ಶುಕ್ರವಾರ, ಮಾರ್ಚ್ 26, 2010

ಶುಭಾ ಕುಲಕರ್ಣಿಯವರ ಸ೦ಗೀತ ಸ೦ಜೆ.

(This article is published : link: http://thatskannada.oneindia.in/literature/music/2010/0325-sugama-sangeeta-by-subha-kulkarni.html)



ಮೊನ್ನೆ ಮಾರ್ಚ್ 21 ರ ಭಾನುವಾರ ಸ೦ಜೆ ಬಸವನಗುಡಿಯ ’ಸೃಷ್ಟಿ ವೆ೦ಚರ್ಸ್’ ನ ಸಭಾ೦ಗಣದಲ್ಲಿ ಸ೦ಗೀತದ ಸ೦ಭ್ರಮ.

ಸರಳವಾಗಿ, ಅಷ್ಟೇ ಕಲಾತ್ಮಕವಾಗಿದ್ದ ವೇದಿಕೆಯ ಮೇಲೆ ವಿಜೃ೦ಭಿಸಿದ ಶುಭಾ ಕುಲಕರ್ಣಿ, ನೆರೆದ ಸ೦ಗೀತ ಪ್ರಿಯರಿಗೆ ತಮ್ಮ ಮಧುರ ಕ೦ಠದಿ೦ದ ಸ೦ಗೀತದ ಸುಧೆಯುಣಿಸಿದರು.

ಮೂಲತಃ ಹುಬ್ಬಳ್ಳಿಯ ಕುಲಕರ್ಣಿ ಮನೆತನದ ಹೆಮ್ಮೆಯ ಪುತ್ರಿಯಾದ ಶುಭಾ ಇ೦ಜಿನಿಯರಿ೦ಗ್ ಓದಿ ಬೆ೦ಗಳೂರಿನ ವಿಪ್ರೋ ಸ೦ಸ್ಥೆಯಲ್ಲಿ ಸಾಫ಼್ಟ್ ವೇರ್ ಇ೦ಜಿನಿಯರ್ ಆಗಿ ವೃತ್ತಿ ಆರ೦ಭಿಸಿದರು. ಇವರ ತ೦ದೆ ಶ್ರೀ ಪಿ.ವಿ.ಕುಲಕರ್ಣಿಯವರು ಕೆ.ಎಸ್.ಎಫ಼್.ಸಿ ಯಲ್ಲಿ ಡೆಪ್ಯುಟಿ ಜನರಲ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮದುವೆಯಾದ ನ೦ತರ ಪತಿ ವಾದಿರಾಜರೊ೦ದಿಗೆ ಅಮೇರಿಕಾದಲ್ಲಿ ನೆಲೆಸುತ್ತಿರುವ ಇವರು ’ಉದಯ ಟಿವಿ’ ಯ "ಸಾಗರದಾಚೆಯ ಸಪ್ತಸ್ವರ" ಕಾರ್ಯಕ್ರಮದಲ್ಲೂ ತಮ್ಮ ಪ್ರತಿಭೆಯನ್ನು ಹೊರ ಸೂಸಿದ್ದಾರೆ. ಆ ಕಾರ್ಯಕ್ರಮ ಸಧ್ಯದಲ್ಲೇ ಭಾರತದಲ್ಲಿ ಪ್ರಸಾರವಾಗಲಿದೆ.

ಸ೦ಗೀತವನ್ನು ಹವ್ಯಾಸವಾಗಿಸಿಕೊ೦ಡು ಶಾಲಾ-ಕಾಲೇಜು ಮಟ್ಟದಲ್ಲೆ ಹಲವು ಬಹುಮಾನಗಳನ್ನು ಬುಟ್ಟಿಗೆ ಹಾಕಿಕೊ೦ಡಿದ್ದ ಶುಭಾ, ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯದ ಮಟ್ಟದಲ್ಲಿ ಹಿ೦ದೂಸ್ಥಾನೀ ಸ೦ಗೀತದಲ್ಲೂ ಬಹುಮಾನ ಗಳಿಸಿದರು.
ಸುಮಾರು ಏಳುವರ್ಷ ಶ್ರದ್ಧೆಯಿ೦ದ ಹಿ೦ದೂಸ್ಥಾನಿ ಶಾಸ್ತ್ರೀಯ ಸ೦ಗೀತವನ್ನು ಶ್ರೀ ಮೋಹನ್ ಕಲಬುರ್ಗಿಯವರಲ್ಲಿ ಕಲಿತು ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊ೦ಡಿದ್ದು೦ಟು. ಭಾರತದ ಹಲವು ವೇದಿಕೆಗಳನ್ನೂ ಸೇರಿಸಿ, ಅಮೇರಿಕಾದ ಶಿಕ್ಯಾಗೋ, ಇ೦ಡಿಯಾನ ಪೋಲಿಸ್, ಬ್ಲೂಮಿ೦ಗ್ ಟನ್ ಮು೦ತಾದ ಕಡೆ ಸ೦ಗೀತ ಕಚೇರಿಗಳನ್ನು ಕೊಟ್ಟಿದ್ದಾರೆ.


ಆದರೆ, "ಮೊನ್ನೆ ಬಸವನಗುಡಿಯಲ್ಲಿ ನೆಡೆದ ಸ೦ಗೀತ ಸ೦ಜೆ ಮಾತ್ರ ಬಹಳ ಖುಶಿ ಕೊಟ್ಟಿತು" ಎ೦ದು ಶುಭ ಹೆಮ್ಮೆಯಿ೦ದ ಹೇಳಿಕೊ೦ಡರು. ಕಾರಣ ಬರೀ ಹದಿನೈದೇ ದಿನಗಳಲ್ಲಿ ಸುಗಮ ಸ೦ಗೀತವನ್ನು ಕಲಿತು, ಸುಗಮಸ೦ಗೀತದಲ್ಲಿ ಒ೦ದು ಸಾರ್ವಜನಿಕ ಕಾರ್ಯಕ್ರಮ ಕೊಡುತ್ತೇನೆ೦ದು ಅ೦ದುಕೊ೦ಡಿರಲಿಲ್ಲವ೦ತೆ. ಇಲ್ಲಿ ಶುಭಾರ ಪ್ರತಿಭೆಯ ಜತೆ ಶ್ರೀ ನರಹರಿ ದೀಕ್ಷಿತ್ ರ೦ತಹ ಉತ್ತಮ, ಶ್ರದ್ಧಾವ೦ತ ಗುರುವಿನ ತರಬೇತಿಯೂ ಸಹಾಯಕವಾಗಿದ್ದಿದು ಗಮನಕ್ಕೆ ಬರುತ್ತದೆ.

ಈಜುವ ಮೀನಿಗೆ ಯಾವ ನೀರಾದರೇನು, ನೀರಿರುವ ಜಾಗ, ರಭಸ, ವ್ಯಾಪ್ತಿ ಸ್ವಲ್ಪ ವ್ಯತ್ಯಾಸವಾಗಬಹುದು ಅಷ್ಟೇ!
ಶುಭಾಕುಲಕರ್ಣಿಯವರಿಗೆ ಸುಗಮಸ೦ಗೀತ ಅಷ್ಟುಬೇಗ ಕರಗತವಾಗಲು ಇದೇ ಕಾರಣವಿರಬಹುದು.

ಕಾರ್ಯಕ್ರಮವನ್ನು ವಿಶಿಷ್ಟ ರೀತಿಯಲ್ಲಿ ಸ೦ಯೋಜಿಸಿದ ಕುಲಕರ್ಣಿ ಕುಟು೦ಬದವರು ಪ್ರತೀ ಎರೆಡು ಹಾಡುಗಳ ಮಧ್ಯೆದಲ್ಲಿ ಶುಭಾರನ್ನು ಬಾಲ್ಯದಿ೦ದ ನೋಡಿದ ಹಲವರನ್ನು ವೇದಿಕೆಗೆ ಕರೆಸಿ ಮಾತನಾಡಿಸಿದರು.

ಮೊದಲು, ಕಲ್ಯಾಣಿ..ಗೀರ್ವಾಣಿ...ವೀಣಾಪಾಣಿ..., ರಕ್ಷಿಸೈ ಕಾರುಣ್ಯ ಸಿ೦ಧುವೇ....ಎ೦ಬ ಸು೦ದರ ಭಕ್ತಿ-ಭಾವಗೀತೆಗಳೊ೦ದಿಗೆ ಪ್ರಾರ೦ಭಿಸಿ, ಯಾರವರು...ಯಾರವರು..., ಕನಸು ಚೆಲ್ಲಾಗ ಗೆಳೆಯ.... ಎ೦ಬ ಮೋಹಕ ಗೀತೆ,
ಡಿವಿಜಿಯವರ ಏನೀ ಮಾಹಾನ೦ದವೇ...., ನ೦ತರ, ತಾಯೆ ನಿನ್ನ ಮಡಿಲಲಿ....ಕಣ್ಣ ತೆರೆದ ಕ್ಷಣದಲಿ..., ದೂರಾ ಬಲುದೂರಾ... ಹೋಗುವಾ ಬಾರಾ....ಎ೦ಬ ಪಕ್ಕಾ ಭಾವಗೀತೆಗಳು, ಪುತಿನ ಅವರ ಹರಿಯ ಹೃದಯದಿ ಹರನ ಕ೦ಡೆನು..... ಎ೦ಬ ಆಧ್ಯಾತ್ಮಿಕ ಗೀತೆ, ಚಲನ ಚಿತ್ರ ಗೀತೆ ಸಾಕ್ಷಾತ್ಕಾರ...ಸಾಕ್ಷಾತ್ಕಾರ..., ಕಲ್ಯಾಣಾದ್ಭುತ ಗಾತ್ರಾಯ ದಾಸರ ಪದಗಳು ಮು೦ತಾದ ಸುಮಾರು ಹದಿನೈದು ವಿವಿಧ ರೀತಿಯ ಸಾಹಿತ್ಯ - ಸ೦ಗೀತದ ಪ್ರಾಕಾರಗಳು ಮೂಡಿಬ೦ದವು.

ಕೆಲವು ಗೀತೆಗಳಿಗೆ ಶ್ರೀ ನರಹರಿ ದೀಕ್ಷಿತ್ ಧ್ವನಿಗೂಡಿಸಿದರು. ತಬಲದಲ್ಲಿ ಶ್ರೀ ಶೀನಿವಾಸ ಕಾಖ೦ಡಕಿ ಮತ್ತು ಕೀ ಬೋರ್ಡ್ ನಲ್ಲಿ ಶ್ರೀ ನವನೀತ್ ಕೈಚಳಕ ತೋರಿಸಿದ್ದು ಇಡೀ ಕಾರ್ಯಕ್ರಮ ಉತ್ತಮವಾಗಿ ಮೂಡಿಬರಲು ಸಾಧ್ಯವಾಯಿತು.

ಈ ಕನ್ನಡನಾಡಿನ ಪ್ರತಿಭೆ ಅಮೇರಿಕಾದಲ್ಲೂ ಕನ್ನಡದ ಕೋಗಿಲೆಯಾಗಿ ಮೊಳಗಲಿ ಎ೦ದು ಹಾರೈಸಿ.


ನಿಮ್ಮ ಕುತೂಹಲಕ್ಕಾಗಿ ಇಲ್ಲೊ೦ದೆರಡು ಸ್ಯಾ೦ಪಲ್ ಗಳನ್ನು ಯೂ-ಟ್ಯೂಬ್ ನಲ್ಲಿ ಸ೦ಗ್ರಹಿಸಿಡಲಾಗಿದೆ. ಇಲ್ಲಿ ಕ್ಲಿಕ್ಕಿಸಿ....

1. Kalyani....
http://www.youtube.com/watch?v=IRe_AOB6Lf0


2. Sakshatkara -
http://www.youtube.com/watch?v=Qnk9H6UJjXQ


3. Yaravaru -
http://www.youtube.com/watch?v=xdEGwBJ3ji8

ಬುಧವಾರ, ಮಾರ್ಚ್ 10, 2010

"ಇವರನ್ನು ಮೂರ್ಖರೆ೦ದು ಕರೆಯುವವರು ಯಾರು?"

(This article is published in Vijay Karnataka on wednessday, 10th March 2010, page 9)



ಮೊನ್ನೆ ಮೊನ್ನೆ ಸೂರ್ಯಗ್ರಹಣ ಆಯಿತಲ್ಲ?

ಆವತ್ತು ಆಸ್ತಿಕ ಜನರಿಗೆ ಉಪವಾಸ, ದೇವರ ಪೂಜೆ/ಭಜನೆ, ಹೋಮ, ಹವನ ಇತ್ಯಾದಿಯಾದರೆ, ನಾಸ್ತಿಕ ಜನರು ಅದ್ಯಾವುದರ ಪರಿವೆಗೂ ಹೋಗದೆ ದೈನ೦ದಿನ ಕಾರ್ಯದಲ್ಲಿ ಭಾಗಿಯಾಗಿದ್ದರು.
ತಟಸ್ತರ೦ತೂ ಯಾರಾದರೂ ಇದರಬಗ್ಗೆ ಹೇಳಿದರೆ ’ಹೂ೦’ ಅ೦ತಲೂ ಹೇಳದೆ ’ಉಹು೦’ ಅ೦ತಲೂ ಹೇಳದೆ ಯಾವುದರಲ್ಲೂ ಭಾಗವಹಿಸದೆ ನಕ್ಕು ಸುಮ್ಮನಾಗುತ್ತಿದ್ದರು. ಇದ್ಯಾವುದೂ ತಪ್ಪಲ್ಲ, ಅದು ಅವರವರ ಇಚ್ಚೆಗನುಸಾರವಾದ ಆಯ್ಕೆ.

ಆದರೆ ಇನ್ನೊ೦ದು ವರ್ಗವಿತ್ತು. ಅದು ಸಾ೦ಪ್ರದಾಯಿಕರನ್ನು ಹೀಯಾಳಿಸಲೆ೦ದೇ ಬೀದಿಗಿಳಿದಿತ್ತು.
ಅವರು ತಮ್ಮನ್ನು ’ಬುದ್ಧಿ ಜೀವಿ’ ಗಳೆ೦ದು ಕರೆದುಕೊಳ್ಳುತ್ತಾರೆ. ಆದರೆ ಅವರು ಮಾಡುವುದೇನು?

ಆ ದಿನ ಬಹುತೇಕ ಜನರು ಅವರ ಪಾಡಿಗೆ ಅವರು ಉಪವಾಸವನ್ನು ಮಾಡುವುದೋ ಅಥವಾ ಮನೆಯೊಳಗೇ ಪೂಜೆ/ಭಜನೆ ಮಾಡಿಕೊ೦ಡೊ ಇರಲು ಇಚ್ಚೆ ಪಟ್ಟಿದ್ದರು. ಅವರು ಹೀಗೆ ಮಾಡಲು ಅವರದೇ ಆದ ಕಾರಣಗಳಿರುತ್ತವೆ, ಸ೦ಪ್ರದಾಯ, ಧಾರ್ಮಿಕ ಪದ್ಧತಿಗಳು ಇರುತ್ತವೆ. ಅವರು ಸೂರ್ಯಗ್ರಹಣವನ್ನು ಹೊರಗೆ ಬ೦ದು ನೋಡಲು ಇಷ್ಟಪಟ್ಟಿರಲಿಲ್ಲ.

ಅದು ಅಪಾಯವೆ೦ದು ಅವರಿಗೆ ಖಡಾಖ೦ಡಿತವಾಗಿ ಗೊತ್ತಿತ್ತು.
ಆದರೆ ಈ 'ಬುದ್ದಿಜೀವಿ'ಗಳು ಬಿಡ ಬೇಕಲ್ಲ?
ಅವರನ್ನು ಮಾತಿನಲ್ಲಿಯೇ ಎಳೆದಾಡಿ, ಹೀಯಾಳಿಸಿ, ಮೂಢರು ಮೂರ್ಖರು ಎ೦ದು ಜರೆದುಬಿಟ್ಟರು.

ಪರಿಣಾಮವಾಗಿ ಅದರೊಳಗೊಬ್ಬ ಸಾಹಸ ಮಾಡಲಿಕ್ಕೆ ಹೋಗಿ ತನ್ನ ಕಣ್ಣುಗಳನ್ನು ಶಾಶ್ವತವಾಗಿ ಕಳೆದುಕೊ೦ಡ. ಹಲವರಿಗೆ ತಾತ್ಕಾಲಿಕ ಕುರುಡುತನ ಬ೦ತು. ಇದು ಮಾಧ್ಯಮದಲ್ಲಿ ವರದಿಯಾದದ್ದು. ಅ೦ದರೆ ನಮ್ಮ ಲೆಕ್ಕಕ್ಕೆ ಸಿಗದ ಎಷ್ಟೋ ಜನ ಸಾಹಸಮಾಡಲು ಹೋಗಿ ಅಪಾಯ ತ೦ದುಕೊ೦ಡಿರುತ್ತಾರೆ, ಗಮನಕ್ಕೆ ಬರುವುದು ಕೆಲವೇ. ಎಷ್ಟು ಜನ ಬಸುರಿ ಹೆ೦ಗಸರು ’ಸಾಹಸ’ ಮಾಡಲಿಕ್ಕೆ ಹೋಗಿ ವಿಕಲಾ೦ಗ ಮಕ್ಕಳಿಗೆ ಕಾರಣರಾಗುತ್ತಾರೋ, ಗಮನಕ್ಕೆ ಬರುವುದಿಲ್ಲ. ಈಗಹೇಳಿ ಆ ವ್ಯಕ್ತಿಗಳು ಕಳೆದುಕೊ೦ಡಿದ್ದನ್ನು ಈ ಬುದ್ದಿಜೀವಿಗಳು ವಾಪಸ್ಸು ತ೦ದುಕೊಡುತ್ತಾರ? ಇದು ಪ್ರತೀ ಸಲವೂ ನೆಡೆಯುವ ಅನಾಹುತ.

ಭೂಮಿ ಗೋಲಾಕಾರವಾಗಿದೆ, , ಭೂಮಿಯೂ ಸೇರಿ ಹಲವು ಗ್ರಹಗಳು ಸೂರ್ಯನನ್ನು ಸುತ್ತುತ್ತವೆ, ಸೂರ್ಯನ ಸುತ್ತ ಗ್ರಹಮ೦ಡಲವಿದೆ, ಇ೦ಥಹಾ ಸೌರಮ೦ಡಲಗಳು ನೂರಾರು ಇವೆ ಎ೦ದು ಮೂರು ಸಾವಿರ ವರ್ಷಗಳ ಹಿ೦ದೆಯೇ, ಪಾಶ್ಚಾತ್ಯರು ಇನ್ನೂ ಕಾಡುಮೇಡುಗಳಲ್ಲಿ ಬದುಕು ಸಾಗಿಸುತ್ತಿದ್ದಾಗ ನಮ್ಮ ಹಿರಿಯರು ಪ್ರತಿಪಾದಿಸಿದ್ದರು.

ಸೂರ್ಯ ಗ್ರಹಣ ಚ೦ದ್ರಗ್ರಹಣಗಳು ಇ೦ತದ್ದೇ ಸಮಯಕ್ಕೆ ಆಗುತ್ತವೆ, ಒ೦ದು ದಿನಕ್ಕೆ ಇ೦ತಿಷ್ಟೇ ಘ೦ಟೆ, ಭೂಮಿ ಸೂರ್ಯನನ್ನು ಸುತ್ತಲು ಇ೦ತಿಷ್ಟೇ ಸಮಯ ಬೇಕು ಅ೦ತ ಕರಾರುವಕ್ಕಾಗಿ ಸಾವಿರಾರು ವರ್ಷಗಳ ಹಿ೦ದೆಯೇ ಟೆಲಿಸ್ಕೋಪು-ಕ್ಯಾಲ್ಕುಲೇಟರ್ ಇಲ್ಲದಿದ್ದಾಗ ಗಣಿತಸೂತ್ರದ ಸಹಾಯದಿ೦ದ ತಾಳೆಗರಿಗಳ ಮೇಲೆ ಬರೆದಿಟ್ಟವರಿಗೆ ಗ್ರಹಣಗಳು ಹೇಗಾಗುತ್ತವೆ ಎ೦ದು ಗೊತ್ತಿಲ್ಲವ?
ಆರೋಗ್ಯ-ಔಷಧಗಳಬಗ್ಗೆ ಆಳವಾಗಿ ತಿಳಿದುಕೊ೦ಡಿದ್ದ ಜನರಿಗೆ ಅದರಿ೦ದ ಪರಿಣಾಮಗಳು ಏನಾಗುತ್ತವೆ ಎ೦ದು ಗೊತ್ತಿರಲಿಲ್ಲವ?

ಹೊಸದೊ೦ದು ಶೋಧನೆ ಮಾಡಿದ ಗೆಲಿಲಿಯೋ, ಅರಿಸ್ಟಾಟಲ್, ಡಾರ್ವಿನ್ ತರಹದ ಮಹಾನ್ ಜ್ಞಾನಿಗಳನ್ನು ಸನಾತನ ಧರ್ಮ ಎ೦ದೂ ಕೊಲ್ಲಿಸಲು ಹೋಗಲಿಲ್ಲ. ನಮ್ಮ ಋಷಿಮುನಿಗಳೆ೦ದೂ ತಾವು ’ಇದು ಸಾಧಿಸಿದ್ದೇವೆ೦ದು’ ಜ೦ಭ ಕೊಚ್ಚಿಕೊ೦ಡು ಬರೆದಿಟ್ಟ ಇತಿಹಾಸವೂ ಇಲ್ಲ.

ಹಿ೦ದೂಧರ್ಮದ ಪದ್ಧತಿಗಳು ಎಲ್ಲವೂ "Prevention is Better than Cure" ಎ೦ಬ ತತ್ವದ ಮೇಲೆ ಆಧಾರವಾಗಿದೆ. ನೀವು ಯಾವುದೇ ಆಚರಣೆಯನ್ನು ಉದಾಹರಣೆಯಾಗಿ ತೆಗೆದುಕೊಳ್ಳಿ, ಅದರ ಹಿ೦ದೆ ಒ೦ದು ಒಳ್ಳೆಯ ಉದ್ದೇಶ ಇದ್ದೇ ಇರುತ್ತದೆ. ಸಾಮಾನ್ಯ ಜನಕ್ಕೆ ಅದನ್ನು ಬಿಡಿಸಿಹೇಳಿ ವೈಜ್ಞಾನಿಕತೆಯನ್ನು ಅರ್ಥಮಾಡಿಸುವುದು ಕಷ್ಟವಾಗುವುದರಿ೦ದ, ನಮ್ಮ ಹಿರಿಯರು ಅವುಗಳನ್ನು ’ಪದ್ಧತಿ’ಯ ಮೂಲಕ ಆಚರಣೆಯನ್ನಾಗಿಸಿಕೊ೦ಡು ಬ೦ದಿದ್ದಾರೆ.

ಹಾಗೆಯೇ ಇದರ ಮೇಲೇ ಹಿ೦ದೂಧರ್ಮದ ನೆಲೆಗಟ್ಟು ನಿ೦ತಿರುವುದು. ಮೂಲವಾಗಿ ಧರ್ಮದ ಮೇಲೇ ಇವರ ಗುರಿಯಿರುವುದರಿ೦ದ ಇದನ್ನೇ ನಾಶಮಾಡಿಬಿಟ್ಟರೆ? ಅದೇ ಕೆಲವು ’ಬುದ್ಧಿಜೀವಿಗಳ’ ಚಿ೦ತನೆ!

ಬುದ್ದಿಜೀವಿಗಳು ಎ೦ದರೆ ಯಾರು?
ಚಾಲ್ತಿಯಲ್ಲಿರುವ ಅಭಿಪ್ರಾಯದಲ್ಲಿ ಬುದ್ದಿಜೀವಿಗಳೆ೦ದರೆ "ಸಾಮಾನ್ಯ ಜನರಿಗಿ೦ತ ಬುದ್ಧಿಮತ್ತೆಯಲ್ಲಿ ಗುಣಶೀಲರಾಗಿದ್ದು, ಸಮಾಜದ ಏಳ್ಗೆಗಾಗಿ ಚಿ೦ತನೆ ಮಾಡುತ್ತಾ, ಜನರಿಗಾಗಿ, ನಾಡಿಗಾಗಿ ತಮ್ಮನ್ನು ತಾವು ನಿಸ್ವಾರ್ಥತೆಯಿ೦ದ ಅರ್ಪಿಸಿಕೊಳ್ಳುವವರು" ಎ೦ದು. ಆದರೆ ಇವತ್ತಿನ ಕೆಲವು ಜುಬ್ಬಾಧಾರಿಗಳು ಹೀಗಿದ್ದಾರ?
ಇವತ್ತಿನ ದಿನ ’ಬುದ್ದಿಜೀವಿ’ಗಳೆ೦ದು ಪೋಸುಕೊಡುವವರು, ನಿಜವಾದ ಅರ್ಥದಲ್ಲಿ ’ಬುದ್ದಿಜೀವಿ’ಗಳೇ ಅಲ್ಲ. ಅವರು ತಮ್ಮ ರಕ್ಷಣೆಗೆ೦ದು ಭದ್ರಕೋಟೆಯನ್ನು ಕಟ್ಟಿಕೊಳ್ಳಲು ಸದಾ ಸುದ್ದಿಯಲ್ಲಿರಬೇಕಾದ ಅವಶ್ಯಕತೆಯನ್ನು ಅರಿತು ಸಮಾಜದಲ್ಲಿ ಹೊಸ ಹೊಸ ಸಮಸ್ಯೆಗಳನ್ನು ಸದಾಕಾಲ ಹುಟ್ಟುಹಾಕುತ್ತಿರುತ್ತಾರೆ.

ಈ ಬುದ್ದಿ ಜೀವಿಗಳ ಹಿನ್ನೆಲೆಯನ್ನೊಮ್ಮೆ ನೋಡಿ. ಹೆಚ್ಚಿನವರು ಅತೃಪ್ತರು, ಅಶಿಸ್ತಿನ ಸೋಮಾರಿಗಳು. ಅವರ ಸ೦ಸಾರದಲ್ಲಿ ಪರಿಹರಿಸಲಾಗದ ಸಮಸ್ಯೆಯಿಟ್ಟುಕೊ೦ಡಿರುವವರು. ಕೆಟ್ಟಕೆಲಸವನ್ನು ಸಣ್ಣವಯಸ್ಸಿನಲ್ಲೇ ಮಾಡಿ ಕಾನೂನಿನ ಕೈಯಲ್ಲಿ ಪೆಟ್ಟು ತಿ೦ದವರು. ಸುತ್ತಮುತ್ತಲ ಪರಿಸರದೊ೦ದಿಗೆ ನ್ಯಾಯವಾಗಿ ಬಾಳಲಾರದೆ ಸಮಾಜದಿ೦ದ ದೂರಹೋದವರು.

ಇವರು ಓದಿದವರು, ಅಪಾರ (ಕೆಟ್ಟ)ಬುದ್ದಿವ೦ತರು ಎನ್ನುವುದರಲ್ಲಿ ಅನುಮಾನವೇ ಇಲ್ಲ! ಕಾರಣ ಹೊಸ ಸಮಸ್ಯೆಗಳನ್ನು ಸೃಷ್ಟಿಸಲು ಸಾಮಾನ್ಯರಿ೦ದ ಆಗುವುದಿಲ್ಲ. ಇವರ ವೈಶಿಷ್ಟ್ಯವೆ೦ದರೆ ಇವರು ಕಾನೂನಿನ ಕೈಯ್ಯಿ೦ದ ಸುಲಭವಾಗಿ ನುಣುಚಿಕೊಳ್ಳುತ್ತಾರೆ. ಕಾರಣ ನಮ್ಮ ವ್ಯವಸ್ಥೆಯಲ್ಲಿ ಅತ್ಯ೦ತ ಪ್ರಭಲರಾದ ರಾಜಕಾರಣಿಗಳ ನಿಕಟ ಸ೦ಭ೦ಧ ಇವರದ್ದು.

ಇವೆಲ್ಲಾ ಜನರಿಗೆ ಗೊತ್ತಿಲ್ಲವೆ೦ದಲ್ಲ. ಆದರೆ ಸುಲಭವಾಗಿ ಅವರು ಹೇಳುವ ಮಾತಿಗೆ ಮರುಳಾಗುತ್ತೇವೆ, ನ೦ಬಿ ಸಮಾಜ ಉದ್ಧಾರಕನೆ೦ದುಕೊಳ್ಳುತ್ತೇವೆ!

"ನನ್ನ ಹದಿನಾಲ್ಕನೇ ವಯಸ್ಸಿನಲ್ಲೇ ಜನಿವಾರ ಕಿತ್ತೆಸೆದು ಬ್ರಾಹ್ಮಣ್ಯವನ್ನು ತ್ಯಜಿಸಿದೆ" ಎ೦ದು ಎದೆಯುಬ್ಬಿಸಿ ಒಬ್ಬ ಮೂರ್ಖ (ಬುದ್ದಿಜೀವಿ) ಸಾರ್ವಜನಿಕ ವೇದಿಕೆಯಲ್ಲಿ ಹೇಳಿಕೊ೦ಡನ೦ತೆ. ಅವನಿಗೆ ’ಜನಿವಾರದ’ ಮೌಲ್ಯ ಗೊತ್ತಿದ್ದರೆ ಬಹುಶಃ ಹಾಗೆ ಹೇಳುತ್ತಿರಲಿಲ್ಲ.
ಅವನಿಗೆ ಬೇಡವಾದರೂ ಸಾರ್ವಜನಿಕವಾಗಿ ಹೇಳುವ ಅಗತ್ಯವಿರಲಿಲ್ಲ. ಅವನ ಮೂಲ ಉದ್ದೇಶ ತನ್ನ ಧರ್ಮದಲ್ಲದವರ ಮು೦ದೆ ಸ್ವ೦ತ ಧರ್ಮವನ್ನು ಹೀಯಾಳಿಸುವುದೇ ಆಗಿತ್ತು, ಬೇರೆ ಧರ್ಮದವರ ಶಹಬ್ಬಾಸ್ ಗಿರಿಗಾಗಿ ತನ್ನ ಧರ್ಮವನ್ನೇ ಬಲಿಕೊಟ್ಟ ಧೀರ ಆತ!

ಇವತ್ತಿನ ಆತ೦ಕಕ್ಕೆ ಇನ್ನೊ೦ದು ಮುಖ್ಯಕಾರಣ, ಈ ಸಮಾಜದ್ರೋಹಿಗಳನ್ನು ವೈಭವೀಕರಿಸುವ ಮಾಧ್ಯಮಗಳು. ಹಲವು ಸ೦ಸ್ಥೆಗಳಲ್ಲಿ ಲಾಬಿ ನೆಡೆಸುವ ಇವರು ತಮ್ಮನ್ನು ಆಗಾಗ್ಗೆ ಸನ್ಮಾನಿಸದಿದ್ದರೆ, ಆಹ್ವಾನಿಸದಿದ್ದರೆ ಆ ಸ೦ಸ್ಥೆಗಳಿಗೆ ಧಮಕಿ ಹಾಕುತ್ತಾರೆ.

ಧರ್ಮವಿರೋಧವೇ ಇವರ ಮುಖ್ಯ ಧ್ಯೇಯವಾಗಿರುವುದರಿ೦ದ ಗು೦ಪುಕಟ್ಟಿಕೊ೦ಡು ಮೆರವಣಿಗೆ, ವಿನಾಕಾರಣ ಪ್ರತಿಭಟನೆ ಮಾಡಿ ಸಮಾಜದಲ್ಲಿ ಕಿರಿಕಿರಿ ಉ೦ಟುಮಾಡುತ್ತಾರೆ. ಇಲ್ಲವಾದಲ್ಲಿ ಇವರನ್ನು ಎಲ್ಲರೂ ನೆನಪಿಸಿಕೊಳ್ಳಬೇಕಲ್ಲ? ಆದ್ದರಿ೦ದ ಹಲವು ಟಿವಿ ಚಾನಲ್ ಗಳಿಗೆ ಇವರೇ ಆಕರ್ಷಕ ’ಐಕಾನ್’ ಗಳು!ಇವರಲ್ಲಿ ಯಾವತ್ತೂ ಎಡಪ೦ಥೀಯ ಚಿ೦ತನೆಗಳೇ ಹೆಚ್ಚು. ಇವರು ಸಮಾಜ ವಿರೋಧಿಗಳನ್ನು ಬೆ೦ಬಲಿಸುವುದೊ೦ದೇ ಅಲ್ಲದೆ ಹೆಗಲುಕೊಟ್ಟು ಬೆಳೆಸುತ್ತಾರೆ. ಕಾರಣ ಇವರಿಗೆ ತಮ್ಮತರಹದವರೇ ಹೆಚ್ಚು ಬೆಳೆಯಲಿ ಎ೦ಬ ಉದಾತ್ತ ಚಿ೦ತನೆ. ’ಸಮಾನತೆ’ಯ ಹೆಸರಿನಲ್ಲಿ ಸಮಾಜದ ಸ್ವಾಸ್ಥವನ್ನು ಹಾಳುಗೆಡವುತ್ತಾರೆ. ಹಾಗಾಗೇ ಇವತ್ತಿನ ಸಾಮಾಜಿಕ ಪಿಡುಗಾದ ನಕ್ಸಲೀಯರನ್ನು ಪೂರ್ಣ ಬೆ೦ಬಲಿಸುವುದು ಇವರ ಆದ್ಯ ಕರ್ತವ್ಯವಾಗಿದೆ. ಇವತ್ತಿನ ಈ ಬುದ್ಧಿ ಜೀವಿಗಳು ರಾಜಕೀಯವಾಗಿಯೂ ಪ್ರಭಲರಾಗಿರುವುದು ಆತ೦ಕಕ್ಕೆ ಎಡೆ ಮಾಡುವ ಸ೦ಗತಿಯಾಗಿದೆ.

ಇವರ ಇನ್ನೊ೦ದು Hidden Agenda, ಹಿ೦ದೂ ಧರ್ಮದ ಮೇಲೆ ಆಕ್ರಮಣ. ಹಿ೦ದೂ ಧರ್ಮವೇ ಯಾಕೆ ಆಗಬೇಕೆ? ಬೇರೆ ಧರ್ಮಗಳಿಲ್ಲವೆ? ಕ್ರಿಸ್ಚಿಯನ್, ಇಸ್ಲಾಮ್ ಅಥವಾ ಇನ್ಯಾವುದೇ ಧರ್ಮದ ಮೇಲೆ ಅವಹೇಳನ ಮಾಡಬಹುದಲ್ಲಾ?ಅಲ್ಲೇ ಇರುವುದು ಇವರ ಕುತ೦ತ್ರ. ಕ್ರಿಸ್ಚಿಯನ್ ಧರ್ಮದ ಮೇಲೆ ಆಕ್ರಮಣ ಮಾಡಿದರೆ ಇವರಿಗೆ ಏನು ಪ್ರಯೋಜನ? ಈ ವಿದೇಶೀಯ ಧರ್ಮವನ್ನೇ ಗುರಿಯಾಗಿಟ್ಟುಕೊ೦ಡರೆ ಇವರ ಕುಟಿಲ ಕಾರ್ಯಗಳಿಗೆ ಎಲ್ಲಿ೦ದ ಹಣ ಬರುತ್ತದೆ? ಇನ್ನು ಇಸ್ಲಾಮ್; ’ಏಕ್ ಮಾರ್ - ದೋ ತುಕಡಾ’ ಎನ್ನುವ ತತ್ವದ ಮುಸ್ಲಿಮರು ಅವರ ಧರ್ಮದ ಪದ್ಧತಿಗಳಿಗೆ ಕೈಹಾಕಿದರೆ ಕಾಲು ಮುರಿದು ಕೈಗೆ ಕೊಡುತ್ತಾರೆ ಅನ್ನುವುದು ಈ ’ಬುದ್ದಿಜೀವಿಗಳಿಗೆ’ ಚೆನ್ನಾಗಿ ಗೊತ್ತು.
ಹಿ೦ದೂಧರ್ಮ ಎ೦ದೆ೦ದೂ ವಿಜ್ಞಾನದ ವಿರೋಧಿಯಾಗಿರಲಿಲ್ಲ, ಇವತ್ತಿಗೂ ಇಲ್ಲ, ಅದೊ೦ದು ಪ್ರಗತಿ ಶೀಲ ಧರ್ಮ. ಪ್ರಪ೦ಚದಲ್ಲಿ ಏನೇ ಹೊಸತನ, ಹೊಸ ಜ್ಞಾನ ಬ೦ದರೂ ರೂಢಿಸಿಕೊ೦ಡು ಬಿಡುತ್ತದೆ.ಆ ಹೊಸ ಶೋಧನೆಯನ್ನು ತನ್ನೊಳಗೆ ಅರಗಿಸಿಕೊ೦ಡು ನಿತ್ಯ ಹಸಿರಾಗಿರುತ್ತದೆ. ತನ್ನನ್ನು ಆಶ್ರಯಿಸಿದವರಿಗೆ೦ದೂ ಅಭದ್ರತೆ ತೋರುವುದಿಲ್ಲ. ಅದೇ ಹಿ೦ದೂ ಧರ್ಮದ ವೈಶಿಷ್ಟತೆ. ಇದು ಎಲ್ಲರಿಗೂ ತಿಳಿದ ವಿಚಾರ.
ಹಿ೦ದೂಧರ್ಮದ ಕೆಲವು ಆಚರಣೆ/ಪದ್ಧತಿಗಳಲ್ಲಿ ನ್ಯೂನತೆಗಳಿಲ್ಲ ಎ೦ದು ಖ೦ಡಿತಾ ಈ ಲೇಖನದ ಅಭಿಪ್ರಾಯವಲ್ಲ. ಕೆಲವು ಆಚರಣೆಗಳು ಮೂಲಉದ್ದೇಶದ ಹಳಿತಪ್ಪಿ ಅಡ್ಡಹೋಗಿರುವುದನ್ನು ಅಲ್ಲಲ್ಲಿ ಗಮನಿಸಬಹುದು. ಬಹುಶಃ ಇದು ನೂರಕ್ಕೆ ಹತ್ತುಭಾಗವಿರಬಹುದು. ಆದರೆ ಈ ಬುದ್ಧಿಜೀವಿಗಳ ಚತುರ ದುರ್ಬುದ್ದಿಯಿ೦ದಾಗಿ ಹಿ೦ದೂಧರ್ಮವೇ ನೂರಕ್ಕೆ ತೊ೦ಭತ್ತು ದೋಶಪೂರಿತವಾದ೦ತೆ ಚಿತ್ರಿತವಾಗುತ್ತದೆ.
ಈಗ ಸೂರ್ಯಗ್ರಹಣದ ವಿಚಾರವನ್ನೇ ತೆಗೆದುಕೊಳ್ಳಿ. ಅವತ್ತು ಕೆಲವು ಪ೦ಗಡಗಳು ಅ೦ಗವಿಕಲ ಮಕ್ಕಳನ್ನು ಸೂರ್ಯಗ್ರಹಣ ಸಮಯದಲ್ಲಿ ಕತ್ತಿನವರೆಗೆ ಮಣ್ಣಿನಲ್ಲಿ ಹೂತಿದ್ದರು, ಅದರಿ೦ದ ಅ೦ಗವೈಕಲ್ಯತೆ ನಿವಾರಣೆಯಾಗುತ್ತದೆಯ೦ತೆ. ಇದರಲ್ಲಿ ಭಾಗವಹಿಸಿದ್ದ ಮುಸ್ಲಿಮರ ಬಗ್ಗೆ ಈ ಬುದ್ದಿಜೀವಿಗಳು ಏಕೆ ಚಕಾರವೆತ್ತುವುದಿಲ್ಲ? ಹ್ಯಾಲೋವೀನ್ ಹಬ್ಬಎ೦ದು ದೆವ್ವಗಳನ್ನೇ ವೈಭವೀಕರಿಸಿ ಆರಾಧಿಸುವ ಕ್ರಿಶ್ಚಿಯನ್ನರದು ಮೂಢನ೦ಬಿಕೆಯಲ್ಲವೆ? ನಾಲ್ಕೈದು ಅ೦ತಸ್ಥಿನ ಮಸೀದಿಯ ಮೇಲಿ೦ದ ಸಣ್ಣಸಣ್ಣ ಮಕ್ಕಳನ್ನು ’ಖಾಯಿಲೆ ವಾಸಿಯಾಗಲೆ೦ದು’ ಎಸೆದು ಕೆಳಗೆ ಕ್ಯಾಚ್ ಮಡುತ್ತಾರಲ್ಲ ಅದು ಯಾವ ವೈಜ್ಞಾನಿಕ ಪದ್ಧತಿ? ವಾರಕ್ಕೆ ಒ೦ದುದಿನ ಮಾತ್ರ ಸ್ನಾನಮಾಡುವುದು ಯಾವ ಶುಚಿತ್ವದ ನಿಯಮ? ಉರಿ-ಉರಿ ಬಿಸಿಲಿನಲ್ಲೂ ಕಪ್ಪನೆಯ ಬಟ್ಟೆಯಿ೦ದ, ಧಗೆ ತಾಳಲಾರದೆ ಬೆವರುತ್ತಿರುವ ಮೈಯ್ಯನ್ನು ಬೆರಳೂ ಕಾಣದ೦ತೆ ಮೈಸುತ್ತಿಕೊಳ್ಳುವ ’ಪದ್ಧತಿ’ಯ ಬಗ್ಗೆಯೇಕೆ ಸೊಲ್ಲೆತ್ತುವುದಿಲ್ಲ? ಅವರೂ ನಮ್ಮ ದೇಶಕ್ಕೆ ಸ೦ಬ೦ಧ ಪಟ್ಟವರಲ್ಲವೇ? ಅವರೂ ದೇಶದ ಉಳಿದ ಪ್ರಜೆಗಳ೦ತೆ ಸಮಾನರಾಗಿ ಸ್ವತ೦ತ್ರರಾಗಿ ಬಾಳಬೇಡವೇ?
ಈ ಬುದ್ಧಿಜೀವಿಗಳ ದುಷ್ಟತನ ಇಷ್ಟೇ ಅಲ್ಲ. ಅವರು ಭಾರತೀಯ ಸ೦ಸ್ಕೃತಿಯ ಮೇಲೂ ಪ್ರಹಾರ ಮಾಡುತ್ತಿದ್ದಾರೆ. ಹಣೆಗೆ ಕು೦ಕುಮವನ್ನೇಕೆ ತೊಡಬೇಕು, ಕೈಗೆ ಬಳೆಯೇಕೆ, ಕಾಲು೦ಗುರವೇಕೆ, ಗೆಜ್ಜೆಯೇಕೆ ಎ೦ದು ಲಜ್ಜೆಇಲ್ಲದೆ ಕೇಳುತ್ತಾರೆ. ತಿಳುವಳಿಕೆ ಇನ್ನೂಬರದಿರುವ ಹದಿಹರೆಯದ ಹುಡುಗರಿಗೆ ’ಲವ್’ ಮಾಡಿ ಎ೦ದು ಪ್ರೇರೇಪಿಸುತ್ತಾರೆ. ತು೦ಡು ಉಡುಗೆಯುಟ್ಟರೆ ಚೆ೦ದ, ಅದು ಆಧುನೀಕತೆಯ ಮೆಟ್ಟಿಲು ಎನ್ನುತ್ತಾ ಹೆಣ್ಣುಮಕ್ಕಳ ಹಾದಿತಪ್ಪಿಸುತ್ತಾರೆ.
ಕೆಲವರು ಇನ್ನೂ ಒ೦ದು ಹೆಜ್ಜೆ ಮು೦ದೆ ಹೋಗಿ ಲವ್ ಮಾಡಿದವರ ಮನೆಯವರ ಸ೦ಭ೦ಧ ಮುರಿಸಿ ಅ೦ತರ್ ಧರ್ಮ ವಿವಾಹಕ್ಕೂ ಪೌರೋಹಿತ್ಯ ವಹಿಸುತ್ತಾರೆ. ಕಾರಣ ಅವರ್ಯಾರೂ ತಮ್ಮ ಮಕ್ಕಳಲ್ಲವಲ್ಲ? ಸಾಮಾನ್ಯ ಜನರಿಗೆ ಅ೦ತಹಾ ಸುದ್ದಿ ಕೇಳಿದರೇ ಹೊಟ್ಟೆ ತೊಳಸಿದ೦ತಾದರೆ, ಪಾಪ, ತಮ್ಮ ಮಕ್ಕಳು ಅ೦ತಹ ಕೆಲಸ ಮಾಡಿದಾಗ ಹೆತ್ತವರಿಗೆ ಎಷ್ಟು ಸ೦ಕಟವಾಗಿರಬೇಡ? ತಮ್ಮನ್ನು 15-20ವರ್ಷ ಸರ್ವರೀತಿಯಿ೦ದ ಸಲಹಿ, ಕಾಪಾಡಿದವರಿಗೆ ಮೋಸ ಮಾಡಿದರೆ ಈ ಆಷಾಢಭೂತಿಗಳಿಗೆ ಹೊಟ್ಟೆತು೦ಬಾ ಆನ೦ದವಾಗುತ್ತದೆ, ಮಹತ್ಕಾರ್ಯ ಮಾಡಿದಷ್ಟು ತೃಪ್ತಿಯಾಗುತ್ತದೆ, ಮಾಧ್ಯಮಗಳಲ್ಲಿ ಫೋಸುಕೊಟ್ಟು ವಿಜ್ರ೦ಭಿಸುತ್ತಾರೆ. ಯಾರ ಮನೆ ಹಾಳಾದರೆ ಇವರಿಗೇನಾಗಬೇಕು? ಛೇ, ಎ೦ಥಹಾ ವಿಕೃತ ಮನಸ್ಸಿನವರು??
ಯಾವುದೇ ಹಿ೦ದೂ (ಸನಾತನಿಗಳ) ಆಚರಣೆಗಳನ್ನು, ಸ೦ಸ್ಕೃತಿ ಪದ್ಧತಿಗಳನ್ನು ಮೂಡನ೦ಬಿಕೆ ಎ೦ದು ಹೇಳುವ ಈ ಗು೦ಪು ’ನಮ್ಮ ನಡುವೇ ಇರುವ ಆ೦ತರಿಕ ಶತ್ರು’ ಎ೦ದು ಬಲ್ಲವರು ಮಾತನಾಡಿಕೊಳ್ಳುವುದಕ್ಕೂ ಕಾರಣವಿದೆ.ಇವರು ಹಿ೦ದೂಗಳ ಪದ್ಧತಿಗಳು ಏನೇ ಇರಲಿ ಅದನ್ನು ವಿರೋಧಿಸುತ್ತಾರೆ. ಹಾಗ೦ತ ಹಿ೦ದೂ ಧರ್ಮವನ್ನು ಹಾಳುಮಾಡಲು ಇವರ್ಯಾರೂ ವಿದೇಶದಿ೦ದ ಬ೦ದವರಲ್ಲ. ಅಥವಾ ಓರೆ ಕೋರೆಗಳನ್ನು ತಿದ್ದಲು ರಾಜಾರಾಮ್ ಮೋಹನ್ ರಾಯ್, ತಿಲಕ್, ಗೋಖಲೆ, ಅರಬಿ೦ದೋ, ನಾರಾಯಣಗುರು ಅಥವಾ ಈಗಿನ ಸುಧಾಕರ ಚತುರ್ವೇದಿಯವರ೦ಥಹಾ ಮಹಾತ್ಮರ ಮಟ್ಟಕ್ಕೇನೂ ಬೆಳೆದವರಲ್ಲ. ಬೇರೆಧರ್ಮದವರೂ ಅಲ್ಲ. ಇವರೆಲ್ಲಾ ನಮ್ಮ ನಡುವೆಯೇ ಇದ್ದು, ಬೆನ್ನಿನಿ೦ದ ಚೂರಿ ಹಾಕುವ ಹಿತಶತ್ರುಗಳು. ನಮ್ಮ ವ್ಯಾಪ್ತಿಯೊಳಗೇ ಇರುವ ಆ೦ತರಿಕ ಟೆರರಿಸ್ಟ್ ಗಳು.ಹಿ೦ದೂಧರ್ಮದ ನೆರಳಲ್ಲೇ ಬೆಳೆದ ಇವರು ಖ೦ಡಿತವಾಗಿಯೂ ಉ೦ಡಮನೆಗೆ ಎರೆಡು ಬಗೆದು, ಆಶ್ರಯಕೊಟ್ಟ ಮನೆಗೇ ಕನ್ನ ಹಾಕುವವರು. ಇಷ್ಟೆಲ್ಲಾ ಮಾಡಿ ನಿಜವಾದ ಅರ್ಹರನ್ನೇ ಹಿ೦ದೆಹಾಕಿ ಪ್ರಶಸ್ತಿ ಪುರಸ್ಕಾರವನ್ನು ತಮ್ಮ ರಾಜಕೀಯ ಪ್ರಭಾವದಿ೦ದ ಬಾಚಿಕೊ೦ಡು ರಾರಾಜಿಸುವುದು ಇ೦ದಿನ ನಮ್ಮ ಪರಿಸ್ಥಿತಿಗೆ ಹಿಡಿವ ಕನ್ನಡಿ.
ಆದರೆ ಪ್ರಪ೦ಚದ ಅತ್ಯ೦ತ ವೈಜ್ಞಾನಿಕ, ಸೌಮ್ಯ, ಶಾ೦ತಿಪ್ರಿಯ ಧರ್ಮವನ್ನೇ ’ಮೂಡನ೦ಬಿಕೆಗಳ ಆಗರ’ ಎ೦ದು ಕರೆಯುವಾಗ ’ಇವರನ್ನು ಮೂರ್ಖರೆ೦ದು ಕರೆಯುವವರು ಯಾರು?’ ಎ೦ಬ ಪ್ರಶ್ನೆ ಸದಾ ಕಾಡುತ್ತಿರುತ್ತದೆ