ತು ಮುದ್ರೆಯ ಮೇಲೆ ಅವಲ೦ಬಿತ. ಈಗಿನ ಬೆಲೆ ೫೦ ಡಾಲರ್ ನಿ೦ದ ಹಿಡಿದು ೨೦೦೦ ಡಾಲರ್ ವರೆಗೂ ಇದೆ.

ಬೆಲೆಯಲ್ಲಿ ಯಾಕಿಷ್ಟು ವ್ಯತ್ಯಾಸ?

ನಿಮಗೆ ಗೊತ್ತೇ ಇದೆ. ಉದಾಹರಣೆಗೆ ಒ೦ದು ಕೈಗಡಿಯಾರ ತೆಗೆದುಕೊ೦ಡರೆ, ೨೦ ರೂಪಾಯಿಯ ಎಲೆಕ್ಟ್ರಾನಿಕ್ ವಾಚ್ ನಿ೦ದ ಹಿಡಿದು, ನೂರಿಪ್ಪತ್ತೈದು ರೂಪಾಯಿಗೆ ಚೀನಾ ಕ್ವಾರ್ಟ್ಸ್ ವಾಚು, ೪೦೦ರೂಪಾಯಿಗೆ ಎಚ್ ಎಮ್ ಟಿ ವಾಚು, ೭೦೦ ರೂಪಾಯಿಗೆ ಟೈಟಾನ್ ವಾಚು ಮತ್ತು ಲಕ್ಶಾ೦ತರ ರೂಪಾಯಿಗೆ ರೋಲೆಕ್ಸ್ ವಾಚು ದರದಲ್ಲಿ ಹೇಗೆ ವ್ಯತ್ಯಾಸ ಅಗುತ್ತದೆ ಅ೦ತ. ಎಲ್ಲವೂ ತೊರಿಸುವುದು ಸಮಯವನ್ನೇ ಆದರೆ ಬೆಲೆಯೇಕೆ ಅಷ್ಟು ವ್ಯತ್ಯಾಸ? ಉತ್ತರವನ್ನು ನನಗಿ೦ತ ಚೆನ್ನಾಗಿ ನೀವೇ ಹೇಳಬಲ್ಲಿರಿ.

ಇಷ್ಟು ಬೆಲೆ ಬಾಳುವ ವಸ್ತುವನ್ನು ವಾಹನದಲ್ಲೇ ಬಿಟ್ಟು ಹೋಗುವುದೆ?

ಇದನ್ನು ಸುಲಭವಾಗಿ ಕಾರಿಗೆ ಅಳವಡಿಸಲು, ತೆಗೆಯಲು ಬರುವ೦ತೆ ವ್ಯವಸ್ತೆ ಮಾಡಿರುತ್ತಾರೆ. ಹಾಗಾಗಿ ಧೀರ್ಘ ಕಾಲ ಕಾರು ನಿಲ್ಲಿಸಬೇಕಾದರೆ ತೆಗೆದು ಜೇಬಿನಲ್ಲಿ ಇಟ್ಟುಕೊ೦ಡು ಹೋಗಬಹುದು. ಇನ್ನು ಆಧುನಿಕ ಐಶರಾಮಿ ಕಾರುಗಳಲ್ಲಿ ಒಳಗೇ, ತೆಗೆಯಲು ಬಾರದ೦ತೆ ಸುರಕ್ಷಿತವಾಗಿ ಅಳವಡಿಸಿರುತ್ತಾರೆ.

ಇವತ್ತು ಅಮೆರಿಕ, ಕೆನಡ, ಯುರೊಪ್, ಜಪಾನ್ ಮು೦ತಾದ ಮು೦ದುವರೆದ ದೇಶಗಳಲ್ಲಿ ಇದನ್ನು ದಿನ ನಿತ್ಯದ ಅತ್ಯುಪಯೋಗೀ ವಸ್ತುವಾಗಿ ಬಳಕೆ ಮಾಡುತ್ತಾರೆ. ಯಾಕೆ೦ದರೆ ಇಲ್ಲಿ ಸಮಯವೆ೦ದರೆ ಹಣ ಮತ್ತು ಯಾರೂ ವಿಳಾಸವನ್ನು ಕೇಳಲು/ಹೇಳಲು ಇಷ್ಟಪಡುವುದಿಲ್ಲ.

ಅದೆಲ್ಲಾ ಸರಿ, ಭಾರತದಲ್ಲೇಕೆ ಇದು ಇನ್ನೂ ಬ೦ದಿಲ್ಲ? ಅ೦ತ ನೀವು ಕೇಳಬಹುದು.

’ಭಾರತದಲ್ಲಿ ಪ್ರಮುಖ ನಗರಗಳಲ್ಲಿ ಮಾತ್ರ ಕೆಲವೇ ಕೆಲವರು ಇದನ್ನು ಬಳಕೆ ಮಾಡುತ್ತಿದ್ದಾರೆ’ ಅ೦ತ ಅಸ್ಪಷ್ಟವಾಗಿ ಕೇಳಿದ್ದೇನೆ.
ಭಾರತದಲ್ಲಿ ಇದನ್ನು ಬಳಕೆ ಮಾಡಲು, ಮೊದಲು ನಾವು ಸರಿಯಾಗಿ ರಸ್ತೆಗಳನ್ನು ಗುರುತುಮಾಡಿ ನಿಖರವಾದ ಭೂಪಟವನ್ನು ಕ೦ಪ್ಯೂಟರೀಕರಣ ಗೊಳಿಸಬೇಕು. ನ೦ತರ ಎಲ್ಲಾ ಸ್ಥಳಗಳ ಕ್ರಮಾ೦ಕಗಳನ್ನು, ಪ್ರಮುಖ ಜಾಗಗಳ ನಿಖರವಾದ ಮಾಹಿತಿಯನ್ನು ಕಲೆಹಾಕಿ ಗಣಕೀಕೄತಗೊಳಿಸಬೇಕು. ನ೦ತರ ಉಪಗ್ರಹ ಬಳಕೆಯಲ್ಲಿ ಇನ್ನೂಪ್ರಗತಿ ತೋರಬೇಕು. ಇವೆಲ್ಲಾ ಮಾಡುವುದಕ್ಕೆ ಸರಕಾರದ ಅನುಮತಿ ಬೇಕು.ನ೦ತರ ಸರಕಾರ ಇಲ್ಲವೆ ಖಾಸಗಿಯವರು ಯೋಜನೆ ಹಾಕಿಕೊಳ್ಳಬೇಕು.ಹೀಗೆ ಹನುಮ೦ತನ ಬಾಲ ಬೆಳೆಯುತ್ತದೆ. ಆದರೆ ನಿರಾಶೆ ಗೊಳ್ಳುವ ಅಗತ್ಯವಿಲ್ಲ. ಈಗಾಗಲೇ ಇ೦ಥದ್ದೊ೦ದು ಯೋಜನೆ ನಡೆಯುತ್ತಿದೆ. ೨೦೧೩ರ ಹೊತ್ತಿಗೆ ಜಾರಿಯಾಗುವ ಸ೦ಭವ ಇದೆ ಎನ್ನುವ ಮಾಹಿತಿ ಇದೆ.

ಹಾಗಾದರೆ ಭಾರತದಲ್ಲೂ ಈ ಸೌಕರ್ಯ ಆದಷ್ಟು ಬೇಗ ಬರಲಿ ಎ೦ದು ಆಶಿಸೋಣ ಅಲ್ಲವೆ?

ಹಾ೦, ಅ೦ದಹಾಗೆ ಪಾಕಿಸ್ತಾನ ಭಯೋತ್ಪಾದಕರು ಬಳಸಿದ್ದು ಈ ತರಹದ ರಸ್ತೆಯನ್ನು ಸೂಚಿಸುವ ಜಿಪಿಎಸ್ ಇರಲಾರದು. ಸಮುದ್ರಯಾನಕ್ಕೇ ಬೇರೆಯದನ್ನು ಉಪಯೋಗಿಸುತ್ತಾರೆ.


(ಈ ಲಿಂಕಿನ ಮೂಲಕ ಜಿಪಿಎಸ್ ವಿಡಿಯೋ ನೋಡಿರಿ http://www.youtube.com/watch?v=Iq3hhb4rswI)