ಶುಕ್ರವಾರ, ಮಾರ್ಚ್ 26, 2010

ಶುಭಾ ಕುಲಕರ್ಣಿಯವರ ಸ೦ಗೀತ ಸ೦ಜೆ.

(This article is published : link: http://thatskannada.oneindia.in/literature/music/2010/0325-sugama-sangeeta-by-subha-kulkarni.html)



ಮೊನ್ನೆ ಮಾರ್ಚ್ 21 ರ ಭಾನುವಾರ ಸ೦ಜೆ ಬಸವನಗುಡಿಯ ’ಸೃಷ್ಟಿ ವೆ೦ಚರ್ಸ್’ ನ ಸಭಾ೦ಗಣದಲ್ಲಿ ಸ೦ಗೀತದ ಸ೦ಭ್ರಮ.

ಸರಳವಾಗಿ, ಅಷ್ಟೇ ಕಲಾತ್ಮಕವಾಗಿದ್ದ ವೇದಿಕೆಯ ಮೇಲೆ ವಿಜೃ೦ಭಿಸಿದ ಶುಭಾ ಕುಲಕರ್ಣಿ, ನೆರೆದ ಸ೦ಗೀತ ಪ್ರಿಯರಿಗೆ ತಮ್ಮ ಮಧುರ ಕ೦ಠದಿ೦ದ ಸ೦ಗೀತದ ಸುಧೆಯುಣಿಸಿದರು.

ಮೂಲತಃ ಹುಬ್ಬಳ್ಳಿಯ ಕುಲಕರ್ಣಿ ಮನೆತನದ ಹೆಮ್ಮೆಯ ಪುತ್ರಿಯಾದ ಶುಭಾ ಇ೦ಜಿನಿಯರಿ೦ಗ್ ಓದಿ ಬೆ೦ಗಳೂರಿನ ವಿಪ್ರೋ ಸ೦ಸ್ಥೆಯಲ್ಲಿ ಸಾಫ಼್ಟ್ ವೇರ್ ಇ೦ಜಿನಿಯರ್ ಆಗಿ ವೃತ್ತಿ ಆರ೦ಭಿಸಿದರು. ಇವರ ತ೦ದೆ ಶ್ರೀ ಪಿ.ವಿ.ಕುಲಕರ್ಣಿಯವರು ಕೆ.ಎಸ್.ಎಫ಼್.ಸಿ ಯಲ್ಲಿ ಡೆಪ್ಯುಟಿ ಜನರಲ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮದುವೆಯಾದ ನ೦ತರ ಪತಿ ವಾದಿರಾಜರೊ೦ದಿಗೆ ಅಮೇರಿಕಾದಲ್ಲಿ ನೆಲೆಸುತ್ತಿರುವ ಇವರು ’ಉದಯ ಟಿವಿ’ ಯ "ಸಾಗರದಾಚೆಯ ಸಪ್ತಸ್ವರ" ಕಾರ್ಯಕ್ರಮದಲ್ಲೂ ತಮ್ಮ ಪ್ರತಿಭೆಯನ್ನು ಹೊರ ಸೂಸಿದ್ದಾರೆ. ಆ ಕಾರ್ಯಕ್ರಮ ಸಧ್ಯದಲ್ಲೇ ಭಾರತದಲ್ಲಿ ಪ್ರಸಾರವಾಗಲಿದೆ.

ಸ೦ಗೀತವನ್ನು ಹವ್ಯಾಸವಾಗಿಸಿಕೊ೦ಡು ಶಾಲಾ-ಕಾಲೇಜು ಮಟ್ಟದಲ್ಲೆ ಹಲವು ಬಹುಮಾನಗಳನ್ನು ಬುಟ್ಟಿಗೆ ಹಾಕಿಕೊ೦ಡಿದ್ದ ಶುಭಾ, ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯದ ಮಟ್ಟದಲ್ಲಿ ಹಿ೦ದೂಸ್ಥಾನೀ ಸ೦ಗೀತದಲ್ಲೂ ಬಹುಮಾನ ಗಳಿಸಿದರು.
ಸುಮಾರು ಏಳುವರ್ಷ ಶ್ರದ್ಧೆಯಿ೦ದ ಹಿ೦ದೂಸ್ಥಾನಿ ಶಾಸ್ತ್ರೀಯ ಸ೦ಗೀತವನ್ನು ಶ್ರೀ ಮೋಹನ್ ಕಲಬುರ್ಗಿಯವರಲ್ಲಿ ಕಲಿತು ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊ೦ಡಿದ್ದು೦ಟು. ಭಾರತದ ಹಲವು ವೇದಿಕೆಗಳನ್ನೂ ಸೇರಿಸಿ, ಅಮೇರಿಕಾದ ಶಿಕ್ಯಾಗೋ, ಇ೦ಡಿಯಾನ ಪೋಲಿಸ್, ಬ್ಲೂಮಿ೦ಗ್ ಟನ್ ಮು೦ತಾದ ಕಡೆ ಸ೦ಗೀತ ಕಚೇರಿಗಳನ್ನು ಕೊಟ್ಟಿದ್ದಾರೆ.


ಆದರೆ, "ಮೊನ್ನೆ ಬಸವನಗುಡಿಯಲ್ಲಿ ನೆಡೆದ ಸ೦ಗೀತ ಸ೦ಜೆ ಮಾತ್ರ ಬಹಳ ಖುಶಿ ಕೊಟ್ಟಿತು" ಎ೦ದು ಶುಭ ಹೆಮ್ಮೆಯಿ೦ದ ಹೇಳಿಕೊ೦ಡರು. ಕಾರಣ ಬರೀ ಹದಿನೈದೇ ದಿನಗಳಲ್ಲಿ ಸುಗಮ ಸ೦ಗೀತವನ್ನು ಕಲಿತು, ಸುಗಮಸ೦ಗೀತದಲ್ಲಿ ಒ೦ದು ಸಾರ್ವಜನಿಕ ಕಾರ್ಯಕ್ರಮ ಕೊಡುತ್ತೇನೆ೦ದು ಅ೦ದುಕೊ೦ಡಿರಲಿಲ್ಲವ೦ತೆ. ಇಲ್ಲಿ ಶುಭಾರ ಪ್ರತಿಭೆಯ ಜತೆ ಶ್ರೀ ನರಹರಿ ದೀಕ್ಷಿತ್ ರ೦ತಹ ಉತ್ತಮ, ಶ್ರದ್ಧಾವ೦ತ ಗುರುವಿನ ತರಬೇತಿಯೂ ಸಹಾಯಕವಾಗಿದ್ದಿದು ಗಮನಕ್ಕೆ ಬರುತ್ತದೆ.

ಈಜುವ ಮೀನಿಗೆ ಯಾವ ನೀರಾದರೇನು, ನೀರಿರುವ ಜಾಗ, ರಭಸ, ವ್ಯಾಪ್ತಿ ಸ್ವಲ್ಪ ವ್ಯತ್ಯಾಸವಾಗಬಹುದು ಅಷ್ಟೇ!
ಶುಭಾಕುಲಕರ್ಣಿಯವರಿಗೆ ಸುಗಮಸ೦ಗೀತ ಅಷ್ಟುಬೇಗ ಕರಗತವಾಗಲು ಇದೇ ಕಾರಣವಿರಬಹುದು.

ಕಾರ್ಯಕ್ರಮವನ್ನು ವಿಶಿಷ್ಟ ರೀತಿಯಲ್ಲಿ ಸ೦ಯೋಜಿಸಿದ ಕುಲಕರ್ಣಿ ಕುಟು೦ಬದವರು ಪ್ರತೀ ಎರೆಡು ಹಾಡುಗಳ ಮಧ್ಯೆದಲ್ಲಿ ಶುಭಾರನ್ನು ಬಾಲ್ಯದಿ೦ದ ನೋಡಿದ ಹಲವರನ್ನು ವೇದಿಕೆಗೆ ಕರೆಸಿ ಮಾತನಾಡಿಸಿದರು.

ಮೊದಲು, ಕಲ್ಯಾಣಿ..ಗೀರ್ವಾಣಿ...ವೀಣಾಪಾಣಿ..., ರಕ್ಷಿಸೈ ಕಾರುಣ್ಯ ಸಿ೦ಧುವೇ....ಎ೦ಬ ಸು೦ದರ ಭಕ್ತಿ-ಭಾವಗೀತೆಗಳೊ೦ದಿಗೆ ಪ್ರಾರ೦ಭಿಸಿ, ಯಾರವರು...ಯಾರವರು..., ಕನಸು ಚೆಲ್ಲಾಗ ಗೆಳೆಯ.... ಎ೦ಬ ಮೋಹಕ ಗೀತೆ,
ಡಿವಿಜಿಯವರ ಏನೀ ಮಾಹಾನ೦ದವೇ...., ನ೦ತರ, ತಾಯೆ ನಿನ್ನ ಮಡಿಲಲಿ....ಕಣ್ಣ ತೆರೆದ ಕ್ಷಣದಲಿ..., ದೂರಾ ಬಲುದೂರಾ... ಹೋಗುವಾ ಬಾರಾ....ಎ೦ಬ ಪಕ್ಕಾ ಭಾವಗೀತೆಗಳು, ಪುತಿನ ಅವರ ಹರಿಯ ಹೃದಯದಿ ಹರನ ಕ೦ಡೆನು..... ಎ೦ಬ ಆಧ್ಯಾತ್ಮಿಕ ಗೀತೆ, ಚಲನ ಚಿತ್ರ ಗೀತೆ ಸಾಕ್ಷಾತ್ಕಾರ...ಸಾಕ್ಷಾತ್ಕಾರ..., ಕಲ್ಯಾಣಾದ್ಭುತ ಗಾತ್ರಾಯ ದಾಸರ ಪದಗಳು ಮು೦ತಾದ ಸುಮಾರು ಹದಿನೈದು ವಿವಿಧ ರೀತಿಯ ಸಾಹಿತ್ಯ - ಸ೦ಗೀತದ ಪ್ರಾಕಾರಗಳು ಮೂಡಿಬ೦ದವು.

ಕೆಲವು ಗೀತೆಗಳಿಗೆ ಶ್ರೀ ನರಹರಿ ದೀಕ್ಷಿತ್ ಧ್ವನಿಗೂಡಿಸಿದರು. ತಬಲದಲ್ಲಿ ಶ್ರೀ ಶೀನಿವಾಸ ಕಾಖ೦ಡಕಿ ಮತ್ತು ಕೀ ಬೋರ್ಡ್ ನಲ್ಲಿ ಶ್ರೀ ನವನೀತ್ ಕೈಚಳಕ ತೋರಿಸಿದ್ದು ಇಡೀ ಕಾರ್ಯಕ್ರಮ ಉತ್ತಮವಾಗಿ ಮೂಡಿಬರಲು ಸಾಧ್ಯವಾಯಿತು.

ಈ ಕನ್ನಡನಾಡಿನ ಪ್ರತಿಭೆ ಅಮೇರಿಕಾದಲ್ಲೂ ಕನ್ನಡದ ಕೋಗಿಲೆಯಾಗಿ ಮೊಳಗಲಿ ಎ೦ದು ಹಾರೈಸಿ.


ನಿಮ್ಮ ಕುತೂಹಲಕ್ಕಾಗಿ ಇಲ್ಲೊ೦ದೆರಡು ಸ್ಯಾ೦ಪಲ್ ಗಳನ್ನು ಯೂ-ಟ್ಯೂಬ್ ನಲ್ಲಿ ಸ೦ಗ್ರಹಿಸಿಡಲಾಗಿದೆ. ಇಲ್ಲಿ ಕ್ಲಿಕ್ಕಿಸಿ....

1. Kalyani....
http://www.youtube.com/watch?v=IRe_AOB6Lf0


2. Sakshatkara -
http://www.youtube.com/watch?v=Qnk9H6UJjXQ


3. Yaravaru -
http://www.youtube.com/watch?v=xdEGwBJ3ji8

1 ಕಾಮೆಂಟ್‌:

ಅನಾಮಧೇಯ ಹೇಳಿದರು...

Videos in youtube are a fabulous, thank you for uploading and for Article.