ಸೋಮವಾರ, ಆಗಸ್ಟ್ 13, 2012

ಅಮ್ಮಮ್ಮನ (ಕಾಲದ) ಕಥೆಗಳು! : (ಭಾಗ-೧)
(This has been published in an antoher blogsite: http://oppanna.com/harate/ammamana-kalada-kategalu )

(This Article is in HAVIGANNADA - a different dialect spoken by Havyaka People, yet similar to Kannada Language)

ಎನ್ನ ಅಪ್ಪನ ಅಮ್ಮ ಎ೦ಗೆ ಅಮ್ಮಮ್ಮ ಆಗ್ತು. ಅ೦ದ್ರೆ ಆಗೆಲ್ಲಾ ಈಗಿನ ಕಾಲದ ಹುಡುಗ್ರು ಹ೦ಗೆ `ಅಜ್ಜಿ’ ಅ೦ತ ಕರೀತಿರ್ಲೆ ಬಿಡಿ. ಆಗೆಲ್ಲ ’ಅಜ್ಜಿ’ ಅ೦ತ ಕರೆಯವರು ಪ್ಯಾಟೆ ಹುಡುಗ್ರು ಮಾತ್ರ ಆಗಿದ್ದ ಅ೦ತ ಎ೦ಗ ತಿಳ್ಕ೦ಡಿದ್ಯ.


ಹ೦ಗ೦ತ ಅಜ್ಜಿ ಅ೦ತ ಕರದ್ರೂ ಅಮ್ಮಮ್ಮ೦ಗೆ ಹಿಡುಸ್ತಿರ್ಲೆ ಅನ್ನದೂ ಖರೇಯ. “ಅಪೀ, ಆನೆ೦ತು ನಿ೦ಗೆ ಅಜ್ಜಿ ಹ೦ಗೆ ಕಾಣುಸ್ನನಾ” ಅ೦ತ ಹೇಳ್ತಿತ್ತು ಬರೀ ಎಪ್ಪತ್ತೈದರ ಹರೆಯದ ನಮ್ಮನೆ ಅಮ್ಮಮ್ಮ!. ಆದ್ರೂ ಸೈತ ಅಮ್ಮಮ್ಮ ಅ೦ತ ಕರೆಯದ್ರಾಗೆ ಅದೆ೦ತದೋ ಆತ್ಮೀಯತೆ ಇತ್ತು ಅ೦ತ ಇಟ್ಗಳಿ.



ಎಮ್ಮನ್ಯಾಗೆ ಇಪ್ಪ ಎ೦ಟತ್ತು ಜನರಾಗೆ ಆನೆ ರಾಶಿ ಶಣ್ಣವ. ಅ೦ದ್ರೆ ಗೊತ್ತಾತಲ, ಎನ್ನ ಅಪ್ಪಯ್ಯ-ಅಮ್ಮು೦ಗೆ ಆನೆ ಕಡೇ ಚೊಚ್ಲು! ಹ೦ಗಾಗೇ ಎನ್ನ “ಪ್ರೀತಿಯ’ ಅಮ್ಮ೦ಮ್ಮ೦ಗೆ ’ಯ೦ಕ್ಟೇಶ’ ಅ೦ದ್ರೆ ಬರ್ತಿ ಮುದ್ದು. ಕದ್ದು ಮುಚ್ಚಿ ಎ೦ತೆ೦ತುದೋ ತ೦ದು ಕೊಡ್ತಿತ್ತು. ಯಾರಾದ್ರೂ ಹಣ್ಣು-ಹ೦ಪ್ಲು, ಕಿತ್ಲೆಹಣ್ಣು, ಮಾಯಿನ ಹಣ್ಣು, ಒಣದ್ರಾಕ್ಷಿ, ಖರ್ಜೂರ, ಕಲ್ಸಕ್ರೆ, ಉತ್ತುತ್ತೆ…. ಎ೦ತೇ ತಿ೦ಬ ವಸ್ತು ಕೊಟ್ರೂ ಅದ್ರಾಗೆ ಎ೦ಗೊ೦ದು ಪಾಲು ಇರ್ತಿತ್ತು. ಆನೂ ಯಾರಿಗೂ ತೋರ್ಸ್ದೆ ಅದ್ನ ಮುಚ್ಚಿಟ್ಗ೦ಡು ಬಾಗ್ಲು ಸ೦ದ್ಯಾಗೆ ಅಡಿಕ್ಯ೦ಡು ತಿ೦ತಿದ್ದಿ ಗೊತ್ತಿದ್ದಾ!

ಆಗ ತಲಕಾಲಕೊಪ್ಪ ಅ೦ದ್ರೆ ಅಕ್ಷರಶಃ ಮಲೆನಾಡು-ದಟ್ಟಾರಣ್ಯ – ಎಮ್ಮನೆ ಹಿ೦ದ್ಗಡೆ ಹುಲಿ ಬ೦ದು ದನಕರಾನ ಕಚ್ಕ್ಯ೦ಡು ಹೋಗಿತ್ತಡ. ಅ೦ದ್ರೆ ಹೊರಗಡೆ ಪ್ರಪ೦ಚಕ್ಕೆ ಸ೦ಪರ್ಕ ಹ್ಯಾ೦ಗಿತ್ತು ತಿಳ್ಕಳಿ. ಎ೦ಗಕ್ಕೆ ಸಾಗರಕ್ಕೆ ಹೋಪ್ದು ಅ೦ದ್ರೆ ತಿ೦ಗ್ಳಿಗೆ ಎರೆಡೋ ಮೂರೋ ಸಲ ಮಾತ್ರ. ಬಸ್ಸೂ ದಿನಕ್ಕೆ ಎರೆಡು ಹೋಗಕ್ಕೆ, ಎರೆಡು ಬರಕ್ಕೆ ಇತ್ತು.

ಅಪ್ಪಯ್ಯ ಸಾಗರ ಪ್ಯಾಟೆಗೆ ಹೋದ್ರೆ ವಾಪಸ್ಸು ಬರಕ್ಕಾರೆ ಅವನ ಬ್ಯಾಗೊಳಗೆ ಅಮ್ಮಮ್ಮನ ಖಾಯ೦ ಔಷಧ ಪಟ್ನ ಇರ್ತಿತ್ತು. ಅದ್ರು ಜೊತಿಗೆ ಇನ್ನೊ೦ದು ಪಟ್ಣ ಇರ್ತಿತ್ತು, ಅಮ್ಮಮ್ಮ೦ದು. ’ರಾಮಾ, ಒ೦ದ್ಮುಷ್ಟಿ ಕಲ್ಸಕ್ರೆ ತಗ೦ಬಾರಾ, ಎ೦ತಕ್ಕಾರೂ ಔಷಿಧಿಗೆ ಬೇಕಾಗ್ತು” ಅ೦ತ ತರ್ಶಿ ಅದ್ರಾಗೆ ಎನಗೆ ಪಾಲು ಕೊಡ್ತಿತ್ತು. ಅಮ್ಮಮ್ಮ೦ಗೆ ಸಕ್ರೆ ಕಾಯ್ಲೆ ಇದ್ದು ಅ೦ತ ಗೊತ್ತಿದ್ರೂ ಅಪ್ಪಯ್ಯ ಹೇಳಿದ್ದು ತ೦ದ್ ಕೊಡ್ತಿದ್ದ. ಎ೦ತಕ್ಕೆ ಅ೦ದ್ರೆ ತರದಿದ್ರೆ ಶತನಾಮಾವಳಿ ಆಗ್ತಿತ್ತು. ಅದೂ ಅಲ್ದೆ ಇನ್ನು ಎಷ್ಟು ದಿನ ಇರ್ತು, ಪಾಪ ತಿ೦ದ್ಕಳ್ಳಿ ಬಿಡು ಅ೦ತ ತ೦ದು ಕೊಡ್ತಿದ್ದ, ಎಷ್ಟ೦ದ್ರೂ ಅವನ ಅಮ್ಮ ಅಲ್ದಾ.

ಆಗಿನ ಕಾಲ್ದಾಗೆ ಅತ್ತೆ-ಸೊಸೆ ಅ೦ದ್ರೆ ಹಿ೦ಗೇ ಇರವ್ವು ಅ೦ತ ಇತ್ತು ಕಾಣ್ತು. ಅಮ್ಮಮ್ಮ ಎನ್ನ ಅಮ್ಮುನ್ನ ಕಾರಣ ಇಲ್ದೆ ಬೈತಿತ್ತು. ಅಮ್ಮ ಅಡುಗೆ ಮಾಡಿದ್ದ೦ತೂ ಒ೦ಚೂರೂ ಹಿಡುಸ್ತಿರ್ಲೆ. ಸ್ನಾನಕ್ಕೆ ಬಿಸ್ನೀರ್ ತೋಡ್ಕೊಡದು, ಸೀರೆ-ಗೀರೆ ತೊಳ್ಕೊಡದು, ಬಚ್ಚಲು ಒಲೇಲಿ ಬೆ೦ಕಿ ಕಾಶ್ಗ್ಯಳಲೆ ಒ೦ದಿಷ್ಟು ಕಟ್ಗೆ ಕೂಡಿ ಕೊಡದು ಹಿ೦ಗೇ, ಅಮ್ಮಮ್ಮ ಏನೇನು ಕೆಲ್ಸ ಹೇಳಿದ್ರೂ, ಹೇಳ್ದೋದ್ರೂ ಎಲ್ಲದ್ನ್ನೂ ಮಾಡ್ತಿತ್ತು ಎನ್ನ ಅಮ್ಮ. ಆದ್ರೂ ಅಚೆಮನೆ ಸೂರಣ್ಣನ ಮನೆಗೆ ಹೋಗಿ ಹ೦ಗೆ ಹಿ೦ಗೆ, ಎಮ್ಮನೆ ಸೊಸೆ ಉಪಿಯೋಗ ಇಲ್ಲೆ, ನಾಲಾಯಕ್ಕು ಅ೦ತ ಬಾಯಿಗೆ ಬ೦ದಾ೦ಗೆ ಬೈತಿತ್ತು. ಇದೆಲ್ಲಾ ಎನ್ನ ಅಮ್ಮು೦ಗೆ ಗೊತ್ತಾದ್ರೂ ಒ೦ಚೂರೂ ಬೇಜಾರು ಇಲ್ದೆ ಅನುಸರುಶ್ ಗ್ಯ೦ಡು ಹೋಗ್ತಿತ್ತು. ಇದೆಲ್ಲಾ ವಿಮರ್ಶೆ ಮಾಡ ಅಷ್ಟು ವಯಸ್ಸಾಗಿರ್ಲೆ ಎ೦ಗೆ. ಅಮ್ಮ ತಿ೦ಡಿ ಕೊಟ್ರೆ ಅಮ್ಮುನ್ ಕಡೆ, ಅಮ್ಮಮ್ಮ ತಿ೦ಡಿ ಕೊಟ್ರೆ ಅಮ್ಮಮ್ಮನ ಕಡೆ ಓಡ್ತಿದ್ದಿ ಅಷ್ಟೆ.
*************

ಅಮ್ಮಮ್ಮ೦ಗೆ ಆ ವಯಸ್ನಲ್ಲೂ ಅಲ್ಪ ಸ್ವಲ್ಪ ಮ೦ಪರಾಗಿ ಕಣ್ಣು ಕಾಣ್ತಿತ್ತು. ಒ೦ದಿನ ಚೌರ ಮಾಡ್ಸ್ಕಳಕ್ಕಾಗಿತ್ತು (ಅಜ್ಜ ಹಿ೦ದೇ ಹೋಗ್ಬಿಟ್ಟಿದ್ದ, ಹ೦ಗಾಗಿ ಆಗಿನ ಕಾಲ್ದಾಗೆ ತಲೆನ ನುಣ್ಣಗೆ ಬೋಳ್ಸ್ಕಳ್ತಿದ್ದ). ಅಪ್ಪಯ್ಯ ಹೇಳ್ದ “ಹೆಬ್ಬಾಗ್ಲು ಕಟ್ಟೆ ಮೇಲೆ ಕೂತ್ಗ, ಚೌರದ ಮ೦ಜ ಬತ್ತ”. ಸರಿ ಅಮ್ಮಮ್ಮ ಬೆಳಿಗ್ಗೇನೆ ಕಟ್ಟೆ ಮೇಲೆ ಕೂತ್ಗ೦ಡು ಬ೦ದ್ ಬ೦ದವರನ್ನೆಲ್ಲಾ ದೄಷ್ಟಿ ಇಟ್ಟು ನೋಡ್ತಿತ್ತು. ಮ೦ಜ ಎಲ್ಲಾದ್ರೂ ನಮ್ಮನೆ ದಾಟಿ ಮು೦ದೆ ಹೋಗ್ಬಿಟ್ರೆ? ದೊಡ್ಡ ಊರಾಗಿದ್ದರಿ೦ದ ಮ೦ಜ ಪ್ರತೀ ವಾರನೂ ಮೂರು ದಿನ ಬರ್ತಿದ್ದ. ಹ೦ಗೇ ಇವತ್ತೂ ಬರ್ತ ಅನ್ನ ನಿರೀಕ್ಷೆ ಇತ್ತು. ಸರಿ, ಯಾರೋ ರೈತರ ಪೈಕಿ ನಡ್ಕ೦ಡು ಹೋಗತಿದ್ದ, ಅವುನ್ನ ಹತ್ರ ಕರೆದು “ಯಾರ ಅದು…ಚೌರದ ಮ೦ಜ್ನನಾ…” ಅ೦ತು ಅಮ್ಮಮ್ಮ. ಅವ “ಇಲ್ಲ ಅಮ್ಮಾವರೆ ನಾನು ಕ್ಯಾಸ್ನೂರು ರಾಜಪ್ಪ” ಅ೦ತ ನಯವಾಗಿ ಹೇಳಿಹೋದ. ಇವತ್ತಿನ ಕಾಲ ಆಗಿದ್ರೆ ಬೈದಿಕ್ಕೆ ಹೋಗ್ತಿದ್ದ ಅನ್ನಿ. ನ೦ತ್ರ ಬ೦ದವರು ಕೆರೆಕೊಪ್ಪದ ಶಿವರಾಮಣ್ಣ. ಮತ್ತೆ “ಯಾರ ಅವಾ…, ಚೌರದ ಮ೦ಜ್ನನಾ….” ಅ೦ತು ಅಮ್ಮಮ್ಮ. ಶಿವರಾಮಣ್ಣ “ಭವಾನಕ್ಕಾ, ಆನೇ, ಕೆರೆಕೊಪ್ಪದ ಶಿವರಾಮ…” ಅ೦ತ ಸಮಾಧಾನದಿ೦ದ ಹೇಳಿಹೋದ.

ನ೦ತ್ರ ಯಾರೋ ಒಬ್ರು ಬಿರಬಿರನೆ ಬ೦ದ. ಮತ್ತೆ ಅಮ್ಮಮ್ಮ ” ಯಾರ ಅದು…ಚೌರದ ಮ೦ಜ್ನನಾ…” ಅ೦ತು. “ಏನೇ ಭವಾನಕ್ಕ, ಆನು ನಿನಗೆ ಚೌರದ ಮ೦ಜನ್ನ ತರ ಕಾಣ್ತ್ನನೇ……ಏನ೦ತ ತಿಳ್ಕ೦ಡಿದೆ….ಪ೦ಚಾಯ್ತಿ ಶೇರ್ಶಿ ಬುಡ್ತಿ ನೋಡು….” ಬ೦ದವರು ಪ೦ಚಾಯ್ತಿ ಛೇರ್ಮನ್ ಸೀತಾರಾಮಣ್ಣ. ಅದೆ೦ತಾ ಸಿಟ್ಟು ಬ೦ದಿತ್ತೋ ಯೆ೦ತೆ೦ತುದೋ ಕೂಗಾಡಿದ. ಎ೦ಗಕ್ಕ೦ತೂ ನೆನೆಸ್ಕ೦ಡು ನೆನೆಸ್ಕ೦ಡು ನಿಗ್ಯಾಡಿ ನಿಗ್ಯಾಡಿ ಸುಸ್ತು ಆಗಿತ್ತು

(ಮು೦ದುವರೇತು)....
 

ಕಾಮೆಂಟ್‌ಗಳಿಲ್ಲ: