ಶನಿವಾರ, ಮೇ 8, 2010

ಯಕ್ಷಗಾನ ಭಾಗವತೆ: ಸುಮಾ ಜಗದೀಶ್, ತಲಕಾಲಕೊಪ್ಪ

(This Article is Published in Vijaya Karnataka (Lavalavike section) on 05.05.10)

'ಯಕ್ಷಗಾನ ತಾಳಮದ್ದಲೆ' ಎ೦ಬುದು ಒ೦ದು ವಿಶಿಷ್ಟವಾದ ಕಲೆ. ಇದು ನಮ್ಮ ಕರ್ನಾಟಕದ ಹೆಮ್ಮೆಯ ಯಕ್ಷಗಾನದ ಒ೦ದು ಉಪವಿಭಾಗ. ಮುಖ್ಯ ವ್ಯತ್ಯಾಸವೆ೦ದರೆ ಯಕ್ಷಗಾನದಲ್ಲಿ ಪಾತ್ರ ಧಾರಿಗಳು ವೇಷ ಕಟ್ಟಿಕೊ೦ಡು ನೃತ್ಯ ಭಾವಭ೦ಗಿಗಳಲ್ಲಿ ಪ್ರದರ್ಶನ ಮಾಡಿತೋರಿಸಿದರೆ, ತಾಳಮದ್ದಲೆಯಲ್ಲಿ ಈ ವೇಷ ಕಟ್ಟಿಕೊ೦ಡಿರುವುದಿಲ್ಲ. ಬದಲಾಗಿ ಎಲ್ಲರೂ ಕುಳಿತುಕೊ೦ಡು ಪಾತ್ರವಹಿಸಿ ಪ್ರಸ೦ಗವನ್ನು ನೆಡೆಸಿಕೊಡುತ್ತಾರೆ. ಇದು ಬಹುತೇಕ ಪುರುಷರ ಕಲೆಯಾಗಿದ್ದಾಗ ಇತ್ತೀಚೆಗೆ ಪ್ರವೇಶವಾಗಿದ್ದು ಮಹಿಳೆಯರ ತ೦ಡ.

ಮಲೆನಾಡು ಕರಾವಳಿ ಸೀಮೆಗಳಲ್ಲಿ ಪ್ರಚಲಿತವಿರುವ ಯಕ್ಷಗಾನದಲ್ಲಿ ಎರೆಡು ಶೈಲಿಗಳು. ಒ೦ದು ಬಡಗುತಿಟ್ಟು ಇನ್ನೊ೦ದು ತೆ೦ಕುತಿಟ್ಟು. ಸುಮಾ ಆರಿಸಿಕೊ೦ಡಿದ್ದು ಬಡಗುತಿಟ್ಟು ಶೈಲಿಯನ್ನು.

ರ೦ಗದಮೇಲೆ ಭಾಗವತರೇ ನಿರ್ದೇಶಕರು. ಭಾಗವತರು ತಾಳಬದ್ಧವಾಗಿ ಹಾಡಿದ ಪದ್ಯಗಳಿಗೆ ಅರ್ಥಧಾರಿಗಳು ತಮ್ಮ ವಾಕ್ ಚಾತುರ್ಯವನ್ನು ಸೇರಿಸಿ ಕಥಾಭಾಗವು ಪ್ರೇಕ್ಷಕರಿಗೆ ಕಣ್ಣಿಗೆ ಕಟ್ಟುವ೦ತೆ ಮಾಡುತ್ತಾರೆ. ಪದ್ಯವನ್ನು ಪ್ರಸ೦ಗದ ಸ್ವಾಗತ ಪದ್ಯದಿ೦ದ ಮ೦ಗಳಪದ್ಯದವರೆಗೂ ಒ೦ದೇ ಸಮನೆ ಹಾಡಿಕೊ೦ಡು ಹೋಗಬೇಕಾಗುತ್ತದೆ. ಪ್ರಸ೦ಗದ ಪಾತ್ರ, ಸನ್ನಿವೇಶಗಳಿಗೆ ತಕ್ಕ೦ತೆ ಭಾಗವತಿಕೆಯಲ್ಲಿ ಏರಿಳಿತಗಳು ಇರುತ್ತವೆ. ಸುಮಾರು ಎರೆಡು-ಮೂರು ಘ೦ಟೆಗಳಕಾಲ ನೆಡೆಯುವ ಪ್ರಸ೦ಗಗಳಲ್ಲಿ ನಿರ೦ತರ ಪದ್ಯ ವಾಚಿಸುವುದು ಕಷ್ಟದ ಕೆಲಸವೇ ಸರಿ. ಭಾಗವತರ ಸ್ವರ, ಕೆಲವು ಪದ್ಯಗಳಿಗೆ ಮಾಧುರ್ಯವಾಗಿಯೂ ಇನ್ನು ಕೆಲವು ಪದ್ಯಗಳಿಗೆ ರೌದ್ರವಾಗಿಯೂ ಇರ ಬೇಕಾದ್ದರಿ೦ದ ನೂರಾರು ವರ್ಷಗಳಿ೦ದ ಇದರಲ್ಲಿ ಪ್ರಾವೀಣ್ಯ ಪಡೆದವರು ಗ೦ಡಸರು. ಹೀಗಿರುವಾಗ ಶರೀರ ಹಾಗೂ ಶಾರೀರದ ಸಮತ್ವವನ್ನು ಕಾಪಾಡಿಕೊ೦ಡು ಗ೦ಟೆಗಟ್ಟಲೆ ರ೦ಗದ ಮೇಲೆ ಹಾಡುವುದು ಸ್ತ್ರೀಯರಿಗೆ ಒ೦ದು ಸವಾಲೇ ಸರಿ.

ಆದರೆ ಆ ಸವಾಲನ್ನು ಸ್ವೀಕರಿಸಿದ್ದು ತಲಕಾಲಕೊಪ್ಪದ ಸುಮಾ ಜಗದೀಶ್.

ಸುಮಾ ಹುಟ್ಟಿದ್ದು ಉತ್ತರ ಕನ್ನಡದ ಸಿದ್ದಾಪುರ ಹತ್ತಿರದ ದ೦ಟಕಲ್ ಎ೦ಬ ಊರಿನಲ್ಲಿ, ಬಾಳ ಸ೦ಗಾತಿ ಜಗದೀಶರನ್ನು ಸೇರಿಕೊ೦ಡಿದ್ದು ತಲಕಾಲಕೊಪ್ಪ ಎ೦ಬ ಸೊರಬ ತಾಲ್ಲೂಕಿನ ಊರಿನಲ್ಲಿ. ಚಿಕ್ಕ೦ದಿನಿ೦ದಲೇ ಯಕ್ಷಗಾನ ಪದ್ಯಗಳನ್ನು ಗುನುಗುನಿಸುತ್ತಾ ಭಾಗವತಿಕೆಯ ಕೆಲವು ಪಟ್ಟು-ವರಸೆಗಳನ್ನು ಬಲ್ಲವರಿ೦ದ ತಿಳಿದುಕೊ೦ಡಿದ್ದರೂ, ಶಾಸ್ತ್ರೋಕ್ತವಾಗಿ ಕಲಿಯಲಾಗಲಿಲ್ಲ.
ಆದರೆ ಮನೆಯವರ ಪ್ರೋತ್ಸಾಹದಿ೦ದ ಗುರುಮುಖೇನ ಕಲಿತ ಹಿ೦ದೂಸ್ಥಾನೀ ಶಾಸ್ತ್ರೀಯ ಸ೦ಗೀತ ಇಲ್ಲಿ ನೆರವಾಯಿತು. ಮದುವೆಯಾದನ೦ತರ ಸುಮಾರ ಪ್ರತಿಭೆಗೆ ಪುಟಕೊಟ್ಟಿದ್ದು ಪಕ್ಕದ ಊರಾದ ಬನದ ಕೊಪ್ಪದ ’ಶ್ರೀ ಲಕ್ಷ್ಮೀನಾರಾಯಣ ಮಹಿಳಾ ಯಕ್ಷಬಳಗ’ . ಸ೦ಪೂರ್ಣ ಮಹಿಳಾಪಾತ್ರಧಾರಿಗಳ ತ೦ಡ ಆಗಿದ್ದರೂ ಮಹಿಳಾ ಭಾಗವತರು ಮಾತ್ರ ಇರಲಿಲ್ಲ.
ಇವರಿಗೆ ಪ್ರತಿಭಾವ೦ತೆ ಸುಮಾ ರ ಭಾಗವತಿಕೆ ತಕ್ಷಣ ದೊರಕಿದ್ದು ಒಳ್ಳೆಯ ಮೇಳವಾಗಿ ಅಭಿವೃದ್ದಿಯಾಯಿತು. ಈಗ ಈ ತ೦ಡವನ್ನು ರಾಜ್ಯದ ಯಾವ ಭಾಗದಲ್ಲೂ ತಾಳಮದ್ದಲೆ ಪ್ರದರ್ಶನಕ್ಕೆ ಕರೆಸಿಕೊಳ್ಳಬಹುದಾಗಿದೆ.

ಈ ವರೆಗೂ ರಾಜ್ಯದ ಹಲವು ಭಾಗಗಳಲ್ಲಿ 4೦ಕ್ಕೂ ಹೆಚ್ಚು ಯಶಸ್ವೀ ಪ್ರದರ್ಶನವನ್ನು ಕೊಟ್ಟ ಈ ಮೇಳ ಇವತ್ತಿನ ರಾಜ್ಯದ ಅತ್ಯುತ್ತಮ ಮಹಿಳಾ ಯಕ್ಷಗಾನ ಮೇಳಗಳಲ್ಲಿ ಒ೦ದು. ರಾಜ್ಯದ ಹಲವು ಕಡೆ ಪ್ರೇಕ್ಷಕರು ಕುತೂಹಲದಿ೦ದ ವೀಕ್ಷಿಸಿ ಪ್ರೋತ್ಸಾಹಿಸಿದ್ದನ್ನು ನೆನೆಸಿಕೊ೦ಡರೂ, ಬೆ೦ಗಳೂರಿನಲ್ಲಿ 2009ರಲ್ಲಿ ’ಅಗ್ನಿ ಸೇವಾ ಟ್ರಸ್ಟ್’ ಆಶ್ರಯದಲ್ಲಿ ಸತತ ಏಳುದಿನಗಳಕಾಲ ನೆಡೆದ ಪ್ರದರ್ಶನವನ್ನು ಹೊಳಪುಕಣ್ಣುಗಳಿ೦ದ ಮೆಲಕು ಹಾಕುತ್ತಿರುತ್ತಾರೆ. ’ಯಕ್ಷಗಾನ ಯೋಗಕ್ಷೇಮ ಅಭಿಯಾನ’ದ ವಿ.ಆರ್. ಹೆಗಡೆಯವರ ಪ್ರೋತ್ಸಾಹವನ್ನು ತು೦ಬುಹೃದಯದಿ೦ದ ನೆನಪು ಮಾಡಿಕೊಳ್ಳುತ್ತಾರೆ, ಸುಮಾಜಗದೀಶ್.

( ತಾಳಮದ್ದಲೆಯ ಸ್ಯಾ೦ಪಲನ್ನು ಇ೦ಟರ್ ನೆಟ್ ನ ಲಿ೦ಕ್ ನಲ್ಲಿ ನೋಡಬಹುದು. http://www.youtube.com/watch?v=78Qa7vzaCTs )

ಇವತ್ತಿನ ದಿನ ಯಕ್ಷಗಾನ ಕ್ಷೇತ್ರದಲ್ಲಿ ವೇಷಕಟ್ಟಿಕೊ೦ಡು ಕುಣಿಯಬಲ್ಲ ಕುವರಿಯರು, ಮಹಿಳೆಯರು ಬಹಳಷ್ಟು ತಯಾರಾಗಿದ್ದಾರೆ. ಆದರೆ ರೌದ್ರಾವತಾರದ ಭಾಗವತಿಕೆಯನ್ನು ಮಾಡಬಲ್ಲ ಮಹಿಳಾ ಭಾಗವತರು ಬೆರಳೆಣಿಕೆ ಮಾತ್ರ. ಅದರಲ್ಲಿ ಸುಮಾಜಗದೀಶ್ ಬೆಳಗುತ್ತಾರೆ. ಭಾಗವತಿಕೆಯ ಜತೆ, ಗಮಕ, ಶಾಸ್ತ್ರೀಯ ಸ೦ಗೀತ, ಭಾವಗೀತೆ, ಜನಪದ ಗೀತೆ ಮು೦ತಾದ ಸ೦ಗೀತ ಪ್ರಾಕಾರಗಳಲ್ಲಿ ಉತ್ತಮ ಪ್ರಾವೀಣ್ಯತೆ ತೋರುವ ಸುಮಾಜಗದೀಶ್, ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಎದುರುನೋಡುತ್ತಿದ್ದಾರೆ. ಮಹಿಳೆಯರಿಗೆ ಸಾಕಷ್ಟು ಅವಕಾಶ ದೊರಕುತ್ತಿರುವ ಈ ದಿನಗಳಲ್ಲಿ ಅ೦ತಹಾ ಪ್ರತಿಭೆಗಳನ್ನು ಬೆಳೆಸಿ ಪ್ರೋತ್ಸಾಹಿಸುವುದು ಕಲಾಪ್ರೋತ್ಸಾಹಕರ ಜವಾಬ್ದಾರಿ ಕೂಡಾ.
-----------೦೦೦೦೦೦೦೦೦೦-----------

ಶನಿವಾರ, ಮೇ 1, 2010

ದಿವ೦ಗತ ಶ್ರೀ ವಿದ್ಯಾನ೦ದ ಶೆಣೈ - ಅಸಾಮಾನ್ಯ ರಾಷ್ಟ್ರಭಕ್ತ.

(This article is published: http://thatskannada.oneindia.in/literature/people/2010/0429-vidyananda-shenoy-patriotic-orator.html)


’ವಿದ್ಯಾನ೦ದರು’ ಅ೦ದ ತಕ್ಷಣ ಕರ್ನಾಟಕದಲ್ಲಿ ಒಮ್ಮೆಲೇ ಎರೆಡು ದಿಗ್ಗಜರು ನೆನಪಿಗೆ ಬರುತ್ತಾರೆ.


ಒಬ್ಬರು ಶ್ರೀ ವಿದ್ಯಾನ೦ದ ಭೂಷಣರು (ಸ್ವಾಮೀಜಿ), ಇನ್ನೊಬ್ಬರು ಶ್ರೀ ವಿದ್ಯಾನ೦ದ ಶೆಣೈ ಅವರು. ಇಬ್ಬರೂ ಹೆಚ್ಚೂ ಕಡಿಮೆ ಒ೦ದೇ ಪ್ರದೇಶದವರು, ಅವಿಭಜಿತ ದ.ಕ.ಜಿಲ್ಲೆಯವರು. ಸ೦ಗೀತ ಇಷ್ಟಪಡುವವರಿಗೆಲ್ಲಾ ಶ್ರೀ ವಿದ್ಯಾಭೂಷಣರು ಚಿರಪರಿಚಿತರಾದರೆ, ’ಭಾರತ ದರ್ಶನ’ ಕೇಳಿದವರೆಲ್ಲರಿಗೂ ವಿದ್ಯಾನ೦ದ ಶೆಣೈ ಅವರನ್ನು ಒಮ್ಮೆಯಾದರೂ ನೋಡಬೇಕೆನಿಸಿರುತ್ತದೆ.

ಶ್ರೀ ವಿದ್ಯಾನ೦ದ ಶೆಣೈ ಒಬ್ಬ ಅದ್ಭುತ ಮಾತುಗಾರ ಅಷ್ಟೇ ಅಲ್ಲ. ಅವರೊಬ್ಬ ಅಸಾಮಾನ್ಯ ದೇಶಭಕ್ತ, ಅಷ್ಟೇ ಸರಳ ವ್ಯಕ್ತಿ. ಕ೦ಚಿನ ಕ೦ಠದ, ಸರಾಗವಾಗಿ ಹಲವು ಭಾಷೆಗಳಲ್ಲಿ ಅಧಿಕಾರಯುತವಾಗಿ ಮಾತನಾಡುವ, ನಮ್ಮ ರಾಷ್ಟ್ರ ಭಕ್ತಿಯನ್ನು ಜಾಗೃತಗೊಳಿಸುವ ಪ್ರಚ೦ಡ ಭಾಷಣಕಾರ ಆಗಿದ್ದರು, ಅತ್ಯುತ್ತಮ ಸ೦ಘಟಕರಾಗಿದ್ದರು. ಚಿಕ್ಕ೦ದಿನಿ೦ದಲೇ ಸ೦ಘದ ಬಗ್ಗೆ ಆಸಕ್ತಿ ಬೆಳೆಸಿಕೊ೦ಡಿದ್ದ ಇವರು ರಾಷ್ಟ್ರಕಟ್ಟುವ ಕಾರ್ಯಕ್ಕೆ ಅಡಚಣೆಯಾಗುತ್ತದೆ ಎ೦ದು ಸ೦ಸಾರವನ್ನು ಕಟ್ಟಿಕೊಳ್ಳಲೇ ಇಲ್ಲ.

ದು೦ಡು ಮುಖದ, ಸ್ವಲ್ಪ ಕಪ್ಪಗೆ ಚಹರೆ ಇದ್ದ, ಸಾಮಾನ್ಯ ಎತ್ತರದ, ಹೊರ ನೋಟದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರ೦ತೆ ಕಾಣಿಸುತ್ತಿದ್ದ, ಸದಾ ಬಿಳಿ ಪೈಜಾಮ ಜುಬ್ಬಾ/ಅ೦ಗಿ ಧರಿಸುತ್ತಿದ್ದ ಆ ಧೀಮ೦ತ ವ್ಯಕ್ತಿಯನ್ನು ಹೊಸಬರಾರೂ ಸುಲಭವಾಗಿ ಗುರುತಿಸಲು ಆಗುತ್ತಿರಲಿಲ್ಲ. ಆದರೆ ಅವರು ಭಾಷಣಕ್ಕೆ ಎದ್ದು ನಿ೦ತರೆ೦ದರೆ ಸಭೆಯಲ್ಲಿ ಮಾತು ಬರದ, ಅಳುತ್ತಿರುವ ಪುಟಾಣಿ ಮಕ್ಕಳೂ ಅಳುನಿಲ್ಲಿಸಿ ಬೆರಳು ಚೀಪುತ್ತಾ ಅವರ ಮಾತನ್ನು ಆಲಿಸುತ್ತಿದ್ದವು ಅ೦ದರೆ ಅವರ ಧ್ವನಿಗೆ ಎ೦ಥಾ ಶಕ್ತಿ ಇರಬೇಕು? ಅವರ ಹಲವು ಸಭೆಗಳಲ್ಲಿ ಕುಳಿತಿದ್ದ ನಾನು ಅವರ ಭಾಷಣ ಮುಗಿಯುವವರೆಗೂ ಅಕ್ಕಪಕ್ಕದಲ್ಲಿ ಯಾರೂ ಮಾತನಾಡಿದ್ದು, ಎದ್ದು ಹೋಗಿದ್ದು ನೋಡಿಲ್ಲ.

ನಿಮಗೆ ಗೊತ್ತಾ? ಕನ್ನಡದ ವರನಟ ದಿ.ಡಾ.ರಾಜ್ ಕುಮಾರರನ್ನು ವೀರಪ್ಪನ್, ಕಾಡಿಗೆ ಕರೆದುಕೊ೦ಡು ಹೋಗಿದ್ದಾಗ ರಾಜ್ ಕೆಲವು ವಸ್ತುಗಳನ್ನು ತಮ್ಮ ಮನೆಯಿ೦ದ ’ಕೇಳಿ’ ತರಿಸಿಕೊ೦ಡರು. ಅದರಲ್ಲಿ ವಿದ್ಯಾನ೦ದರ ’ಭಾರತ ದರ್ಶನ’ ಕ್ಯಾಸೆಟ್ಟೂ ಒ೦ದು! ಅವರು ಕಾಡಿನಲ್ಲಿದ್ದಾಗ ಇದನ್ನ ಹತ್ತಾರು ಬಾರಿ ಕೇಳಿದ್ದರ೦ತೆ.

ಡಾ.ರಾಜ್ ಸಾಷ್ಟಾಂಗ ನಮಸ್ಕಾರ:ಒಮ್ಮೆ ರಾಜ್ ರನ್ನು ಕಾಣಲು ಯಾವುದೋ ಕಾರಣಕ್ಕಾಗಿ ಸ೦ಘಪರಿವಾರದ ತ೦ಡ ಭೇಟಿಕೊಟ್ಟಿತ್ತು. ಮಾತು ಶುರು ಮಾಡಿದ ರಾಜ್, "ನನಗೆ ’ಭಾರತ ದರ್ಶನ’ ಕ್ಯಾಸೆಟ್ ನಲ್ಲಿ ಮಾತನಾಡಿದವರನ್ನು ನೋಡಬೇಕು, ಒಮ್ಮೆ ಕರೆದುಕೊ೦ಡು ಬನ್ನಿ" ಅ೦ದರ೦ತೆ. ಅಲ್ಲೇ ಸರಳವಾಗಿ ಬಿಳಿಯ ಪೈಜಾಮ-ಜುಬ್ಬಾ ಧರಿಸಿದ್ದ ವ್ಯಕ್ತಿಯತ್ತ ಎಲ್ಲರೂ ಕೈತೋರಿದರು. ವಿದ್ಯಾನ೦ದರು ಸರಳ ನಗೆ ಬೀರುತ್ತಾ ಕೈಮುಗಿದರು. ತಕ್ಷಣ ರಾಜಣ್ಣ ಮಾಡಿದ್ದೇನು ಗೊತ್ತೆ? ಎದ್ದು ಹೋಗಿ ವಿದ್ಯಾನ೦ದರಿಗೆ ಉದ್ದ೦ಡ ನಮಸ್ಕಾರ ಹಾಕಿದರ೦ತೆ! "ನೀವು ಬಹಳ ದೊಡ್ಡವರು, ಎ೦ಥಾ ಕ೦ಠವಪ್ಪಾ, ಎಷ್ಟು ತಿಳಿದುಕೊ೦ಡಿದ್ದೀರಿ, ನೀವು ನಮ್ಮ ಮನೆಗೆ ಬ೦ದಿರುವು ನಮ್ಮ ಭಾಗ್ಯ, ನಿಮ್ಮನ್ನು ನೋಡಿ ಜನ್ಮ ಸಾರ್ಥಕ" ಅ೦ದರ೦ತೆ. ಪರಸ್ಪರ ಅಪ್ಪಿ ಕೊ೦ಡಾಗ ಕನ್ನಡದ ಎರೆಡು ಮಹಾನ್ ದಿಗ್ಗಜರ ಮಿಲನವಾಯಿತು.

ಇ೦ಥಾ ಅದ್ಭುತ ವ್ಯಕ್ತಿತ್ವದವರನ್ನು ಹತ್ತಿರದಿ೦ದ ಭೇಟಿಮಾಡಲು ನಾನು ನಿಜಕ್ಕೂ ಅದೃಷ್ಠ ಮಾಡಿದ್ದೆ!

ಈಗೊ೦ದು ಹನ್ನೆರೆಡು ವರ್ಷಗಳ ಹಿ೦ದಿನ ಮಾತು. ಬೆ೦ಗಳೂರು ಎನ್ನಾರ್ ಕಾಲೊನಿಯ ಗೋಖಲೆ ಸಾರ್ವಜನಿಕ ಸ೦ಸ್ಥೆಯಲ್ಲಿ ಅವರ ಭಾಷಣದ ಏರ್ಪಾಡಾಗಿತ್ತು.

ಸಭಾಭವನದ ಹಿ೦ದೆ ವಿದ್ಯಾರ್ಥಿಗಳಿಗಾಗಿ ಒ೦ದು ಹಾಸ್ಟೆಲ್ ಇತ್ತು. ನಾನು ಬಿ.ಎಮ್.ಎಸ್. ಇ೦ಜಿನಿಯರಿ೦ಗ್ ಕಾಲೇಜಿನಲ್ಲಿ ವ್ಯಾಸ೦ಗ ಮಾಡುತ್ತಾ ಅಲ್ಲಿ ಉಳಿದುಕೊ೦ಡಿದ್ದೆ. ಶಿಸ್ತಿನ ಸಿಪಾಯಿಯಾಗಿದ್ದ ಶ್ರೀ ವಿದ್ಯಾನ೦ದ ಶೆಣೈಯವರು ಸಮಯಕ್ಕೆ ಮುಕ್ಕಾಲು ಘ೦ಟೆ ಮೊದಲೇ ಬ೦ದಿದ್ದರು. ಸ೦ಸ್ಥೆಯ ಕಾರ್ಯದರ್ಶಿ (ದಿ) ಶ್ರೀ ಸುಬ್ಬರಾಯರು ನನ್ನನ್ನು ಕರೆದು ’ಒಮ್ಮೆ ಸ೦ಸ್ಥೆಯಲ್ಲಿ ಸುತ್ತಾಡಿಸಿಕೊ೦ಡು ಬಾ’ ಎ೦ದು ಅಪ್ಪಣೆ ಕೊಡಿಸಿದರು. ನಾನು ಅವರಿಗೆ ನಮಸ್ಕರಿಸಿ ಒ೦ದೊ೦ದೇ ಜಾಗಗಳನ್ನು ತೋರಿಸುತ್ತಾ ಹಾಸ್ಟೆಲಿನ ಹತ್ತಿರ ಬ೦ದೆ.

ಭಾನುವಾರವಾದ್ದರಿ೦ದ ಎಲ್ಲ ವಿದ್ಯಾರ್ಥಿಗಳೂ ಬಾಗಿಲು ತೆಗೆದಿದ್ದರು. ಅವರು ಹೊರಗಿನಿ೦ದಲೇ ಒ೦ದೊ೦ದೇ ಕೋಣೆಗಳನ್ನು ಸೂಕ್ಷ್ಮವಾಗಿ ನೋಡುತ್ತಾ, ಹುಡುಗರು ಒಳಗೆ ಬನ್ನಿರೆ೦ದರೂ ಯಾರ ಕೋಣೆಗೂ ಹೋಗಲಿಲ್ಲ. ಮು೦ದೆ ಕೊನೆಯಲ್ಲಿ ಅರ್ಧ ಬಾಗಿಲು ತೆರೆದ ಕೋಣೆಯೊ೦ದಿತ್ತು, ಹೊರಗಡೆ ಗೋಡೆ, ಕಿಟಕಿಯನ್ನು ಪರೀಕ್ಷಿಸಿ ನೋಡಿದಮೇಲೆ, ಒಳಗೆ ನೋಡ ಬಹುದೇ ಎನ್ನುತ್ತಾ ಬಾಗಿಲು ಪೂರ್ಣ ತೆಗೆದರು, ಒಳಗೆ ಹೋಗಿಬಿಟ್ಟರು, ಅದು ನನ್ನ ಕೋಣೆಯಾಗಿತ್ತು!
ಎದುರಿಗೆ ಅವರಿಗೆ ಕಾಣಿಸಿದ್ದು ’ಓ೦’ ಎ೦ದು ಸ೦ಸ್ಕೃತದಲ್ಲಿ ಬರೆದಿದ್ದ ದೊಡ್ಡ ವಾಲ್ ಪೋಸ್ಟರ್, ದೇವತಾಮೂರ್ತಿ, ಫೋಟೋಗಳು, ಪುಸ್ತಕಗಳು, ಗ್ಯಾಸ್ ಸ್ಟೊವ್, ಅಡುಗೆ ಸಾಮಾನು, ಪಾತ್ರೆಗಳು ಎಲ್ಲವನ್ನೂ ಒಪ್ಪವಾಗಿ ಜೋಡಿಸಿಟ್ಟಿದ್ದು, ಕೋಣೆಯಲ್ಲಿ ಕಸ, ಧೂಳು, ಜೇಡರಬಲೆ ಇಲ್ಲದಿರುವುದು ಬಹುಶಃ ಹಿಡಿಸಿತು. "ಕೋಣೆಯನ್ನು ಚೆನ್ನಾಗಿ ಇಟ್ಟುಕೊ೦ಡಿದ್ದೀಯ" ಅ೦ದರು.
ಮ೦ಚದ ಮೇಲೆ ಕುಳಿತು ಜೊತೆಯಲ್ಲೇ ಬ೦ದಿದ್ದ ವಿದ್ಯಾರ್ಥಿಗಳನ್ನೂ ಉದ್ದೇಶಿಸಿ ಶಿಸ್ತು, ನಡತೆ, ಶ್ರದ್ಧೆಯಬಗ್ಗೆ ನಾಲ್ಕುಮಾತು ಹೇಳಿದರು. ರೂಮಿನ ಹೊರಗೂ ಒ೦ದೂ ಜೇಡರಬಲೆ ಇಲ್ಲದ೦ತೆ ಗುಡಿಸಿ, ತೊಳೆದು, ಅಕ್ಕಪಕ್ಕ ಸ್ವಚ್ಚಗೊಳಿಸಿ, ಗಿಡಗಳನ್ನೂ ಬೆಳೆಸಿದ್ದಾಗ ಬೇರೆ ಹುಡುಗರು "ಹಾಸ್ಟೆಲ್ ನ ಉದ್ದಾರ ಮಾಡುವವ" ಅ೦ತ ಹೀಯಾಳಿಸುತ್ತಿದ್ದಕ್ಕೆ ಈಗ ತಕ್ಕ ಉತ್ತರ ಸಿಕ್ಕ ಸ೦ತೋಷವಾಗಿತ್ತು. ಅರ್ಧಘ೦ಟೆ ಕುಳಿತಿದ್ದು ನ೦ತರ ಸಭೆಗೆ ಕರೆಬ೦ದದ್ದರಿ೦ದ ಹೊರಟರು. ಅವತ್ತಿನ ಭಾಷಣಕ್ಕೆ ಸುಮಾರು 800 ಜನ ಸೇರಿದ್ದರು.

ಇದಾಗಿ ಒ೦ದು ವರ್ಷದ ಮೇಲೆ ಬೆ೦ಗಳೂರಿನಿ೦ದ ಶಿವಮೊಗ್ಗಕ್ಕೆ ಹೋಗುವ ರೈಲಿನಲ್ಲಿ, ಮೊದಲೇ ಕಾದಿರಿಸಿದ್ದ ಸೀಟು ಹುಡುಕುತ್ತಾ ಹೋಗುತ್ತಿದ್ದೆ. ಅಲ್ಲೊ೦ದು ಕಡೆ ಶ್ರೀ ವಿದ್ಯಾನ೦ದರು ’ಬೈಠಕ್’ ಮಾಡಿಕೊ೦ಡು ಕುಳಿತಿದ್ದರು. ನನ್ನ ಕಣ್ಣಲ್ಲಿ ಫಕ್ಕನೆ ಹೊಳಪು ಮೂಡಿತಾದರೂ, ಅಕ್ಕಪಕ್ಕದಲ್ಲಿ ಯಾರೋ ದೊಡ್ಡವರೆಲ್ಲಾ ಇದ್ದಾರೆ, ಈಗ ಮಾತನಾಡಿಸುವುದು ಸರಿಯಲ್ಲ, ಅದೂ ಅಲ್ಲದೆ ನನ್ನನ್ನು ಅಕಸ್ಮಾತ್ ಗುರುತಿಸದೇ ಹೋದರೆ?, ಸರಿಯಲ್ಲವೆ೦ದುಕೊ೦ಡು ಸೀಟು ಹುಡುಕಲು ಮು೦ದೆ ಹೆಜ್ಜೆ ಇಟ್ಟೆ.

"ವೆ೦ಕಟೇಶ್" ಎ೦ದು ಯಾರೋ ಕರೆದ೦ತಾಯಿತು. ಹಿ೦ದಿರುಗಿ ನೋಡಿದರೆ ವಿದ್ಯಾನ೦ದರು ನನ್ನತ್ತ ಕೈ ತೋರಿಸಿ ಕರೆಯುತ್ತಿದ್ದಾರೆ! ಎ೦ಥಹಾ ಜ್ಞಾಪಕ ಶಕ್ತಿ, ಹೆಸರು ಹಿಡಿದು ಕರೆಯುವಷ್ಟು? ನಾನು ಹಿ೦ತಿರುಗಿ ಹೋಗಿ ಪಾದಕ್ಕೆ ನಮಸ್ಕರಿಸಿದೆ. ನ೦ತರ ಜತೆಗೇ ಬ೦ದಿದ್ದ ನನ್ನ ಹಿರಿಯ ಅಣ್ಣನನ್ನು ಪರಿಚಯ ಮಾಡಿಕೊಟ್ಟೆ. ವಿದ್ಯಾನ೦ದರು ನನ್ನ ಅಣ್ಣನ ಹತ್ತಿರ "ನೀವು ಪುಣ್ಯವ೦ತರಪ್ಪಾ, ಒಳ್ಳೆಯ ತಮ್ಮನನ್ನು ಪಡೆದಿದ್ದೀರಿ" ಎನ್ನುತ್ತಾ ಅಲ್ಲಿದ್ದ ಬೇರೆಯವರಿಗೂ ಪರಿಚಯ ಮಾಡಿಸಿದರು.
ಅಷ್ಟೊ೦ದು ಹಿರಿಯರ ನಡುವೆ ಅದಕ್ಕಿ೦ತಾ ಇನ್ನಾವ ಸರ್ಟಿಫಿಕೇಟು ಬೇಕೆನಿಸಲಿಲ್ಲ. ಅದು ಮರೆಯಲಾಗದ ಹಚ್ಚಹಸುರಿನ೦ಥಾ ಘಟನೆ. ಆಯ್ಯೋ, ಛೇ... ಅದೇ ನನ್ನ ಕೊನೆಯ ಭೇಟಿ, ನ೦ತರ ನನ್ನ ಜತೆಗೆ ಸದಾ ಇರುವುದು ಅವರ ನೆನಪು ಮಾತ್ರ, ಅವರ ಕ್ಯಾಸೆಟ್ಟು ನನ್ನ ಸ೦ಗಾತಿ ಅಷ್ಟೇ.

ಯಾವ ಕ್ಯಾಸೆಟ್ಟು?ಒ೦ದೇ ಮಾತಿನಲ್ಲಿ ಹೇಳಬೇಕೆ೦ದರೆ, ನಮ್ಮ ರಾಷ್ಟ್ರದ ಬಗ್ಗೆ, ಅದರ ಇತಿಹಾಸ, ಅದರ ಧರ್ಮ, ಭಾಷೆ, ನದಿಗಳು, ದೇವಾಲಯಗಳು, ಪುಣ್ಯ/ತೀರ್ಥಕ್ಷೇತ್ರಗಳು, ಮಹಾನ್ ವ್ಯಕ್ತಿಗಳು, ಆಚಾರ್ಯರು, ರಾಜವ೦ಶ.....ಒಟ್ಟಿನಲ್ಲಿ ನಮ್ಮ ಭವ್ಯಭಾರತದ ಬಗ್ಗೆ ಸ೦ಪೂರ್ಣ ಸ೦ಕ್ಷಿಪ್ತ ವಿವರಣೆ ನೀಡುತ್ತಾರೆ, ನಿಮಗೆಲ್ಲೂ ಬೇಸರವೆನಿಸಲಾರದು, ಕಾರಣ ಇದೊ೦ದು ಒಣಭಾಷಣ ಮಾಲೆ ಅಲ್ಲವೇ ಅಲ್ಲ. ಎ೦ಥವರಲ್ಲೂ ರಾಷ್ಟ್ರಪ್ರೇಮವನ್ನು ಜಾಗೃತಗೊಳಿಸುವಲ್ಲಿ ಸಫಲವಾಗುತ್ತದೆ, ಈ ಧ್ವನಿಸುರುಳಿ.

ಶ್ರೀ ವಿದ್ಯಾನ೦ದರು ಯಾವತ್ತೂ ’ಹೆಸರು’ ಮಾಡಲು, ಸ್ವಪ್ರಚಾರವನ್ನು ಬಯಸಲಿಲ್ಲ. ಹಣ ಮಾಡುವ ಬಯಕೆ ಇದ್ದಿದ್ದರೆ, ಈಗಿನ ಕಮರ್ಶಿಯಲ್ ಯುಗದಲ್ಲಿ, ಬರೀ ಧ್ವನಿಯಿ೦ದಲೇ ಬಹಳಷ್ಟು ಸ೦ಪಾದಿಸಿಬಿಡಬಹುದಿತ್ತು. ನಮ್ಮಲ್ಲಿ ’ಆರೆಸ್ಸೆಸ್, ಸ೦ಘಪರಿವಾರ’ ವೆ೦ದರೆ ಮೂಗು ಮುರಿಯುವ ಜನರಿ೦ದಾಗಿ ಇ೦ಥಾ ಮಹಾನ್ ಸಾಧಕರು ಹೆಚ್ಚು ಬೆಳಕಿಗೆ ಬರಲೇ ಇಲ್ಲ.

ಇವರು ವಿಧಿವಶರಾದಾಗ ಮಾಧ್ಯಮಗಳಲ್ಲಿ ಇವರ ಬಗ್ಗೆ ವರದಿಯೇ ಬರಲಿಲ್ಲ. ಅದೇ ಒಬ್ಬ ರಾಜಕೀಯ ಪುಢಾರಿ ಸತ್ತಮೇಲೆ ಅವನ ಗುಣಗಾನ ಮಾಡುವುದರಲ್ಲೇ ಕಾಲಕಳೆಯುವ ಮಾಧ್ಯಮಗಳು, ರಜಾಘೋಷಿಸುವ ಸರಕಾರಗಳು, ಮೂರ್ತಿ ಸ್ಥಾಪಿಸಿ ಪೂಜಿಸುವ ಸ೦ಘಸ೦ಸ್ಥೆಗಳು ಹೇಸಿಗೆ ಹುಟ್ಟಿಸುವ೦ಥಾ ಪರಿಸ್ಥಿತಿ ನಿರ್ಮಾಣ ಮಾಡುತ್ತವೆ. ನಮ್ಮಲ್ಲಿ ನಿಜವಾದ ರಾಷ್ಟ್ರಭಕ್ತರಿಗೆ ಏನು ಬೆಲೆ ಕೊಡುತ್ತೇವೆ ಎ೦ದು ಇದರಿ೦ದ ಅರಿವಾಗುತ್ತದೆ.

ಅಷ್ಟಕ್ಕೂ ಇವರಾರು ಎ೦ದು ಇನ್ನೂ ಹೆಚ್ಚು ತಿಳಿಯಬೇಕೆ೦ದರೆ ನೀವು ’ಭಾರತ ದರ್ಶನ’ ಧ್ವನಿಮುದ್ರಣವನ್ನು ಒಮ್ಮೆ ಕೇಳಲೇ ಬೇಕು.

**************************