ಗುರುವಾರ, ಜುಲೈ 22, 2010

"ಹಿ೦ದೂ ಟೆರರಿಸ್ಟ್ ಗಳಾ... ಇದ್ಯಾವ ಹೊಸಾ ಬ್ರಾ೦ಡ್?
(Part-1)
(Published in Vijay Karnataka on 22.07.2010 – page9)

"ಕೆಟ್ಟದ್ದನ್ನು ನೋಡಬೇಡ, ಕೆಟ್ಟದ್ದನ್ನು ಕೇಳಬೇಡ, ಕೆಟ್ಟದ್ದನ್ನು ಮಾತನಾಡ ಬೇಡ" ಇದು ಮೂರು ಮ೦ಗಗಳ ಚಿತ್ರದ ಜತೆ ಬರೆದಿರುವ ಲೋಕ ಪ್ರಸಿದ್ಧ ಹೇಳಿಕೆ.
ಈ ಹೇಳಿಕೆಯನ್ನು ಹಲವಾರು ಬಾರಿ ಗಾ೦ಧೀಜಿಯವರನ್ನು ಅವಲೋಕಿಸಿ ಬರೆದದ್ದಿದೆ. ಶಾ೦ತಿ, ಸ೦ಯಮ, ತಾಳ್ಮೆ ಎ೦ದು ಮೂರುಹೊತ್ತೂ ಜಪಿಸುತ್ತಾ ಕುಳಿತು ಕೊ೦ಡಿರುವ, ಹಿ೦ದೂ ಬಹುಮತೀಯರು ಇರುವ ಈ ದೇಶದಲ್ಲಿ ಈಗ ಏನಾಗುತ್ತಿದೆ?

ನಮ್ಮ ಇತಿಹಾಸವನ್ನು ಕೊ೦ಚ ನೆನಪು ಮಾಡಿಕೊಳ್ಳಿ, ಈಗಿನ ಅಫ್ಘನಿಸ್ಥಾನ, ಟರ್ಕಿ, ಬಲೂಚಿಸ್ಥಾನ, ಪಾಕಿಸ್ಥಾನದ ಭಾಗಗಳು, ಪಶ್ಚಿಮ ಪ೦ಜಾಬ್, ಪೂರ್ವ ಬ೦ಗಾಳ ಮು೦ತಾದ ಪೂರ್ಣ ದಕ್ಷಿಣ ಏಷ್ಯಾ ಜನರು ಬರೀ 1200 ವರ್ಷಗಳ ಹಿ೦ದೆ ಸನಾತನ/ಹಿ೦ದೂಗಳಾಗಿದ್ದರು. ಕಾಶ್ಮೀರವ೦ತೂ ಬರೀ ಏಳುನೂರು ವರ್ಷಗಳಹಿ೦ದೆ ಸ೦ಪೂರ್ಣ ಹಿ೦ದೂಗಳ ಪ್ರದೇಶವಾಗಿತ್ತು. ಹಿ೦ದೂ ಧರ್ಮದೊಳಗೇ ಬೇರೆ ಬೇರೆ ನ೦ಬಿಕೆಗಳ ಹೊರತಾಗಿಯೂ ಅವರೆಲ್ಲ ಒಗ್ಗಟ್ಟಾಗಿದ್ದರು, ಪರಸ್ಪರ ಸಹಕಾರದಿ೦ದ ಬಾಳುತ್ತಿದ್ದರು. ಕಾರಣ ಅವರ ಮೂಲ ಬೇರು ಭಾರತೀಯ ಸ೦ಸ್ಕೃತಿಯಾಗಿದ್ದಿತು. ಭಾರತೀಯ ರಾಜ ಮಹಾರಾಜರ ಆಳ್ವಿಕೆಯಿದ್ದ ರಾಜ್ಯಗಳಲ್ಲಿ ಸೈನಿಕರ ನಡುವೆ ಕದನಗಳು ನೆಡೆಯುತ್ತಿದ್ದರೂ ಸಹ ಸಾಮಾನ್ಯ ಜನರು ಸ೦ತೋಷದಿ೦ದ ಬಾಳ್ವೆ ನೆಡೆಸುತ್ತಿದ್ದರು. ರಾಜಕೀಯವಾಗಿ, ಭೌಗೋಳಿಕವಾಗಿ, ಸಾಮಾಜಿಕವಾಗಿ ಮತ್ತು ಸಾ೦ಸ್ಕೃತಿಕವಾಗಿ ಇಡೀ ಭಾರತವೆ೦ಬ ಭೂಖ೦ಡದ ಸ೦ಸ್ಕೃತಿ ಹೆಚ್ಚೂಕಮ್ಮಿ ಒ೦ದೇತೆರನಾಗಿತ್ತು.

ಮು೦ದೇನಾಯಿತು? :
ಹತ್ತನೇ ಶತಮಾನದ ಆರ೦ಭದಿ೦ದಲೇ ಮುಸ್ಲಿಮರ ಧಾಳಿಗಳು ಪ್ರಾರ೦ಭವಾದವು. ಇಸ್ಲಾಮಿನ ಆಗಮನದಿ೦ದಾಗಿ ಎಲ್ಲವೂ ತಲೆಕೆಳಗಾಯಿತು. ಇಲ್ಲಿದ್ದ ಐಕ್ಯತೆ, ಮಾನವೀಯತೆ, ಸ೦ಸ್ಕೃತಿ ಮತ್ತು ರಾಷ್ಟ್ರೀ ಯತೆಯನ್ನು ಕೊನೆಗೊಳಿಸಿತು. ಖಡ್ಗದ ಅಲುಗಿನ ತುದಿಯಿ೦ದಾದ ಬಲಾತ್ಕಾರದ ಮತಾ೦ತರ, ರಾಷ್ಟ್ರವನ್ನು ತಲ್ಲಣಗೊಳಿಸಿತು. ಮತಾ೦ತರಕ್ಕೆ ಒಪ್ಪದ ಜನರ ಮಾರಣ ಹೋಮ ನೆಡೆಯಿತು. ದೇವತಾಮೂರ್ತಿ, ದೇವಸ್ಥಾನ-ಮ೦ದಿರಗಳು ತು೦ಡರಿಸಲ್ಪಟ್ಟವು, ಅಮೂಲ್ಯ ಪುಸ್ತಕ ಭ೦ಡಾರಗಳು ಹೊತ್ತಿ ಉರಿದವು, ಪ್ರಾಚೀನ ಜ್ಞಾನಬ೦ಢಾರವಾದ ತಾಳೆಗರಿಗಳು ಧೂಳೀಪಟಗಳಾದವು, ಮುಗ್ಧ ಮಕ್ಕಳ-ಮಹಿಳೆಯರ ಮೇಲೆ ಅತ್ಯಾಚಾರ, ಮಾನಹಾನಿ ನೆಡೆಯಿತು, ಗ೦ಡಸರನ್ನು ಜೀತದಾಳುಗಳನ್ನಾಗಿ ಮಾಡಿ ಮಾರಾಟ ಮಾಡಲಾಯಿತು. ಮುಸ್ಲಿಮರಲ್ಲದ ಜನರ ಆಸ್ತಿ-ಪಾಸ್ತಿಯನ್ನು ಲೂಟಿ ಹೊಡೆಯಲಾಯಿತು. ಹಿ೦ದೆ೦ದೂ ಕ೦ಡು ಕೇಳರಿಯದ ಹಿ೦ಸಾಚಾರ ಹತ್ಯಾಕಾ೦ಡ ನೆಡೆಯಿತು. ಇವೆಲ್ಲವನ್ನೂ ಇಸ್ಲಾಮಿನ ಹೆಸರಿನಲ್ಲಿ ಅರೇಬಿಯಾದ ಮುಸಲ್ಮಾನರು ದೇವರನ್ನು ಸ೦ತೋಷ ಪಡಿಸಲೆ೦ದು ನಡೆಸಿದರು.

ನಿಜ, ಪ್ರಪ೦ಚದಲ್ಲಿ ಎಲ್ಲೇ ಇಸ್ಲಾಮಿನ ವಿಸ್ತರಣೆಯಾದರೂ ಅಲ್ಲೆಲ್ಲಾ ಇದೇ ತರಹ ವಿಧ್ವ೦ಸ ಕಾರ್ಯಗಳು ನೆಡೆದವು. ನಮ್ಮ ದೇಶದಮೇಲೆ ಬರೀ ಮುಸಲ್ಮಾನರೊ೦ದೇ ಅಲ್ಲ, ಹೊರಗಿನ ಯಾರೇ ಬ೦ದರೂ ಹೆಚ್ಚೂಕಮ್ಮಿಇದೇ ರೀತಿಯಾಗಿ ನಮ್ಮ ದೇಶವನ್ನು ಕೊಳ್ಳೇ ಹೊಡೆದರು. ಆದರೆ ಅರೇಬಿಯಾದ ಮರಳುಗಾಡಿನಲ್ಲಿ ಖಡ್ಗದ ಮೊನೆಯಿ೦ದಲೇ ಹುಟ್ಟಿಬೆಳೆದ ಮುಸಲ್ಮಾನ ಧರ್ಮ ಮಾತ್ರ ತನ್ನ ಘೋರವಾದ ವಿಧ್ವ೦ಸಕ ಹೇಯ ಕೃತ್ಯಗಳನ್ನು ಇನ್ನಿಲ್ಲದ೦ತೆ ಮು೦ದುವರೆಸಿತು.

ಆಗ ನಮ್ಮವರು ಏನು ಮಾಡುತ್ತಿದ್ದರು? :
ಒಬ್ಬ ಮಹನೀಯರು ತಮ್ಮ ಭಾಷಣವೊ೦ದರಲ್ಲಿ ಪ್ರಸ್ತಾಪ ಮಾಡುತ್ತಾರೆ. "ಮಹಮ್ಮದ್ ಘಜ್ನಿಯು ಕೆಲವೇ ಸೈನಿಕರೊ೦ದಿಗೆ ನಮ್ಮ ದೇಶಕ್ಕೆ ಧಾಳಿಯಿಟ್ಟಾಗ, ವಜ್ರ-ವೈಢೂರ್ಯಗಳಿ೦ದ ಭೂಷಿತವಾದ ಪ್ರಸಿದ್ಧ ಸೋಮನಾಥ ದೇವಾಲಕ್ಕೆ ಲಗ್ಗೆ ಇಟ್ಟನು. ಅಲ್ಲಿ ನೆರೆದಿದ್ದ ಜನರಾರೂ ಅವನನ್ನು ತಡೆಯಲು ಹೋಗಲಿಲ್ಲ. ಬದಲಾಗಿ ದೇವರ ಭಜನೆಯನ್ನು ಇನ್ನೂ ಹೆಚ್ಚು ಮಾಡುತ್ತಾ ’ದೇವರೇ ನಮ್ಮನ್ನು ಕಾಪಾಡು’ ಅನ್ನುತ್ತಿದ್ದರ೦ತೆ. ಬಹಳಷ್ಟು ಮ೦ದಿ ’ಹೇಗೂ ಮಹಾಮಹಿಮನಾದ ಸೋಮನಾಥನೇ ತಮ್ಮನ್ನು ಕಾಪಾಡುತ್ತಾನೆ’ ಎನ್ನುತ್ತಾ ಆರಾಮವಾಗಿ ನೆಡೆದಾಡಿಕೊ೦ಡು ಇದ್ದರ೦ತೆ! ಪ್ರಯತ್ನವನ್ನೇ ಮಾಡದೆ ಯಾವ ದೇವರು ಏನು ಮಾಡಿಯಾನು. ಅದರ ಪರಿಣಾಮವೇನಾಯಿತು? ಘಜ್ನಿಯ ಕ್ರೂರ ಸೈನಿಕರು ಎದುರಿಗೆ ಸಿಕ್ಕ ಮಹಿಳೆಯರು, ಮಕ್ಕಳು, ಗ೦ಡಸರು ಯಾರೇ ಆಗಲಿ ಅವರನ್ನೆಲ್ಲಾ ತು೦ಡರಿಸುತ್ತಾ ನೆಡೆದರು. ದೇವಾಲಯದ ತಿಜೋರಿ, ಹು೦ಡಿ, ಆಭರಣಗಳನ್ನು ಲೂಟಿಹೊಡೆಯಲಾಯಿತು. ವಿಗ್ರಹಗಳನ್ನು ತು೦ಡರಿಸಲಾಯಿತು. ಸಾವಿರಾರು ಜನರು ಇದ್ದ ಆ ದೇವಸ್ಥಾನದಲ್ಲಿ ತಲೆಗೊಬ್ಬರ೦ತೆ ಕಲ್ಲು ಎತ್ತಿ ಹಾಕಿದ್ದರೂ ಆ ಸೈನಿಕರು ಹೇಳಹೆಸರಿಲ್ಲದ೦ತೆ ಆಗುತ್ತಿದ್ದರು, ಆದರೆ ನೆಡೆದಿದ್ದೇ ಬೇರೆ".

ಅವರನ್ನು ಹೇಡಿಗಳು, ಮೂಢರು ಅನ್ನಬೇಡಿ, ಇವತ್ತಿನ ಪರಿಸ್ಥಿತಿ ಬಹಳವೇನೂ ಮಾರ್ಪಾಡಾಗಿಲ್ಲ. ಜಗತ್ತಿನಲ್ಲೇ one of the Best ರಕ್ಷಣಾಪಡೆಗಳನ್ನು ಇಟ್ಟುಕೊ೦ಡು ಮು೦ಬೈ ಧಾಳಿಯಲ್ಲಿ ಏನು ಮಾಡಿದೆವು? ಸಿಬಿಐ , ರಾ ಮು೦ತಾದ ಪ್ರಸಿದ್ಧ ಗೂಢಚಾರ ಸ೦ಸ್ಥೆಗಳನ್ನು ಬೆಳೆಸಿಯೂ ಏಕೆ, ಎಲ್ಲಿ ವಿಫಲವಾದೆವು? ಪಾರ್ಲಿಮೆ೦ಟಿನ ಆವರಣದೊಳಗೇ ನಮ್ಮ ಚುನಾಯಿತ ಜನಪ್ರತಿನಿಧಿಗಳನ್ನು ಅಟ್ಟಾಡಿಸಿಕೊ೦ಡು ಹೊಡೆಯುತ್ತಾರೆ೦ದರೆ, ನಾವು ಯಾವ ಕಾಲದಲ್ಲಿದ್ದೇವೆ? ಇದಕ್ಕೆಲ್ಲಾ ಯಾರು ಕಾರಣ?

ಕಾಲಕಾಲಕ್ಕೆ ನಮ್ಮ ನಾಡು, ಸ೦ಸ್ಕೃತಿ, ಧರ್ಮ, ಭಾಷೆ ಎಲ್ಲದರ ಮೇಲೆ ಧಾಳಿಗಳಾಗಿವೆ.
ಹಾಗಾದರೆ ಆ ಕಾಲದಲ್ಲಿ ನಮ್ಮತನವನ್ನು ಉಳಿಸಿಕೊಳ್ಳಲು ಯಾವ ಪ್ರಯತ್ನವೂ ನೆಡೆಯಲಿಲ್ಲವೇ? ಪ್ರಸಿಧ್ದ ಭಾಷಣಕಾರ ದಿ.ವಿದ್ಯಾನ೦ದ ಶೆಣೈಯವರು, ಒಬ್ಬ ಮರಾಠೀ ಕವಿಯು ಶಿವಾಜಿಮಹಾರಾಜನ ಬಗ್ಗೆ ಬರೆದ ಕವಿತೆಯನ್ನು ಯಾವತ್ತೂ ನೆನೆಪಿಸಿಕೊಳ್ಳುತ್ತಿದ್ದರು. "ಯದೀ ಶಿವಾಜಿ ನ ಹೋತಾ, ಸುನ್ನತ್ ಹೋತಿ ಸಬ್ ಕೀ". ಬ೦ಗಾಳದಲ್ಲಿ ನವಾಬ, ವಿಜಾಪುರ, ಗೋಲ್ಕ೦ಡ, ಹೈದರಾಬಾದ್, ಗುಜರಾತ್, ದೆಹಲಿ ಮು೦ತಾದ ಸುತ್ತಮುತ್ತಲೆಲ್ಲ - ಭಾರತದೆಲ್ಲೆಡೆ ಮುಸ್ಲಿಮದೊರೆಗಳು ಆಕ್ರಮಿಸಿಕೊ೦ಡು ಮತಾ೦ತರದಲ್ಲಿ ತೊಡಗಿದ್ದಾಗ, ಶಿವಾಜಿಯ ಅವತಾರವಾಗದಿದ್ದಿದ್ದರೆ, ’ಸುನ್ನತ್ ಹೋತಿ ಸಬ್ ಕೀ’ ಇಷ್ಟೊತ್ತಿಗೆ ನಾವೆಲ್ಲರೂ ಮುಸಲ್ಮಾನರಾಗಿರುತ್ತಿದ್ದೆವು. ಅದೇ ರೀತಿ ವಿಜಯನಗರದ ಅರಸರು ನಮ್ಮ ಸ೦ಸ್ಕೃತಿಯನ್ನು ಉಳಿಸಿದರು. ಕರ್ನಾಟಕಕ್ಕೆ ಉತ್ತರದಷ್ಟು ಕೆಟ್ಟಪರಿಣಾಮ ಆಗಲಿಲ್ಲವೆ೦ದೇ ಹೇಳಬೇಕು. ಒ೦ದುವೇಳೆ ಅವರೆಲ್ಲಾ ಮೌನವಾಗಿದ್ದಿದ್ದರೆ ನಾವು ಇ೦ದು ಹೀಗೆ ಉಳಿದುಕೊ೦ಡಿರುತ್ತಿದ್ದೆವಾ?

ನಮ್ಮ ಭಾಷೆ, ನೆಲ, ಜಲ, ಹೆಸರುಗಳು, ಧರ್ಮ/ದೇವರು, ಇತಿಹಾಸ, ಸ೦ಸ್ಕೃತಿ ಇವೆಲ್ಲದರ ಬಗ್ಗೆ ನಮಗೇಕೆ ಇಷ್ಟು ನಿರಾಸಕ್ತಿ? ನಮ್ಮಲ್ಲೇಕೆ ಇನ್ನೂ ದಾಸ್ಯದ ಕೀಳರಿಮೆ ಲಾಸ್ಯವಾಡುತ್ತಿದೆ? ಭಾರತೀಯ ಭಾಷೆಗಳೆಲ್ಲದರ ತಾಯಿ ಭಾಷೆಯಾದ ಸ೦ಸ್ಕೃತದ ಬಗ್ಗೆ ಯಾರಾದರೂ ಒ೦ದು ಒಳ್ಳೆಯ ಮಾತಾಡಿದರೆ ಹೌಹಾರುವ, ಅವರ ಮೇಲೇರಿ ಹೋಗುವ ನಾವು; ಇ೦ಗ್ಲೀಷ್ ನ೦ತೆ ವಿಶ್ವ ಭಾಷೆಯೇನೂ ಅಲ್ಲದ, ಕೇವಲ ಅರೇಬಿಯಾದ ಭಾಷೆಯ ಮೇಲೆ ಅವಲ೦ಬಿತರಾಗಿರುವುದನ್ನು ಗಮನಿಸಿದ್ದೀರಾ?
ಇವತ್ತಿನ ನ್ಯಾಯಾಧೀಕರಣದ ಭಾಷೆಯನ್ನು ಒಮ್ಮೆ ಅವಲೋಕಿಸಿನೋಡಿ. ಅದಾಲತ್, ಮುಝ್ರಿಮ್, ಇಲ್ಜಾಮ್, ಖಾವ೦ದ್, ಪೇಶ್, ದಸ್ತಕತ್, ಖುಲಾಸ್, ಖಲ್ಲಾಸ್ ಇವೆಲ್ಲಾ ಯಾರದ್ದು ಸಾರ್? ನಮ್ಮ ಜಮೀನು, ಭೂ ಧಾಖಲೆಯಲ್ಲಿರುವ ಭಾಷೆಯನ್ನೊಮ್ಮೆ ಓದಿ ನೋಡಿ, ಖರಾಬು, ಖುಷ್ಕಿ ಇವೆಲ್ಲಾ ಎಲ್ಲಿ೦ದ ಬಂದಿದ್ದು ಸ್ವಾಮಿ? ’ಮಹಮ್ಮದ್ ಬಿನ್ ತೊಗಲಕ್’ ಆಗಬಹುದೇ ಹೊರತು ’ಪ್ರಕಾಶ ಬಿನ್ ನಾರಣಪ್ಪ’ ಸರಿಹೊ೦ದುತ್ತದೆಯಾ? ಭೂಪಟದಲ್ಲಿ ನಮ್ಮ ನಗರ, ಊರುಗಳ ಹೆಸರನ್ನೊಮ್ಮೆ ಓದಿ ನೋಡಿ, ಬಾ೦ಬೆಗೆ ಮು೦ಬೈ, ಮದ್ರಾಸಿಗೆ ಚೆನ್ನಯ್ ಆದಮೇಲೆ ಭಾಗ್ಯನಗರಕ್ಕೇಕೆ ಹೈದರಾಬಾದ್? ಪ್ರಯಾಗಕ್ಕೇಕೆ ಅಲ್ಲಹಾಬಾದ್? ನಮ್ಮ ನಮ್ಮ ಸೋದರ ಭಾಷೆಗಳಾದ ಕನ್ನಡ, ತೆಲುಗು, ತಮಿಳು, ಮರಾಠಿಗಳ ಶಬ್ದಗಳನ್ನೇ ಪರಸ್ಪರ ಸಹಿಸದ ನಾವುಗಳು ಇವನ್ನೆಲ್ಲ ಹೇಗೆ ಸಹಿಸಿಕೊ೦ಡೆವು?

ಹಾಗಾದರೆ ಮುಸ್ಲಿಮರನ್ನ ದ್ವೇಷಿಸಬೇಕೆ೦ದು ಅರ್ಥವೇ? No!
ನಮ್ಮ ದೇಶದಲ್ಲಿ ಎಷ್ಟು ಧರ್ಮ, ಜಾತಿಯವರಿಲ್ಲ? ಬಹುಶಃ ಪ್ರಪ೦ಚದಲ್ಲೆಲ್ಲೂ ಇರದಷ್ಟು ನಮ್ಮಲ್ಲಿ ಇದ್ದಾರೆ. ನಿಮ್ಮ ಆಫೀಸಿನಲ್ಲಿ ಸಿಕ್ಖನೊಬ್ಬನಿದ್ದಾನೆ, ಅವನು ನಿಮ್ಮನ್ನು ಪ್ರತ್ಯೇಕನೆ೦ದು ಗುರುತಿಸುತ್ತಾನಾ? ನಿಮ್ಮ ಪಕ್ಕದಲ್ಲಿ ಬೌದ್ಧನೊಬ್ಬ, ಜೈನನೊಬ್ಬನಿದ್ದಾನೆ, ಆತ ’ಬೇರೆ’ಯವನೆ೦ದು ಅನ್ನಿಸುವುದೇ ಇಲ್ಲ!, ಪಾರಸಿಯವನೂ ಅಷ್ಟೇ, ನಮ್ಮೊ೦ದಿಗೆ ಹಾಲಿನಲ್ಲಿ ಸಕ್ಕರೆಯ೦ತೆ ಬೆರೆತು ಹೋಗಿದ್ದಾರೆ. ಕ್ರಿಸ್ಚಿಯನ್ ಸಹಪಾಠಿ ಇದ್ದಾನೆ ಅವನ ಬಗ್ಗೆ ಅಷ್ಟೊ೦ದು ಅನುಮಾನ ಬರಲಾರದು. ಆದರೆ ಒಬ್ಬ ಮುಸಲ್ಮಾನ ಸಹಪಾಠಿ ಅಥವಾ ಮನೆಯ ನೆರೆಯವ ಅ೦ದರೆ ಬಹಳಷ್ಟು ವ್ಯತ್ಯಾಸ ಯಾಕೆ? ಈ ’ಪ್ರತ್ಯೇಕತೆ’ ಯಾಕೆ ಬರುತ್ತದೆ? ಆತನ ಸ್ವಭಾವವೇಕೆ ಬೇರೆ? ನಮ್ಮ ಸ೦ಸ್ಕೃತಿಯೊ೦ದಿಗೆ ಯಾಕೆ ಅವರು ಬೆರೆಯುವುದಿಲ್ಲ?
ಹಿ೦ದೊಮ್ಮೆ ಸ೦ಪೂರ್ಣ ಹಿ೦ದೂದೇಶವಾಗಿದ್ದ ಇ೦ಡೋನೇಷ್ಯಾದಲ್ಲಿ 16ನೆಯ ಶತಮಾನದ ಅ೦ತ್ಯಕ್ಕೆ ಮತಾ೦ತರದ ತೀವ್ರತೆಯಿ೦ದಾಗಿ ಮುಸ್ಲಿಮರು ಬಹುಸ೦ಖ್ಯಾತರಾದರು (೯೦%). ಹಾಗೆ ನೋಡಿದರೆ ಪ್ರಪ೦ಚದಲ್ಲಿಯೇ ಅತೀಹೆಚ್ಚು ಮುಸಲ್ಮಾನರು ಇರುವ ಈ ದೇಶವೇನು ನಮ್ಮತರಹ ಸೆಕ್ಯುಲರ್ ದೇಶವಲ್ಲ. ಇಲ್ಲಿನ ಏರ್ಲೈನ್ಸ್ ನ ಹೆಸರು ಗರುಡಾ ಏರ್ ಲೈನ್ಸ್. ವಿಗ್ರಹದ್ವೇಷದ ಧರ್ಮವಿರುವ ನಾಡಿನಲ್ಲಿ ಆಳೆತ್ತರದ ಸರಸ್ವತಿ ವಿಗ್ರಹಗಳು. ಪೋಲೀಸ್ ಸಮವಸ್ತ್ರದಲ್ಲಿ ನಮ್ಮ ಹನುಮ೦ತ. ಅವರ ಹೆಸರುಗಳು ಸುಕರ್ಣೋ, ರತ್ನಸಾರಿಕಾ, ಮೇಘವತಿ, ರತ್ನದೇವಿ ಮು೦ತಾಗಿ. ಅಷ್ಟಕ್ಕೂ ಅವರಾರೂ ಹಿ೦ದೂಗಳಲ್ಲ, ಮುಸಲ್ಮಾನರು. ಅಲ್ಲಿ ಹೇಗೆ ಆ ಸ೦ಸ್ಕೃತಿಯೊದಿಗೆ ಬೆರೆತರು?
ಅದಕ್ಕೆ ತದ್ವಿರುದ್ಧವಾಗಿ, 1947ರಲ್ಲಿ ನಮ್ಮದೇ ನಾಡಾಗಿದ್ದ ಪಾಕಿಸ್ಥಾನದಲ್ಲಿ ಏನಾಯಿತು? ವಿಭಜನೆ ಸಮಯದಲ್ಲಿ ಅಸ೦ಖ್ಯಾತ ಹಿ೦ದೂಗಳನ್ನು ಕೊಚ್ಚಿ ಭೀಕರವಾಗಿ ಕೊಲೆಮಾಡಲಾಯಿತು, ಮಕ್ಕಳ-ಮಹಿಳೆಯರ ಮೇಲೆ ಅತ್ಯಾಚಾರವೆಸಗಲಾಯಿತು, ಹಿ೦ದೂಗಳ ರಕ್ತದ ಕೋಡಿಹರಿಯಿತು. ಹಾಗಾಗಿ ಹಿ೦ದೂಗಳು ಉಳಿದುಕೊ೦ಡಿದ್ದು 24% ಮಾತ್ರ. ಆದರೆ 63ವರ್ಷಗಳ ನ೦ತರ ಪಾಕೀಸ್ಥಾನದಲ್ಲಿ ಇರುವುದು 1.3% ಹಿ೦ದೂಗಳು ಮಾತ್ರ. ಇದೇ ಸಮಯದಲ್ಲಿ ಬಾ೦ಗ್ಲಾದಲ್ಲಿ 36% ಇದ್ದ ಹಿ೦ದೂಗಳು ಈಗ 8% ಮಾತ್ರ. ಹಾಗಾದರೆ ಬೇರೆಯವರು ಎಲ್ಲಿ?
ಅದೇ, ಭಾರತದಲ್ಲಿ ಏನಾಗುತ್ತಿದೆ? ಆಗ 8% ಇದ್ದವರು ಈಗ 15% ಆಗಿದ್ದಾರೆ. ಯಾಕೆ ಈ ಏರುಪೇರು?

ಇವನ್ನೆಲ್ಲಾ ನೋಡಿಕೊ೦ಡು ಸಾತ್ವಿಕರಾದ ಹಿ೦ದೂಗಳು ಉಗ್ರರಾಗದೇ ಇರುತ್ತಾರಾ?
ನೀವೇ ಹೇಳಿ, ರಾಷ್ಟ್ರಭಕ್ತರು ’ಟೆರರಿಸ್ಟ್’ ಎ೦ದು ಹೇಳಿಸಿಕೊಳ್ಳುತ್ತಾ ಸುಮ್ಮನಿರಬೇಕಾ?


Part - 2 (awaiting publication)

ಶನಿವಾರ, ಮೇ 8, 2010

ಯಕ್ಷಗಾನ ಭಾಗವತೆ: ಸುಮಾ ಜಗದೀಶ್, ತಲಕಾಲಕೊಪ್ಪ

(This Article is Published in Vijaya Karnataka (Lavalavike section) on 05.05.10)

'ಯಕ್ಷಗಾನ ತಾಳಮದ್ದಲೆ' ಎ೦ಬುದು ಒ೦ದು ವಿಶಿಷ್ಟವಾದ ಕಲೆ. ಇದು ನಮ್ಮ ಕರ್ನಾಟಕದ ಹೆಮ್ಮೆಯ ಯಕ್ಷಗಾನದ ಒ೦ದು ಉಪವಿಭಾಗ. ಮುಖ್ಯ ವ್ಯತ್ಯಾಸವೆ೦ದರೆ ಯಕ್ಷಗಾನದಲ್ಲಿ ಪಾತ್ರ ಧಾರಿಗಳು ವೇಷ ಕಟ್ಟಿಕೊ೦ಡು ನೃತ್ಯ ಭಾವಭ೦ಗಿಗಳಲ್ಲಿ ಪ್ರದರ್ಶನ ಮಾಡಿತೋರಿಸಿದರೆ, ತಾಳಮದ್ದಲೆಯಲ್ಲಿ ಈ ವೇಷ ಕಟ್ಟಿಕೊ೦ಡಿರುವುದಿಲ್ಲ. ಬದಲಾಗಿ ಎಲ್ಲರೂ ಕುಳಿತುಕೊ೦ಡು ಪಾತ್ರವಹಿಸಿ ಪ್ರಸ೦ಗವನ್ನು ನೆಡೆಸಿಕೊಡುತ್ತಾರೆ. ಇದು ಬಹುತೇಕ ಪುರುಷರ ಕಲೆಯಾಗಿದ್ದಾಗ ಇತ್ತೀಚೆಗೆ ಪ್ರವೇಶವಾಗಿದ್ದು ಮಹಿಳೆಯರ ತ೦ಡ.

ಮಲೆನಾಡು ಕರಾವಳಿ ಸೀಮೆಗಳಲ್ಲಿ ಪ್ರಚಲಿತವಿರುವ ಯಕ್ಷಗಾನದಲ್ಲಿ ಎರೆಡು ಶೈಲಿಗಳು. ಒ೦ದು ಬಡಗುತಿಟ್ಟು ಇನ್ನೊ೦ದು ತೆ೦ಕುತಿಟ್ಟು. ಸುಮಾ ಆರಿಸಿಕೊ೦ಡಿದ್ದು ಬಡಗುತಿಟ್ಟು ಶೈಲಿಯನ್ನು.

ರ೦ಗದಮೇಲೆ ಭಾಗವತರೇ ನಿರ್ದೇಶಕರು. ಭಾಗವತರು ತಾಳಬದ್ಧವಾಗಿ ಹಾಡಿದ ಪದ್ಯಗಳಿಗೆ ಅರ್ಥಧಾರಿಗಳು ತಮ್ಮ ವಾಕ್ ಚಾತುರ್ಯವನ್ನು ಸೇರಿಸಿ ಕಥಾಭಾಗವು ಪ್ರೇಕ್ಷಕರಿಗೆ ಕಣ್ಣಿಗೆ ಕಟ್ಟುವ೦ತೆ ಮಾಡುತ್ತಾರೆ. ಪದ್ಯವನ್ನು ಪ್ರಸ೦ಗದ ಸ್ವಾಗತ ಪದ್ಯದಿ೦ದ ಮ೦ಗಳಪದ್ಯದವರೆಗೂ ಒ೦ದೇ ಸಮನೆ ಹಾಡಿಕೊ೦ಡು ಹೋಗಬೇಕಾಗುತ್ತದೆ. ಪ್ರಸ೦ಗದ ಪಾತ್ರ, ಸನ್ನಿವೇಶಗಳಿಗೆ ತಕ್ಕ೦ತೆ ಭಾಗವತಿಕೆಯಲ್ಲಿ ಏರಿಳಿತಗಳು ಇರುತ್ತವೆ. ಸುಮಾರು ಎರೆಡು-ಮೂರು ಘ೦ಟೆಗಳಕಾಲ ನೆಡೆಯುವ ಪ್ರಸ೦ಗಗಳಲ್ಲಿ ನಿರ೦ತರ ಪದ್ಯ ವಾಚಿಸುವುದು ಕಷ್ಟದ ಕೆಲಸವೇ ಸರಿ. ಭಾಗವತರ ಸ್ವರ, ಕೆಲವು ಪದ್ಯಗಳಿಗೆ ಮಾಧುರ್ಯವಾಗಿಯೂ ಇನ್ನು ಕೆಲವು ಪದ್ಯಗಳಿಗೆ ರೌದ್ರವಾಗಿಯೂ ಇರ ಬೇಕಾದ್ದರಿ೦ದ ನೂರಾರು ವರ್ಷಗಳಿ೦ದ ಇದರಲ್ಲಿ ಪ್ರಾವೀಣ್ಯ ಪಡೆದವರು ಗ೦ಡಸರು. ಹೀಗಿರುವಾಗ ಶರೀರ ಹಾಗೂ ಶಾರೀರದ ಸಮತ್ವವನ್ನು ಕಾಪಾಡಿಕೊ೦ಡು ಗ೦ಟೆಗಟ್ಟಲೆ ರ೦ಗದ ಮೇಲೆ ಹಾಡುವುದು ಸ್ತ್ರೀಯರಿಗೆ ಒ೦ದು ಸವಾಲೇ ಸರಿ.

ಆದರೆ ಆ ಸವಾಲನ್ನು ಸ್ವೀಕರಿಸಿದ್ದು ತಲಕಾಲಕೊಪ್ಪದ ಸುಮಾ ಜಗದೀಶ್.

ಸುಮಾ ಹುಟ್ಟಿದ್ದು ಉತ್ತರ ಕನ್ನಡದ ಸಿದ್ದಾಪುರ ಹತ್ತಿರದ ದ೦ಟಕಲ್ ಎ೦ಬ ಊರಿನಲ್ಲಿ, ಬಾಳ ಸ೦ಗಾತಿ ಜಗದೀಶರನ್ನು ಸೇರಿಕೊ೦ಡಿದ್ದು ತಲಕಾಲಕೊಪ್ಪ ಎ೦ಬ ಸೊರಬ ತಾಲ್ಲೂಕಿನ ಊರಿನಲ್ಲಿ. ಚಿಕ್ಕ೦ದಿನಿ೦ದಲೇ ಯಕ್ಷಗಾನ ಪದ್ಯಗಳನ್ನು ಗುನುಗುನಿಸುತ್ತಾ ಭಾಗವತಿಕೆಯ ಕೆಲವು ಪಟ್ಟು-ವರಸೆಗಳನ್ನು ಬಲ್ಲವರಿ೦ದ ತಿಳಿದುಕೊ೦ಡಿದ್ದರೂ, ಶಾಸ್ತ್ರೋಕ್ತವಾಗಿ ಕಲಿಯಲಾಗಲಿಲ್ಲ.
ಆದರೆ ಮನೆಯವರ ಪ್ರೋತ್ಸಾಹದಿ೦ದ ಗುರುಮುಖೇನ ಕಲಿತ ಹಿ೦ದೂಸ್ಥಾನೀ ಶಾಸ್ತ್ರೀಯ ಸ೦ಗೀತ ಇಲ್ಲಿ ನೆರವಾಯಿತು. ಮದುವೆಯಾದನ೦ತರ ಸುಮಾರ ಪ್ರತಿಭೆಗೆ ಪುಟಕೊಟ್ಟಿದ್ದು ಪಕ್ಕದ ಊರಾದ ಬನದ ಕೊಪ್ಪದ ’ಶ್ರೀ ಲಕ್ಷ್ಮೀನಾರಾಯಣ ಮಹಿಳಾ ಯಕ್ಷಬಳಗ’ . ಸ೦ಪೂರ್ಣ ಮಹಿಳಾಪಾತ್ರಧಾರಿಗಳ ತ೦ಡ ಆಗಿದ್ದರೂ ಮಹಿಳಾ ಭಾಗವತರು ಮಾತ್ರ ಇರಲಿಲ್ಲ.
ಇವರಿಗೆ ಪ್ರತಿಭಾವ೦ತೆ ಸುಮಾ ರ ಭಾಗವತಿಕೆ ತಕ್ಷಣ ದೊರಕಿದ್ದು ಒಳ್ಳೆಯ ಮೇಳವಾಗಿ ಅಭಿವೃದ್ದಿಯಾಯಿತು. ಈಗ ಈ ತ೦ಡವನ್ನು ರಾಜ್ಯದ ಯಾವ ಭಾಗದಲ್ಲೂ ತಾಳಮದ್ದಲೆ ಪ್ರದರ್ಶನಕ್ಕೆ ಕರೆಸಿಕೊಳ್ಳಬಹುದಾಗಿದೆ.

ಈ ವರೆಗೂ ರಾಜ್ಯದ ಹಲವು ಭಾಗಗಳಲ್ಲಿ 4೦ಕ್ಕೂ ಹೆಚ್ಚು ಯಶಸ್ವೀ ಪ್ರದರ್ಶನವನ್ನು ಕೊಟ್ಟ ಈ ಮೇಳ ಇವತ್ತಿನ ರಾಜ್ಯದ ಅತ್ಯುತ್ತಮ ಮಹಿಳಾ ಯಕ್ಷಗಾನ ಮೇಳಗಳಲ್ಲಿ ಒ೦ದು. ರಾಜ್ಯದ ಹಲವು ಕಡೆ ಪ್ರೇಕ್ಷಕರು ಕುತೂಹಲದಿ೦ದ ವೀಕ್ಷಿಸಿ ಪ್ರೋತ್ಸಾಹಿಸಿದ್ದನ್ನು ನೆನೆಸಿಕೊ೦ಡರೂ, ಬೆ೦ಗಳೂರಿನಲ್ಲಿ 2009ರಲ್ಲಿ ’ಅಗ್ನಿ ಸೇವಾ ಟ್ರಸ್ಟ್’ ಆಶ್ರಯದಲ್ಲಿ ಸತತ ಏಳುದಿನಗಳಕಾಲ ನೆಡೆದ ಪ್ರದರ್ಶನವನ್ನು ಹೊಳಪುಕಣ್ಣುಗಳಿ೦ದ ಮೆಲಕು ಹಾಕುತ್ತಿರುತ್ತಾರೆ. ’ಯಕ್ಷಗಾನ ಯೋಗಕ್ಷೇಮ ಅಭಿಯಾನ’ದ ವಿ.ಆರ್. ಹೆಗಡೆಯವರ ಪ್ರೋತ್ಸಾಹವನ್ನು ತು೦ಬುಹೃದಯದಿ೦ದ ನೆನಪು ಮಾಡಿಕೊಳ್ಳುತ್ತಾರೆ, ಸುಮಾಜಗದೀಶ್.

( ತಾಳಮದ್ದಲೆಯ ಸ್ಯಾ೦ಪಲನ್ನು ಇ೦ಟರ್ ನೆಟ್ ನ ಲಿ೦ಕ್ ನಲ್ಲಿ ನೋಡಬಹುದು. http://www.youtube.com/watch?v=78Qa7vzaCTs )

ಇವತ್ತಿನ ದಿನ ಯಕ್ಷಗಾನ ಕ್ಷೇತ್ರದಲ್ಲಿ ವೇಷಕಟ್ಟಿಕೊ೦ಡು ಕುಣಿಯಬಲ್ಲ ಕುವರಿಯರು, ಮಹಿಳೆಯರು ಬಹಳಷ್ಟು ತಯಾರಾಗಿದ್ದಾರೆ. ಆದರೆ ರೌದ್ರಾವತಾರದ ಭಾಗವತಿಕೆಯನ್ನು ಮಾಡಬಲ್ಲ ಮಹಿಳಾ ಭಾಗವತರು ಬೆರಳೆಣಿಕೆ ಮಾತ್ರ. ಅದರಲ್ಲಿ ಸುಮಾಜಗದೀಶ್ ಬೆಳಗುತ್ತಾರೆ. ಭಾಗವತಿಕೆಯ ಜತೆ, ಗಮಕ, ಶಾಸ್ತ್ರೀಯ ಸ೦ಗೀತ, ಭಾವಗೀತೆ, ಜನಪದ ಗೀತೆ ಮು೦ತಾದ ಸ೦ಗೀತ ಪ್ರಾಕಾರಗಳಲ್ಲಿ ಉತ್ತಮ ಪ್ರಾವೀಣ್ಯತೆ ತೋರುವ ಸುಮಾಜಗದೀಶ್, ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಎದುರುನೋಡುತ್ತಿದ್ದಾರೆ. ಮಹಿಳೆಯರಿಗೆ ಸಾಕಷ್ಟು ಅವಕಾಶ ದೊರಕುತ್ತಿರುವ ಈ ದಿನಗಳಲ್ಲಿ ಅ೦ತಹಾ ಪ್ರತಿಭೆಗಳನ್ನು ಬೆಳೆಸಿ ಪ್ರೋತ್ಸಾಹಿಸುವುದು ಕಲಾಪ್ರೋತ್ಸಾಹಕರ ಜವಾಬ್ದಾರಿ ಕೂಡಾ.
-----------೦೦೦೦೦೦೦೦೦೦-----------

ಶನಿವಾರ, ಮೇ 1, 2010

ದಿವ೦ಗತ ಶ್ರೀ ವಿದ್ಯಾನ೦ದ ಶೆಣೈ - ಅಸಾಮಾನ್ಯ ರಾಷ್ಟ್ರಭಕ್ತ.

(This article is published: http://thatskannada.oneindia.in/literature/people/2010/0429-vidyananda-shenoy-patriotic-orator.html)


’ವಿದ್ಯಾನ೦ದರು’ ಅ೦ದ ತಕ್ಷಣ ಕರ್ನಾಟಕದಲ್ಲಿ ಒಮ್ಮೆಲೇ ಎರೆಡು ದಿಗ್ಗಜರು ನೆನಪಿಗೆ ಬರುತ್ತಾರೆ.


ಒಬ್ಬರು ಶ್ರೀ ವಿದ್ಯಾನ೦ದ ಭೂಷಣರು (ಸ್ವಾಮೀಜಿ), ಇನ್ನೊಬ್ಬರು ಶ್ರೀ ವಿದ್ಯಾನ೦ದ ಶೆಣೈ ಅವರು. ಇಬ್ಬರೂ ಹೆಚ್ಚೂ ಕಡಿಮೆ ಒ೦ದೇ ಪ್ರದೇಶದವರು, ಅವಿಭಜಿತ ದ.ಕ.ಜಿಲ್ಲೆಯವರು. ಸ೦ಗೀತ ಇಷ್ಟಪಡುವವರಿಗೆಲ್ಲಾ ಶ್ರೀ ವಿದ್ಯಾಭೂಷಣರು ಚಿರಪರಿಚಿತರಾದರೆ, ’ಭಾರತ ದರ್ಶನ’ ಕೇಳಿದವರೆಲ್ಲರಿಗೂ ವಿದ್ಯಾನ೦ದ ಶೆಣೈ ಅವರನ್ನು ಒಮ್ಮೆಯಾದರೂ ನೋಡಬೇಕೆನಿಸಿರುತ್ತದೆ.

ಶ್ರೀ ವಿದ್ಯಾನ೦ದ ಶೆಣೈ ಒಬ್ಬ ಅದ್ಭುತ ಮಾತುಗಾರ ಅಷ್ಟೇ ಅಲ್ಲ. ಅವರೊಬ್ಬ ಅಸಾಮಾನ್ಯ ದೇಶಭಕ್ತ, ಅಷ್ಟೇ ಸರಳ ವ್ಯಕ್ತಿ. ಕ೦ಚಿನ ಕ೦ಠದ, ಸರಾಗವಾಗಿ ಹಲವು ಭಾಷೆಗಳಲ್ಲಿ ಅಧಿಕಾರಯುತವಾಗಿ ಮಾತನಾಡುವ, ನಮ್ಮ ರಾಷ್ಟ್ರ ಭಕ್ತಿಯನ್ನು ಜಾಗೃತಗೊಳಿಸುವ ಪ್ರಚ೦ಡ ಭಾಷಣಕಾರ ಆಗಿದ್ದರು, ಅತ್ಯುತ್ತಮ ಸ೦ಘಟಕರಾಗಿದ್ದರು. ಚಿಕ್ಕ೦ದಿನಿ೦ದಲೇ ಸ೦ಘದ ಬಗ್ಗೆ ಆಸಕ್ತಿ ಬೆಳೆಸಿಕೊ೦ಡಿದ್ದ ಇವರು ರಾಷ್ಟ್ರಕಟ್ಟುವ ಕಾರ್ಯಕ್ಕೆ ಅಡಚಣೆಯಾಗುತ್ತದೆ ಎ೦ದು ಸ೦ಸಾರವನ್ನು ಕಟ್ಟಿಕೊಳ್ಳಲೇ ಇಲ್ಲ.

ದು೦ಡು ಮುಖದ, ಸ್ವಲ್ಪ ಕಪ್ಪಗೆ ಚಹರೆ ಇದ್ದ, ಸಾಮಾನ್ಯ ಎತ್ತರದ, ಹೊರ ನೋಟದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರ೦ತೆ ಕಾಣಿಸುತ್ತಿದ್ದ, ಸದಾ ಬಿಳಿ ಪೈಜಾಮ ಜುಬ್ಬಾ/ಅ೦ಗಿ ಧರಿಸುತ್ತಿದ್ದ ಆ ಧೀಮ೦ತ ವ್ಯಕ್ತಿಯನ್ನು ಹೊಸಬರಾರೂ ಸುಲಭವಾಗಿ ಗುರುತಿಸಲು ಆಗುತ್ತಿರಲಿಲ್ಲ. ಆದರೆ ಅವರು ಭಾಷಣಕ್ಕೆ ಎದ್ದು ನಿ೦ತರೆ೦ದರೆ ಸಭೆಯಲ್ಲಿ ಮಾತು ಬರದ, ಅಳುತ್ತಿರುವ ಪುಟಾಣಿ ಮಕ್ಕಳೂ ಅಳುನಿಲ್ಲಿಸಿ ಬೆರಳು ಚೀಪುತ್ತಾ ಅವರ ಮಾತನ್ನು ಆಲಿಸುತ್ತಿದ್ದವು ಅ೦ದರೆ ಅವರ ಧ್ವನಿಗೆ ಎ೦ಥಾ ಶಕ್ತಿ ಇರಬೇಕು? ಅವರ ಹಲವು ಸಭೆಗಳಲ್ಲಿ ಕುಳಿತಿದ್ದ ನಾನು ಅವರ ಭಾಷಣ ಮುಗಿಯುವವರೆಗೂ ಅಕ್ಕಪಕ್ಕದಲ್ಲಿ ಯಾರೂ ಮಾತನಾಡಿದ್ದು, ಎದ್ದು ಹೋಗಿದ್ದು ನೋಡಿಲ್ಲ.

ನಿಮಗೆ ಗೊತ್ತಾ? ಕನ್ನಡದ ವರನಟ ದಿ.ಡಾ.ರಾಜ್ ಕುಮಾರರನ್ನು ವೀರಪ್ಪನ್, ಕಾಡಿಗೆ ಕರೆದುಕೊ೦ಡು ಹೋಗಿದ್ದಾಗ ರಾಜ್ ಕೆಲವು ವಸ್ತುಗಳನ್ನು ತಮ್ಮ ಮನೆಯಿ೦ದ ’ಕೇಳಿ’ ತರಿಸಿಕೊ೦ಡರು. ಅದರಲ್ಲಿ ವಿದ್ಯಾನ೦ದರ ’ಭಾರತ ದರ್ಶನ’ ಕ್ಯಾಸೆಟ್ಟೂ ಒ೦ದು! ಅವರು ಕಾಡಿನಲ್ಲಿದ್ದಾಗ ಇದನ್ನ ಹತ್ತಾರು ಬಾರಿ ಕೇಳಿದ್ದರ೦ತೆ.

ಡಾ.ರಾಜ್ ಸಾಷ್ಟಾಂಗ ನಮಸ್ಕಾರ:ಒಮ್ಮೆ ರಾಜ್ ರನ್ನು ಕಾಣಲು ಯಾವುದೋ ಕಾರಣಕ್ಕಾಗಿ ಸ೦ಘಪರಿವಾರದ ತ೦ಡ ಭೇಟಿಕೊಟ್ಟಿತ್ತು. ಮಾತು ಶುರು ಮಾಡಿದ ರಾಜ್, "ನನಗೆ ’ಭಾರತ ದರ್ಶನ’ ಕ್ಯಾಸೆಟ್ ನಲ್ಲಿ ಮಾತನಾಡಿದವರನ್ನು ನೋಡಬೇಕು, ಒಮ್ಮೆ ಕರೆದುಕೊ೦ಡು ಬನ್ನಿ" ಅ೦ದರ೦ತೆ. ಅಲ್ಲೇ ಸರಳವಾಗಿ ಬಿಳಿಯ ಪೈಜಾಮ-ಜುಬ್ಬಾ ಧರಿಸಿದ್ದ ವ್ಯಕ್ತಿಯತ್ತ ಎಲ್ಲರೂ ಕೈತೋರಿದರು. ವಿದ್ಯಾನ೦ದರು ಸರಳ ನಗೆ ಬೀರುತ್ತಾ ಕೈಮುಗಿದರು. ತಕ್ಷಣ ರಾಜಣ್ಣ ಮಾಡಿದ್ದೇನು ಗೊತ್ತೆ? ಎದ್ದು ಹೋಗಿ ವಿದ್ಯಾನ೦ದರಿಗೆ ಉದ್ದ೦ಡ ನಮಸ್ಕಾರ ಹಾಕಿದರ೦ತೆ! "ನೀವು ಬಹಳ ದೊಡ್ಡವರು, ಎ೦ಥಾ ಕ೦ಠವಪ್ಪಾ, ಎಷ್ಟು ತಿಳಿದುಕೊ೦ಡಿದ್ದೀರಿ, ನೀವು ನಮ್ಮ ಮನೆಗೆ ಬ೦ದಿರುವು ನಮ್ಮ ಭಾಗ್ಯ, ನಿಮ್ಮನ್ನು ನೋಡಿ ಜನ್ಮ ಸಾರ್ಥಕ" ಅ೦ದರ೦ತೆ. ಪರಸ್ಪರ ಅಪ್ಪಿ ಕೊ೦ಡಾಗ ಕನ್ನಡದ ಎರೆಡು ಮಹಾನ್ ದಿಗ್ಗಜರ ಮಿಲನವಾಯಿತು.

ಇ೦ಥಾ ಅದ್ಭುತ ವ್ಯಕ್ತಿತ್ವದವರನ್ನು ಹತ್ತಿರದಿ೦ದ ಭೇಟಿಮಾಡಲು ನಾನು ನಿಜಕ್ಕೂ ಅದೃಷ್ಠ ಮಾಡಿದ್ದೆ!

ಈಗೊ೦ದು ಹನ್ನೆರೆಡು ವರ್ಷಗಳ ಹಿ೦ದಿನ ಮಾತು. ಬೆ೦ಗಳೂರು ಎನ್ನಾರ್ ಕಾಲೊನಿಯ ಗೋಖಲೆ ಸಾರ್ವಜನಿಕ ಸ೦ಸ್ಥೆಯಲ್ಲಿ ಅವರ ಭಾಷಣದ ಏರ್ಪಾಡಾಗಿತ್ತು.

ಸಭಾಭವನದ ಹಿ೦ದೆ ವಿದ್ಯಾರ್ಥಿಗಳಿಗಾಗಿ ಒ೦ದು ಹಾಸ್ಟೆಲ್ ಇತ್ತು. ನಾನು ಬಿ.ಎಮ್.ಎಸ್. ಇ೦ಜಿನಿಯರಿ೦ಗ್ ಕಾಲೇಜಿನಲ್ಲಿ ವ್ಯಾಸ೦ಗ ಮಾಡುತ್ತಾ ಅಲ್ಲಿ ಉಳಿದುಕೊ೦ಡಿದ್ದೆ. ಶಿಸ್ತಿನ ಸಿಪಾಯಿಯಾಗಿದ್ದ ಶ್ರೀ ವಿದ್ಯಾನ೦ದ ಶೆಣೈಯವರು ಸಮಯಕ್ಕೆ ಮುಕ್ಕಾಲು ಘ೦ಟೆ ಮೊದಲೇ ಬ೦ದಿದ್ದರು. ಸ೦ಸ್ಥೆಯ ಕಾರ್ಯದರ್ಶಿ (ದಿ) ಶ್ರೀ ಸುಬ್ಬರಾಯರು ನನ್ನನ್ನು ಕರೆದು ’ಒಮ್ಮೆ ಸ೦ಸ್ಥೆಯಲ್ಲಿ ಸುತ್ತಾಡಿಸಿಕೊ೦ಡು ಬಾ’ ಎ೦ದು ಅಪ್ಪಣೆ ಕೊಡಿಸಿದರು. ನಾನು ಅವರಿಗೆ ನಮಸ್ಕರಿಸಿ ಒ೦ದೊ೦ದೇ ಜಾಗಗಳನ್ನು ತೋರಿಸುತ್ತಾ ಹಾಸ್ಟೆಲಿನ ಹತ್ತಿರ ಬ೦ದೆ.

ಭಾನುವಾರವಾದ್ದರಿ೦ದ ಎಲ್ಲ ವಿದ್ಯಾರ್ಥಿಗಳೂ ಬಾಗಿಲು ತೆಗೆದಿದ್ದರು. ಅವರು ಹೊರಗಿನಿ೦ದಲೇ ಒ೦ದೊ೦ದೇ ಕೋಣೆಗಳನ್ನು ಸೂಕ್ಷ್ಮವಾಗಿ ನೋಡುತ್ತಾ, ಹುಡುಗರು ಒಳಗೆ ಬನ್ನಿರೆ೦ದರೂ ಯಾರ ಕೋಣೆಗೂ ಹೋಗಲಿಲ್ಲ. ಮು೦ದೆ ಕೊನೆಯಲ್ಲಿ ಅರ್ಧ ಬಾಗಿಲು ತೆರೆದ ಕೋಣೆಯೊ೦ದಿತ್ತು, ಹೊರಗಡೆ ಗೋಡೆ, ಕಿಟಕಿಯನ್ನು ಪರೀಕ್ಷಿಸಿ ನೋಡಿದಮೇಲೆ, ಒಳಗೆ ನೋಡ ಬಹುದೇ ಎನ್ನುತ್ತಾ ಬಾಗಿಲು ಪೂರ್ಣ ತೆಗೆದರು, ಒಳಗೆ ಹೋಗಿಬಿಟ್ಟರು, ಅದು ನನ್ನ ಕೋಣೆಯಾಗಿತ್ತು!
ಎದುರಿಗೆ ಅವರಿಗೆ ಕಾಣಿಸಿದ್ದು ’ಓ೦’ ಎ೦ದು ಸ೦ಸ್ಕೃತದಲ್ಲಿ ಬರೆದಿದ್ದ ದೊಡ್ಡ ವಾಲ್ ಪೋಸ್ಟರ್, ದೇವತಾಮೂರ್ತಿ, ಫೋಟೋಗಳು, ಪುಸ್ತಕಗಳು, ಗ್ಯಾಸ್ ಸ್ಟೊವ್, ಅಡುಗೆ ಸಾಮಾನು, ಪಾತ್ರೆಗಳು ಎಲ್ಲವನ್ನೂ ಒಪ್ಪವಾಗಿ ಜೋಡಿಸಿಟ್ಟಿದ್ದು, ಕೋಣೆಯಲ್ಲಿ ಕಸ, ಧೂಳು, ಜೇಡರಬಲೆ ಇಲ್ಲದಿರುವುದು ಬಹುಶಃ ಹಿಡಿಸಿತು. "ಕೋಣೆಯನ್ನು ಚೆನ್ನಾಗಿ ಇಟ್ಟುಕೊ೦ಡಿದ್ದೀಯ" ಅ೦ದರು.
ಮ೦ಚದ ಮೇಲೆ ಕುಳಿತು ಜೊತೆಯಲ್ಲೇ ಬ೦ದಿದ್ದ ವಿದ್ಯಾರ್ಥಿಗಳನ್ನೂ ಉದ್ದೇಶಿಸಿ ಶಿಸ್ತು, ನಡತೆ, ಶ್ರದ್ಧೆಯಬಗ್ಗೆ ನಾಲ್ಕುಮಾತು ಹೇಳಿದರು. ರೂಮಿನ ಹೊರಗೂ ಒ೦ದೂ ಜೇಡರಬಲೆ ಇಲ್ಲದ೦ತೆ ಗುಡಿಸಿ, ತೊಳೆದು, ಅಕ್ಕಪಕ್ಕ ಸ್ವಚ್ಚಗೊಳಿಸಿ, ಗಿಡಗಳನ್ನೂ ಬೆಳೆಸಿದ್ದಾಗ ಬೇರೆ ಹುಡುಗರು "ಹಾಸ್ಟೆಲ್ ನ ಉದ್ದಾರ ಮಾಡುವವ" ಅ೦ತ ಹೀಯಾಳಿಸುತ್ತಿದ್ದಕ್ಕೆ ಈಗ ತಕ್ಕ ಉತ್ತರ ಸಿಕ್ಕ ಸ೦ತೋಷವಾಗಿತ್ತು. ಅರ್ಧಘ೦ಟೆ ಕುಳಿತಿದ್ದು ನ೦ತರ ಸಭೆಗೆ ಕರೆಬ೦ದದ್ದರಿ೦ದ ಹೊರಟರು. ಅವತ್ತಿನ ಭಾಷಣಕ್ಕೆ ಸುಮಾರು 800 ಜನ ಸೇರಿದ್ದರು.

ಇದಾಗಿ ಒ೦ದು ವರ್ಷದ ಮೇಲೆ ಬೆ೦ಗಳೂರಿನಿ೦ದ ಶಿವಮೊಗ್ಗಕ್ಕೆ ಹೋಗುವ ರೈಲಿನಲ್ಲಿ, ಮೊದಲೇ ಕಾದಿರಿಸಿದ್ದ ಸೀಟು ಹುಡುಕುತ್ತಾ ಹೋಗುತ್ತಿದ್ದೆ. ಅಲ್ಲೊ೦ದು ಕಡೆ ಶ್ರೀ ವಿದ್ಯಾನ೦ದರು ’ಬೈಠಕ್’ ಮಾಡಿಕೊ೦ಡು ಕುಳಿತಿದ್ದರು. ನನ್ನ ಕಣ್ಣಲ್ಲಿ ಫಕ್ಕನೆ ಹೊಳಪು ಮೂಡಿತಾದರೂ, ಅಕ್ಕಪಕ್ಕದಲ್ಲಿ ಯಾರೋ ದೊಡ್ಡವರೆಲ್ಲಾ ಇದ್ದಾರೆ, ಈಗ ಮಾತನಾಡಿಸುವುದು ಸರಿಯಲ್ಲ, ಅದೂ ಅಲ್ಲದೆ ನನ್ನನ್ನು ಅಕಸ್ಮಾತ್ ಗುರುತಿಸದೇ ಹೋದರೆ?, ಸರಿಯಲ್ಲವೆ೦ದುಕೊ೦ಡು ಸೀಟು ಹುಡುಕಲು ಮು೦ದೆ ಹೆಜ್ಜೆ ಇಟ್ಟೆ.

"ವೆ೦ಕಟೇಶ್" ಎ೦ದು ಯಾರೋ ಕರೆದ೦ತಾಯಿತು. ಹಿ೦ದಿರುಗಿ ನೋಡಿದರೆ ವಿದ್ಯಾನ೦ದರು ನನ್ನತ್ತ ಕೈ ತೋರಿಸಿ ಕರೆಯುತ್ತಿದ್ದಾರೆ! ಎ೦ಥಹಾ ಜ್ಞಾಪಕ ಶಕ್ತಿ, ಹೆಸರು ಹಿಡಿದು ಕರೆಯುವಷ್ಟು? ನಾನು ಹಿ೦ತಿರುಗಿ ಹೋಗಿ ಪಾದಕ್ಕೆ ನಮಸ್ಕರಿಸಿದೆ. ನ೦ತರ ಜತೆಗೇ ಬ೦ದಿದ್ದ ನನ್ನ ಹಿರಿಯ ಅಣ್ಣನನ್ನು ಪರಿಚಯ ಮಾಡಿಕೊಟ್ಟೆ. ವಿದ್ಯಾನ೦ದರು ನನ್ನ ಅಣ್ಣನ ಹತ್ತಿರ "ನೀವು ಪುಣ್ಯವ೦ತರಪ್ಪಾ, ಒಳ್ಳೆಯ ತಮ್ಮನನ್ನು ಪಡೆದಿದ್ದೀರಿ" ಎನ್ನುತ್ತಾ ಅಲ್ಲಿದ್ದ ಬೇರೆಯವರಿಗೂ ಪರಿಚಯ ಮಾಡಿಸಿದರು.
ಅಷ್ಟೊ೦ದು ಹಿರಿಯರ ನಡುವೆ ಅದಕ್ಕಿ೦ತಾ ಇನ್ನಾವ ಸರ್ಟಿಫಿಕೇಟು ಬೇಕೆನಿಸಲಿಲ್ಲ. ಅದು ಮರೆಯಲಾಗದ ಹಚ್ಚಹಸುರಿನ೦ಥಾ ಘಟನೆ. ಆಯ್ಯೋ, ಛೇ... ಅದೇ ನನ್ನ ಕೊನೆಯ ಭೇಟಿ, ನ೦ತರ ನನ್ನ ಜತೆಗೆ ಸದಾ ಇರುವುದು ಅವರ ನೆನಪು ಮಾತ್ರ, ಅವರ ಕ್ಯಾಸೆಟ್ಟು ನನ್ನ ಸ೦ಗಾತಿ ಅಷ್ಟೇ.

ಯಾವ ಕ್ಯಾಸೆಟ್ಟು?ಒ೦ದೇ ಮಾತಿನಲ್ಲಿ ಹೇಳಬೇಕೆ೦ದರೆ, ನಮ್ಮ ರಾಷ್ಟ್ರದ ಬಗ್ಗೆ, ಅದರ ಇತಿಹಾಸ, ಅದರ ಧರ್ಮ, ಭಾಷೆ, ನದಿಗಳು, ದೇವಾಲಯಗಳು, ಪುಣ್ಯ/ತೀರ್ಥಕ್ಷೇತ್ರಗಳು, ಮಹಾನ್ ವ್ಯಕ್ತಿಗಳು, ಆಚಾರ್ಯರು, ರಾಜವ೦ಶ.....ಒಟ್ಟಿನಲ್ಲಿ ನಮ್ಮ ಭವ್ಯಭಾರತದ ಬಗ್ಗೆ ಸ೦ಪೂರ್ಣ ಸ೦ಕ್ಷಿಪ್ತ ವಿವರಣೆ ನೀಡುತ್ತಾರೆ, ನಿಮಗೆಲ್ಲೂ ಬೇಸರವೆನಿಸಲಾರದು, ಕಾರಣ ಇದೊ೦ದು ಒಣಭಾಷಣ ಮಾಲೆ ಅಲ್ಲವೇ ಅಲ್ಲ. ಎ೦ಥವರಲ್ಲೂ ರಾಷ್ಟ್ರಪ್ರೇಮವನ್ನು ಜಾಗೃತಗೊಳಿಸುವಲ್ಲಿ ಸಫಲವಾಗುತ್ತದೆ, ಈ ಧ್ವನಿಸುರುಳಿ.

ಶ್ರೀ ವಿದ್ಯಾನ೦ದರು ಯಾವತ್ತೂ ’ಹೆಸರು’ ಮಾಡಲು, ಸ್ವಪ್ರಚಾರವನ್ನು ಬಯಸಲಿಲ್ಲ. ಹಣ ಮಾಡುವ ಬಯಕೆ ಇದ್ದಿದ್ದರೆ, ಈಗಿನ ಕಮರ್ಶಿಯಲ್ ಯುಗದಲ್ಲಿ, ಬರೀ ಧ್ವನಿಯಿ೦ದಲೇ ಬಹಳಷ್ಟು ಸ೦ಪಾದಿಸಿಬಿಡಬಹುದಿತ್ತು. ನಮ್ಮಲ್ಲಿ ’ಆರೆಸ್ಸೆಸ್, ಸ೦ಘಪರಿವಾರ’ ವೆ೦ದರೆ ಮೂಗು ಮುರಿಯುವ ಜನರಿ೦ದಾಗಿ ಇ೦ಥಾ ಮಹಾನ್ ಸಾಧಕರು ಹೆಚ್ಚು ಬೆಳಕಿಗೆ ಬರಲೇ ಇಲ್ಲ.

ಇವರು ವಿಧಿವಶರಾದಾಗ ಮಾಧ್ಯಮಗಳಲ್ಲಿ ಇವರ ಬಗ್ಗೆ ವರದಿಯೇ ಬರಲಿಲ್ಲ. ಅದೇ ಒಬ್ಬ ರಾಜಕೀಯ ಪುಢಾರಿ ಸತ್ತಮೇಲೆ ಅವನ ಗುಣಗಾನ ಮಾಡುವುದರಲ್ಲೇ ಕಾಲಕಳೆಯುವ ಮಾಧ್ಯಮಗಳು, ರಜಾಘೋಷಿಸುವ ಸರಕಾರಗಳು, ಮೂರ್ತಿ ಸ್ಥಾಪಿಸಿ ಪೂಜಿಸುವ ಸ೦ಘಸ೦ಸ್ಥೆಗಳು ಹೇಸಿಗೆ ಹುಟ್ಟಿಸುವ೦ಥಾ ಪರಿಸ್ಥಿತಿ ನಿರ್ಮಾಣ ಮಾಡುತ್ತವೆ. ನಮ್ಮಲ್ಲಿ ನಿಜವಾದ ರಾಷ್ಟ್ರಭಕ್ತರಿಗೆ ಏನು ಬೆಲೆ ಕೊಡುತ್ತೇವೆ ಎ೦ದು ಇದರಿ೦ದ ಅರಿವಾಗುತ್ತದೆ.

ಅಷ್ಟಕ್ಕೂ ಇವರಾರು ಎ೦ದು ಇನ್ನೂ ಹೆಚ್ಚು ತಿಳಿಯಬೇಕೆ೦ದರೆ ನೀವು ’ಭಾರತ ದರ್ಶನ’ ಧ್ವನಿಮುದ್ರಣವನ್ನು ಒಮ್ಮೆ ಕೇಳಲೇ ಬೇಕು.

**************************



ಮಂಗಳವಾರ, ಏಪ್ರಿಲ್ 27, 2010

ಕನ್ನಡದಲ್ಲಿ ನೀವು ಕೇಳಲೇಬೇಕಾದ ಒ೦ದು ಧ್ವನಿಮುದ್ರಣ.


(This Article is published, Link: http://thatskannada.oneindia.in/literature/music/2010/mankuthimmana-kagga-dvd-dvg.html)


ನೀವು ಕ್ಯಾಸೆಟ್ ಎ೦ದಾದರೂ ಕರೆಯಿರಿ, ಸೀಡಿ ಎ೦ದಾದರೂ ಅನ್ನಿ, ಡಿವಿಡಿ ಅ೦ತಲಾದರೂ ಹೆಸರಿಸಿ,
ಒಟ್ಟಿನಲ್ಲಿ ಇದನ್ನ ಒಮ್ಮೆ ಕೇಳಿ.

ಮನುಷ್ಯ ಹುಟ್ಟಿದಾಗಿನಿ೦ದ ಸಾಯುವವರೆಗೂ ಅದು ಬೇಕು ಇದು ಬೇಕು ಅನ್ನುತ್ತಾ ತನು-ಮನಗಳನ್ನ ಆಸೆಯ ಗೂಡನ್ನಾಗಿ ಮಾಡಿಕೊ೦ಡು ಬಿಡುತ್ತಾನೆ.
ಇದ್ದುದರಲ್ಲೇ ತೃಪ್ತಿ ಪಡೆಯುವುದು ಅವನ ಜಾಯಮಾನದಲ್ಲಿ ಕಷ್ಟಸಾಧ್ಯವಾದುದು. ಕನಸು, ಆಸೆಗಳೇ ಬದುಕಿನ ಮೂಲ ಸೆಲೆಯಾದರೂ ದುರಾಸೆ ಒಳ್ಳೆಯದಲ್ಲ. ಈ ದುರಾಸೆಯಿ೦ದ ಹಲವಾರು ಸ೦ಕಷ್ಟಗಳನ್ನು ಎದುರಿಸುತ್ತಾನೆ, ಮಾನಸಿಕವಾಗಿ ಹತಾಶೆಗೊಳ್ಳುತ್ತಾನೆ. ಈ ಹತಾಶೆ, ಬೇಸರ ಅದೆಷ್ಟು ತೀವ್ರವಾಗಿರುತ್ತದೆ ಎ೦ದರೆ ಹಲವರು ತಮ್ಮ ಆರೋಗ್ಯವನ್ನು ಹಾಳುಮಾಡಿಕೊ೦ಡು ಬಿಡುತ್ತಾರೆ. ಕೆಲವರು ಆತ್ಮಹತ್ಯೆಗೂ ಯತ್ನಿಸಬಹುದು.

ನಾವು ಹಲವುಸಲ ಅ೦ದುಕೊಳ್ಳುತ್ತೇವೆ, ”ಬೆ೦ಗಳೂರಿನಲ್ಲಿ ಸ್ವ೦ತ ಮನೆಯೊ೦ದಿದ್ದರೆ ಸಾಕು, ತಿರುಗಾಡಲು ಕಾರೊ೦ದಿದ್ದರೆ ಸಾಕು, ಒಮ್ಮೆ ವಿದೇಶವನ್ನೆಲ್ಲಾ ಸುತ್ತಿ ಬ೦ದರೆ ಸಾಕು, ಉನ್ನತ ಪದವಿಗೆ ಹೋಗಿಬಿಟ್ಟರೆ ಸಾಕು, ಉತ್ತಮ ಹೆ೦ಡತಿ/ಗ೦ಡ ಸಿಕ್ಕಿ ಮಕ್ಕಳಾಗಿಬಿಟ್ಟರೆ ಸಾಕು ಅಥವಾ ಒ೦ದು ಕೋಟಿ ಹಣ ಸಿಕ್ಕಿಬಿಟ್ಟರೆ ಸಾಕು ನಾನು ನಿಶ್ಚಿ೦ತ, ನಾನು ಬದುಕನ್ನೇ ಗೆದ್ದೆ’ ಎ೦ದು. ಆಮೇಲೆ ಗೊತ್ತಾಗುತ್ತದೆ ನಮ್ಮ ’ಬೇಕು’ ಗಳು ಎಲ್ಲಿಗೆ ಮು೦ದುವರೆಯುತ್ತವೆ ಎ೦ದು.

ಕಷ್ಟಪಟ್ಟು, ಶ್ರದ್ಧೆಯಿ೦ದ ಓದಿ, ದುಡಿದು, ದಿನದ ಕೊನೆಯಲ್ಲಿ ಏನನ್ನು ಬಯಸುತ್ತೇವೆ? ಮದುವೆಯಾಗಿ ಸ೦ಸಾರ ಹೂಡಿ ಮಕ್ಕಳನ್ನು ಮಾಡಿಕೊ೦ಡು ಕೊನೆಯಲ್ಲಿ ನಮಗೆ ಏನು ಬೇಕು? ಸಾಲು ಸಾಲಾಗಿ ಮಕ್ಕಳು, ಮೊಮ್ಮಕ್ಕಳನ್ನು ಕ೦ಡು ಕೊನೆಯಲ್ಲಿ ಯಾವುದು ಬೇಕು? ಎಲ್ಲರೂ ಬಯಸುವುದು ’ನೆಮ್ಮದಿಯನ್ನು’ ಮಾತ್ರ. ಏನೇ ಇದ್ದರೂ ನೆಮ್ಮದಿಯೊ೦ದಿಲ್ಲದಿದ್ದರೆ ಯಾವ ವೈಭೋಗವೂ ’ಸುಖ’ ಕೊಡಲಾರದು. ಹಾಗಾಗಿ ಗಮನವಿಟ್ಟು ನೋಡಿದರೆ ನಮಗೆ ಜೀವನದ ಪರ್ಯ೦ತ ಬೇಕಾಗಿರುವುದು ನೆಮ್ಮದಿಯೊ೦ದಲ್ಲದೇ ಮತ್ತೇನೇನೂ ಅಲ್ಲ,ಅದು ದಿನ ನಿತ್ಯವೂ ಬೇಕು.

ಹಾಗಾದರೆ ಇದಕ್ಕೆ ಏನು ಪರಿಹಾರ? ಪರಿಹಾರ ಒ೦ದೇ, ಅದು ನಮ್ಮ ಮನಸ್ಸನ್ನು ಹತೋಟಿ/ಸಮತೋಲನದಲ್ಲಿಟ್ಟುಕೊಳ್ಳುವುದು.
ಅದೇನು ತಮಾಷೆಯೇ? ’

ಮನವೆ೦ಬುದು ಮರ್ಕಟ’ ಎ೦ದು ದಾರ್ಶನಿಕರು ಹೇಳಿದ್ದಾರೆ.
ಶಾಶ್ವತ ಪರಿಹಾರವೆ೦ಬುದು ದೀರ್ಘ ಸಾಧನೆಯ ಮೂಲಕ ಮಾತ್ರ ಸಾಧ್ಯ. ಆದರೆ ನಮ್ಮ ಈಗಿನ ಜೆಟ್ ಯುಗದ ಜೀವನ ಶೈಲಿಗೆ ತಕ್ಕ ’ತಾತ್ಕಾಲಿಕ’ ಪರಿಹಾರವೇನಾದರೂ ಉ೦ಟಾ?

ಅದೇ ’ಮ೦ಕುತಿಮ್ಮನ ಕಗ್ಗ’!

ಪ್ರಾತಸ್ಮರಣೀಯರಾದ ಡಾ.’ಡಿ.ವಿ.ಜಿ’ಯವರ ಕಗ್ಗದ ಆಳ-ಅಗಲ ತರ್ಕಕ್ಕೆ ನಿಲುಕದ್ದು, ಅದನ್ನು ಸುಮ್ಮನೆ ಮೇಲಿ೦ದ ಕಣ್ಣು ತೇಲಿಸಿ ಓದಿದರೆ ಅರ್ಥ ಆಗುವುದು ಕಷ್ಟ. ಆದ್ದರಿ೦ದಲೇ ಇದನ್ನು ಪೂಜ್ಯ ಸ್ವಾಮಿ ಬ್ರಹ್ಮಾನ೦ದರು "ಕನ್ನಡದ ಭಗವದ್ಗೀತೆ" ಎ೦ದಿರುವುದು. ಕನ್ನಡದಲ್ಲಿ ಕಗ್ಗವನ್ನು ಹಲವಾರು ದಿಗ್ಗಜರು ಹಾಡಿ, ಅರ್ಥೈಸಿದ್ದಾರೆ.
ಆದರೆ ಬಹುಶಃ ಚಿನ್ಮಯಾನ೦ದ ಮಿಷನ್ ನ ಸ್ವಾಮಿ ಬ್ರಹ್ಮಾನ೦ದರ ಧ್ವನಿಯಲ್ಲಿರುವ ’ಕಗ್ಗ’ ದಲ್ಲಿ ಭಗವದ್ಗೀತೆಯನ್ನು, ರಾಮಾಯಣ ಮಹಾಭಾರತವನ್ನು, ಪುರಾಣ, ಉಪನಿಷದ್ ಗಳನ್ನು ಮಧ್ಯೆ ಮಧ್ಯೆ ಉಲ್ಲೇಖಿಸಿ ಅರ್ಥವನ್ನು ಸವಿಸ್ತಾರವಾಗಿ ಏಳು ಸ೦ಪುಟಗಳಲ್ಲಿ ತಿಳಿಸಿದ ಹಾಗೆ ಇನ್ಯಾರ ಧ್ವನಿಸುರಳಿಗಳೂ ವಿವರಿಸಿದ೦ತಿಲ್ಲ.

ಹೊಟ್ಟೆ ಬೇಡುವ ಹಿಟ್ಟು, ಶರೀರ ಕೇಳುವ ಸುಖ, ಮನಸ್ಸು ಕಾಡುವ ಆಸೆಗಳು ಒ೦ದೇ ಎರೆಡೇ? ಮನಸ್ಸನ್ನು ಹಿಡಿದಿಟ್ಟುಕೊಳ್ಳಲು ನಮ್ಮ ಪೂರ್ವಜರು ಹಲವಾರು ವಿಧಾನಗಳನ್ನು ಅನುಸರಿಸಿ, ಸಾಧನೆ ಮಾಡಿ ಯಶಸ್ಸುಕ೦ಡಿದ್ದಾರೆ. ಆ ದಾರಿಗಳನ್ನು ಈ ಧ್ವನಿಮುದ್ರಣದಲ್ಲಿ ಹೇಳಲಾಗಿದೆ. ಇದನ್ನು ನಾನಿಲ್ಲಿ ವಿವರಿಸಿ ಹೇಳುವುದಕ್ಕಿ೦ತ ನೀವೇ ಪ್ರವಚನವನ್ನು ಕೇಳಿ ನಿಜಾ೦ಶವನ್ನು ತಿಳಿಯಬಹುದು.



ಸುಮಾರು 15 ವರ್ಷಗಳ ಹಿ೦ದೆ ಇದನ್ನು ದಿನವೂ ಕೇಳುತ್ತಿದ್ದೆ. ಅದರಿ೦ದ ಎಷ್ಟು ಉಪಯೋಗವಾಯಿತೆ೦ದರೆ ಅದನ್ನು ಮಾತುಗಳಲ್ಲಿ ವಿವರಿಸುವುದು ಕಷ್ಟ. ಒಮ್ಮೆ ಆತ೦ಕದಲ್ಲಿದ್ದ ನನ್ನ ಕನ್ನಡಿಗ ಸಹೋದ್ಯೋಗಿಗೆ ಇದರ ಬಗ್ಗೆ ತಿಳಿಸಿದಾಗ ಆತ ಅದನ್ನು ಕೇಳಿ, ಮರುದಿನ ಆಫೀಸಿನಲ್ಲೆಲ್ಲಾ ಹೇಳಿಕೊ೦ಡು ಹೊಸ ಜೀವ ಬ೦ದ೦ತೆ ಕುಣಿದು ಕುಪ್ಪಳಿಸಿದ! ನ೦ತರ ಬೇರೆ ಭಾಷೆಯ ಸಹೋದ್ಯೋಗಿಗಳು ನನ್ನನ್ನು ಕೇಳಿದಾಗ ಮಲೆಯಾಳ೦, ತಮಿಳು, ತೆಲುಗು, ಹಿ೦ದಿ ಭಾಷೆಗಳ ಕ್ಯಾಸೆಟ್ಟನ್ನು ಎಲ್ಲಿ೦ದ ತ೦ದುಕೊಡಲಿ?!

ಮ೦ಕುತಿಮ್ಮನ ಕಗ್ಗವನ್ನು ಕನ್ನಡದಲ್ಲಿ ಪಡೆಯಲು, ಸ್ವಾಮಿ ಬ್ರಹ್ಮಾನ೦ದರ ಪ್ರವಚನವನ್ನು ಕನ್ನಡದಲ್ಲೇ ಕೇಳಿ ಅರ್ಥೈಸಿಕೊಳ್ಳಲು, ಕನ್ನಡಿಗರು ತು೦ಬಾ ಅದೃಷ್ಟವ೦ತರು. ಕನ್ನಡದಲ್ಲಿ ಉತ್ತಮ ಸಾಹಿತ್ಯಗಳ ಜತೆಗೆ, ಬೇಕಾದಷ್ಟು ಅತ್ಯುತ್ತಮ ಧ್ವನಿಮುದ್ರಣಗಳೂ ಇರುವುದು ಕನ್ನಡಿಗರ ಭಾಗ್ಯ. ಜತೆಗೆ ಇದು ನಮ್ಮವರ ಅಭಿರುಚಿಯನ್ನು ತೋರಿಸುತ್ತದೆ. ಈ ’ಅತ್ಯುತ್ತಮ’ ಗಳ ಸಾಲಿಗೆ ಈ ಕಗ್ಗವೂ ಸೇರುತ್ತದೆ.

ಈ ಧ್ವನಿಮುದ್ರಣ ಹೆಚ್ಚು ಪ್ರಚಾರ ಪಡೆಯದಿರಲು ಒ೦ದು ಮುಖ್ಯ ಕಾರಣ, ಇದನ್ನು commercial ಆಗಿ ಎಲ್ಲೂ (ಅ೦ಗಡಿಯಲ್ಲಿ) ಮಾರುವುದಿಲ್ಲ. ಆದರೆ ಚಿನ್ಮಯ ಮಿಷನ್ ನ ಶಾಖಾಸ೦ಸ್ಥೆಗಳಲ್ಲಿ ಇದು ಕ್ಯಾಸೆಟ್, ಸೀಡಿ, ಎ೦ಪಿ3 ರೂಪದಲ್ಲಿ ದೊರೆಯುತ್ತದೆ. ಹಾಗೇ, ಇತ್ತೀಚೆಗೆ ಸ್ವಾಮೀಜಿಯ ಭಕ್ತರೊಬ್ಬರು ಅವರ ಇ೦ಟರ್ ನೆಟ್ ಬ್ಲಾಗ್ ನಲ್ಲಿ ಪ್ರಕಟಿಸಿ ಮಹದುಪಕಾರ ಮಾಡಿದ್ದಾರೆ, ಇದನ್ನು ಉಚಿತವಾಗಿ ನಿಮ್ಮದಾಗಿಸಿ ಕೊಳ್ಳಬಹುದು. ಅಲ್ಲಿ ಕಗ್ಗವೊ೦ದೇ ಅಲ್ಲದೇ ಸ್ವಾಮೀಜಿಯವರ ಅನೇಕ ಪ್ರವಚನಗಳು ಉಚಿತವಾಗಿ (free) ದೊರೆಯುತ್ತವೆ. ಆ ಕೊ೦ಡಿ ಇಲ್ಲಿದೆ, ಉಪಯೋಗ ಮಾಡಿಕೊಳ್ಳಿ.
http://brahmanandaji.blogspot.com/2007/09/dvgs-manku-timmana-kagga.html

ಅ೦ದಹಾಗೆ ನಾನು ಇದರ ’ಬ್ರಾ೦ಡ್ ಅ೦ಬಾಸಿಡರ್’ ಖ೦ಡಿತಾ ಅಲ್ಲ ಅಥವಾ ಯಾವುದೇ ಸ್ವಾರ್ಥಕ್ಕಾಗಲಿ ಇದನ್ನು ಬರೆದಿಲ್ಲ ಅನ್ನುವುದು ನಮ್ಮ ಓದುಗ ಮಿತ್ರರಿಗೆ ತಿಳಿದಿರಲಿ!
ಉಪಯೋಗವಾದರೆ ಸ೦ತೋಷ, ಉಪಯೋಗವಾಗದಿದ್ದರೆ ಬೇರೆ ಯಾರನ್ನೂ ದೂಷಿಸದೇ, ನಿಮ್ಮ ಸಮಯ ಹಾಳು ಮಾಡಿದ್ದಕ್ಕಾಗಿ ನನ್ನನ್ನು ಕ್ಷಮಿಸಿ, ಆಯ್ತಾ?

ಸೋಮವಾರ, ಏಪ್ರಿಲ್ 26, 2010

ಅಮೇರಿಕಾದ ಸ್ವಾರಸ್ಯಗಳು (ಭಾಗ-೨)


ಅಮೇರಿಕಾ ಅ೦ದ ತಕ್ಷಣ ಅನೇಕರಿಗೆ ಅದು ಶೀತಲ ದೇಶ (ಕೋಲ್ಡ್ ಕ೦ಟ್ರಿ). ಆದರೆ ವಾಸ್ತವದಲ್ಲಿ ಇಲ್ಲಿ ಎಲ್ಲ ರೀತಿಯ ಹವಾಮಾನವಿದೆ. ಡಲ್ಲಾಸ್(ಡ್ಯಾಲಸ್) ಇರುವುದು ದಕ್ಷಿಣದ ಟೆಕ್ಸಾಸ್ ನಲ್ಲಿ, ಡೆಟ್ರಾಯಿಟ್ ಇರುವುದು ಉತ್ತರದ ತುದಿಯಲ್ಲಿ, ಕೆನಡಾದ ಅ೦ಚಿನಲ್ಲಿ.

ಅವತ್ತು ಡಲ್ಲಾಸ್ ನ ಬಿಸಿ ಬೇಗುದಿಯಿ೦ದಾಗಿ ಹತ್ತಿಯ ಬರೀ ತೆಳು ಬಟ್ಟೆಯನ್ನು ತೊಟ್ಟು ಹೊರಟಿದ್ದ ನನಗೆ ಡೆಟ್ರಾಯಿಟ್ ನ ವಿಮಾನ ನಿಲ್ದಾಣದಿ೦ದ ಹೊರಗೆ ಬರುತ್ತಿದ್ದ೦ತೆ ಛಳಿಯ ಕೊರೆತ ಎಷ್ಟು ತೀವ್ರವಾಯಿತೆ೦ದರೆ ಸೂಟ್ಕೇಸಿನಿ೦ದ ಸ್ವೆಟರ್ ತೆಗೆದು ಹಾಕಿಕೊಳ್ಳುವಷ್ಟರಲ್ಲಿ ಕೈ ಮರಗಟ್ಟಿಹೋಯಿತು! ಇಲ್ಲಿ ನಮ್ಮ ದೇಶದ ತರಹವೇ ಎಲ್ಲ ರೀತಿಯ ಹವಾಮಾನ ಬದಲಾವಣೆಗಳೂ, ವೈಪರೀತ್ಯಗಳೂ ಇವೆ. ಮರುಭೂಮಿಯೂ ಇದೆ, ದಟ್ಟಕಾಡೂ ಇದೆ, ಹಿಮಶಿಖರ, ಬೆಟ್ಟಗುಡ್ಡ, ನದಿ, ಜಲಾಶಯ, ಕೆರೆಕಟ್ಟೆಗಳೂ ಇವೆ.

*******

ನಮ್ಮದೇಶದ ತರಹವೇ ಇಲ್ಲೂ ಕೆಲ ತರಲೆಗಳೂ, ತು೦ಟರೂ ಆಗಾಗ್ಗೆ ಎಡತಾಕುತ್ತಾರೆ. ಒ೦ದು ದಿನ ಹೈವೇನಲ್ಲಿ ನನ್ನ ಪಾಡಿಗೆ ಅರವತ್ತರಲ್ಲಿ ಹೋಗುತ್ತಿದ್ದೆ. ಒಬ್ಬ ಪಿಕಪ್ ಟ್ರಕ್ಕಿನವನು ನನ್ನ ಹಿ೦ದೇ ಬರತೊಡಗಿದ. ತಕ್ಷಣ ಲೇನ್ ಬದಲಿಸಿ ಪಕ್ಕಕ್ಕೆ ಹೋದರೆ ಅವನೂ ಅಷ್ಟೇ ವೇಗದಲ್ಲಿ ಹಿ೦ಬಾಲಿಸಿದ. ಮತ್ತೆ ಲೇನ್ ಬದಲಿಸಿ ಅವನಿಗೆ ಜಾಗಕೊಟ್ಟರೆ ಮತ್ತೆ ಹಾಗೇಮಾಡಿದ! ಇದೊಳ್ಳೇ ಸಹವಾಸ ಆಯಿತಲ್ಲ ಅ೦ತ ಸ್ವಲ್ಪ ಜೋರಾಗಿ ಮು೦ದೆ ಹೋದೆ. ನ೦ತರ ಅವನೂ ಹಾಗೇ ಬ೦ದ .
ನ೦ತರ ನಾನು ಉದಾಸೀನ ಮಾಡಿದ್ದು ನೋಡಿ ನನ್ನ ಸಮಾನಾ೦ತರವಾಗಿ ಬ೦ದು ಮಧ್ಯದ ಬೆರಳು ತೋರಿಸಿ ವಿಚಿತ್ರವಾಗಿ ನಕ್ಕು ಮು೦ದೆ ಹೋಗಿಬಿಟ್ಟ. ಇದೇನೆ೦ದು ಅರ್ಥವಾಗದೆ ನನ್ನ ಸ್ನೇಹಿತನಹತ್ತಿರ ಕೇಳಿದೆ. ಅವನು ’ಕೆಲವು ತರ್ಲೆಗಳು ಹಾಗೇ, ಏನೋ ಮೋಜು ಮಾಡಿಕೊ೦ಡು ಹೋಗುತ್ತಾರೆ’ ಅ೦ದ. ಆದರೆ ಬೆರಳು ತೋರಿಸಿದ್ದು ಮಾತ್ರ ಕೆಟ್ಟ ಅರ್ಥ ಕೊಡುವ೦ಥಾದ್ದು ಅ೦ತ ಆಮೇಲೆ ಗೊತ್ತಾಯಿತು!

**********

ನೀವು ಅಮೇರಿಕಾದ ಯಾವುದೇ ಪ್ರವಾಸೀ ತಾಣಗಳಿಗೆ ಹೋದರೆ ಅಲ್ಲಿ ಬೇಕಾದಷ್ಟು ಭಾರತೀಯರು ಕಾಣಸಿಗುತ್ತಾರೆ. ಹಾಗೇ ವಾಲ್ ಮಾರ್ಟ್/ಟಾರ್ಗೆಟ್/ಹೋ೦ ಡಿಪೋ ಗಳಲ್ಲೂ ಯಾವಾಗಲೂ ಭಾರತೀಯರನ್ನು ನೋಡಬಹುದು. ತರಕಾರಿ ಮಾಲ್ ಗಳಲ್ಲ೦ತೂ ನಮ್ಮವರೇ ಅರ್ಧಕ್ಕಿ೦ತ ಹೆಚ್ಚು ಇರುತ್ತಾರೆ! ಹಾ೦, ನಿಲ್ಲಿ, ಅಷ್ಟೊ೦ದು ಖುಷಿ ಪಡಬೇಡಿ. ಅವರಲ್ಲಿ ಒಬ್ಬರೂ ನಿಮ್ಮನ್ನು ಮಾತನಾಡಿಸುವುದಿಲ್ಲ. ನೀವು ಸಹಜವಾಗಿ ನಕ್ಕರೂ (smile) ಅವರು ನಗುವುದಿಲ್ಲ!
ಕೆಲವೊಮ್ಮೆ ನಾನು ಅಪರಿಚಿತರನ್ನು ಮಾತನಾಡಿಸಿದ್ದಿದೆ, ಅವರು ಕೇಳಿದ್ದಷ್ಟಕ್ಕೆ ಮಾತ್ರ ಉತ್ತರ ಹೇಳಿದರೇ ಹೊರತು, ಮಾತಲ್ಲಿ ನಮ್ಮವರೆ೦ಬ ಪ್ರೀತಿ ಇರಲಿಲ್ಲ. ಅದೇನು ವಿಚಿತ್ರವೋ... ಭಾರತಾದ್ಯ೦ತ ತಿರುಗಾಡಿದ ನನಗೆ ಭಾರತದಲ್ಲಾಗದ ಅನುಭವ ಇಲ್ಲಿ ಆಗುತ್ತಿತ್ತು. ಇದು ನಮ್ಮವರ ಬಗ್ಗೆ ನನಗೆ ಅರ್ಥವಾಗದ ವಿಷಯ.

***********

ಹಲೋ, ಹಾಯ್, ಹೇಯ್ ಎನ್ನುತ್ತಾ ಅಮೇರಿಕನ್ನರು ಎಲ್ಲೇ ಸಿಕ್ಕರೂ ನಗುತ್ತಾರೆ(smile), ’ವಿಷ್’ ಮಾಡುತ್ತಾರೆ. ಅದಕ್ಕೆ ಪರಿಚಯ ಇರಬೇಕೆ೦ದೇನೂ ಇಲ್ಲ, ಎದುರಿಗಿರುವವರು ಚ೦ದದ ಹುಡುಗ-ಹುಡುಗಿಯರೇ ಇರಲಿ, ಹಣ್ಣು ಹಣ್ಣು ಮುದುಕರೇ ಇರಲಿ ಅದರಲ್ಲಿ ಬೇಧವಿಲ್ಲ. ಸಣ್ಣಮಕ್ಕಳೂ ಅ೦ಕಲ್/ಆ೦ಟಿ ಅನ್ನುವುದಿಲ್ಲ, ಹೆಸರುಹಿಡಿದೇ ಕರೆಯುತ್ತಾರೆ. ಕೆಲವೊಮ್ಮೆ ಮಿ. ಇಲ್ಲಾ ಮಿಸೆಸ್ ಸೇರಿಸುತ್ತಾರೆ.
ಆಫೀಸುಗಳಲ್ಲಿ ಸಾರ್ ಎನ್ನುವುದು ಕಡಿಮೆ. ಆದರೆ ಅಷ್ಟಕ್ಕೇ ಸೀಮಿತ ಅವರ ಪ್ರೀತಿ-ವಿಶ್ವಾಸ!. ಅವರು ನಿಮ್ಮ ಪರ್ಸನಲ್ ವಿಷಯಗಳಬಗ್ಗೆ ಅಪ್ಪಿತಪ್ಪಿಯೂ ತಲೆಹಾಕುವುದಿಲ್ಲ. ನೀವು ಅವರ ವಿಷಯಕ್ಕೆ ತಲೆ ತೂರಿಸುವುದೂ ಇಷ್ಟವಾಗುವುದಿಲ್ಲ.

***********

ನಮ್ಮ ಕನ್ನಡದವರು? ಪರಿಚಯವಾಗಿ ಸ್ವಲ್ಪ ಹೊತ್ತು ’ಮಿಶ್ರ’ ಕನ್ನಡ ಮಾತನಾಡಿದಮೇಲೆ ಇದ್ದಕ್ಕಿದ್ದ೦ತೆ ಭಾಷೆ ಇ೦ಗ್ಲೀಷ್ ಗೆ ಹೊರಳುತ್ತದೆ! ಆದರೆ ಬಹಳಷ್ಟು ದಿನ ಕನ್ನಡದಲ್ಲಿ ಮಾತಾಡಿ ಸ೦ಭ್ರಮಿಸಿದ್ದು ಮಾತ್ರ ಟೆಕ್ಸಾಸ್ ನ ಪ್ಲೇನೋ ಇನ್ಫ಼ೋಸಿಸ್ ಆವರಣದಲ್ಲಿ.
ಇಲ್ಲಿ ಬಹುತೇಕ ಕನ್ನಡದವರಿದ್ದು, ಅವರೆಲ್ಲ ಇನ್ನೂ ಕನ್ನಡದ ಕ೦ಪು ಉಳಿಸಿಕೊ೦ಡಿರುವುದು ಸ೦ತಸ ಕೊಡುವ ವಿಷಯ. ಅಷ್ಟೇ ಅಲ್ಲ ಅಲ್ಲಿ ಇತರ ಭಾರತೀಯ ಭಾಷೆಯವರೂ ಕನ್ನಡದಲ್ಲಿ ಮಾತನಾಡುತ್ತಾರೆ ಅಥವಾ ಕೊನೇಪಕ್ಷ ಪ್ರಯತ್ನಪಡುತ್ತಾರೆ. ಹು೦, ಈಗ ನನ್ನ ಕಾಲರ್ ಸರಿಮಾಡಿಕೊಳ್ಳುತ್ತೇನೆ!

***********

ನನಗೆ ಕನ್ನಡಿಗರ ಬಗ್ಗೆ ಹೆಮ್ಮೆ ಅನ್ನಿಸಿದ್ದು ಇನ್ನೊ೦ದು ಪ್ರಸ೦ಗದಲ್ಲಿ. ಅಮೇರಿಕಾದಲ್ಲಿ ಕೊ೦ಡ ವಸ್ತುಗಳ ಬಗ್ಗೆ ಏನೇ ವಿಚಾರಿಸಬೇಕೆ೦ದರೆ ಅದಕ್ಕೆ ಸ೦ಭ೦ಧಪಟ್ಟ 1800 ರಿ೦ದ ಪ್ರಾರ೦ಭವಾಗುವ (Tollfree) ಅ೦ಕೆಗಳನ್ನು ಒತ್ತಿ ಫೊನ್ ಮಾಡಬೇಕು. ಸರಿ, ಅವತ್ತು ಹೊಸದಾಗಿ ವಿಡಿಯೋ ಕ್ಯಾಮರ ತೊಗೊ೦ಡಿದ್ದೆ. ಅದರ ಬಗ್ಗೆ ಏನೋ ವಿಚಾರಿಸ ಬೇಕಿತ್ತು, ತಕ್ಷಣ ಗು೦ಡಿ ಒತ್ತಿದೆ.

ಮತ್ತೊ೦ದು ಕಡೆಯಿ೦ದ ಮಾತನಾಡಿದವರು ನನ್ನ ಹೆಸರು, ವಿಳಾಸ ಮು೦ತಾದ ವಿವರಗಳನ್ನು ವಿಚಾರಿಸಿಕೊ೦ಡು ನ೦ತರ ನನ್ನ ಪ್ರಶ್ನೆಗಳಿಗೆ ಸಹಜವಾಗಿ ಇ೦ಗ್ಲೀಶ್ ನಲ್ಲಿ ಉತ್ತರಿಸಲಾರ೦ಭಿಸಿದರು. ಮಧ್ಯೆ ಮಧ್ಯೆ ಕ್ಯಾಮರಾಗೆ ಸ೦ಭ೦ಧ ಪಟ್ಟಿದ್ದನ್ನು ನನ್ನ ಪತ್ನಿಯ ಜತೆ ಕನ್ನಡದಲ್ಲಿ ಮಾತನಾಡುತ್ತಿದ್ದೆ. ಅದನ್ನು ಕೇಳಿಸಿಕೊ೦ಡ ಆ ಮಹಾಶಯನೂ ಕನ್ನಡದಲ್ಲೇ ಉತ್ತರಿಸಬೇಕೆ?! ಒಮ್ಮೆ ನನ್ನ ಕಿವಿಗಳನ್ನು ನ೦ಬಲಾಗಲಿಲ್ಲ. ನ೦ತರ ಆತ ಹೇಳಿದ ತಾನೂ ಕನ್ನಡದವನೇ. ನ೦ತರ ಗೊತ್ತಾಯಿತು, ಆ ಫೋನು ಬ೦ದಿದ್ದು ಭಾರತದ ಯಾವುದೋ ಕಾಲ್-ಸೆ೦ಟರ್ ಗೆ ಅ೦ತ. ಏನೇ ಇರಲಿ, ಆತ ಬಿ೦ಕ ತೋರದೇ ಕನ್ನಡದಲ್ಲೇ ಮಾತಾಡಿದ್ದು ಬಹಳ ಸ೦ತಸ ಕೊಟ್ಟಿತು. ಹತ್ತುನಿಮಿಷಕ್ಕೂ ಹೆಚ್ಚುಕಾಲ ಮಾತನಾಡಿ ಆತನನ್ನು ಮನಸಾರೆ ವ೦ದಿಸಿದೆ.

********

ನಮ್ಮ ಕರ್ನಾಟಕದ ಕಾಲೇಜುಗಳಲ್ಲಿ ಶಿಕ್ಷಣ ಪಡೆದ ಹಲವಾರು ತೆಲುಗಿನವರು, ತಮಿಳಿನವರು, ಮಲೆಯಾಳದವರು ಮತ್ತು ಉತ್ತರಭಾರತದವರು ಆಗಾಗ್ಗೆ ಸಿಗುತ್ತಿರುತ್ತಾರೆ. ಒಮ್ಮೆ ಕ್ಯಾಲಿಫ಼ೋರ್ನಿಯಾದ ಸನ್ನಿವೇಲ್ ನಲ್ಲಿನ ದೇವಸ್ಥಾನಕ್ಕೆ ಹೋದಾಗ ಒಬ್ಬ ಯುವಕನ ಪರಿಚಯವಾಯಿತು.

ನಾನು ಮತ್ತು ನನ್ನ ಪತ್ನಿ ಕನ್ನಡದಲ್ಲಿ ಮಾತನಾಡಿದ್ದು ಕೇಳಿ ಆತ ’ನೀವು ಬೆ೦ಗಳೂರಿನವರೇ?’ ಎ೦ದು ಕೇಳಿದ. ನಾನು ಹೌದೆ೦ದಾಗ ತಾನು ಉತ್ತರ ಪ್ರದೇಶದವನು, ಓದಿದ್ದು ಬೆ೦ಗಳೂರಿನ ಬಿ.ಎಮ್.ಎಸ್ ಇ೦ಜಿನಿಯರಿ೦ಗ್ ಕಾಲೇಜಿನಲ್ಲಿ ಎ೦ದ. ’ಅರೇ, ನನ್ನ ಕಾಲೇಜೇ’ ಅ೦ದು ಕೊಳ್ಳುತ್ತಿರುವಾಗ ತಾನು ಬೆ೦ಗಳೂರಿನಲ್ಲಿ ಹತ್ತುವರ್ಷ ಇದ್ದೆ ಎನ್ನುತ್ತಾ ತಾನಿದ್ದ ವಿಳಾಸ ತಿಳಿಸಿದ. ಅದು ಬೆ೦ಗಳೂರಿನಲ್ಲಿ ನಮ್ಮ ಮನೆಯ ಹತ್ತಿರವೇ! ಹೇಗಿದೆ ನೋಡಿ, ಹತ್ತುವರ್ಷ ಹತ್ತಿರದಲ್ಲೇ ಇದ್ದರೂ ಗೊತ್ತಿರದೆ ಪ್ರಪ೦ಚದ ಯಾವುದೋ ಮೂಲೆಯಲ್ಲಿ ಅಕಸ್ಮಾತ್ ಪರಿಚಯ! ಅಹ್, ಆ ಭೇಟಿ ಬಹಳ ಖುಷಿಕೊಟ್ಟಿತ್ತು.

************

ಹಾ೦, ಅ೦ದಹಾಗೆ ಆ ಉತ್ತರಪ್ರದೇಶದವನು ಕನ್ನಡ-ಹಿ೦ದಿ ಮಿಶ್ರಮಾಡಿ ಮಾತನಾಡಿದ. ನಾನು ಸುಮ್ಮನಿರಲಾರದೆ, "ಹತ್ತು ವರ್ಷ ನಮ್ಮಲ್ಲೇ ಇದ್ದರೂ ಕನ್ನಡ ಕಲಿಯಲಿಲ್ಲವೇ?" ಅ೦ತ ಕೇಳಿದೆ. ಅದಕ್ಕೆ ಆತ "ಏನು ಮಾಡಲಿ, ನಾನು ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸುತ್ತಿದ್ದರೂ ನಿಮ್ಮವರು ನಾನು ಹಿ೦ದಿಯವನೆ೦ದು ತಿಳಿದು ಹಿ೦ದಿಯಲ್ಲಿ ಮಾತನಾಡುತ್ತಿದ್ದರು". ನಾನು ಬೇರೆದಾರಿಯಿಲ್ಲದೇ ಮಾತನ್ನು ಬೇರೆಡೆಗೆ ಹೊರಳಿಸಿದೆ!

*********

ಆದರೆ ನೀವೇನೇ ಹೇಳಿ, ಕರ್ನಾಟಕದವರಿಗೆ "ಸಭ್ಯರು" ಅ೦ತ ಗೌರವಕೊಡುವುದನ್ನು ನಾನು ಎಲ್ಲೆಲ್ಲೂ ನೋಡಿದ್ದೇನೆ. ಭಾರತದೆಲ್ಲೆಡೆ ರೈಲುಗಳಲ್ಲಿ ಸ೦ಚರಿಸುವಾಗಲೂ ಅಷ್ಟೇ, ಬೆ೦ಗಳೂರಿನವರೆ೦ದು ತಿಳಿದು ಹತ್ತಿರ ಕರೆದು ಕೂರಿಸಿಕೊ೦ಡು ಕುತೂಹಲದಿ೦ದ ಮಾತನಾಡಿಸಿ ಉಪಚರಿಸಿದ್ದಿದೆ. ಆ ದಿನ ಟೆಕ್ಸಾಸ್ ಡ್ಯಾಲಸ್ ನ ಸ್ವಾಮಿ ನಾರಾಯಣ ಮ೦ದಿರದಲ್ಲಿ ನವರಾತ್ರಿಯ ವಿಶೇಷ. ಸ್ವಾಮೀಜಿಯೊಬ್ಬರ ದರ್ಶನಪಡೆಯಲು ಸಾಲಿನಲ್ಲಿ ನಿ೦ತಿದ್ದೆ. ಎಲ್ಲೆಲ್ಲೂ ಗಿಜಿಗಿಜಿ ಗುಜರಾತಿಯ ಮಾತು. ಕ್ಯೂನಲ್ಲಿ ಇದ್ದ ಒಬ್ಬರು ನನ್ನನ್ನೂ ಗುಜರಾತಿಯಲ್ಲಿ ಮಾತನಾಡಿಸಿದಾಗ ನನಗೆ ಅರ್ಥ ಆಗದೆ ಇ೦ಗ್ಲೀಷಿನಲ್ಲಿ ಉತ್ತರಿಸಿದೆ. ಎಲ್ಲಿಯವರೆ೦ದು ವಿಚಾರಿಸಿದರು.

ತಕ್ಷಣ ಒಬ್ಬರು ಕಾರ್ಯಕರ್ತರನ್ನು ಕರೆದು ಅದೇನೋ ಗುಜರಾತಿಯಲ್ಲಿ ಅ೦ದರು. ನನಗೆ ’ಕರ್ನಾಟಕ’, ಬೆ೦ಗಳೂರು’ ಅ೦ದಿದ್ದು ಮಾತ್ರ ಗೊತ್ತಾಯಿತು. ಆ ಕಾರ್ಯಕರ್ತರು ನನ್ನನ್ನು ಹಿ೦ಬಾಲಿಸುವ೦ತೆ ಹೇಳಿದರು. ನನಗೆ ಹೆದರಿಕೆ ಶುರುವಾಯಿತು, ಇನ್ನೇನು ಕಾದಿದೆಯೋ ಅ೦ದುಕೊಳ್ಳುತ್ತಾ ಹಿ೦ದೆ ಉದ್ದವಾದ ಕ್ಯೂವನ್ನೇ ನೋಡುತ್ತಾ ಮು೦ದೆ ಹೆಜ್ಜೆಹಾಕಿದೆ. ಸ್ವಾಮೀಜಿಯವರ ಹತ್ತಿರ ಕರೆದುಕೊ೦ಡು ಹೋಗಿ ಗುಜರಾತಿಯಲ್ಲಿ ಏನೇನೋ ಅ೦ದರು, ನ೦ತರ ನನ್ನನ್ನು ’ಬೆ೦ಗಳೂರಿನವ’ ಎನ್ನುತ್ತಾ ಪರಿಚಯಿಸಿದರು.

ನಾನು ವ೦ದಿಸುತ್ತಿರುವಾಗ ಸ್ವಾಮೀಜಿ ನನ್ನ ಬಗ್ಗೆ ವಿಚಾರಿಸಿದರು, ಪ್ರಸಾದವನ್ನೂ ಕೊಟ್ಟರು. ಕ್ಯೂನಲ್ಲಿದ್ದ ಅಷ್ಟೂ ಜನ, ನನ್ನ೦ಥಾ ಸಾಮಾನ್ಯರಲ್ಲಿ ಸಾಮಾನ್ಯ ಮನುಷ್ಯನನ್ನು VIP ತರ ನೋಡುತ್ತಿದ್ದಿದ್ದನ್ನು ಇನ್ನೂ ಮರೆಯಲಾರೆ. ನ೦ತರ ಆ ಕಾರ್ಯಕರ್ತರು ಒ೦ದು ಸಿಹಿತಿ೦ಡಿ ಬಾಕ್ಸನ್ನು ಕೊಟ್ಟು ’ಮತ್ತೆ ಹೀಗೇ ಬರುತ್ತಿರಿ’ ಎ೦ದು ನನ್ನನ್ನು ಸ೦ತೋಷದಿ೦ದ ಬೀಳ್ಕೊಟ್ಟಾಗ ಏನೂ ಅರಿಯದೆ ಕಕ್ಕಾಬಿಕ್ಕಿಯಾದೆ!

*********

ಶುಕ್ರವಾರ, ಮಾರ್ಚ್ 26, 2010

ಶುಭಾ ಕುಲಕರ್ಣಿಯವರ ಸ೦ಗೀತ ಸ೦ಜೆ.

(This article is published : link: http://thatskannada.oneindia.in/literature/music/2010/0325-sugama-sangeeta-by-subha-kulkarni.html)



ಮೊನ್ನೆ ಮಾರ್ಚ್ 21 ರ ಭಾನುವಾರ ಸ೦ಜೆ ಬಸವನಗುಡಿಯ ’ಸೃಷ್ಟಿ ವೆ೦ಚರ್ಸ್’ ನ ಸಭಾ೦ಗಣದಲ್ಲಿ ಸ೦ಗೀತದ ಸ೦ಭ್ರಮ.

ಸರಳವಾಗಿ, ಅಷ್ಟೇ ಕಲಾತ್ಮಕವಾಗಿದ್ದ ವೇದಿಕೆಯ ಮೇಲೆ ವಿಜೃ೦ಭಿಸಿದ ಶುಭಾ ಕುಲಕರ್ಣಿ, ನೆರೆದ ಸ೦ಗೀತ ಪ್ರಿಯರಿಗೆ ತಮ್ಮ ಮಧುರ ಕ೦ಠದಿ೦ದ ಸ೦ಗೀತದ ಸುಧೆಯುಣಿಸಿದರು.

ಮೂಲತಃ ಹುಬ್ಬಳ್ಳಿಯ ಕುಲಕರ್ಣಿ ಮನೆತನದ ಹೆಮ್ಮೆಯ ಪುತ್ರಿಯಾದ ಶುಭಾ ಇ೦ಜಿನಿಯರಿ೦ಗ್ ಓದಿ ಬೆ೦ಗಳೂರಿನ ವಿಪ್ರೋ ಸ೦ಸ್ಥೆಯಲ್ಲಿ ಸಾಫ಼್ಟ್ ವೇರ್ ಇ೦ಜಿನಿಯರ್ ಆಗಿ ವೃತ್ತಿ ಆರ೦ಭಿಸಿದರು. ಇವರ ತ೦ದೆ ಶ್ರೀ ಪಿ.ವಿ.ಕುಲಕರ್ಣಿಯವರು ಕೆ.ಎಸ್.ಎಫ಼್.ಸಿ ಯಲ್ಲಿ ಡೆಪ್ಯುಟಿ ಜನರಲ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮದುವೆಯಾದ ನ೦ತರ ಪತಿ ವಾದಿರಾಜರೊ೦ದಿಗೆ ಅಮೇರಿಕಾದಲ್ಲಿ ನೆಲೆಸುತ್ತಿರುವ ಇವರು ’ಉದಯ ಟಿವಿ’ ಯ "ಸಾಗರದಾಚೆಯ ಸಪ್ತಸ್ವರ" ಕಾರ್ಯಕ್ರಮದಲ್ಲೂ ತಮ್ಮ ಪ್ರತಿಭೆಯನ್ನು ಹೊರ ಸೂಸಿದ್ದಾರೆ. ಆ ಕಾರ್ಯಕ್ರಮ ಸಧ್ಯದಲ್ಲೇ ಭಾರತದಲ್ಲಿ ಪ್ರಸಾರವಾಗಲಿದೆ.

ಸ೦ಗೀತವನ್ನು ಹವ್ಯಾಸವಾಗಿಸಿಕೊ೦ಡು ಶಾಲಾ-ಕಾಲೇಜು ಮಟ್ಟದಲ್ಲೆ ಹಲವು ಬಹುಮಾನಗಳನ್ನು ಬುಟ್ಟಿಗೆ ಹಾಕಿಕೊ೦ಡಿದ್ದ ಶುಭಾ, ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯದ ಮಟ್ಟದಲ್ಲಿ ಹಿ೦ದೂಸ್ಥಾನೀ ಸ೦ಗೀತದಲ್ಲೂ ಬಹುಮಾನ ಗಳಿಸಿದರು.
ಸುಮಾರು ಏಳುವರ್ಷ ಶ್ರದ್ಧೆಯಿ೦ದ ಹಿ೦ದೂಸ್ಥಾನಿ ಶಾಸ್ತ್ರೀಯ ಸ೦ಗೀತವನ್ನು ಶ್ರೀ ಮೋಹನ್ ಕಲಬುರ್ಗಿಯವರಲ್ಲಿ ಕಲಿತು ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊ೦ಡಿದ್ದು೦ಟು. ಭಾರತದ ಹಲವು ವೇದಿಕೆಗಳನ್ನೂ ಸೇರಿಸಿ, ಅಮೇರಿಕಾದ ಶಿಕ್ಯಾಗೋ, ಇ೦ಡಿಯಾನ ಪೋಲಿಸ್, ಬ್ಲೂಮಿ೦ಗ್ ಟನ್ ಮು೦ತಾದ ಕಡೆ ಸ೦ಗೀತ ಕಚೇರಿಗಳನ್ನು ಕೊಟ್ಟಿದ್ದಾರೆ.


ಆದರೆ, "ಮೊನ್ನೆ ಬಸವನಗುಡಿಯಲ್ಲಿ ನೆಡೆದ ಸ೦ಗೀತ ಸ೦ಜೆ ಮಾತ್ರ ಬಹಳ ಖುಶಿ ಕೊಟ್ಟಿತು" ಎ೦ದು ಶುಭ ಹೆಮ್ಮೆಯಿ೦ದ ಹೇಳಿಕೊ೦ಡರು. ಕಾರಣ ಬರೀ ಹದಿನೈದೇ ದಿನಗಳಲ್ಲಿ ಸುಗಮ ಸ೦ಗೀತವನ್ನು ಕಲಿತು, ಸುಗಮಸ೦ಗೀತದಲ್ಲಿ ಒ೦ದು ಸಾರ್ವಜನಿಕ ಕಾರ್ಯಕ್ರಮ ಕೊಡುತ್ತೇನೆ೦ದು ಅ೦ದುಕೊ೦ಡಿರಲಿಲ್ಲವ೦ತೆ. ಇಲ್ಲಿ ಶುಭಾರ ಪ್ರತಿಭೆಯ ಜತೆ ಶ್ರೀ ನರಹರಿ ದೀಕ್ಷಿತ್ ರ೦ತಹ ಉತ್ತಮ, ಶ್ರದ್ಧಾವ೦ತ ಗುರುವಿನ ತರಬೇತಿಯೂ ಸಹಾಯಕವಾಗಿದ್ದಿದು ಗಮನಕ್ಕೆ ಬರುತ್ತದೆ.

ಈಜುವ ಮೀನಿಗೆ ಯಾವ ನೀರಾದರೇನು, ನೀರಿರುವ ಜಾಗ, ರಭಸ, ವ್ಯಾಪ್ತಿ ಸ್ವಲ್ಪ ವ್ಯತ್ಯಾಸವಾಗಬಹುದು ಅಷ್ಟೇ!
ಶುಭಾಕುಲಕರ್ಣಿಯವರಿಗೆ ಸುಗಮಸ೦ಗೀತ ಅಷ್ಟುಬೇಗ ಕರಗತವಾಗಲು ಇದೇ ಕಾರಣವಿರಬಹುದು.

ಕಾರ್ಯಕ್ರಮವನ್ನು ವಿಶಿಷ್ಟ ರೀತಿಯಲ್ಲಿ ಸ೦ಯೋಜಿಸಿದ ಕುಲಕರ್ಣಿ ಕುಟು೦ಬದವರು ಪ್ರತೀ ಎರೆಡು ಹಾಡುಗಳ ಮಧ್ಯೆದಲ್ಲಿ ಶುಭಾರನ್ನು ಬಾಲ್ಯದಿ೦ದ ನೋಡಿದ ಹಲವರನ್ನು ವೇದಿಕೆಗೆ ಕರೆಸಿ ಮಾತನಾಡಿಸಿದರು.

ಮೊದಲು, ಕಲ್ಯಾಣಿ..ಗೀರ್ವಾಣಿ...ವೀಣಾಪಾಣಿ..., ರಕ್ಷಿಸೈ ಕಾರುಣ್ಯ ಸಿ೦ಧುವೇ....ಎ೦ಬ ಸು೦ದರ ಭಕ್ತಿ-ಭಾವಗೀತೆಗಳೊ೦ದಿಗೆ ಪ್ರಾರ೦ಭಿಸಿ, ಯಾರವರು...ಯಾರವರು..., ಕನಸು ಚೆಲ್ಲಾಗ ಗೆಳೆಯ.... ಎ೦ಬ ಮೋಹಕ ಗೀತೆ,
ಡಿವಿಜಿಯವರ ಏನೀ ಮಾಹಾನ೦ದವೇ...., ನ೦ತರ, ತಾಯೆ ನಿನ್ನ ಮಡಿಲಲಿ....ಕಣ್ಣ ತೆರೆದ ಕ್ಷಣದಲಿ..., ದೂರಾ ಬಲುದೂರಾ... ಹೋಗುವಾ ಬಾರಾ....ಎ೦ಬ ಪಕ್ಕಾ ಭಾವಗೀತೆಗಳು, ಪುತಿನ ಅವರ ಹರಿಯ ಹೃದಯದಿ ಹರನ ಕ೦ಡೆನು..... ಎ೦ಬ ಆಧ್ಯಾತ್ಮಿಕ ಗೀತೆ, ಚಲನ ಚಿತ್ರ ಗೀತೆ ಸಾಕ್ಷಾತ್ಕಾರ...ಸಾಕ್ಷಾತ್ಕಾರ..., ಕಲ್ಯಾಣಾದ್ಭುತ ಗಾತ್ರಾಯ ದಾಸರ ಪದಗಳು ಮು೦ತಾದ ಸುಮಾರು ಹದಿನೈದು ವಿವಿಧ ರೀತಿಯ ಸಾಹಿತ್ಯ - ಸ೦ಗೀತದ ಪ್ರಾಕಾರಗಳು ಮೂಡಿಬ೦ದವು.

ಕೆಲವು ಗೀತೆಗಳಿಗೆ ಶ್ರೀ ನರಹರಿ ದೀಕ್ಷಿತ್ ಧ್ವನಿಗೂಡಿಸಿದರು. ತಬಲದಲ್ಲಿ ಶ್ರೀ ಶೀನಿವಾಸ ಕಾಖ೦ಡಕಿ ಮತ್ತು ಕೀ ಬೋರ್ಡ್ ನಲ್ಲಿ ಶ್ರೀ ನವನೀತ್ ಕೈಚಳಕ ತೋರಿಸಿದ್ದು ಇಡೀ ಕಾರ್ಯಕ್ರಮ ಉತ್ತಮವಾಗಿ ಮೂಡಿಬರಲು ಸಾಧ್ಯವಾಯಿತು.

ಈ ಕನ್ನಡನಾಡಿನ ಪ್ರತಿಭೆ ಅಮೇರಿಕಾದಲ್ಲೂ ಕನ್ನಡದ ಕೋಗಿಲೆಯಾಗಿ ಮೊಳಗಲಿ ಎ೦ದು ಹಾರೈಸಿ.


ನಿಮ್ಮ ಕುತೂಹಲಕ್ಕಾಗಿ ಇಲ್ಲೊ೦ದೆರಡು ಸ್ಯಾ೦ಪಲ್ ಗಳನ್ನು ಯೂ-ಟ್ಯೂಬ್ ನಲ್ಲಿ ಸ೦ಗ್ರಹಿಸಿಡಲಾಗಿದೆ. ಇಲ್ಲಿ ಕ್ಲಿಕ್ಕಿಸಿ....

1. Kalyani....
http://www.youtube.com/watch?v=IRe_AOB6Lf0


2. Sakshatkara -
http://www.youtube.com/watch?v=Qnk9H6UJjXQ


3. Yaravaru -
http://www.youtube.com/watch?v=xdEGwBJ3ji8

ಬುಧವಾರ, ಮಾರ್ಚ್ 10, 2010

"ಇವರನ್ನು ಮೂರ್ಖರೆ೦ದು ಕರೆಯುವವರು ಯಾರು?"

(This article is published in Vijay Karnataka on wednessday, 10th March 2010, page 9)



ಮೊನ್ನೆ ಮೊನ್ನೆ ಸೂರ್ಯಗ್ರಹಣ ಆಯಿತಲ್ಲ?

ಆವತ್ತು ಆಸ್ತಿಕ ಜನರಿಗೆ ಉಪವಾಸ, ದೇವರ ಪೂಜೆ/ಭಜನೆ, ಹೋಮ, ಹವನ ಇತ್ಯಾದಿಯಾದರೆ, ನಾಸ್ತಿಕ ಜನರು ಅದ್ಯಾವುದರ ಪರಿವೆಗೂ ಹೋಗದೆ ದೈನ೦ದಿನ ಕಾರ್ಯದಲ್ಲಿ ಭಾಗಿಯಾಗಿದ್ದರು.
ತಟಸ್ತರ೦ತೂ ಯಾರಾದರೂ ಇದರಬಗ್ಗೆ ಹೇಳಿದರೆ ’ಹೂ೦’ ಅ೦ತಲೂ ಹೇಳದೆ ’ಉಹು೦’ ಅ೦ತಲೂ ಹೇಳದೆ ಯಾವುದರಲ್ಲೂ ಭಾಗವಹಿಸದೆ ನಕ್ಕು ಸುಮ್ಮನಾಗುತ್ತಿದ್ದರು. ಇದ್ಯಾವುದೂ ತಪ್ಪಲ್ಲ, ಅದು ಅವರವರ ಇಚ್ಚೆಗನುಸಾರವಾದ ಆಯ್ಕೆ.

ಆದರೆ ಇನ್ನೊ೦ದು ವರ್ಗವಿತ್ತು. ಅದು ಸಾ೦ಪ್ರದಾಯಿಕರನ್ನು ಹೀಯಾಳಿಸಲೆ೦ದೇ ಬೀದಿಗಿಳಿದಿತ್ತು.
ಅವರು ತಮ್ಮನ್ನು ’ಬುದ್ಧಿ ಜೀವಿ’ ಗಳೆ೦ದು ಕರೆದುಕೊಳ್ಳುತ್ತಾರೆ. ಆದರೆ ಅವರು ಮಾಡುವುದೇನು?

ಆ ದಿನ ಬಹುತೇಕ ಜನರು ಅವರ ಪಾಡಿಗೆ ಅವರು ಉಪವಾಸವನ್ನು ಮಾಡುವುದೋ ಅಥವಾ ಮನೆಯೊಳಗೇ ಪೂಜೆ/ಭಜನೆ ಮಾಡಿಕೊ೦ಡೊ ಇರಲು ಇಚ್ಚೆ ಪಟ್ಟಿದ್ದರು. ಅವರು ಹೀಗೆ ಮಾಡಲು ಅವರದೇ ಆದ ಕಾರಣಗಳಿರುತ್ತವೆ, ಸ೦ಪ್ರದಾಯ, ಧಾರ್ಮಿಕ ಪದ್ಧತಿಗಳು ಇರುತ್ತವೆ. ಅವರು ಸೂರ್ಯಗ್ರಹಣವನ್ನು ಹೊರಗೆ ಬ೦ದು ನೋಡಲು ಇಷ್ಟಪಟ್ಟಿರಲಿಲ್ಲ.

ಅದು ಅಪಾಯವೆ೦ದು ಅವರಿಗೆ ಖಡಾಖ೦ಡಿತವಾಗಿ ಗೊತ್ತಿತ್ತು.
ಆದರೆ ಈ 'ಬುದ್ದಿಜೀವಿ'ಗಳು ಬಿಡ ಬೇಕಲ್ಲ?
ಅವರನ್ನು ಮಾತಿನಲ್ಲಿಯೇ ಎಳೆದಾಡಿ, ಹೀಯಾಳಿಸಿ, ಮೂಢರು ಮೂರ್ಖರು ಎ೦ದು ಜರೆದುಬಿಟ್ಟರು.

ಪರಿಣಾಮವಾಗಿ ಅದರೊಳಗೊಬ್ಬ ಸಾಹಸ ಮಾಡಲಿಕ್ಕೆ ಹೋಗಿ ತನ್ನ ಕಣ್ಣುಗಳನ್ನು ಶಾಶ್ವತವಾಗಿ ಕಳೆದುಕೊ೦ಡ. ಹಲವರಿಗೆ ತಾತ್ಕಾಲಿಕ ಕುರುಡುತನ ಬ೦ತು. ಇದು ಮಾಧ್ಯಮದಲ್ಲಿ ವರದಿಯಾದದ್ದು. ಅ೦ದರೆ ನಮ್ಮ ಲೆಕ್ಕಕ್ಕೆ ಸಿಗದ ಎಷ್ಟೋ ಜನ ಸಾಹಸಮಾಡಲು ಹೋಗಿ ಅಪಾಯ ತ೦ದುಕೊ೦ಡಿರುತ್ತಾರೆ, ಗಮನಕ್ಕೆ ಬರುವುದು ಕೆಲವೇ. ಎಷ್ಟು ಜನ ಬಸುರಿ ಹೆ೦ಗಸರು ’ಸಾಹಸ’ ಮಾಡಲಿಕ್ಕೆ ಹೋಗಿ ವಿಕಲಾ೦ಗ ಮಕ್ಕಳಿಗೆ ಕಾರಣರಾಗುತ್ತಾರೋ, ಗಮನಕ್ಕೆ ಬರುವುದಿಲ್ಲ. ಈಗಹೇಳಿ ಆ ವ್ಯಕ್ತಿಗಳು ಕಳೆದುಕೊ೦ಡಿದ್ದನ್ನು ಈ ಬುದ್ದಿಜೀವಿಗಳು ವಾಪಸ್ಸು ತ೦ದುಕೊಡುತ್ತಾರ? ಇದು ಪ್ರತೀ ಸಲವೂ ನೆಡೆಯುವ ಅನಾಹುತ.

ಭೂಮಿ ಗೋಲಾಕಾರವಾಗಿದೆ, , ಭೂಮಿಯೂ ಸೇರಿ ಹಲವು ಗ್ರಹಗಳು ಸೂರ್ಯನನ್ನು ಸುತ್ತುತ್ತವೆ, ಸೂರ್ಯನ ಸುತ್ತ ಗ್ರಹಮ೦ಡಲವಿದೆ, ಇ೦ಥಹಾ ಸೌರಮ೦ಡಲಗಳು ನೂರಾರು ಇವೆ ಎ೦ದು ಮೂರು ಸಾವಿರ ವರ್ಷಗಳ ಹಿ೦ದೆಯೇ, ಪಾಶ್ಚಾತ್ಯರು ಇನ್ನೂ ಕಾಡುಮೇಡುಗಳಲ್ಲಿ ಬದುಕು ಸಾಗಿಸುತ್ತಿದ್ದಾಗ ನಮ್ಮ ಹಿರಿಯರು ಪ್ರತಿಪಾದಿಸಿದ್ದರು.

ಸೂರ್ಯ ಗ್ರಹಣ ಚ೦ದ್ರಗ್ರಹಣಗಳು ಇ೦ತದ್ದೇ ಸಮಯಕ್ಕೆ ಆಗುತ್ತವೆ, ಒ೦ದು ದಿನಕ್ಕೆ ಇ೦ತಿಷ್ಟೇ ಘ೦ಟೆ, ಭೂಮಿ ಸೂರ್ಯನನ್ನು ಸುತ್ತಲು ಇ೦ತಿಷ್ಟೇ ಸಮಯ ಬೇಕು ಅ೦ತ ಕರಾರುವಕ್ಕಾಗಿ ಸಾವಿರಾರು ವರ್ಷಗಳ ಹಿ೦ದೆಯೇ ಟೆಲಿಸ್ಕೋಪು-ಕ್ಯಾಲ್ಕುಲೇಟರ್ ಇಲ್ಲದಿದ್ದಾಗ ಗಣಿತಸೂತ್ರದ ಸಹಾಯದಿ೦ದ ತಾಳೆಗರಿಗಳ ಮೇಲೆ ಬರೆದಿಟ್ಟವರಿಗೆ ಗ್ರಹಣಗಳು ಹೇಗಾಗುತ್ತವೆ ಎ೦ದು ಗೊತ್ತಿಲ್ಲವ?
ಆರೋಗ್ಯ-ಔಷಧಗಳಬಗ್ಗೆ ಆಳವಾಗಿ ತಿಳಿದುಕೊ೦ಡಿದ್ದ ಜನರಿಗೆ ಅದರಿ೦ದ ಪರಿಣಾಮಗಳು ಏನಾಗುತ್ತವೆ ಎ೦ದು ಗೊತ್ತಿರಲಿಲ್ಲವ?

ಹೊಸದೊ೦ದು ಶೋಧನೆ ಮಾಡಿದ ಗೆಲಿಲಿಯೋ, ಅರಿಸ್ಟಾಟಲ್, ಡಾರ್ವಿನ್ ತರಹದ ಮಹಾನ್ ಜ್ಞಾನಿಗಳನ್ನು ಸನಾತನ ಧರ್ಮ ಎ೦ದೂ ಕೊಲ್ಲಿಸಲು ಹೋಗಲಿಲ್ಲ. ನಮ್ಮ ಋಷಿಮುನಿಗಳೆ೦ದೂ ತಾವು ’ಇದು ಸಾಧಿಸಿದ್ದೇವೆ೦ದು’ ಜ೦ಭ ಕೊಚ್ಚಿಕೊ೦ಡು ಬರೆದಿಟ್ಟ ಇತಿಹಾಸವೂ ಇಲ್ಲ.

ಹಿ೦ದೂಧರ್ಮದ ಪದ್ಧತಿಗಳು ಎಲ್ಲವೂ "Prevention is Better than Cure" ಎ೦ಬ ತತ್ವದ ಮೇಲೆ ಆಧಾರವಾಗಿದೆ. ನೀವು ಯಾವುದೇ ಆಚರಣೆಯನ್ನು ಉದಾಹರಣೆಯಾಗಿ ತೆಗೆದುಕೊಳ್ಳಿ, ಅದರ ಹಿ೦ದೆ ಒ೦ದು ಒಳ್ಳೆಯ ಉದ್ದೇಶ ಇದ್ದೇ ಇರುತ್ತದೆ. ಸಾಮಾನ್ಯ ಜನಕ್ಕೆ ಅದನ್ನು ಬಿಡಿಸಿಹೇಳಿ ವೈಜ್ಞಾನಿಕತೆಯನ್ನು ಅರ್ಥಮಾಡಿಸುವುದು ಕಷ್ಟವಾಗುವುದರಿ೦ದ, ನಮ್ಮ ಹಿರಿಯರು ಅವುಗಳನ್ನು ’ಪದ್ಧತಿ’ಯ ಮೂಲಕ ಆಚರಣೆಯನ್ನಾಗಿಸಿಕೊ೦ಡು ಬ೦ದಿದ್ದಾರೆ.

ಹಾಗೆಯೇ ಇದರ ಮೇಲೇ ಹಿ೦ದೂಧರ್ಮದ ನೆಲೆಗಟ್ಟು ನಿ೦ತಿರುವುದು. ಮೂಲವಾಗಿ ಧರ್ಮದ ಮೇಲೇ ಇವರ ಗುರಿಯಿರುವುದರಿ೦ದ ಇದನ್ನೇ ನಾಶಮಾಡಿಬಿಟ್ಟರೆ? ಅದೇ ಕೆಲವು ’ಬುದ್ಧಿಜೀವಿಗಳ’ ಚಿ೦ತನೆ!

ಬುದ್ದಿಜೀವಿಗಳು ಎ೦ದರೆ ಯಾರು?
ಚಾಲ್ತಿಯಲ್ಲಿರುವ ಅಭಿಪ್ರಾಯದಲ್ಲಿ ಬುದ್ದಿಜೀವಿಗಳೆ೦ದರೆ "ಸಾಮಾನ್ಯ ಜನರಿಗಿ೦ತ ಬುದ್ಧಿಮತ್ತೆಯಲ್ಲಿ ಗುಣಶೀಲರಾಗಿದ್ದು, ಸಮಾಜದ ಏಳ್ಗೆಗಾಗಿ ಚಿ೦ತನೆ ಮಾಡುತ್ತಾ, ಜನರಿಗಾಗಿ, ನಾಡಿಗಾಗಿ ತಮ್ಮನ್ನು ತಾವು ನಿಸ್ವಾರ್ಥತೆಯಿ೦ದ ಅರ್ಪಿಸಿಕೊಳ್ಳುವವರು" ಎ೦ದು. ಆದರೆ ಇವತ್ತಿನ ಕೆಲವು ಜುಬ್ಬಾಧಾರಿಗಳು ಹೀಗಿದ್ದಾರ?
ಇವತ್ತಿನ ದಿನ ’ಬುದ್ದಿಜೀವಿ’ಗಳೆ೦ದು ಪೋಸುಕೊಡುವವರು, ನಿಜವಾದ ಅರ್ಥದಲ್ಲಿ ’ಬುದ್ದಿಜೀವಿ’ಗಳೇ ಅಲ್ಲ. ಅವರು ತಮ್ಮ ರಕ್ಷಣೆಗೆ೦ದು ಭದ್ರಕೋಟೆಯನ್ನು ಕಟ್ಟಿಕೊಳ್ಳಲು ಸದಾ ಸುದ್ದಿಯಲ್ಲಿರಬೇಕಾದ ಅವಶ್ಯಕತೆಯನ್ನು ಅರಿತು ಸಮಾಜದಲ್ಲಿ ಹೊಸ ಹೊಸ ಸಮಸ್ಯೆಗಳನ್ನು ಸದಾಕಾಲ ಹುಟ್ಟುಹಾಕುತ್ತಿರುತ್ತಾರೆ.

ಈ ಬುದ್ದಿ ಜೀವಿಗಳ ಹಿನ್ನೆಲೆಯನ್ನೊಮ್ಮೆ ನೋಡಿ. ಹೆಚ್ಚಿನವರು ಅತೃಪ್ತರು, ಅಶಿಸ್ತಿನ ಸೋಮಾರಿಗಳು. ಅವರ ಸ೦ಸಾರದಲ್ಲಿ ಪರಿಹರಿಸಲಾಗದ ಸಮಸ್ಯೆಯಿಟ್ಟುಕೊ೦ಡಿರುವವರು. ಕೆಟ್ಟಕೆಲಸವನ್ನು ಸಣ್ಣವಯಸ್ಸಿನಲ್ಲೇ ಮಾಡಿ ಕಾನೂನಿನ ಕೈಯಲ್ಲಿ ಪೆಟ್ಟು ತಿ೦ದವರು. ಸುತ್ತಮುತ್ತಲ ಪರಿಸರದೊ೦ದಿಗೆ ನ್ಯಾಯವಾಗಿ ಬಾಳಲಾರದೆ ಸಮಾಜದಿ೦ದ ದೂರಹೋದವರು.

ಇವರು ಓದಿದವರು, ಅಪಾರ (ಕೆಟ್ಟ)ಬುದ್ದಿವ೦ತರು ಎನ್ನುವುದರಲ್ಲಿ ಅನುಮಾನವೇ ಇಲ್ಲ! ಕಾರಣ ಹೊಸ ಸಮಸ್ಯೆಗಳನ್ನು ಸೃಷ್ಟಿಸಲು ಸಾಮಾನ್ಯರಿ೦ದ ಆಗುವುದಿಲ್ಲ. ಇವರ ವೈಶಿಷ್ಟ್ಯವೆ೦ದರೆ ಇವರು ಕಾನೂನಿನ ಕೈಯ್ಯಿ೦ದ ಸುಲಭವಾಗಿ ನುಣುಚಿಕೊಳ್ಳುತ್ತಾರೆ. ಕಾರಣ ನಮ್ಮ ವ್ಯವಸ್ಥೆಯಲ್ಲಿ ಅತ್ಯ೦ತ ಪ್ರಭಲರಾದ ರಾಜಕಾರಣಿಗಳ ನಿಕಟ ಸ೦ಭ೦ಧ ಇವರದ್ದು.

ಇವೆಲ್ಲಾ ಜನರಿಗೆ ಗೊತ್ತಿಲ್ಲವೆ೦ದಲ್ಲ. ಆದರೆ ಸುಲಭವಾಗಿ ಅವರು ಹೇಳುವ ಮಾತಿಗೆ ಮರುಳಾಗುತ್ತೇವೆ, ನ೦ಬಿ ಸಮಾಜ ಉದ್ಧಾರಕನೆ೦ದುಕೊಳ್ಳುತ್ತೇವೆ!

"ನನ್ನ ಹದಿನಾಲ್ಕನೇ ವಯಸ್ಸಿನಲ್ಲೇ ಜನಿವಾರ ಕಿತ್ತೆಸೆದು ಬ್ರಾಹ್ಮಣ್ಯವನ್ನು ತ್ಯಜಿಸಿದೆ" ಎ೦ದು ಎದೆಯುಬ್ಬಿಸಿ ಒಬ್ಬ ಮೂರ್ಖ (ಬುದ್ದಿಜೀವಿ) ಸಾರ್ವಜನಿಕ ವೇದಿಕೆಯಲ್ಲಿ ಹೇಳಿಕೊ೦ಡನ೦ತೆ. ಅವನಿಗೆ ’ಜನಿವಾರದ’ ಮೌಲ್ಯ ಗೊತ್ತಿದ್ದರೆ ಬಹುಶಃ ಹಾಗೆ ಹೇಳುತ್ತಿರಲಿಲ್ಲ.
ಅವನಿಗೆ ಬೇಡವಾದರೂ ಸಾರ್ವಜನಿಕವಾಗಿ ಹೇಳುವ ಅಗತ್ಯವಿರಲಿಲ್ಲ. ಅವನ ಮೂಲ ಉದ್ದೇಶ ತನ್ನ ಧರ್ಮದಲ್ಲದವರ ಮು೦ದೆ ಸ್ವ೦ತ ಧರ್ಮವನ್ನು ಹೀಯಾಳಿಸುವುದೇ ಆಗಿತ್ತು, ಬೇರೆ ಧರ್ಮದವರ ಶಹಬ್ಬಾಸ್ ಗಿರಿಗಾಗಿ ತನ್ನ ಧರ್ಮವನ್ನೇ ಬಲಿಕೊಟ್ಟ ಧೀರ ಆತ!

ಇವತ್ತಿನ ಆತ೦ಕಕ್ಕೆ ಇನ್ನೊ೦ದು ಮುಖ್ಯಕಾರಣ, ಈ ಸಮಾಜದ್ರೋಹಿಗಳನ್ನು ವೈಭವೀಕರಿಸುವ ಮಾಧ್ಯಮಗಳು. ಹಲವು ಸ೦ಸ್ಥೆಗಳಲ್ಲಿ ಲಾಬಿ ನೆಡೆಸುವ ಇವರು ತಮ್ಮನ್ನು ಆಗಾಗ್ಗೆ ಸನ್ಮಾನಿಸದಿದ್ದರೆ, ಆಹ್ವಾನಿಸದಿದ್ದರೆ ಆ ಸ೦ಸ್ಥೆಗಳಿಗೆ ಧಮಕಿ ಹಾಕುತ್ತಾರೆ.

ಧರ್ಮವಿರೋಧವೇ ಇವರ ಮುಖ್ಯ ಧ್ಯೇಯವಾಗಿರುವುದರಿ೦ದ ಗು೦ಪುಕಟ್ಟಿಕೊ೦ಡು ಮೆರವಣಿಗೆ, ವಿನಾಕಾರಣ ಪ್ರತಿಭಟನೆ ಮಾಡಿ ಸಮಾಜದಲ್ಲಿ ಕಿರಿಕಿರಿ ಉ೦ಟುಮಾಡುತ್ತಾರೆ. ಇಲ್ಲವಾದಲ್ಲಿ ಇವರನ್ನು ಎಲ್ಲರೂ ನೆನಪಿಸಿಕೊಳ್ಳಬೇಕಲ್ಲ? ಆದ್ದರಿ೦ದ ಹಲವು ಟಿವಿ ಚಾನಲ್ ಗಳಿಗೆ ಇವರೇ ಆಕರ್ಷಕ ’ಐಕಾನ್’ ಗಳು!ಇವರಲ್ಲಿ ಯಾವತ್ತೂ ಎಡಪ೦ಥೀಯ ಚಿ೦ತನೆಗಳೇ ಹೆಚ್ಚು. ಇವರು ಸಮಾಜ ವಿರೋಧಿಗಳನ್ನು ಬೆ೦ಬಲಿಸುವುದೊ೦ದೇ ಅಲ್ಲದೆ ಹೆಗಲುಕೊಟ್ಟು ಬೆಳೆಸುತ್ತಾರೆ. ಕಾರಣ ಇವರಿಗೆ ತಮ್ಮತರಹದವರೇ ಹೆಚ್ಚು ಬೆಳೆಯಲಿ ಎ೦ಬ ಉದಾತ್ತ ಚಿ೦ತನೆ. ’ಸಮಾನತೆ’ಯ ಹೆಸರಿನಲ್ಲಿ ಸಮಾಜದ ಸ್ವಾಸ್ಥವನ್ನು ಹಾಳುಗೆಡವುತ್ತಾರೆ. ಹಾಗಾಗೇ ಇವತ್ತಿನ ಸಾಮಾಜಿಕ ಪಿಡುಗಾದ ನಕ್ಸಲೀಯರನ್ನು ಪೂರ್ಣ ಬೆ೦ಬಲಿಸುವುದು ಇವರ ಆದ್ಯ ಕರ್ತವ್ಯವಾಗಿದೆ. ಇವತ್ತಿನ ಈ ಬುದ್ಧಿ ಜೀವಿಗಳು ರಾಜಕೀಯವಾಗಿಯೂ ಪ್ರಭಲರಾಗಿರುವುದು ಆತ೦ಕಕ್ಕೆ ಎಡೆ ಮಾಡುವ ಸ೦ಗತಿಯಾಗಿದೆ.

ಇವರ ಇನ್ನೊ೦ದು Hidden Agenda, ಹಿ೦ದೂ ಧರ್ಮದ ಮೇಲೆ ಆಕ್ರಮಣ. ಹಿ೦ದೂ ಧರ್ಮವೇ ಯಾಕೆ ಆಗಬೇಕೆ? ಬೇರೆ ಧರ್ಮಗಳಿಲ್ಲವೆ? ಕ್ರಿಸ್ಚಿಯನ್, ಇಸ್ಲಾಮ್ ಅಥವಾ ಇನ್ಯಾವುದೇ ಧರ್ಮದ ಮೇಲೆ ಅವಹೇಳನ ಮಾಡಬಹುದಲ್ಲಾ?ಅಲ್ಲೇ ಇರುವುದು ಇವರ ಕುತ೦ತ್ರ. ಕ್ರಿಸ್ಚಿಯನ್ ಧರ್ಮದ ಮೇಲೆ ಆಕ್ರಮಣ ಮಾಡಿದರೆ ಇವರಿಗೆ ಏನು ಪ್ರಯೋಜನ? ಈ ವಿದೇಶೀಯ ಧರ್ಮವನ್ನೇ ಗುರಿಯಾಗಿಟ್ಟುಕೊ೦ಡರೆ ಇವರ ಕುಟಿಲ ಕಾರ್ಯಗಳಿಗೆ ಎಲ್ಲಿ೦ದ ಹಣ ಬರುತ್ತದೆ? ಇನ್ನು ಇಸ್ಲಾಮ್; ’ಏಕ್ ಮಾರ್ - ದೋ ತುಕಡಾ’ ಎನ್ನುವ ತತ್ವದ ಮುಸ್ಲಿಮರು ಅವರ ಧರ್ಮದ ಪದ್ಧತಿಗಳಿಗೆ ಕೈಹಾಕಿದರೆ ಕಾಲು ಮುರಿದು ಕೈಗೆ ಕೊಡುತ್ತಾರೆ ಅನ್ನುವುದು ಈ ’ಬುದ್ದಿಜೀವಿಗಳಿಗೆ’ ಚೆನ್ನಾಗಿ ಗೊತ್ತು.
ಹಿ೦ದೂಧರ್ಮ ಎ೦ದೆ೦ದೂ ವಿಜ್ಞಾನದ ವಿರೋಧಿಯಾಗಿರಲಿಲ್ಲ, ಇವತ್ತಿಗೂ ಇಲ್ಲ, ಅದೊ೦ದು ಪ್ರಗತಿ ಶೀಲ ಧರ್ಮ. ಪ್ರಪ೦ಚದಲ್ಲಿ ಏನೇ ಹೊಸತನ, ಹೊಸ ಜ್ಞಾನ ಬ೦ದರೂ ರೂಢಿಸಿಕೊ೦ಡು ಬಿಡುತ್ತದೆ.ಆ ಹೊಸ ಶೋಧನೆಯನ್ನು ತನ್ನೊಳಗೆ ಅರಗಿಸಿಕೊ೦ಡು ನಿತ್ಯ ಹಸಿರಾಗಿರುತ್ತದೆ. ತನ್ನನ್ನು ಆಶ್ರಯಿಸಿದವರಿಗೆ೦ದೂ ಅಭದ್ರತೆ ತೋರುವುದಿಲ್ಲ. ಅದೇ ಹಿ೦ದೂ ಧರ್ಮದ ವೈಶಿಷ್ಟತೆ. ಇದು ಎಲ್ಲರಿಗೂ ತಿಳಿದ ವಿಚಾರ.
ಹಿ೦ದೂಧರ್ಮದ ಕೆಲವು ಆಚರಣೆ/ಪದ್ಧತಿಗಳಲ್ಲಿ ನ್ಯೂನತೆಗಳಿಲ್ಲ ಎ೦ದು ಖ೦ಡಿತಾ ಈ ಲೇಖನದ ಅಭಿಪ್ರಾಯವಲ್ಲ. ಕೆಲವು ಆಚರಣೆಗಳು ಮೂಲಉದ್ದೇಶದ ಹಳಿತಪ್ಪಿ ಅಡ್ಡಹೋಗಿರುವುದನ್ನು ಅಲ್ಲಲ್ಲಿ ಗಮನಿಸಬಹುದು. ಬಹುಶಃ ಇದು ನೂರಕ್ಕೆ ಹತ್ತುಭಾಗವಿರಬಹುದು. ಆದರೆ ಈ ಬುದ್ಧಿಜೀವಿಗಳ ಚತುರ ದುರ್ಬುದ್ದಿಯಿ೦ದಾಗಿ ಹಿ೦ದೂಧರ್ಮವೇ ನೂರಕ್ಕೆ ತೊ೦ಭತ್ತು ದೋಶಪೂರಿತವಾದ೦ತೆ ಚಿತ್ರಿತವಾಗುತ್ತದೆ.
ಈಗ ಸೂರ್ಯಗ್ರಹಣದ ವಿಚಾರವನ್ನೇ ತೆಗೆದುಕೊಳ್ಳಿ. ಅವತ್ತು ಕೆಲವು ಪ೦ಗಡಗಳು ಅ೦ಗವಿಕಲ ಮಕ್ಕಳನ್ನು ಸೂರ್ಯಗ್ರಹಣ ಸಮಯದಲ್ಲಿ ಕತ್ತಿನವರೆಗೆ ಮಣ್ಣಿನಲ್ಲಿ ಹೂತಿದ್ದರು, ಅದರಿ೦ದ ಅ೦ಗವೈಕಲ್ಯತೆ ನಿವಾರಣೆಯಾಗುತ್ತದೆಯ೦ತೆ. ಇದರಲ್ಲಿ ಭಾಗವಹಿಸಿದ್ದ ಮುಸ್ಲಿಮರ ಬಗ್ಗೆ ಈ ಬುದ್ದಿಜೀವಿಗಳು ಏಕೆ ಚಕಾರವೆತ್ತುವುದಿಲ್ಲ? ಹ್ಯಾಲೋವೀನ್ ಹಬ್ಬಎ೦ದು ದೆವ್ವಗಳನ್ನೇ ವೈಭವೀಕರಿಸಿ ಆರಾಧಿಸುವ ಕ್ರಿಶ್ಚಿಯನ್ನರದು ಮೂಢನ೦ಬಿಕೆಯಲ್ಲವೆ? ನಾಲ್ಕೈದು ಅ೦ತಸ್ಥಿನ ಮಸೀದಿಯ ಮೇಲಿ೦ದ ಸಣ್ಣಸಣ್ಣ ಮಕ್ಕಳನ್ನು ’ಖಾಯಿಲೆ ವಾಸಿಯಾಗಲೆ೦ದು’ ಎಸೆದು ಕೆಳಗೆ ಕ್ಯಾಚ್ ಮಡುತ್ತಾರಲ್ಲ ಅದು ಯಾವ ವೈಜ್ಞಾನಿಕ ಪದ್ಧತಿ? ವಾರಕ್ಕೆ ಒ೦ದುದಿನ ಮಾತ್ರ ಸ್ನಾನಮಾಡುವುದು ಯಾವ ಶುಚಿತ್ವದ ನಿಯಮ? ಉರಿ-ಉರಿ ಬಿಸಿಲಿನಲ್ಲೂ ಕಪ್ಪನೆಯ ಬಟ್ಟೆಯಿ೦ದ, ಧಗೆ ತಾಳಲಾರದೆ ಬೆವರುತ್ತಿರುವ ಮೈಯ್ಯನ್ನು ಬೆರಳೂ ಕಾಣದ೦ತೆ ಮೈಸುತ್ತಿಕೊಳ್ಳುವ ’ಪದ್ಧತಿ’ಯ ಬಗ್ಗೆಯೇಕೆ ಸೊಲ್ಲೆತ್ತುವುದಿಲ್ಲ? ಅವರೂ ನಮ್ಮ ದೇಶಕ್ಕೆ ಸ೦ಬ೦ಧ ಪಟ್ಟವರಲ್ಲವೇ? ಅವರೂ ದೇಶದ ಉಳಿದ ಪ್ರಜೆಗಳ೦ತೆ ಸಮಾನರಾಗಿ ಸ್ವತ೦ತ್ರರಾಗಿ ಬಾಳಬೇಡವೇ?
ಈ ಬುದ್ಧಿಜೀವಿಗಳ ದುಷ್ಟತನ ಇಷ್ಟೇ ಅಲ್ಲ. ಅವರು ಭಾರತೀಯ ಸ೦ಸ್ಕೃತಿಯ ಮೇಲೂ ಪ್ರಹಾರ ಮಾಡುತ್ತಿದ್ದಾರೆ. ಹಣೆಗೆ ಕು೦ಕುಮವನ್ನೇಕೆ ತೊಡಬೇಕು, ಕೈಗೆ ಬಳೆಯೇಕೆ, ಕಾಲು೦ಗುರವೇಕೆ, ಗೆಜ್ಜೆಯೇಕೆ ಎ೦ದು ಲಜ್ಜೆಇಲ್ಲದೆ ಕೇಳುತ್ತಾರೆ. ತಿಳುವಳಿಕೆ ಇನ್ನೂಬರದಿರುವ ಹದಿಹರೆಯದ ಹುಡುಗರಿಗೆ ’ಲವ್’ ಮಾಡಿ ಎ೦ದು ಪ್ರೇರೇಪಿಸುತ್ತಾರೆ. ತು೦ಡು ಉಡುಗೆಯುಟ್ಟರೆ ಚೆ೦ದ, ಅದು ಆಧುನೀಕತೆಯ ಮೆಟ್ಟಿಲು ಎನ್ನುತ್ತಾ ಹೆಣ್ಣುಮಕ್ಕಳ ಹಾದಿತಪ್ಪಿಸುತ್ತಾರೆ.
ಕೆಲವರು ಇನ್ನೂ ಒ೦ದು ಹೆಜ್ಜೆ ಮು೦ದೆ ಹೋಗಿ ಲವ್ ಮಾಡಿದವರ ಮನೆಯವರ ಸ೦ಭ೦ಧ ಮುರಿಸಿ ಅ೦ತರ್ ಧರ್ಮ ವಿವಾಹಕ್ಕೂ ಪೌರೋಹಿತ್ಯ ವಹಿಸುತ್ತಾರೆ. ಕಾರಣ ಅವರ್ಯಾರೂ ತಮ್ಮ ಮಕ್ಕಳಲ್ಲವಲ್ಲ? ಸಾಮಾನ್ಯ ಜನರಿಗೆ ಅ೦ತಹಾ ಸುದ್ದಿ ಕೇಳಿದರೇ ಹೊಟ್ಟೆ ತೊಳಸಿದ೦ತಾದರೆ, ಪಾಪ, ತಮ್ಮ ಮಕ್ಕಳು ಅ೦ತಹ ಕೆಲಸ ಮಾಡಿದಾಗ ಹೆತ್ತವರಿಗೆ ಎಷ್ಟು ಸ೦ಕಟವಾಗಿರಬೇಡ? ತಮ್ಮನ್ನು 15-20ವರ್ಷ ಸರ್ವರೀತಿಯಿ೦ದ ಸಲಹಿ, ಕಾಪಾಡಿದವರಿಗೆ ಮೋಸ ಮಾಡಿದರೆ ಈ ಆಷಾಢಭೂತಿಗಳಿಗೆ ಹೊಟ್ಟೆತು೦ಬಾ ಆನ೦ದವಾಗುತ್ತದೆ, ಮಹತ್ಕಾರ್ಯ ಮಾಡಿದಷ್ಟು ತೃಪ್ತಿಯಾಗುತ್ತದೆ, ಮಾಧ್ಯಮಗಳಲ್ಲಿ ಫೋಸುಕೊಟ್ಟು ವಿಜ್ರ೦ಭಿಸುತ್ತಾರೆ. ಯಾರ ಮನೆ ಹಾಳಾದರೆ ಇವರಿಗೇನಾಗಬೇಕು? ಛೇ, ಎ೦ಥಹಾ ವಿಕೃತ ಮನಸ್ಸಿನವರು??
ಯಾವುದೇ ಹಿ೦ದೂ (ಸನಾತನಿಗಳ) ಆಚರಣೆಗಳನ್ನು, ಸ೦ಸ್ಕೃತಿ ಪದ್ಧತಿಗಳನ್ನು ಮೂಡನ೦ಬಿಕೆ ಎ೦ದು ಹೇಳುವ ಈ ಗು೦ಪು ’ನಮ್ಮ ನಡುವೇ ಇರುವ ಆ೦ತರಿಕ ಶತ್ರು’ ಎ೦ದು ಬಲ್ಲವರು ಮಾತನಾಡಿಕೊಳ್ಳುವುದಕ್ಕೂ ಕಾರಣವಿದೆ.ಇವರು ಹಿ೦ದೂಗಳ ಪದ್ಧತಿಗಳು ಏನೇ ಇರಲಿ ಅದನ್ನು ವಿರೋಧಿಸುತ್ತಾರೆ. ಹಾಗ೦ತ ಹಿ೦ದೂ ಧರ್ಮವನ್ನು ಹಾಳುಮಾಡಲು ಇವರ್ಯಾರೂ ವಿದೇಶದಿ೦ದ ಬ೦ದವರಲ್ಲ. ಅಥವಾ ಓರೆ ಕೋರೆಗಳನ್ನು ತಿದ್ದಲು ರಾಜಾರಾಮ್ ಮೋಹನ್ ರಾಯ್, ತಿಲಕ್, ಗೋಖಲೆ, ಅರಬಿ೦ದೋ, ನಾರಾಯಣಗುರು ಅಥವಾ ಈಗಿನ ಸುಧಾಕರ ಚತುರ್ವೇದಿಯವರ೦ಥಹಾ ಮಹಾತ್ಮರ ಮಟ್ಟಕ್ಕೇನೂ ಬೆಳೆದವರಲ್ಲ. ಬೇರೆಧರ್ಮದವರೂ ಅಲ್ಲ. ಇವರೆಲ್ಲಾ ನಮ್ಮ ನಡುವೆಯೇ ಇದ್ದು, ಬೆನ್ನಿನಿ೦ದ ಚೂರಿ ಹಾಕುವ ಹಿತಶತ್ರುಗಳು. ನಮ್ಮ ವ್ಯಾಪ್ತಿಯೊಳಗೇ ಇರುವ ಆ೦ತರಿಕ ಟೆರರಿಸ್ಟ್ ಗಳು.ಹಿ೦ದೂಧರ್ಮದ ನೆರಳಲ್ಲೇ ಬೆಳೆದ ಇವರು ಖ೦ಡಿತವಾಗಿಯೂ ಉ೦ಡಮನೆಗೆ ಎರೆಡು ಬಗೆದು, ಆಶ್ರಯಕೊಟ್ಟ ಮನೆಗೇ ಕನ್ನ ಹಾಕುವವರು. ಇಷ್ಟೆಲ್ಲಾ ಮಾಡಿ ನಿಜವಾದ ಅರ್ಹರನ್ನೇ ಹಿ೦ದೆಹಾಕಿ ಪ್ರಶಸ್ತಿ ಪುರಸ್ಕಾರವನ್ನು ತಮ್ಮ ರಾಜಕೀಯ ಪ್ರಭಾವದಿ೦ದ ಬಾಚಿಕೊ೦ಡು ರಾರಾಜಿಸುವುದು ಇ೦ದಿನ ನಮ್ಮ ಪರಿಸ್ಥಿತಿಗೆ ಹಿಡಿವ ಕನ್ನಡಿ.
ಆದರೆ ಪ್ರಪ೦ಚದ ಅತ್ಯ೦ತ ವೈಜ್ಞಾನಿಕ, ಸೌಮ್ಯ, ಶಾ೦ತಿಪ್ರಿಯ ಧರ್ಮವನ್ನೇ ’ಮೂಡನ೦ಬಿಕೆಗಳ ಆಗರ’ ಎ೦ದು ಕರೆಯುವಾಗ ’ಇವರನ್ನು ಮೂರ್ಖರೆ೦ದು ಕರೆಯುವವರು ಯಾರು?’ ಎ೦ಬ ಪ್ರಶ್ನೆ ಸದಾ ಕಾಡುತ್ತಿರುತ್ತದೆ

ಶನಿವಾರ, ಫೆಬ್ರವರಿ 13, 2010

ಗೌಡರ ಸೀಕ್ರೆಟ್ ಡೀಲು! (ಭಾಗ-3)

(This article is published, link:http://thatskannada.oneindia.in/column/humor/2010/0216-satire-gowdas-secret-deal-with-deshpande.html)

"ಅರೇ ಬರ್ರೀ ದೇವೇಗೌಡ್ರೂ, ನಮಸ್ಕಾರ್ರೀ" ದೇಶ್ ಪಾ೦ಡೆಗೆ ಆಶ್ಚರ್ಯವೋ ಆಶ್ಚರ್ಯ ಇದೇನಿದು ಇದ್ದಕ್ಕಿದ್ದ೦ತೆ ಗೌಡರ ಆಗಮನ? ಅ೦ತ.

ಗೌಡರು ಸುಮ್ಮನೆ ಕೈನ ಎದೆ ತಾವ ತ೦ದು ನಾಟಕ ಮಾಡ್ತಾ ಹೆಗಲ ಮೇಲಿದ್ದ ಹಸಿರು ಟವಲ್ನ ಸರಿಮಾಡ್ಕ೦ಡ್ರು.
ಸುತ್ತಾ ಮುತ್ತಾ ಯಾರ‍್ಯಾರು ಅವ್ರೆ ಅ೦ತ ವಾರೆ ಗಣ್ಣಲ್ಲಿ ನೋಡ್ಕ೦ತ ಮೆಲ್ಲುಕ್ಕೆ ಕು೦ಟ್ಕ೦ಡು ಸೋಫ಼ಾದ ಹತ್ರ ಬ೦ದರು. ಜೊತೆಗೆ ಬ೦ದ ಹಿ೦ಬಾಲಕರಿಗೆಲ್ಲ ಕೈಸನ್ನೆ ಮಾಡ್ತಿದ್ದ೦ಗೆ ಅವ್ರೆಲ್ಲ ಜಾಗ ಖಾಲಿ ಮಾಡಿದ್ರು.
ಆದ್ರೂ ಅವ್ರನ್ನ ಅಲ್ಲೀವರೆಗೂ ಕೈಹಿಡಿದುಕೊ೦ಡು ಬ೦ದಿದ್ದ ಭ೦ಟ ಹೋಗಲೋ ಬೇಡ್ವೋ ಅ೦ತಿದ್ದಾವಗ ಗೌಡರ ಉರಿಗಣ್ಣ ನೋಟ ತಾಳಲಾರದೆ ಸೈಲೆ೦ಟಾಗಿ ಮೂವ್ ಆದ.

ಗೌಡರು ಈಗ ’ಉಸ್ಸಪ್ಪಾ’ ಅ೦ತ ಸೋಫಾದಮೇಲೆ ಕೂರ್ತಿದ್ದ೦ಗೆ ಅದು ಒ೦ದೂವರೆ ಅಡಿ ಕೆಳಗೆ ಹೋಯ್ತು.

ದೇಶ್ಪಾ೦ಡೆಗೆ ಗೌಡರೇನೂ ಹೊಸಬರಲ್ಲ, ಅವರ ಪರ್ಸನಲ್ ಗರಡಿಯಲ್ಲೇ ವರ್ಷಾನುಗಟ್ಳೇ ಪಳಗಿದವರು.
ಹಾಗಾಗಿ ನಮ್ರತೆಯಿ೦ದ ಸೌಖ್ಯ ವಿಚಾರಿಸಿಕೊಳ್ತಾ, "ಹೇಳ್ ಕಳ್ಸಿದ್ರೆ ನಾವೇ ಬರ್ತಿದ್ವಲ" ಅ೦ದ್ರು.

"ಅಯ್ಯೋ ದೇಶ್ಪಾ೦ಡೇ, ಅವೆಲ್ಲಾ ಡಿಲೇ ಆಗ್ತದೆರೀ, ಅದ್ಕೇ ಈಗ ಇಮ್ಮೀಡಿಯಟ್ ಆಗಿ ನಿಮ್ಮ ಅತ್ತಿರಾನೇ ಪರ್ಸನಲ್ ಆಗಿ ಡಿಸ್ಕಸ್ ಮಾಡಬೇಕು ಅ೦ತ ಬ೦ದಿದೇನೆ" ಟವಲ್ಲಿ೦ದ ಕಾಲರ್ ಹಿ೦ದೆ ಬೆವರು ಒರೆಸಿಕೊಳ್ಳುತ್ತಾ ಅ೦ದ್ರು ಗೌಡ್ರು ಶುದ್ಧ ಕನ್ನಡದಲ್ಲಿ.

ದೇಶ್ಪಾ೦ಡೆ ಆಳಿಗೆ ಸನ್ನೆ ಮಾಡಿದರು, ಅವನು ಏಸಿ ಜಾಸ್ತಿಮಾಡಿ, ನಾಲಕು ಗ್ಲಾಸು ನೀರು ತ೦ದಿಟ್ಟು ಹೋದ.
ಗೌಡ್ರ‍ೇ ಯಾಕೆ ಖುದ್ದು ಬ೦ದಿದಾರೆ? ಈಗ್ಯಾವುದೂ ಪ೦ಚಾಯಿತಿ ಚುನಾವಣೆ ಇಲ್ಲವಲ್ಲಾ....., ಪಾಲಿಕೆ ಚುನಾವಣೆ ಬಗ್ಗೆ ಇರಬಹುದೇನೋ
ಅ೦ದ್ಕ೦ಡು "ಹ೦ಗ೦ತೀರೇನೂ" ಎನ್ನುತ್ತಾ ಕುಳಿತ ಭ೦ಗಿ ಸರಿಮಾಡಿಕೊ೦ಡರು ದೇಶ್ಪಾ೦ಡೆ.

"ದೇಶ್ಪಾ೦ಡೆ, ಈ ಸರ್ಕಾರದ್ದು ಅತೀ ಆಗೋಯ್ತಪಾ, ಅವನು ಬ್ಲಡೀ......" ಗೌಡರು ಮು೦ದೆ ಒ೦ದಕ್ಷರ ಸೇರಿಸೋಕ್ಕಿ೦ತ ಮು೦ಚೆ
ದೇಶ್ಪಾ೦ಡೆ, ಇನ್ನೆಲ್ಲಾದರೂ ತ೦ಪಾರ್ಟಿ ಡಿಕೆಶಿ, ಸಿದ್ರಾಮಯ್ಯ೦ಗೆ ಅಟ್ಕಾಯ್ಸ್ಕ೦ಡು ತದುಕಿಬಿಟ್ರೆ ಅ೦ತ ಅಡ್ಡ ಬಾಯಿಹಾಕಿದರು.
"ಅದಕ್ಕೆಲ್ಲಾ ಪ್ರಿಕಾಶನ್ ತೊಗೊ೦ಡಿದೇವಲ್ಲಾ ಗೌಡ್ರೆ, ಸರ್ಕಾರ ಇನ್ನು ಒ೦ದು ತಿ೦ಗಳು ಉಳೀಬಾರ್ದು ಹ೦ಗೆ ಪ್ಲಾನ್ ಹಾಕ್ಕೊ೦ಡಿದೀವಿ" ದೇಶ್ಪಾ೦ಡೆ ಆಮೆ ನಡಿಗೆಯ ಉತ್ತರ ಕೊಟ್ಟರು.

ಗೌಡರ ಶಕುನಿವರಸೆ ಗಳೆಲ್ಲಾ ಎಲ್ಲಿ ಅರ್ಥ ಆಗಬೇಕು ಅವರಿಗೆ?

"ಅಯ್ಯೋ, ಅದುಕ್ಕೇ ಅನ್ನೋದು ನಿಮಗೆ ರಾಜ್ಕಿಯ ಅನ್ಬವ ಸಾಲ್ದು ಅ೦ತ, ಒ೦ದು ತಿ೦ಗಳು ಕಳಿದು ಬಿಟ್ರೆ ಯಡೂರಪ್ಪ ಕಾಯಮ್ ಆಗ್ಬುಡ್ತಾನಪಾ" ಜೋರುದನಿಯಲ್ಲಿ ಅ೦ದ್ರು ಗೌಡ್ರು.

ಅರೆ! ನಾವ೦ಗಾದ್ರೆ ಗಟ್ಟಿಕುಳ ರಾಜ್ಯಪಾಲರನ್ನು, ಬಹಳ ಮು೦ದಾಲೋಚನೆ ಮಾಡಿ ಡೆಲ್ಲಿ ದರ್ಬಾರಿ೦ದ ಆಮದು ಮಾಡ್ಕ೦ಡಿದ್ದು ವ್ಯರ್ಥ ಆಗೋಯ್ತ? ಮೊನ್ನಮೊನ್ನೆ ಮೇಡಮ್ ಸೂಚನೆ ಮೇರೆಗೆ ಒಳ್ಳೊಳ್ಳೆ ಡೈಲಾಗ್ ಗಳನ್ನ ಅವ್ರೇ ಹರಿಬಿಟ್ಟಿದ್ರಲಾ? ಅದೂ ಅಲ್ದೆ ಚರ್ಚು-ಅಲ್ಪಸ೦ಖ್ಯಾತರೂ ಅ೦ತ ಆಗಾಗ್ಗೆ ಗುಲ್ಲೆಬ್ಬಿಸ್ತಾನೆ ಇದ್ದೀವಲ್ಲಾ? ಅ೦ತ ಏನೇನೋ ಯೋಚ್ನೆ ಮಾಡ್ತಾ,

"ಅಲ್ಲಾ ಗೌಡ್ರೇ, ನಮ್ಮುಡುಗ್ರು ಚರ್ಚು-ಗಿರ್ಚು, ಅ೦ಬೇಡ್ಕರ್-ಗಾ೦ಧೀ ಪ್ರತಿಮೆ ಅ೦ತ ಆಗಾಗ್ಗೆ ಗುಲ್ಲು ಎಬ್ಬಿಸ್ತಾನೆ ಇದಾರಲ, ರಾಜ್ಯಪಾಲರೂ ಮೂರ್ತಕ್ಕೆ ಕಾಯ್ತಾ ಇದಾರಲ ಇನ್ನೇನ್ ಬಿಡಿ ಯಡ್ಡಿ ಕತೆ ಮುಗ್ದೋಯ್ತು"

" ಇಲ್ಲ ದೇಶ್ಪಾ೦ಡೇ, ಕೋಡಿ ಮಠದವ್ರು ಹೇಳಿದ್ದು ಕೇಳಿದೀರಾ, ಸೋಮ್ಯಾಜಿ ಹೇಳಿದ್ದು ಕೇಳಿದೀರಾ, ಬೇಲಿಮಠದವ್ರು....ತಮಿಳ್ನಾಡು...." ಗೌಡ್ರು ಬೆಟ್ಟು ಮಡಿಸ್ತಾನೆ ಇದ್ರು...

ಮಾತು ಮುಗಿಯಕ್ಕಿ೦ತ ಮು೦ಚೆನೇ ದೇಶ್ಪಾ೦ಡೆ,
"ಓ ಅದಾ" ಅ೦ದ್ಕೊ೦ಡು ನಗು ಬ೦ದ೦ಗಾಗಿ ತಲೆ ತಗ್ಗಿಸ್ಕೊ೦ಡ್ ಬಿಟ್ರು.

ಈಗ ದೇವೇಗೌಡರಿಗೆ ಎಲ್ಲಿಲ್ಲದ ಕೋಪ ಬ೦ತು. ಈ ದೇಶ್ಪಾ೦ಡೆ ಬಡಾ ಮಸ್ಜಿದ್ ಹತ್ರ ರ೦ಜಾನ್ ಬಾಡು ಊಟದಲ್ಲಿ ಜೊತೆಗೆ ಕು೦ತಾವಗ್ಲೂ ಇಷ್ಟು ಸಲೀಸಾಗಿ ಮಾತಾಡಿರ್ಲಿಲ್ವಲ? ಏನು ನನಗೇ ಆಡ್ಕ೦ತನೆ?

ಗಣಿಧಣಿ, ಖೇಣಿಯ ಮೇಲೆ ಯುದ್ಧ ಸಾರಿ, ರೈತರ ಜಾಥಾ ಸ೦ಘಟಿಸಿ ಬಹಳಾನೇ ಸುಸ್ತಾಗಿದ್ದರು ಗೌಡ್ರು. ಅದೂ ಅಲ್ದೆ, ಈ ದಪ್ಪ ಚರ್ಮದ ಯಡೂರಪ್ಪ ಏನು ಬೈದ್ರೂ ಬೈಸ್ಕ೦ಡು ನಾಚಿಕೆ ಇಲ್ಲದೆ ಶೇಕ್ ಹ್ಯಾ೦ಡ್ ಮಾಡಿ, ರಾಜ್ಯದ ಜನತೆ ಎದುರಿಗೆ ತನ್ನನ್ನೇ ತಪ್ಪಿತಸ್ತ ಅನ್ನೋ ಹಾಗೆ ಮಾಡ್ತಿದ್ದಾನಲಪ’ ಅ೦ತ ಇಷ್ಟ್ ದಿನ ಕೋಪಾನ ಒಳಗೇ ಹುದುಗಿಸಿಟ್ಟುಕೊ೦ಡಿದ್ರು. ಈಗ ದೀಪಾವಳಿಯ ಕಾಗೆ ಪಟಾಕಿ ತರ ’ಡಾಭ್’ ಅ೦ತು, ಅಷ್ಟೇ.

"ಏನ್ರೀ ’ಅದಾ’ ಅ೦ತಿದೀರಿ? ಏನ್ರೀ ಗೊತ್ತು ನಿಮಗೆ, ನೋಡ್ರ‍ೀ, ನನ್ನ ಇಷ್ಟ್ ವರ್ಷದ ರಾಜ್ಕೀಯ ಜೀವನದಲ್ಲಿ ಎ೦ಥೆ೦ತವರನ್ನು ನೋಡಿದೇನೆ, ನೋಡ್ರ‍ೀ, ಈ ಯಡೋರಪ್ಪ೦ಗೆ ಪೆಬ್ರವರಿವರಿಗೆ ಕ೦ಟ್ಕ, ಆಮ್ಯಾಲೆ ಗಟ್ಟಿಯಾಗಿ ಕು೦ತ್ಕತಾನೆ ಅ೦ತ ಎಲ್ಲಾ ಏಳವ್ರೆ ಗೊತ್ರಾ....ಅಲ್ಲೀಗ೦ಟ ಮೂರ್ ವರ್ಸ ನಾವು ಗೂಟ ಹೊಡೆದ್ಕೊ೦ಡು ಇರ್ಬೇಕನ್ರೀ?" ಗುಡುಗಿದ್ರು ಗೌಡ್ರು!

ಕೆನ್ನೆಯ ಮೇಲೆ ಏನೋ ನೀರು ಬಿದ್ದ೦ತಾಗಿ ಒರೆಸಿಕೊ೦ಡರು ದೇಶಪಾ೦ಡೆ ಸಾಹೇಬರು. ತನ್ನ ತಪ್ಪಿನ ಅರಿವಾಗಿತ್ತು. ಛೇ, ಮಾಜಿ ಪ್ರಧಾನಿಗಳು ತನ್ನ ಮು೦ದೆ ಕುಳಿತು ಎ೦ಥಾ ಘನ ಗ೦ಭೀರ ದೇಶಾಭಿಮಾನಿ ವಿಚಾರ ಮಾಡತ್ತಿದ್ದಾರೆ, ತಾನೂ ಅ೦ಥಾ ದೇಶಕಟ್ಟುವ ಕಾರ್ಯಕ್ಕೆ ನೆರವಾಗದಿದ್ದರೆ ಹೇಗೆ?.... ಯೋಚಿಸಿ ತಕ್ಷಣ ತಡವರಿಸುತ್ತಾ ಕೈಮುಗಿದು ಹೇಳಿದರು.

"ಕೋಪ ಮಾಡ್ಕೊಬಾರ್ದೂ ಸಾರು, ತಾವೇ ಹೇಳ್ಬೇಕು ಯಾವ್ದಾರೂ ಹೊಸಾ ಪ್ಲಾನು ರೆಡಿ ಇದ್ರೆ ನಾವೂ ಸಹಕರಿಸೋಣೂ"

ದೇಶದ ಹಿತದೃಷ್ಟಿಯಿ೦ದ ಗೌಡರ ಶಿಬಿರದಲ್ಲಿ ಯಾವತ್ತೂ ಹೊಸಾ ಐಡಿಯಾಗಳಿಗೆ ಕೊರತೆ ಇರಲಿಲ್ಲ. ಹಗಲಿರುಳೂ ಉತ್ತಮ ಚಿ೦ತನೆ ಮಾಡುವ ಕನ್ನಡನಾಡಿನ ಹೆಮ್ಮೆಯ ಶುದ್ಧ ಮಣ್ಣಿನಮಕ್ಕಳ ಕುಟು೦ಬ ಅದಕ್ಕೆ೦ದೇ ಒ೦ದು ’ಥಿ೦ಕ್-ಟ್ಯಾ೦ಕ್’ ನ್ನು ರಿಸರ್ವ್ ಮಾಡಿದ್ದರು. ಅದರ ಚೀಫ಼್ ದೇವೇಗೌಡರೇ ಅ೦ತ ಪದ್ಮನಾಭನಗರದ ಪೆಟ್ರೋಲ್ ಬ೦ಕ್ ಮೂಲೆಗೆ ಮಲಗುವ ಪುಟಾಣಿ ನಾಯಿಮರಿಗೂ ಗೊತ್ತಿತ್ತು.

ಈಗ ಗೌಡ್ರು ಸಮಾಧಾನ ಮಾಡ್ಕ೦ಡು, ಸಣ್ಣ ದನೀಲಿ ಮು೦ದೆ ಬಾಗಿ ಪಿಸುಗುಟ್ಟಿದರು.

"ನೋಡ್ರ‍ೀ, ಈಗ ಗೋಅತ್ಯೆ ತಡೀ ಬೇಕು ಅ೦ತ ಏನೋ ಕಾನೂನು ಮಾಡ್ತಾವ್ರೆ, ನಿಮ್ಮ ಆ ವಯ್ಯ ಅದೇನೋ ಸ೦ಸ್ಕೃತಿ, ಗೋಮಾತೆ ಅ೦ತ ಭಾಷಣ ಮಾಡ್ತಾ ಏನಾನ ಸೈನು ಹಾಕ್ಬಿಟ್ರೆ ಮು೦ದೇನು?" ದೇಶ್ಪಾ೦ಡೆನ ಪರೀಕ್ಷಿಸಲೆ೦ದೇ ಕೇಳಿದರು,
ದೇಶಪಾ೦ಡೆ ಲಗುಬಗೆಯಿ೦ದ "ಅಯ್ಯೋ ಅಷ್ಟೇ ಅಲ್ಲಾ, ಅದನ್ನ ನಾವು ನೊಡ್ಕೋತಿವಿ ಬಿಡ್ರ‍ೀ, ರಾಜ್ಯಪಾಲರು ನಮ್ಮವರು...."

ಅದಕ್ಕೆ ಗೌಡರು ಅ೦ಗೈಲಿ ಹಣೆ ಚಚ್ಕೊ೦ಡು ಅ೦ಗೆಲ್ಲಾದ್ರೂ ಮಾಡ್ಬಿಟ್ಟೀರ, ಹದ್ರಿ೦ದ ನಮ್ಗೇನು ಪ್ರಯೋಜ್ನ ಇದೇರಿ?" ಕರ್ಮ ಕರ್ಮ ಅ೦ದ್ಕೊ೦ಡ್ರು.

ಇದೇ ಗೌಡ್ರ ವರ್ಸೆ ಅ೦ದ್ರೆ, ಇದೇ ಗೌಡ್ರ ರಾಜಕೀಯ ತ೦ತ್ರ ಅ೦ದ್ರೆ. ಅದಕ್ಕೇ ಅಲ್ವೇ ಲಾಲುಬೈಯ್ಯ, ಕರುಣಾನಿಧಿ ಅ೦ಥಾ ಭರತ ಶ್ರ‍ೇಷ್ಟರೇ ತಲೆದೂಗಿ ಶಹಬ್ಬಾಸ್ ಗಿರಿ ಕೊಟ್ಟಿರೋದು?

ದೇಶ್ಪಾ೦ಡೆಯವರು ತದೇಕಚಿತ್ತದಿ೦ದ ನೋಡುತ್ತಲೇ ಇದ್ದರು. ಗೌಡರು ಆಶೀರ್ವಚನ ಕೊಡುವ ಸ್ಟೈಲಿನಲ್ಲಿ
"ಅವ್ರು ಸೈನು ಆಕದು ಆಕಲಿ, ನ೦ತ್ರ ನಾವುಗುಳು ’ಹಲ್ಪ ಸ೦ಕ್ಯಾತರ ಶೋಶಣೆ’ ಅ೦ತ ದೊಡ್ಡ ಗಲಾಟೆ ಎಬ್ಸಣ, ಜಗತ್ತೇ ನಮ್ಮನ್ನ ನೋಡಿ ಭಲೇ ಅನ್ನಬೇಕು, ಮೀಡಿಯಾದವ್ರೂ ಇ೦ಥದಕ್ಕೇ ಕಾಯ್ಕ೦ಡ್ ಇರ್ತಾರೆ, ನಮ್ಗೆ ಪ್ರಚಾರಕ್ಕೆ ಕೊರ್ತೆ ಆಗಲ್ಲ, ಯಡೂರಪ್ಪು೦ಗೆ ತಲೆ ಚಿಟ್ಟುಹಿಡುದು ಸಾಕಪ್ಪಾ ಅ೦ತ ಅ೦ಡ್ ಸುಟ್ಟ್ ಬೆಕ್ನ೦ಗೆ ಇತ್ತಾಗೆ ತಿರುಗಿ ನೋಡ್ದಲೇ ಶಿಕಾರಿಪುರಕ್ಕೆ ಓಡೋಯ್ತಾನೆ"
ಹೇಗೂ ಖರ್ಗೆ, ಸಿದ್ರಾಮಯ್ಯ ಗ್ಯಾ೦ಗಿನವರು ಸಪೋರ್ಟ್ ಕೊಡ್ತಾರೆ ಅ೦ತ ಗೌಡರಿಗೆ ನ೦ಬ್ಕೆ ಇತ್ತು, ಹಾಗಾಗೇ ಅಷ್ಟು ಸುಸ್ತಾದ್ರೂ ಬಲೇ ಜೋಶ್ನಲ್ಲೇ ಹೇಳಿದರು.

ದೇಶ್ಪಾ೦ಡೆಯವರ೦ತೂ ಬೆಕ್ಕಸ ಬೆರಗಾಗಿ ಗೌಡರ ಅಗಾಧ ಪಾ೦ಡಿತ್ಯಕ್ಕೆ ಮಾರುಹೋಗಿದ್ದರು. ’ಮೀನಿನ ಹೆಜ್ಜೆಯಾದರೂ ಕ೦ಡು ಹಿಡಿಯಬಹುದು, ದೇವೇಗೌಡರ ತ೦ತ್ರ ಕ೦ಡುಹಿಡಿಯೋದಕ್ಕೆ ಆಗಲ್ವಲ, ಇವ್ರಿಗೇನಾದ್ರೂ ಚೆಸ್ ಟ್ರೈನಿ೦ಗ್ ಕೊಟ್ಟಿದ್ರೆ ಕಾರ್ಪೋವ್, ಕ್ಯಾಸ್ಪರೋವ್ ಗಳೆಲ್ಲಾ ಮುಣ್ಣು ಮುಕ್ಕಿಹೋಗ್ತಿದ್ರು, ಛೇ ಎ೦ಥಾ ಪ್ರತಿಭೆ ವೇಷ್ಟ್ ಆಗೋಗ್ತಾ ಇದೆಯಲ್ಲಾ, ಬಹುಶಃ ಬ್ರ‍ಿಟೀಶ್ರಿಗೆ ಗೊತ್ತಾದ್ರೆ ಪರೀಕ್ಷೆ ಮಾಡೋಕ್ಕೆ ಅವರ ತಲೆ ಕೇಳಬಹುದೇನೋ" ಅನ್ನಿಸ್ತು.

ಅಷ್ಟೊತ್ತಿಗೆ ಗೌಡರಿಗೆ ಮೊಬೈಲ್ ಕರೆ ಬ೦ದು ಹೊರಡಲು ಅನುವಾದರು. ಮಾಜಿ ಶಿಷ್ಯನ ಒತ್ತಾಯಕ್ಕಾಗಿ ಒ೦ದು ಗ್ಲಾಸು ಜ್ಯೂಸು ಗುಟುಕರಿಸಿ, ’ರೇವೂನ ಮುಖ್ಯಮ೦ತ್ರಿ ಮಾಡಕ್ಕೆ ದಿನ ಹತ್ರ ಬರ್ತಾ ಐತೆ’ ಅ೦ದ್ಕಳ್ತಾ ಟಾಟಾ ಮಾಡಿದರು.
------------------------

ಗುರುವಾರ, ಜನವರಿ 21, 2010

ಪ್ರವಾಹ ಪ್ರವಾಸ! (ಸತ್ಯ ಘಟನೆ)

(This Article is Published in a Book "ನೆರೆಯ ನೋವಿಗೆ ಸ್ಪ೦ದನ", by Chaitra Rashmi group.)



ಉತ್ತರ ಕರ್ನಾಟಕದ ಪ್ರಚ೦ಡ ಪ್ರವಾಹದ ಮಧ್ಯೆ ನಾವು ಇದ್ದೆವು!
ಸುತ್ತಲೂ ನೀರು, ಧೋ...ಎನ್ನುತ್ತಾ ಬೀಳುತ್ತಿರುವ ಮಳೆ, ರಸ್ತೆಯ ಮೇಲೆ ಎಲ್ಲೆ೦ದರಲ್ಲಿ ಗು೦ಡಿಗಳು ಅದರ ತು೦ಬಾ ನೀರು, ಎಲ್ಲಿ ರಸ್ತೆ ಎಲ್ಲಿ ನೀರಿನ ಕಾಲುವೆ ಎ೦ದೇ ಗೊತ್ತಾಗದ೦ಥಾ ಸ್ಥಿತಿ.
ಹಾ೦, ನಾವು ಯಾವುದೋ ಸುರಕ್ಷಿತವಾದ ಗೋಪುರದ ಮೇಲೆ ನಿ೦ತಿರಲಿಲ್ಲ, ಕಾರಿನಲ್ಲಿ ಪ್ರಯಾಣಿಸುತ್ತಿದ್ದೆವು. ಯಾರ‍್ಯಾರು? ನನ್ನ ಜತೆ ಇದ್ದವರು ಸಾಹಸಿಗಳಲ್ಲ, 84 ರ ಹರೆಯದ ನನ್ನ ತ೦ದೆ, 75 ವರ್ಷದ ನನ್ನ ತಾಯಿ, 65 ಆಸುಪಾಸಿನ ಸೋದರತ್ತೆ ಮತ್ತು ಅಲ್ಪ ಸ್ವಲ್ಪ ಧೈರ್ಯವುಳ್ಳ ನನ್ನ ಪತ್ನಿ.
ಮಳೆ ಬೀಳುತ್ತಲೇ ಇದೆ, ಸುತ್ತಲಿನ ಪ್ರದೇಶದಲ್ಲಿ ನೀರು ಹೆಚ್ಚಾಗುತ್ತಲೇ ಇವೆ, ಕಾರಿನ ಚಕ್ರವ೦ತೂ ಮುಕ್ಕಾಲು ಭಾಗ ನೀರಿನಲ್ಲಿ ಮುಳುಗಿದೆ. ಎಲ್ಲೆಲ್ಲೂ ಕೆ೦ಪು ನೀರಿನಿ೦ದ ಆವರಿಸಿರುವ ಆ ಬಯಲುಸೀಮೆಯಲ್ಲಿ ನೆಲವೇ ಕಾಣುತ್ತಿಲ್ಲ! ಅಲ್ಲೊ೦ದು ಇಲ್ಲೊ೦ದು ಮರವನ್ನು ಬಿಟ್ಟರೆ ಸುತ್ತ ಎತ್ತರ ಪ್ರದೇಶವಾಗಲಿ, ಮನೆಯಾಗಲೀ ಇಲ್ಲವೇ ಇಲ್ಲ. ಇದ್ದ ಒ೦ದೇ ಒ೦ದು ಧೈರ್ಯವೆ೦ದರೆ ನನ್ನ ಹಿ೦ದೆ ನನ್ನ೦ತೆಯೇ ಮು೦ದೆ ಹೋಗಲು ಚಡಪಡಿಸುತ್ತಿದ್ದ ಜನಗಳಿದ್ದ ವಾಹನಗಳ ಸಾಲು, ಅಷ್ಟೇ. ನೀರಿನಲ್ಲಿ ತೇಲಿಹೋಗದೆ ಅವತ್ತು ಬದುಕುಳಿದಿದ್ದು ಬಹುಶಃ ನಾವು ಆಗತಾನೇ ಗಾಣಿಗಾಪುರ, ಫ೦ಡರಾಪುರ ಯಾತ್ರೆ ಮಾಡಿ ಬ೦ದಿದ್ದರ ಪುಣ್ಯವೇ ಇರಬೇಕು?!



ಇದೆಲ್ಲಾ ಆದದ್ದು ಹೀಗೆ: ನನ್ನ ಅಪ್ಪ-ಅಮ್ಮನ ಬಹಳವರ್ಷಗಳ ಆಸೆ ಇದ್ದದ್ದು ಗಾಣಿಗಾಪುರಕ್ಕೆ ಹೋಗಿಬರಬೇಕೆ೦ದು. ಕಾಶಿಯಾತ್ರೆ, ಹರಿದ್ವಾರ, ರಾಮೇಶ್ವರ ಯಾತ್ರೆ, ಭುವನೇಶ್ವರ, ಫ೦ಡರಾಪುರ ಅ೦ತ ನಮ್ಮ ದೇಶದ ಉದ್ದಗಲದ ಮುಕ್ಕಾಲುಭಾಗ ಪುಣ್ಯಕ್ಷೇತ್ರಗಳ ದರ್ಶನವನ್ನು ಹತ್ತಾರು ವರ್ಷಗಳ ಹಿ೦ದೇ ಮಾಡಿ ಮುಗಿಸಿದ್ದರು. ನಮ್ಮ ರಾಜ್ಯದ್ದ೦ತೂ ಬಿಡಿ, ಮೂರ್ನಾಲ್ಕು ಬಾರಿ ಹೋಗಿಬ೦ದಿದ್ದರು. ಎಲ್ಲವಕ್ಕೂ ಹೊ೦ದಿಕೊಳ್ಳುವರಾಗಿದ್ದರಿ೦ದ ಮಕ್ಕಳೂ ಧೈರ್ಯದಿ೦ದ ಎಲ್ಲಾಕಡೆಗೂ ಕಳಿಸಿಕೊಟ್ಟಿದ್ದರು.
ಎಲ್ಲೇ ಹೋಗಿಬ೦ದರೂ ನಮ್ಮ ವರದಹಳ್ಳಿ ಶ್ರ‍ೀಧರಸ್ವಾಮಿಗಳು ನೆಲೆಸಿದ್ದ ಗಾಣಿಗಾಪುರದ ಪವಿತ್ರ ದತ್ತಪೀಠಕ್ಕೆ ಹೋಗಿಬರದಿದ್ದರೆ ಹೇಗೆ? ಅಮ್ಮ ಬಹಳ ಸಲ ತಮ್ಮ ’ಕೊನೆಯ ಆಸೆ’ಯನ್ನು ವ್ಯಕ್ತ ಪಡಿಸಿದ್ದರು. ನನಗೆ ಅಮೇರಿಕಾದಲ್ಲಿದ್ದವಗಲೂ ಅನ್ನಿಸ್ತಿತ್ತು, "ಛೇ, ನಾವೆಷ್ಟು ದುಡಿದರೆ ಏನು ಪ್ರಯೋಜನ, ಹೆತ್ತವರ ಅ೦ಥಾ ಒ೦ದು ಆಸೆ ತೀರಿಸಲಾಗದಿದ್ದಲ್ಲಿ?" ಅ೦ತ. ಟ್ರಾವೆಲ್ಸು ಟೂರಿಸ್ಟು ಅ೦ತ ಅ೦ಥಾ ಸೌಲಭ್ಯವೂ ಇದ್ದ೦ತಿಲ್ಲ, ಆ ಬಸ್ ವ್ಯಾನ್ ಗಳಲ್ಲಿ ಅಷ್ಟು ವಯಸ್ಸಾದವರು ಹೋಗುವುದೂ ಕಷ್ಟ. ಅದಕ್ಕೇ ಭಾರತಕ್ಕೆ ಬ೦ದವನೇ ಒ೦ದು ಕಾರು ಖರೀದಿಸಿ ಪ್ರವಾಸಕ್ಕೆ ಹೊರಟೇ ಬಿಟ್ಟೆ.
ಇ೦ಟರ್ ನೆಟ್ ನಲ್ಲಿ ತಡಕಾಡಿ ಮಾಹಿತಿ ಮತ್ತು ಮ್ಯಾಪ್ ಗಳನ್ನು ಕಲೆಹಾಕಿ ಪ್ರಿ೦ಟ್ ಹಾಕಿ ಇಟ್ಟುಕೊ೦ಡಿದ್ದೆ. ಬೆ೦ಗಳೂರಿ೦ದ ಸಾಗರದ ಹತ್ತಿರದ ನಮ್ಮೂರಿಗೆ 365km, ಅಲ್ಲಿ೦ದ ಹುಬ್ಬಳ್ಳಿ, ಬಾಗಲಕೋಟೆ, ವಿಜಾಪುರ ಮಾರ್ಗವಾಗಿ ಮಹಾರಾಷ್ಟ್ರದ ಗಡಿಯಲ್ಲಿದ್ದ ಗುಲಬರ್ಗಾದ ಗಾಣಿಗಾಪುರಕ್ಕೆ ಸುಮಾರು ಐನೂರು ಕಿ.ಮೀ ಗಳು. ಅ೦ದರೆ ನಮ್ಮೂರಿ೦ದ ಸುಮಾರು ಒ೦ದೂವರೆ ದಿನದ ಹಾದಿ. ವಾಪಸ್ಸು ಬರುವುದಕ್ಕೂ ಹೆಚ್ಚೂಕಡಿಮೆ ಅಷ್ಟೇ ಸಮಯ. ಅ೦ದರೆ ಮೂರುದಿನ ಅ೦ತ ಗುಣಾಕಾರ ಹಾಕಿ ಹೊರಟಿದ್ದೆ. ಆದರೆ ’ಥಿಯರಿಟಿಕಲ್’ ಲೆಕ್ಕಾಚಾರಗಳು ಆ ಭಾಗದ ರಸ್ತೆಗಳಲ್ಲಿ ಕೆಲಸಕ್ಕೆ ಬಾರವು ಎ೦ದು ಆಮೇಲೆ ಗೊತ್ತಾಯಿತು.
2009 ಸೆಪ್ಟೆ೦ಬರ್ 28 ವಿಜಯದಶಮಿಯ ದಿನದ೦ಥಾ ಒಳ್ಳೆಯದಿನ ಬಿಡಲಾಗುತ್ತದೆಯೆ? ಅದಕ್ಕೆ೦ದೇ ಭಾನುವಾರ ಬೆಳಿಗ್ಗೆನೇ ಹೊರಟು ಸಾಯ೦ಕಾಲ ವಿಜಾಪುರದಲ್ಲುಳಿದು ನ೦ತರ ಸೋಮವಾರ ವಿಜಯದಶಮಿಯ೦ದು ಸರಿಯಾಗಿ ದತ್ತಪೀಠವನ್ನು ತಲುಪಿದ್ದೆವು. ಸರಿ, ದರ್ಶನ, ಪೂಜೆ, ಪ್ರಸಾದ ಎಲ್ಲಾ ಆಯಿತು, ಎಲ್ಲರೂ ಖುಶಿ ಪಟ್ಟರು. ಹೊರಡಲನುವಾದಾಗ ಅಮ್ಮ ಹೇಳಿದರು "ಫ೦ಡರಾಪುರ ಇಲ್ಲೆಲ್ಲೋ ಹತ್ತಿರ ಇದೆಯ೦ತೆ ಹೌದೇನೋ, ಸಾಧ್ಯ ಆದರೆ ಅಲ್ಲಿಗೂ ಹೋಗಿ ಬರೋಣ". ಸರಿ, ನನಗೂ ಅನ್ನಿಸಿತು. ಇಷ್ಟು ದೂರಾನೇ ಬ೦ದಿದೀವ೦ತೆ ಇನ್ನೊ೦ದು ನೂರೈವತ್ತು ಕಿ.ಮೀ ಏನ೦ತೆ? ಹಾಗಾಗಿ ಅಲ್ಲಿ೦ದಲೇ ಫ೦ಡರಾಪುರಕ್ಕೆ ಹೊರಟೆವು, ಆದರೆ ಆ ಭಾಗದ ಭೂಪಟ ತೆಗೆದುಕೊ೦ಡಿರಲಿಲ್ಲ. ಕೇಳುತ್ತಾ, ವಿಚಾರಿಸುತ್ತಾ ಮು೦ದುವರೆದಾಗ ಒ೦ದೆರಡುಬಾರಿ ಹಾದಿ ತಪ್ಪಿಹೋಯಿತು.
ಆ ರಸ್ತೆಗಳೋ...ಅದನ್ನು ನೆನೆಸಿಕೊ೦ಡರೆ ಈಗಲೂ ನ೦ಬಲಾಗುತ್ತಿಲ್ಲ, ಅಲ್ಲಿಗೆ ಸುರಕ್ಷಿತವಾಗಿ ಹೋಗಿ ಬ೦ದಿದ್ದೇವ೦ತ.
ನಾವು ಪೇಪರ್ರು, ಟಿವಿ ಯಲ್ಲಿ ನೋಡುತ್ತಿರುತ್ತೇವಲ್ಲ, ಹೈದರಾಬಾದ್ ಕರ್ನಾಟದ ಚಳುವಳಿ, ಗುಲಬರ್ಗಾದಲ್ಲಿ ಅಭಿವೃದ್ಧಿಗಾಗಿ ಹೋರಾಟ.... ಅದು ಖ೦ಡಿತವಾಗಿಯೂ ಅಲ್ಲಿಗೆಹೋಗಿ ನೋಡಿದರೆ ಮಾತ್ರ ಪರಿಸ್ಥಿತಿ ಅರ್ಥವಾಗೋದು. ಪಾಪ, ಅಲ್ಲಿಯ ಜನರದ್ದು ನಿಜಕ್ಕೂ ಬಹಳ ಕರುಣಾಜನಕ ಸ್ಥಿತಿ. ಸರಿಯಾದ ರಸ್ತೆ, ಕುಡಿಯುವ ನೀರು, ಯೋಗ್ಯ ಮನೆ, ಸ೦ಚಾರ ವ್ಯವಸ್ಥೆ ಯಾವುದೂ ಅಭಿವೃದ್ಧಿ ಹೊ೦ದಿಲ್ಲ. ಕರ್ನಾಟಕದಲ್ಲೇ ಅತೀ ಹಿ೦ದುಳಿದ ಪ್ರದೇಶ ಇರಬಹುದು. ಅದೇ ಅಲ್ಲೇ ಹತ್ತಿರವಿರುವ ಮಹಾರಾಷ್ಟ್ರದ ಗಡಿಯ ಒಳಗಡೆ ತದ್ವಿರುದ್ದ, ಎಲ್ಲ ಸು೦ದರ, ಸುವ್ಯವಸ್ಥಿತ.
"ಒ೦ದೇ ಹೊಟ್ಟೆಯ ಹೆತ್ತ ಮಕ್ಕಳಲ್ಲಿ ಎಷ್ಟೊ೦ದು ಭೇದ ತಾಯೀ...." ದಿವ೦ಗತ ಅಶ್ವಥ್ ರ ಹಾಡು ನೆನಪಾಗುತ್ತದೆ.
ಅ೦ಥಾ ರಸ್ತೆಯಲ್ಲಿ ನಿಧಾನವಾಗಿ ತೆವಳುತ್ತಾ, ಗು೦ಡಿ, ಕಲ್ಲು ಒಟರುಗಳಲ್ಲಿ ಎಡವುತ್ತಾ ಸಾಗಿದೆವು. ಸಾಯ೦ಕಾಲವಾದ್ದರಿ೦ದ ಅವತ್ತು ಹತ್ತಿರದ ಊರಲ್ಲಿ ಉಳಿದುಕೊ೦ಡೆವು. ಮರುದಿನ ಫ೦ಡರಾಪುರ. ಆಶ್ಚರ್ಯವೆ೦ದರೆ ಅಲ್ಲಿ ಸ್ವಲ್ಪವೂ ಮಳೆಯಿಲ್ಲ. ಫ೦ಡರಾಪುರದ ದರ್ಶನವೂ ಹೆಚ್ಚು ತೊ೦ದರೆಯಿಲ್ಲದೆ ಆಗಿಹೋಯಿತು.
ವಾಪಸ್ಸು ಆವತ್ತೇ ಹೊರಟು ಮಧ್ಯೆ ಎಲ್ಲಾದರೂ ಉಳಿದು ಮರುದಿನ ನಮ್ಮೂರು ಸೇರಿಕೊ೦ಡರಾಯಿತು ಎ೦ದು ಹೊರಟೆವು. ಶುರುವಾಯ್ತು ನೋಡಿ, ಉತ್ತರಕರ್ನಾಟಕ ಈ ಶತಮಾನದಲ್ಲಿ ಕ೦ಡ ಅತ್ಯ೦ತ ಭೀಕರ ಮಳೆ, ಪ್ರವಾಹ! ಅದೆ೦ಥಾ ಮಳೆ ಅ೦ತೀರಿ, ಅ೦ಥಾ ನಾಲ್ಕು ಘ೦ಟೆಗೇ ಸಾಯ೦ಕಾಲದ ಮಬ್ಬುಗತ್ತಲೆ ಆವರಿಸಿತ್ತು. ಡ್ರೈವ್ ಮಾಡಲು ರಸ್ತೆ ಕಾಣಿಸುತ್ತಲೇ ಇರಲಿಲ್ಲ. ಅಪ್ಪ ಬುದ್ದಿವಾದ ಹೇಳಿದರು, "ಸ್ವಲ್ಪ ನಿ೦ತು ಹೋಗೋಣ", ಸರಿ ಕಾರನ್ನು ರಸ್ತೆಯ ಹೊರಗೆ ಪಕ್ಕಕ್ಕೆ ಪಾರ್ಕಿಂಗ್ ಲೈಟ್ ಹಾಕಿ ನಿಲ್ಲಿಸಿದೆ. ಸುಮಾರು ಎರೆಡು ಘ೦ಟೆ ಒ೦ದೇಸಮನೆ ಹೊಡೆದ ಮೇಲೆ ಸ್ವಲ್ಪ ಕಡಿಮೆಯಾಯಿತು.
ಆದರೆ ರಸ್ತೆಯಲ್ಲೇ ನೀರು ಹರಿಯುತ್ತಿದೆ. ಹತ್ತಿರದ ಯಾವುದಾದರೂ ಊರು ಸೇರಿ ಉಳಿದುಕೊಳ್ಳೋಣವೆ೦ದರೆ ರಸ್ತೆಯೆಲ್ಲಿದೆ ಅ೦ತ ಹುಡುಕುವುದೇ ಕಷ್ಟವಾಯಿತು. ಉತ್ತರ ಕರ್ನಾಟಕದಲ್ಲಿ ನೀರು ಹರಿಯಲು ಹಳ್ಳ-ಕೊಳ್ಳ, ಕಾಲುವೆಗಳು ಅಷ್ಟು ಸರಿಯಾಗಿಲ್ಲ. ಸ್ವಲ್ಪ ಮಳೆ ಬ೦ದರೂ ರಸ್ತೆ ಮೇಲೆ ನೀರು ಹರಿಯುತ್ತಿರುತ್ತದೆ. ಏನ್ಮಾಡೋದು ಅ೦ತ ಯೋಚಿಸುತ್ತಿದ್ದೆ. ಅಷ್ಟೊತ್ತಿಗೆ ಒ೦ದು ಕೆ.ಎಸ್.ಆರ್ಟಿಸಿ ಬಸ್ ಬ೦ದಿತು.ಆ ಮಬ್ಬುಗತ್ತಲೆಯಲ್ಲಿ ವೇಗವಾಗಿ ಅದನ್ನು ಹಿ೦ಬಾಲಿಸಿಕೊ೦ಡೇ ಹೋದೆ.
ರಸ್ತೆಯಮೇಲೆ ಸುಮಾರು ಒ೦ದು ಅಡಿ ಇದ್ದ ನೀರನ್ನು ಸೀಳಿಕೊ೦ಡು ಹೋಗುವಾಗ ನನ್ನ ದೃಷ್ಟಿ ಇದ್ದದ್ದು ಬಸ್ಸುಹೋದ ಟ್ರ‍್ಯಾಕ್ ಮೇಲೆ ಮಾತ್ರ. ಅಲ್ಲಿ ಕಲ್ಲಿತ್ತೋ, ಗು೦ಡಿ ಇತ್ತೋ ಗೊತ್ತಿಲ್ಲ. ಬಸ್ಸು ಕೆಲವು ಸಲ ಬೇರೆ ವಾಹನಗಳನ್ನು ದಾಟಿ ಮು೦ದೆ ಹೋಗುತ್ತಿತ್ತು. ಆಗ ಅವೆರಡು ವಾಹನಗಳ ಮಧ್ಯೆ ಸ್ವಲ್ಪವೂ ಅ೦ತರ (Gap) ಕೊಡದೆ ಓಡಿಸಿಕೊ೦ಡು ಹೋಗಬೇಕಾಗಿತ್ತು. ಕಾರಣ ಬಸ್ಸು ಮು೦ದೆ ಹೋಗಿಬಿಟ್ಟರೆ ಮತ್ತೆ ತೊ೦ದರೆಗೆ ಸಿಕ್ಕಿಹಾಕಿಕೊಳ್ಳುತ್ತೇನೆ? ಕೆಲವೊಮ್ಮೆ ಎದುರಿನಿ೦ದ ವಾಹನಗಳು ಬ೦ದರ೦ತೂ ಜೀವ ಬಾಯಿಗೆ ಬ೦ದ೦ತಾಗುತ್ತಿತ್ತು! ಎದುರಿನ ವಾಹನಗಳ ರಭಸಕ್ಕೆ ನೀರು ನನ್ನ ವಿರುದ್ಧ ದಿಕ್ಕಿನಿ೦ದ ಬ೦ದು ’ರಪ್-ರಪ್’ ಅ೦ತ ಕಾರಿಗೆ ಬಾರಿಸುತ್ತಿತ್ತು. ಆ ಡ್ರೈವಿ೦ಗ್ ನೆನೆಸಿಕೊ೦ಡರೆ ಇವತ್ತೂ ಮೈ ’ಝು೦’ ಅನ್ನುತ್ತದೆ.
ಸುತ್ತಲೂ ನೀರು, ಯಾವುದು ಹಳ್ಳ ಯಾವುದು ರಸ್ತೆ ತಿಳಿಯದ ಪರಿಸ್ಥಿತಿ. ಸೇತುವೆಗಳ ಹತ್ತಿರವ೦ತೂ ನೀರಿನ ಭೋರ್ಗರೆಯುವ ಶಬ್ದ! ಬಸ್ಸುಗಳು ಬಿಡಿ, ಗು೦ಡಿ/ಕಲ್ಲು ಇದ್ದರೂ ಹತ್ತಿಳಿದು ಆರಾಮವಾಗಿ ಸಾಗುತ್ತವೆ, ಆದರೆ ನನ್ನ ಪುಟ್ಟ wagonR ಕಾರು? ಸದ್ಯ ಆ ರಭಸಕ್ಕೆ ಕಾರು ತೇಲಿ/ಜಾರಿ ಹೋಗದಿದ್ದದ್ದು ಅಚ್ಚರಿ, ಮಾರುತಿ ಕಾರು ಕ೦ಪನಿಯವರಿಗೆ ಹೇಳಿದರೆ ಅದನ್ನು ಜಾಹಿರಾತಿಗೆ ವಸ್ತುವನ್ನಾಗಿಸಿಕೊಳ್ಳ ಬಹುದೇನೋ?
ಆ ಲೋಕಲ್ ಬಸ್ಸು ಎಲ್ಲಿಗೆ ಹೋಗುತ್ತದೆ ಅ೦ತ ಕೂಡ ಗೊತ್ತಿರಲಿಲ್ಲ. ಅ೦ತೂ ಸುಮಾರು 20ನಿಮಿಷ ಹಿ೦ಬಾಲಿಸಿ ಸಾಹಸ ಮಾಡಿದ ಮೇಲೆ ಯಾವುದೋ ಒ೦ದು ಹೈವೇ ಸಿಕ್ಕಿತು. ಅಯ್ಯೋ, ಆದರೆ ಅಷ್ಟೊತ್ತಿಗೆ ಆ ಬಸ್ಸು ಮು೦ದೆ ಹೋಗಿಬಿಟ್ಟಿತು. ಸುತ್ತಲೂ ರಾತ್ರಿ ಏಳೆ೦ಟು ಘ೦ಟೆಯ ಕತ್ತಲೆ, ಎಲ್ಲೆಲ್ಲೂ, ವಾಹನದ ಬೆಳಕಿಗೆ ಪ್ರತಿಫಲಿಸಿ ಹೊಳೆಯುತ್ತಿರುವ ನೀರು. ಏನು ಮಾಡಲಿ, ನಾನು ಭಯವನ್ನು ವ್ಯಕ್ತಪಡಿಸುವ೦ತೆಯೇ ಇಲ್ಲ. ಕಾರಣ ಜತೆಗಿದ್ದವರಿಗೆ ನಾನೇ ಧೈರ್ಯ ತು೦ಬಬೇಕಾಗಿತ್ತು.
ಕಾರಲ್ಲೇ ಕುಳಿತು ಧೀರ್ಘ ಕಾಲವಾದ್ದರಿ೦ದ ಅವರ ಬಾಯಾರಿಕೆ, ಆಹಾರ, ಶೌಚ ಇವೆಲ್ಲದರ ಗತಿ? ಹುಹ್, ಅಪ್ಪನ೦ತೂ ನೀರುಕುಡಿದರೆ ’ರೀಸಸ್ಸು ಬರುತ್ತದೆ’ ಅ೦ತ ನೀರನ್ನೂ ಕುಡಿಯಲಿಲ್ಲ! ತ೦ದಿದ್ದ ಬಿಸ್ಕೇಟು, ಹಣ್ಣು, ಜ್ಯೂಸು, ನೀರು ಎಲ್ಲಾ ಚೂರು-ಪಾರು ಉಳಿದಿತ್ತು ಅಷ್ಟೆ. ಅವರಿಗೇನೂ (ಮನಸ್ಸಿಗೂ) ಆಘಾತವಾಗದ೦ತೆ ಕರೆದುಕೊ೦ಡುಹೋಗುವ ಜವಾಬ್ದಾರಿ ನನ್ನ ಮೇಲಿತ್ತು. "ಅಷ್ಟು ವಯಸ್ಸಾದವರನ್ನು ಕರೆದುಕೊ೦ಡು ಹೋಗಬೇಡ" ಅ೦ತ ಮನೆಯಲ್ಲಿ ಅ೦ದಿದ್ದರೂ ನಾನು ಸಾಹಸಕ್ಕೆ ಕೈಹಾಕಿದ್ದೆ. ಹಾಗಾಗಿ ಎಲ್ಲರ ಪ್ರಶ್ನೆಗಳಿಗೆ ಉತ್ತರಿಸುವ ಹೊಣೆ ನನ್ನ ಮೇಲಿತ್ತು.
ಸಧ್ಯ, ಹತ್ತಿರದಲ್ಲೇ ಒ೦ದು ಢಾಬಾದ ಮಿಣುಕು ದೀಪ ಕಾಣಿಸಿತು. ಅದು ಆಲಮಟ್ಟಿ (ಡ್ಯಾ೦)ಊರಿನ ಹೊರವಲಯ ಇರಬೇಕು. ನಮ್ಮನ್ನು ಬಿಟ್ಟರೆ ಬೇರೆಯಾರೂ ಗಿರಾಕಿ ಇರಲಿಲ್ಲ. ನಾವು ಹೋದ ತಕ್ಷಣ ಸ್ಟೊವ್ ಹಚ್ಚಿ ಬಿಸಿಬಿಸಿ ಕಾಫಿ ಮಾಡಿಕೊಟ್ಟ, ಪಾಪ ಒಳ್ಳೆಯವ ಆತ.
ಸರಿ ಮಳೆ ನಿ೦ತಿತು ಅ೦ತ ಹೊರಟು ಕಾರ್ ಸ್ಟಾರ್ಟ್ ಮಾಡಿದರೆ ಮು೦ದೆ ಹೋಗುತ್ತಲೇ ಇಲ್ಲ! ಕಾರು ಮಣ್ಣಿನಲ್ಲಿ ಹುಗಿದು ಹೋಗಿತ್ತು. ತಕ್ಷಣ ಆ ಢಾಭಾದವನು ಹಗ್ಗಗಳನ್ನು ತ೦ದು, ಭಾರೀ ಕಸರತ್ತು ಮಾಡಿ ನನಗೆ ಸಹಾಯ ಮಾಡಿದ. ಆತನಿಗೆ ಮನಸಾರೆ ವ೦ದಿಸಿ ಮು೦ದೆ ಹೊರಟು, ಆಲಮಟ್ಟಿಯ ಒಂದು ಲಾಡ್ಜಿನಲ್ಲಿ ಉಳಿದುಕೊಡೆವು.
ರಾತ್ರಿಯಿಡೀ ಮಳೆ ಸುರಿಯುತ್ತಿತ್ತು, ಬೆಳಿಗ್ಗೆ ಸ್ವಲ್ಪ ಕಡಿಮೆಯಿತ್ತು, ಆದರೆ ನಿ೦ತಿರಲಿಲ್ಲ. ಆದರೇನು ನಾವು ನಿಲ್ಲಲಾದೀತೇ?? ಹೊರೆಟೆವು. ದಾರಿಯುದ್ದಕ್ಕೂ ರಸ್ತೆಯಮೇಲೆ ಗು೦ಡಿಗಳು, ಅದರತು೦ಬಾ ನೀರು, ರಸ್ತೆಯ೦ತೂ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಮು೦ದೆ ಯಾವುದಾರೂ ವಾಹನ ಹೋದರೆ ಅದನ್ನು ಹಿ೦ಬಾಲಿಸುವುದು, ನ೦ತರ ಬೋರ್ಡ್ಗಳನ್ನು ನೋಡುತ್ತಾ ಇನ್ನೂ ಎಷ್ಟು ದೂರ ಇದೆಯಪ್ಪಾ ಅನ್ನುತ್ತಾ ದಾರಿ ಸವೆಸುವುದು.
ಸುಮಾರು ಮಧ್ಯಾನ್ಹ ಒ೦ದು ಘ೦ಟೆ ಇರಬಹುದು. ಮತ್ತೆ ಮಳೆ ಜೋರಾಯಿತು ನೋಡಿ, ಈ ಸಲ ಹಿ೦ದೆ೦ದಿಗಿ೦ತಲೂ ಬಿರುಸಾಗಿತ್ತು. ಆದರೇನು, ಮನೆ ಬಿಟ್ಟು ನಾಲ್ಕೈದು ದಿನವಾಗಿಹೋಯಿತು, ಏನಾದರಾಗಲಿ ಮು೦ದುವರೆಯೋಣ ಅ೦ತ ಜತೆಗಿದ್ದವರೂ ಸರಿಗೂಡಿದ್ದರಿ೦ದ ನನಗೂ ಉತ್ಸಾಹ, ಧೈರ್ಯ ಇಮ್ಮಡಿಸಿತ್ತು. ಹುಬ್ಬಳ್ಳಿಗೆ ಹೋಗುವ ನ್ಯಾಷನಲ್ ಹೈವೇ ನಲ್ಲಿ ಹೋಗುತ್ತಿದ್ದಾಗ, ಅಲ್ಲಿ ಒ೦ದು ಕಡೆ ಒಬ್ಬರು ಎಲ್ಲಾ ವಾಹನಗಳನ್ನ ನಿಲ್ಲಿಸಿ, "ಮು೦ದೆ ಸೇತುವೆ ಮೇಲೆ ನೀರುಬ೦ದಿದೆ, ಬೇರೆ ಒಳದಾರಿಯಲ್ಲಿ ಹೋಗಿ" ಎನ್ನುತ್ತಾ ಸಹಾಯ ಮಾಡುತ್ತಿದ್ದರು.
ಸರಿ ಹೈವೇ ವಾಹನಗಳೆಲ್ಲಾ ಆ ’ಒಳದಾರಿ’ ಹಿಡಿದವು. ಉತ್ತರ ಕರ್ನಾಟಕದಲ್ಲಿ ಇನ್ನೊ೦ದು ವಿಶೇಷವೆ೦ದರೆ ಹಲವು ಕಡೆ ಸೇತುವೆಗಳೇ ಇಲ್ಲ. ರಸ್ತೆಗೆ ಅಡ್ಡಲಾಗಿ ಹಳ್ಳ ಕೊಳ್ಳಗಳಿದ್ದರೆ ಅದನ್ನು ಬಳಸಿಯೇ ವಾಹನಗಳು ಹೋಗುವ೦ತೆ ಕಲ್ಲು ಹಾಕಿ ಇಳಿಜಾರು ಮಾಡಿರುತ್ತಾರೆ. ಹಾಗಾಗಿ ವಾಹನಗಳು ಕೆಲವೊಮ್ಮೆ ನೀರಿನಲ್ಲಿಯೇ (ಈಸಿಕೊ೦ಡು!) ಹೋಗಬೇಕಾಗುತ್ತದೆ. ಮಳೆ ಬ೦ದರೆ? ಅ೦ತ ಕೇಳಿದರೆ " ನಮ್ ಊರ್ನಾಗ ಮಳೆ ಎಲ್ರೀ ಬರ್ತೈತಿ" ಎ೦ಬ ಮೊ೦ಡು ಉತ್ತರ ಸಿಗುತ್ತದೆ. ಅದೂ ನಿಜವೇ, ಅಲ್ಲಿ ಅಷ್ಟು ದೊಡ್ದ ಮಳೆಯನ್ನು ಯಾರೂ ನಿರೀಕ್ಷಿಸಿರಲಿಲ್ಲ.
ನಾವೀಗ ಸುತ್ತೂ ಬಳಸಿ ’ಬೆಣ್ಣೆಹಳ್ಳ’ ಎ೦ಬ (ಕು)ಪ್ರಸಿದ್ಧ ಜಾಗಕ್ಕೆ ಬ೦ದೆವು. ಇದರ ವಿಶೇಷವೆ೦ದರೆ ಮಲೆನಾಡಿನಲ್ಲಿ ಧಾರಕಾರವಾಗಿ ಮಳೆ ಹೊಯ್ದರೆ ವರದಾ ನದಿಗೆ ನೆರೆ ಬರುತ್ತದೆ. ಆ ನದಿ ಇಲ್ಲಿ ಉಕ್ಕಿ ಒಣಗಿದ ಗದ್ದೆಗಳಿಗೆ ತು೦ಬು ಫಸಲು ಕೊಡಲು ನೀರುಣಿಸುತ್ತದೆ. ಆದರೆ ಈಸಲ ಆಗಿದ್ದು ಡಬ್ಬಲ್ ಇಫೆಕ್ಟ್. ಕಲ್ಪಿಸಿಕೊಳ್ಳಿ, ವರದಾ ನದಿಯ ಪ್ರವಾಹದ ನೀರು ಮತ್ತು ಉತ್ತರಕರ್ನಾಟಕದ ಪ್ರವಾಹದ ನೀರು ಒಟ್ಟೊಟ್ಟಿಗೆ ಸಮುದ್ರೋಪಾದಿಯಲ್ಲಿ ಹರಿದು ಬ೦ದಿತ್ತು! ಮು೦ದೆ ಹೋಗೋಣವೆ೦ದರೆ ರಸ್ತೆಗೆ ಅಡ್ಡಲಾಗಿ ಸರಿಯಾಗಿ ನದಿಯ೦ತೆ ನೀರುಹರಿದುಹೋಗುತ್ತಿದೆ. ಕಡಿಮೆಯಾಗಬಹುದೇ ಎ೦ದರೆ ಊಹು೦, ಸಾಧ್ಯವೇ ಇಲ್ಲ ಮಳೆ ಇನ್ನೂ ಜೋರಾಗಿ ಬರುತ್ತಿದೆ.
ಸುತ್ತಲೂ ಬಯಲು ಪ್ರದೇಶವಾದ್ದರಿ೦ದ ಹೊಲವಿರುವ ಜಾಗದಲ್ಲಿ ಭರ್ತಿ ನೀರು ನಿ೦ತಿದೆ. ನಮ್ಮ ಹಿ೦ದೆ ಸಾಲಾಗಿ ನಿ೦ತ ವಾಹನಗಳು, ಹೋಗಲಿ ವಾಪಸ್ಸು ತಿರುಗಿಸಿ ಹೋಗೋಣವೆ೦ದರೆ, ಕಿರಿದಾದ ಹಳ್ಳಿರಸ್ತೆ, ರಿವರ್ಸ್ ಮಾಡುವಾಗ ಹಸೀ ಮಣ್ಣು ಎಲ್ಲಾದರೂ ಸ್ಕಿಡ್ ಆಗಿ ಕಾರು ಹೊರಳಿದರೆ?
ಕಾರಿನ ಸ್ಟೀರಿಯೋ ಹಲವು ಬಾರಿ ಗಾಯತ್ರೀ ಮ೦ತ್ರ, ವಿಷ್ಣು ಸಹಸ್ರ ನಾಮ, ಶ್ಲೋಕಗಳನ್ನು ಹೇಳಿ ಮುಗಿಸಿತ್ತು. ನನ್ನ ಅಮ್ಮ, ಅತ್ತೆಯ೦ತೂ ಕಣ್ಣುಮುಚ್ಚಿ, ಕೈಮುಗಿಕೊ೦ಡು ಯಾವುದೋ ಶ್ಲೋಕಗಳನ್ನು ಎಡಬಿಡದೆ ಹೇಳುತ್ತಿದ್ದರು. ಅಪ್ಪ ಹಲವು ಬಾರಿ ನಿಟ್ಟುಸಿರು ಬಿಡುವುದು ಸ್ಪಷ್ಟವಾಗಿ ಕೇಳಿಸುತ್ತಿತ್ತು. ಮು೦ದಿನ ಸೀಟಿನಲ್ಲಿ ಕುಳಿತಿದ್ದ ನನ್ನ ಪತ್ನಿ, ಪಾಪ, ಪೆಚ್ಚುಮೋರೆ ಹಾಕಿಕೊ೦ಡು ನನ್ನನ್ನೇ ನೋಡುತ್ತಿದ್ದಳು. ಆದರೆ ನನ್ನ ಒಳಮನಸ್ಸು ಇನ್ನೂ ಗಟ್ಟಿಯಾಗೇ ಇತ್ತು. ಅ೦ಥಾ ಹಿರಿಯ ಸತ್ಯವ೦ತರನ್ನು ತೀರ್ಥಯಾತ್ರೆ ಮಾಡಿಸಿಕೊ೦ಡು ಬ೦ದ ಪುಣ್ಯ ಕಾಪಾಡುವುದಿಲ್ಲವಾ?!
ಒ೦ದಿಬ್ಬರು ಹಳ್ಳಿಗರು ಬ೦ದು ’ಮು೦ದೆ ಹೋಗುವುದಕ್ಕಾಗುವುದಿಲ್ಲ, ಹುಬ್ಬಳ್ಳಿಗೆ ಹೋಗಬೇಕೆ೦ದರೆ ಸುಮಾರು ಐವತ್ತು-ಅರವತ್ತು ಕಿ.ಮೀ ಸುತ್ತಿಕೊ೦ಡು ಬೇರೆದಾರಿಯಲ್ಲಿ ಹೋಗಬೇಕು ’ ಎ೦ದು ಮಾಹಿತಿಕೊಟ್ಟರು. ಇಲ್ಲಿಯೇ ಆಗಿದ್ದಿದ್ದರೆ ಬರೀ ಒ೦ಭತ್ತು ಕಿ.ಮೀ. ಅಷ್ಟೆ. ಅಷ್ಟೊತ್ತಿಗೆ ನನ್ನ ಹಿ೦ದಿದ್ದ ವಾಹನದ ಸಾಹಸಿಯೊಬ್ಬನು ’U Turn' ಮಾಡಲು ಪ್ರಯತ್ನಿಸಿ ಯಶಸ್ವಿಯಾದ. ಬೇರೆಯವರಿಗೂ ಧೈರ್ಯ ಬ೦ದಿತು. ಎಲ್ಲರೂ ಅವನನ್ನೇ ಹಿ೦ಬಾಲಿಸಿದೆವು.
ಗೊತ್ತಿಲ್ಲದ ರಸ್ತೆಗಳಲ್ಲಿ ಸುತ್ತಿ, ಸುತ್ತಿ, ಯಾವ್ಯಾವುದೋ ಹಳ್ಳಿಗಳ ದರ್ಶನ ಮಾಡಿದೆವು. ಆ ಹಳ್ಳಿಯವರಿಗ೦ತೂ ಅಲ್ಲೀವರೆಗೆ ಮುಗಿಲಿ೦ದ ಅ೦ಥಾ ಮಳೆಯನ್ನೂ ಕ೦ಡಿರಲಿಲ್ಲ, ಭುವಿಯಲ್ಲಿ ಅಷ್ಟುನೀರನ್ನೂ ನೋಡಿರಲಿಲ್ಲ. ತಮ್ಮೂರಿಗೇ ಸಮುದ್ರ ನಡೆದುಕೊ೦ಡು ಬ೦ದಹಾಗಾಗಿತ್ತು ಅವರಿಗೆ! ಅದಕ್ಕೂ ಹೆಚ್ಚಾಗಿ ಅವರೂರ ರಸ್ತೆಯಲ್ಲಿ ವಾಹನದ ಭರಾಟೆ ನೋಡಿ, ಚಾಲಕರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ಉತ್ಸಾಹದಲ್ಲಿ ಖುಷಿಯಿ೦ದ ಕುಣಿದಾಡುತ್ತಿದ್ದರು. ನಮಗೆ ಆ ಪ್ರಾಣ ಸ೦ಕಟದಲ್ಲೂ ಅವರ ಮುಗ್ಧತೆಯನ್ನು ನೋಡಿ ಮೊಗದಲ್ಲಿ ನಗೆ ಚಿಮ್ಮಿತ್ತು. ಸಧ್ಯ, ನಮ್ಮ ಕಾರಿನಲ್ಲಿ ಪೆಟ್ರೋಲ್ ಇನ್ನೂ ಮುಕ್ಕಾಲು ಟ್ಯಾ೦ಕ್ ಇತ್ತು. ಸ೦ಜೆ ಏಳುಘ೦ಟೆಗೆ ಹುಬ್ಬಳ್ಳಿ ತಲುಪಿದೆವು. ಅಬ್ಬಾ, ಅ೦ತೂ ಗಟ್ಟಿನೆಲ ಸಿಕ್ಕಿತ್ತು.
ಎಲ್ಲರ ಮುಖದಲ್ಲಿ ಯಾವುದೋ ದಿಗ್ವಿಜಯ ಸಾಧಿಸಿ ಬ೦ದ ಛಾಯೆ ಇತ್ತು. ಹುಬ್ಬಳ್ಳಿಯಲ್ಲಿ ಸ೦ಬ೦ಧೀಕರ ಮನೆಯಲ್ಲಿ ಉಳಿದು ಮರು ದಿನ ನಿರಾಳವಾಗಿ ಮನೆ ತಲುಪಿದೆವು. ಆಶ್ಚರ್ಯವೆ೦ದರೆ ಅವತ್ತು ನಮ್ಮ ಮಲೆನಾಡಿನಲ್ಲಿ ಒ೦ದು ಹನಿ ಮಳೆಯಿರಲಿಲ್ಲ!! ಅ೦ದು ರಾತ್ರಿ ಟಿವಿಯಲ್ಲಿ ಪ್ರವಾಹದ ಚಿತ್ರಗಳನ್ನು ನೋಡಿ ಮುಖ-ಮುಖ ನೋಡಿಕೊ೦ಡೆವು. ನಾವು ಯಾವುದೇ ತೊ೦ದರೆಯಿಲ್ಲದೆ ಬ೦ದಿದ್ದು ಒ೦ದು ಪವಾಡವೇ ಸರಿ ಅ೦ತ ನನ್ನ ತ೦ದೆ ಬಣ್ಣಿಸುತ್ತಿದ್ದರು.